Friday, March 1, 2024

ಪುಸ್ತಕ ಪರಿಚಯ - ೨೫



ಕಾದಂಬರಿ - "ರಸಾತಳ"
ಕಾದಂಬರಿಕಾರರು - ಕೂಡ್ಲು ತಿಮ್ಮಪ್ಪ ಗಟ್ಟಿ.
ಪ್ರಕಟಿತ ವರ್ಷ: ೧೯೯೮
ಕ್ರಯ: ₹೬೦.
ಪ್ರಕಾಶಕರು: ರಾಜಾ ಚೆಂಡೂರು
ನೆಮ್ಮದಿ ಪ್ರಕಾಶನ
೮೮ "ನೆಮ್ಮದಿ"
ಪಟ್ಟಣಗೆರೆ
ರಾಜರಾಜೇಶ್ವರಿ ನಗರ
ಬೆಂಗಳೂರು ೫೬೦೦೩೯

ಮುನ್ನುಡಿ.


"ರಸಾತಳ" ಎಂಬ ಹೆಸರಿನ ಬಗ್ಗೆ ಜಿಜ್ಞಾಸೆ ವ್ಯಕ್ತಪಡಿಸಿದವರಿಗಾಗಿ ಸ್ವಲ್ಪ ವಿವರಣೆಯನ್ನು ಕೊಡಬಯಸುತ್ತೇನೆ.

ಕಾದಂಬರಿ ಬರೆದು ಮುಗಿಸಿದ ಬಳಿಕ ಹೆಸರಿಡಲು ತುಂಬಾ ಯೋಚಿನಬೇಕಾಯಿತು. ಹಲವು ದಿನಗಳ ಬಳಿಕ ಹೊಳೆದ ಹೆಸರು "ರಸಾತಳ". ಇದು ಈ ಕಾದಂಬರಿಗೆ ಅತ್ಯಂತ ಸೂಕ್ತವಾದ ಹೆಸರು ಅನ್ನಿಸಿತು.

ಶ್ರೀಮದ್ಭಾಗವತದಲ್ಲಿ ಏಳು ಅಧೋಲೋಕಗಳ ವರ್ಣನೆ ಬರುತ್ತದೆ. ಬಹಳ ಸಂಕ್ಷಿಪ್ತವಾಗಿ ಹೇಳುವುದಾದರೆ:

'ಅತಳ' - ಇದು ಅಸುರ ಶಿಲ್ಪಿ ಮಯನ ಪುತ್ರ ಬಲನ ವಾಸಸ್ಥಾನ. ಇವನ 'ಮಾಯೆ'ಯನ್ನು ಸೃಷ್ಟಿಸಿದನು.


'ವಿತಳ' - ಇಲ್ಲಿ ಶಿವನು ತಾಟಕೇಶ್ವರ ಎಂಬ ಹೆಸರಿನಲ್ಲಿ ತನ್ನ ಗಣಗಳಿಂದೊಡಗೂಡಿ ಪಾರ್ವತಿಯ ಜೊತೆಯಲ್ಲಿ ವಾಸಿಸುತ್ತಾನೆ.

'ಸುತಳ' - ಇಲ್ಲಿ ವೀರೋಚನ ಪುತ್ರನಾದ ಬಲಿ ಚಕ್ರವರ್ತಿ ವಾಸಿಸುತ್ತಾನೆ. ವಾಮನನಿಂದ ಅಧೋಃಲೋಕಕ್ಕೆ ತಳ್ಳಲ್ಪಟ್ಟ ಬಲಿ ಪುನಃ ಇಂದ್ರ ಪ್ರಾಪ್ತಿಯಾಗುವವರೆಗೆ ಇಲ್ಲಿ ವಾಸಿಸುತ್ತಾನೆ. ಇಲ್ಲಿ ವಿಷ್ಣುವು ಬಲಿಯ ಅರಮನೆಯ ಬಾಗಿಲು ಕಾಯುವವನಾಗಿರುತ್ತಾನೆ. ಈಗಿನ ಇಂದ್ರ ಪದವಿ ಮುಗಿದ ಬಳಿಕ ಬಲಿ ಮುಂದಿನ ಇಂದ್ರನಾಗುತ್ತಾನೆ.

