Monday, February 11, 2013

ತುಳುಗಾದೆ=೯


"ಅಡಿ ತೂದು ಕಾರ್ ದೆರ್ಪು" ( ಜೀವನದ ಪ್ರತಿ ಹೊಸ ಹೆಜ್ಜೆಯನ್ನೂ ನೆಲ ನೋಡಿ ಇಡಬೇಕು ಅನ್ನುವ ವಿವೇಕ ಹೇಳುತ್ತದೆ ಈ ಗಾದೆ. ಬದುಕಿನಲ್ಲಿ ಯಾವುದೆ ಕೆಲಸಕ್ಕೆ , ಸಾಹಸಕ್ಕೆ ಕೈ ಹಾಕುವಾಗ ಹುಚ್ಚು ಹುಂಬತನವೊಂದೆ ಇದ್ದರೆ ಸಾಲದು. ಅದಕ್ಕೆ ಕಾಲ ಎಷ್ಟು ಪಕ್ವವಾಗಿದೆ? ಆರ್ಥಿಕವಾಗಿ ನಾನದಕ್ಕೆ ಎಷ್ಟು ಯೋಗ್ಯ? ಅದರಿಂದಾಗುವ ಲಾಭ ನಷ್ಟಗಳಿಗೆ ನಾನೆಷ್ಟು ಬಾಧ್ಯ? ಎನ್ನುವ ಆತ್ಮ ಚಿಂತನೆ ಮಾಡದೆ ಒಡ್ಡೊಡ್ಡಾಗಿ ಮುಂದಡಿಯಿಟ್ಟರೆ ಹಳ್ಳಕ್ಕೆ ಬಿದ್ದರೂ ಅಚ್ಚರಿಯಿಲ್ಲ. ಮುಂದಾಗುವ ನಷ್ಟವನ್ನ ಮುಂದಾಲೋಚನೆಯಿಂದ ಕಡಿಮೆ ಮಾಡಿಕೊಳ್ಳುವ ಈ ವಿವೇಕ ಪೂರ್ಣ ಗಾದೆಗೆ ವಿವೇಚನೆಯನ್ನ ಜೊತೆಗೆ ವಿವೇಕವನ್ನ ಹೇಳುವ ಧ್ವನಿಯಿದೆ.)
ಅಡಿ ತೂದು ಕಾರ್ ದೆರ್ಪು = ನೆಲ ನೋಡಿ ಕಾಲನ್ನೆತ್ತಿಡು.

No comments:

Post a Comment