'ತಳಾತಳ' - ಇದು ನಾಗಲೋಕ. ಇಲ್ಲಿ ನಾಗರು ವಾಸಿಸುತ್ತಾರೆ.

'ರಸಾತಳ' - ಫಣಿಗಳೆಂಬ ದೈತ್ಯರು ವಿಷ್ಣುವಿಗೆ ಭಯಪಟ್ಟು ಇಲ್ಲಿ ವಾಸಿಸುತ್ತಾರೆ. ಇವರಿಗೆ ವಾಯುವು ಕೂಡ ಪ್ರವೇಶಿಸದಂತ ಕವಚವಿದೆ. ಬ್ರಹ್ಮದೇವನ ಮುಖದಿಂದ ಜನಿಸಿದ ಕಾಮಧೇನು ಇಲ್ಲಿ ವಾಸ ಮಾಡುತ್ತದೆ. ಇದರ ಹಾಲಿನಿಂದ ಕ್ಷೀರನಿಧಿಯೆಂಬ ಹಾಲಿನ ಮಡು ಇಲ್ಲಿ ತುಂಬಿಕೊಂಡಿರುತ್ತದೆ. ಕಾಮಧೇನುವಿನ ಮಕ್ಕಳಾದ ಸುರೂಪಾˌ ಹಂಸಿಕಾˌ ಸುಭದ್ರಾ ಹಾಗೂ ಸರ್ವಕಾಮದುಘಾ ಎಂಬ ನಾಲ್ಕು ದೇನುಗಳು ಈ ಲೋಕದ ನಾಲ್ಕು ದಿಕ್ಕುಗಳಲ್ಲಿವೆ.


'ಪಾತಾಳ' - ಇದು ನಾಗರಾಜನಾದ ವಾಸುಕಿ ಮತ್ತು ಇತರ ನಾಗಗಳು ವಾಸಿಸುವ ಲೋಕ.


ಇನ್ನು ಈ ಲೋಕಗಳು ಎಲ್ಲಿವೆ ಎನ್ನುವ ಪ್ರಶ್ನೆ ಎಲ್ಲಿಯೂ ಇಲ್ಲ ಎಂದರೆ ತಪ್ಪೇನಾಗಲಾರದು. ಆದರೆ ಒಂದರ್ಥದಲ್ಲಿ ಇವು ಭೂಮಿಯ ಮೇಲೆಯೆ ಇರುವ ಅಧೋಲೋಕಗಳೆಂದೆ ಹೇಳಬಹುದು. ಒಂದು ದೇಶವು ಒಂದು ಕಾಲದಲ್ಲಿ ಅತಳದಂತೆಯೂˌ ಇನ್ನೊಂದು ಕಾಲದಲ್ಲಿ ವಿತಳದಂತೆಯೂˌ ಮತ್ತೊಂದು ಕಾಲದಲ್ಲಿ ಬೇರೆ ಯಾವುದೋ ಒಂದು ಅಧೋಲೋಕದಂತೆಯೂ ಇರಬಹುದು. ಅಥವಾ ಏಕಕಾಲದಲ್ಲಿಯೆ ಒಂದು ದೇಶದ ಬೇರೆ ಬೇರೆ ಭಾಗಗಳಲ್ಲಿ ವಿವಿಧ ಅಧೋಲೋಕಗಳ ಸ್ಥಿತಿಯೂ ಇರಬಹುದು.


ಅಧೋಲೋಕವೆಂದರೆ ನರಕವಲ್ಲ. ನರಕವು ಬೇರೆಯೆ ಒಂದು ಲೋಕ. ಅದೂ ಕೂಡ ಇರುವುದು ಭೂಮಿಯ ಮೇಲೆಯೆ ಎನ್ನಲಡ್ಡಿಯಿಲ್ಲ.


ಪುರಾಣದ ಪ್ರಕಾರ ಮೇಲೆ ಏಳು ಲೋಕಗಳಿವೆ. "ಮೇಲೆ" ಎಂದರೆ ಅಧೋಲೋಕದಿಂದ ಮೇಲೆ ಎಂದರ್ಥ. ಆದ್ದರಿಂದ ಭೂಮಿಯೂ ಮೊತ್ತ ಮೊದಲಿನ ಮೇಲಿನ ಲೋಕ. ಹಾಗೆˌ ಭೂಲೋಕˌ ಭುವರ್ಲೋಕˌ ಸ್ವರ್ಲೋಕˌ ಮಹರ್ಲೋಕˌ ಜನಲೋಕˌ ತಪೋಲೋಕˌ ಸತ್ಯಲೋಕ - ಏಳು ಊರ್ಧ್ವಲೋಕಗಳು.

ಇವು ಕೂಡ ಭೂಮಿಯ ಮೇಲಿರುವ ಲೋಕಗಳೆ ಎಂದು ತಿಳಿದುಕೊಳ್ಳಬೇಕಾಗುತ್ತದೆ.

ರಸಾತಳದ ಪೂರ್ಣ ವರ್ಣನೆಯನ್ನು ಓದಿ ನೋಡಿದರೆˌ ಈ ಕಾದಂಬರಿಗೆ ಈ ಹೆಸರು ಚೆನ್ನಾಗಿ ಹೊಂದಿಕೊಳ್ಳುತ್ತದೆ ಎಂದೆನಿಸುವುದರಲ್ಲಿ ಸಂದೇಹವಿಲ್ಲ. ಬದರಿನಾರಾಯಣ ಒಂದು ಫಣಿಯಂತೆ ಕಾಣಿಸಬಹುದು.

ರಾಮಕಿಂಕರರಿಗೆ ಹೇಗೆ ರಾಮ ಉತ್ತಮನೋˌ ಹಾಗೆಯೆ ರಾವಣಕಿಂಕರನಿಗೆ ರಾವಣನೂ ಉತ್ತಮನೆ.


ಒಂದು ವರ್ಷದ ಹಿಂದೆ ಬರೆದ 'ರಸಾತಳ' ಈಗ ಪುಸ್ತಕದ ರೂಪದಲ್ಲಿ ಬರುತ್ತಿದೆ. ಬದರಿನಾರಾಯಣ ಉದ್ಯೋಗ ತೊರೆಯಬೇಕಾಗಿ ಬಂದಾಗ ಅವನ ಸಂಪತ್ತಿನ ಮೌಲ್ಯ ಮೂರುಕೋಟಿಗಿಂತ ಹೆಚ್ಚಿತ್ತು. ಆಗ ಅದೆ ದೊಡ್ಡ ಮೊತ್ತವೆಂದುಕೊಂಡಿದ್ದೆ. ಈಗ ಬರೆಯುವುದಾಗಿದ್ದರೆ ಮೂವತ್ತು ಕೋಟಿಯೆಂದು ಬರೆಯಬೇಕಾಗಿತ್ತೋ ಏನೋ! ಯಾಕೆಂದರೆ ಮೂರು ಕೋಟಿ ಅಸಾಧ್ಯ ಸಂಪತ್ತು ಎಂದು ನನಗನಿಸಿತ್ತು. ಆದರೆ ಆ ಮೊತ್ತವನ್ನು ಬದರಿನಾರಾಯಣನ ಸಂಪತ್ತಾಗಿ ಕಂಡಾಗ ನನಗಾದಷ್ಟು ಭಯ 'ರಸಾತಳ' ಧಾರವಾಹಿಯ ಕೆಲವು ಓದುಗರಿಗೆ ಆಗಲಿಲ್ಲ ಎಂಬುದು ನನ್ನಲ್ಲಿ ಕೊನೆಯಿಲ್ಲದ ಕುತೂಹಲವಾಗಿ ಉಳಿದಿದೆ.

ಕೃತಜ್ಞತೆ: ಧಾರವಾಹಿಯಾಗಿ ಪ್ರಕಟಿಸಿದ 'ಮಂಗಳ' ವಾರಪತ್ರಿಕೆಗೆˌ ಮುನ್ನುಡಿ ಬರೆಯುವಲ್ಲಿ ಕೆಲವೊಂದು ವಿಷದಿಕರಣ ನೀಡಿದ ಶ್ರೀವಿಷ್ಣುಮೂರ್ತಿ ಭಟ್ಟರಿಗೆˌ ಕಾದಂಬರಿಯ ಹೊಸ ಹೆಸರಿನ ಬಗ್ಗೆ ಕುತೂಹಲ ವ್ಯಕ್ತಪಡಿಸಿˌ ಕೊನೆಯ ಬಗ್ಗೆಯೂ ಕುತೂಹಲ ಉಳಿಸಿಕೊಂಡ ಧಾರವಾಹಿಯ ಓದುಗರಿಗೆ.

ಕೆಟಿ ಗಟ್ಟಿ
ಉಜಿರೆ
೦೮ ೦೫ ೯೮


"ನನ್ನ ಹಾಗೂ ಕೆ ಟಿ ಗಟ್ಟಿಯವರ ನಡುವಿನ ಸಂಬಂಧ ಹಾಗೂ ಅನುಬಂಧವನ್ನ ಒಂದು ನಿರ್ದಿಷ್ಟ ವ್ಯಾಖ್ಯಾನದಲ್ಲಿ ವಿವರಿಸಲರಿಯೆ. ಅವರು ನನಗೆ ಹಿರಿಯ ಮಿತ್ರರೂ - ಮಾರ್ಗದರ್ಶಕರೂ - ಅಭಿಮಾನದ ಲೇಖಕರೂ - ಆತ್ಮೀಯ ಬಂಧುವೂ - ರಕ್ತಸಂಬಂಧ ಮೀರಿದ ಹಿತೈಶಿಯೂ ಆಗಿದ್ದರೂ. ಇದರಿಂದ ಒಂದಕ್ಷರ ಹೆಚ್ಚು ಬರೆದರೆ ಸ್ವತಃ ನನಗೆ ಅದು ಕೃತಕ ಅನ್ನಿಸುತ್ತೆ. ಅವರ ಹಾಗೂ  ಯಶೋದಮ್ಮನ ಆರೈಕೆಯಲ್ಲಿ ಅವರು ಉಜಿರೆಯ ವನಶ್ರೀಯಲ್ಲಿದ್ದ ದಿನಗಳಲ್ಲಿ ಹಲವಾರು ಹಗಲು - ರಾತ್ರಿಗಳನ್ನ ಕಳೆದಿದ್ದೇನೆ. ನನಗಾಗಿ ಅವರು ಹಂಡೆಗೆ ಉರಿ ಹಾಕಿ ಮೀಯಲು ಬಿಸಿ ನೀರು ಕಾಯಿಸುತ್ತಿದ್ದುದು - ರುಚಿಕರವಾಗಿ ಹೊತ್ತು ಹೊತ್ತಿಗೆ ತಿಂಡಿ - ಊಟ ಬೇಯಿಸಿ ಹಾಕುತ್ತಿದ್ದುದು ನೆನಪಾಗುವಾಗ ಕಣ್ಣು ಹಾಗೂ ಮನತುಂಬಿ ಬರುತ್ತದೆ. ತೀರ ಖಾಸಗಿ ಅನ್ನುವಂತಾ ಅಥವಾ ವಯಕ್ತಿಕ ಹಾಗೂ ಮುಜುಗರ ಹುಟ್ಟಿಸುವಂತ ಮಾತುಗಳನ್ನೂ ನಿರ್ಭಿಡೆಯಿಂದ ಅವರಿಬ್ಬರಲ್ಲೂ ಕೇಳಿ ಚರ್ಚಿಸುವಷ್ಟು ಸ್ವಾತಂತ್ರ್ಯ ನನಗಿತ್ತು. ಸದ್ಯ ಅವರ ಕೊನೆಯ ಕಾದಂಬರಿ "ಮೋಹ ಚುಂಬಿತ ಮಾಯೆ" ಓದುತ್ತಿದ್ದೇನೆ. ಪುತ್ತೂರು ಕರ್ನಾಟಕ ಸಂಘ ಪ್ರಕಟಿಸಿದ್ದ ಪ್ರೊಫೆಸರ್ ಶ್ರೀಧರರ ಸಂಪಾದಕತ್ವದ ಅವರ ಅಭಿನಂದನಾ ಗ್ರಂಥದಲ್ಲಿ "ವಿಕ್ರಾಂತ ಕರ್ನಾಟಕ"ಕ್ಕಾಗಿ ನಾನು ಹಾಗೂ ನನ್ನ ಆತ್ಮಬಂಧು ರುದ್ರಪ್ರಸಾದ ನಡೆಸಿದ್ದ ಅವರ ಸಂದರ್ಶನವೂ ಸೇರಿದೆ ಅನ್ನೋದೆ ನನಗೆ ನೆಮ್ಮದಿಕೊಡುವ ಅಂಶ. ಆತ್ಮೀಯರೊಬ್ಬರನ್ನ ಕಳೆದುಕೊಂಡ ವೇದನೆಯಲ್ಲಿದ್ದೇನೆ. ಸದ್ಯಕ್ಕೆ ಇಷ್ಟನ್ನೆ ಹೇಳಬಲ್ಲೆ."

- 🙂


'ರಸಾತಳ'


".......ಒಂದು ಗಾಢವಾದ ನಿದ್ರೆಯಿಂದ ಎಚ್ಚೆತ್ತಂತೆ ಅನ್ನಿಸಿತು. ನಿದ್ರೆ ಮಾಡಿದ್ದೆನಾದರೆˌ ಎಷ್ಟು ಹೊತ್ತು ಅಥವಾ ಪ್ರಜ್ಞಾಹೀನ ಸ್ಥಿತಿಯಾಗಿತ್ತೆ? ಹಾಗಿದ್ದರೆ ಎಷ್ಟು ಕಾಲ? ಎಷ್ಟು ಕಾಲದಿಂದ ನಾನು ಹೀಗೆ ಮಲಗಿದಲ್ಲಿಯೆ ಇದ್ದೇನೆ? ಘಂಟೆಗಳೆ - ದಿನಗಳೆ ಅಥವಾ ತಿಂಗಳುಗಳೆ ದಾಟಿ ಹೋಗಿವೆಯೆ? ಈಗ ನೋವು ಅನುಭವಕ್ಕೆ ಬಾರದಿರುವುದರಿಂದ ದೇಹವೆಂಬುದು ಅನುಭವವೇದ್ಯ ಸಂಗತಿಯಾಗಿರಲಿಲ್ಲ. ಕಿಂಚಿತ್ ತೆರೆದ ರೆಪ್ಪೆಯಡಿಯಿಂದ ಬದರಿನಾರಾಯಣನಿಗೆ ತನ್ನ ದೇಹ ಕಾಣಿಸುತ್ತಿತ್ತಾದ್ದರಿಂದ ತಾನು ಸತ್ತಿಲ್ಲ. ತನ್ನ ಜೀವ ದೇಹದೊಳಗೆ ಇದೆ ಎಂಬ ವಿಶ್ವಾಸ ಉಂಟಾಯಿತು. ಆದರೆ ದೇಹ ಹೇಗಿದೆ? ಗಾಯ ಒಣಗಿದೆಯೆ? ಬೆನ್ನಿನಲ್ಲಿ ಹುಣ್ಣಾಗಿರಬಹುದೆ? ದೇಹಕ್ಕೆ ಪೋಷಕಾಂಶಗಳನ್ನು ಹೇಗೆ ಒದಗಿಸುತ್ತಿದ್ದಾರೆ ಯಾವುದೂ ತಿಳಿಯಲಿಲ್ಲ. ಮೂರು ಜನ ಡಾಕ್ಟರುಗಳು ತನ್ನ ಮೇಲೆ ಏನೋ ಪ್ರಯೋಗಕ್ಕೆ ಸಿದ್ಧರಾಗುತ್ತಿದ್ದಾರೆ ಎನ್ನಿಸಿತು.


ಎನೋ ಒಂದು ಔಷಧಿಯನ್ನು ಚುಚ್ಚಿದರು. ಪ್ರಜ್ಞೆಯನ್ನು ಕಳೆಯಲಿಕ್ಕಾಗಿರಬಹುದೆ? ಅಥವಾ ಪ್ರಜ್ಞೆಯನ್ನು ಹೊಡೆದೆಬ್ಬಿಸುವ ಚೋದಕವಾಗಿರಬಹುದೆ? 


ಸ್ವಲ್ಪ ಹೊತ್ತಿನಲ್ಲಿ ತಟ್ಟನೆ ಕತ್ತಲಾವರಿಸಿದಂತೆ ತೋರಿತು. ರೆಪ್ಪೆ ತೆರೆದೆ ಇದೆಯೆ? ಮುಚ್ಚಿಕೊಂಡಿದಿಯೆ? ಎಂದು ತಿಳಿಯಲಿಲ್ಲ. ಹೆಚ್ಚಿನಂಶ ತೆರೆದೆ ಇದೆಯೆನ್ನಿಸಿತು. ಹಾಗಿದ್ದರೆ ಕತ್ತಲೆಯೇನು? ಎಲ್ಲಿಂದ ಬಂತು? ಇಷ್ಟು ಹೊತ್ತು ಕಾಣಿಸುತ್ತಿತ್ತು - ಕೇಳಿಸುತ್ತಿತ್ತು! ಈಗ ಶ್ರವಣ ಶಕ್ತಿ ಮಾತ್ರ ಉಳಿದುಕೊಂಡಿದೆ. ದೃಷ್ಟಿ ಶಕ್ತಿಯೂ ಕೊನೆಗೊಂಡಿತೆಂದು ಇದರರ್ಥವೆ? ಇವರ ಪ್ರಯೋಗದಿಂದಾಗಿ ಇನ್ನು ಶ್ರವಣ ಶಕ್ತಿಯೂ ನಷ್ಟವಾದರೆ? ಪಂಚೇಂದ್ರಿಯಗಳ ಕಾರ್ಯಭಾರವೂ ನಿಂತಂತಾಯಿತು. ಆಮೇಲೆ ಜೀವವೆಂಬುದು ಇರುವುದೆಲ್ಲಿ? ಎದೆ ಬಡಿತ ಇರುವವರೆಗೆ - ದೇಹದಲ್ಲಿ ಬಿಸಿ ಇರುವವರೆಗೆ - ಉಸಿರಾಟ ನಡೆಯುವವರೆಗೆ ಜೀವಂತˌ ಆ ಮೂರೂ ಕೊನೆಗೊಂಡಾಗ ಮೃತ. ಆ ಮೆರೂ ಒಂದೊಂದಾಗಿ ಕೊನೆಗೊಳ್ಳುವುದಿಲ್ಲ. ಒಮ್ಮೆಲೆ ಕೊನೆಗೊಳ್ಳುತ್ತವೆ. ಆಗ ನಾನು ಉಳಿಯುತ್ತೇನೆಯೆ.


ಬದರಿನಾರಾಯಣನಿಗೆ ಪುನರ್ಜನ್ಮದಲ್ಲಿ ನಂಬಿಕೆಯಿತ್ತು. ಈ ಸ್ಥಿತಿಯಲ್ಲಿಯೂ - ಈ ಗಾಢಾಂಧಕಾರದಲ್ಲಿಯೂ ಅವನು ಹತಾಶನಾಗಲಿಲ್ಲ. ಹೇಗೋ ನಾನು ಬದುಕಿ ಮರುಳುತ್ತೇನೆ ಎಂಬ ವಿಶ್ವಾಸ ಅದಮ್ಯವಾಗಿತ್ತು.


ಈಗ ಅವನು ಯೋಚಿಸಿದ. ನೋವಿಲ್ಲ - ಯಾವ ಸಂವೇದನೆಯೂ ಇಲ್ಲ. ಜೀವಂತಿಕೆ ಮತ್ತು ಕತ್ತಲೆ. ಡಾಕ್ಟರುಗಳು ಏನೋ ಮಾತನಾಡಿದಾಗ ಮಾತ್ರ ಸ್ವಲ್ಪ ಕಿರಿಕಿರಿ - ಅಸ್ವಸ್ಥತೆ. ಅದು ಸ್ಪಷ್ಟವಾಗುದದರಿಂದ ಒಂದು ರೀತಿಯ ಅಸಹನೆ. ಅವರು ಶಬ್ದಗಳಲ್ಲಿ ಮಾತನಾಡದೆ ಅಕ್ಷರಗಳಲ್ಲಿ ಮಾತನಾಡುತ್ತಿರುವಂತೆ ತೋರಿತು. ತಾಂತ್ರಿಕ ಶಬ್ದದ ಹೃಸ್ವರೂಪವಾದ ಅಕ್ಷರಗಳು.


ಈಗ ನಾನು ಕೂಡ ಇವರಿಗೆ ಒಬ್ಬ ಮನುಷ್ಯನಲ್ಲ. ಒಂದು ಅಕ್ಷರ ಅಥವಾ ಒಂದು ಸಂಖ್ಯೆ ಅನ್ನಿಸಿತು ಬದರಿನಾರಾಯಣನಿಗೆ. ಇವರು ಮಾತಾಡದೆ ಇದ್ದಾಗ ನೆಲಸುವ ನಿಶ್ಯಬ್ಧತೆ ಒಂದು ರೀತಿಯಲ್ಲಿ ಹಿತಕರವಾಗಿತ್ತು. ಜೀವಕ್ಕೆ ತಂಪು ನೀಡುವ ನಿಶ್ಯಬ್ಧತೆ. ಶ್ರವಣ ಶಕ್ತಿಯೂ ಅದೃಶ್ಯವಾದ ಮೇಲೆ ಈ ತಂಪು ಶಾಶ್ವತವಾಗಬಹುದು. ಅದು ತುಂಬಾ ಸುಖಪ್ರದವಾಗಿರಬಹುದು. ನಿಜವಾದ ಶಾಂತಿಯೆಂದರೆ ಅದೆ ಇರಬಹುದು. ಸಾವು ಎಂದರೆ ಅದೆ ಆಗಿರಬಹುದೆ? ಸಾವು ಅಷ್ಟು ಸುಖಕರವಾದ ದಿವ್ಯಾನುಭಾವವಾಗಿರಬಹುದೆ?  ಮೋಕ್ಷವೆಂದರೆ ಅದೆ ಏನು?


ಬದರಿನಾರಾಯಣ ಈಗ ಬದುಕನ್ನು ಬಯಸುವಷ್ಟೆ ತೀವೃವಾಗಿ ಮೋಕ್ಷವನ್ನೂ ಬಯಸತೊಡಗಿದ. ಮರಳಿ ಬದುಕಿಗೆ ಬರುವ ಬಯಕೆ ಎಷ್ಟು ತೀವೃವಾಗಿತ್ತೋ - ಪುನರ್ಜನ್ಮದ ಬಯಕೆಯೂ ಅಷ್ಟೆ ತೀವೃವಾಗಿತ್ತು. ಕ್ಷಣದಿಂದ ಕ್ಷಣಕ್ಕೆ ಪುನರ್ಜನ್ಮದ ಬಯಕೆಯೆ ಬಲಗೊಳ್ಳುತ್ತಾ ಹೋಯಿತು. ಬಹುಶಃ ಇದು ಸಾವನ್ನು ಸಮೀಪಿಸುವ ಮುನ್ಸೂಚನೆಯಾಗಿರಬಹುದೆ? ವೇದನೆಯಿಲ್ಲದ ಸ್ಥಿತಿ - ದುಃಖವಿಲ್ಲದ ಸ್ಥಿತಿ - ಜೀವ ಅತ್ಯಂತ ಸಶಕ್ತವಾಗಿರುವ ಸ್ಥಿತಿ.


ಆದರೆ ಆ ಸ್ಥಿತಿಯಲ್ಲಿ ಒಂದು ಅಪಸ್ವರದಂತೆ ಕಾಡುತ್ತಿದ್ದುದು ಡಾಕ್ಟರುಗಳಾಡುತ್ತಿದ್ದ ಮಾತುಗಳು. ಈ ಶ್ರವಣ ಶಕ್ತಿಯೂ ಬೇಗನೆ ಹೊರಟು ಹೋಗಲಿ ಎಂದೂ ಕೂಡ ಅವನಿಗೆ ಅನಿಸದಿರಲಿಲ್ಲ. ಆದರೆ ಕೇವಲ ಅನಿಸಿಕೆ ಮಾತ್ರˌ ಬಯಕೆಯಲ್ಲ. ಯಾಕೆಂದರೆˌ ಇದು ಇಹಲೋಕದೊಂದಿಗೆ ಅವನಿಗಿದ್ದ ಕೊನೆಯ ಕೊಂಡಿಯಾಗಿತ್ತು. ಈ ಕೊಂಡಿ ಕಳಚಿತೆಂದರೆ ಮತ್ತೆ ಬರುವ ಆಸೆಯಿಲ್ಲ.


ಏನೋ ಮಾಡಿˌ ಕತ್ತಲೆಯನ್ನು ಮತ್ತು ಪರಿಪೂರ್ಣ ನಿಶ್ಯಬ್ಧತೆಯನ್ನು ಬಿಟ್ಟು ಎಲ್ಲರೂ  ಹೊರಟು ಹೋದರು. ಎಲ್ಲಿಂದಲೋ ಎಂಬಂತೆ ಕೇಳಿಸುತ್ತಿರುವ ಎಲೆಕ್ಟ್ರಾನಿಕ್ ಗಡಿಯಾರದ ಚಕ್ ಚಕ್ ಎಂಬ ದನಿಯಿಂದ ಮಾತ್ರವೆ ತನ್ನ ಶ್ರವಣಶಕ್ತಿ ನಷ್ಟವಾಗಿಲ್ಲ ಎಂದು ಬದರಿನಾರಾಯಣ ಅರ್ಥೈಸಿಕೊಳ್ಳಬೇಕಿತ್ತು.


ಆಪರೇಷನ್ಗಾಗಿ ಆಸ್ಪತ್ರೆ ಸೇರುವ ಹಿಂದಿನ ದಿನ ಸುಪ್ರಿಯಾ ನ್ಯೂಯಾರ್ಕಿನಿಂದ ಮಾತಾಡಿದ್ದಳು. ಬದರಿನಾರಾಯಣನೆ ಫೋನು ಮಾಡಿದ್ದ. "ಇಲ್ಲಿಗೆ ಬಂದು ಐದು ವರ್ಷವಾಗ್ತಾ ಬಂತು. ನಿಮ್ಮನ್ನು ನೋಡಬೇಕು ಅನ್ನುವ ಮನಸಾಗ್ತಿದೆ ಅಂಕಲ್" ಎಂದಿದ್ದಳು. ತನ್ನ ಆಪರೇಷನ್ ಕುರಿತು ಅವನು ಅವಳಿಗೆ ಹೇಳಲಿಲ್ಲ. ಅವನನ್ನು ಹಚ್ಚಿಕೊಂಡವರು ಬೇರೆ ಯಾರೂ ಇರಲಿಲ್ಲ. ಅವನಿಗೆ ಕೂಡಿ ಹಾಗೆ ಅಷ್ಟು ಪ್ರೀತಿಪಾತ್ರ ವ್ಯಕ್ತಿ ಬೇರೆ ಇರಲಿಲ್ಲ.ಅದು ದೇವೇಚ್ಛೆಯಂತೆ ಉಂಟಾದ ಸಂಬಂಧ ಎಂದು ಅವನು ಭಾವಿಸಿದ್ದ. ತನಗೆ ಆಪರೇಷನ್ ಎಂದು ತಿಳಿದರೆ ಸುಪ್ರಿಯಾ ತಟ್ಟನೆ ಬಂದು ಬಿಡಬಹುದೆಂದನಿಸಿತ್ತು. "ನೀನು ಇತ್ತ ಬರುವುದು ಬೇಡˌ ಇಲ್ಲಿ ತೊಂದರೆಯಿದೆ. ನಾನೆ ಒಂದೆರಡು ತಿಂಗಳುಗಳ ನಂತರ ಅಲ್ಲಿಗೆ ಬರ್ತೇನೆ" 

"ಏನು ಅಂಕಲ್ ತೊಂದರೆ?"

 "ನಿನ್ನ ಅಪ್ಪ ಬಂದಿದಾನೆ"

 "ಹೌದೆ?" 

"ಹೌದು ಸುಪ್ರಿಯಾˌ ಹೊರ ಬಂದು ಐದು ವರ್ಷವಾಯ್ತಂತೆ. ಒಂದು ಉದ್ದನೆಯ ಕಥೆ ಹೇಳಿದ" 


"ಏನು ಕಥೆ"

"ಅದೀಗ ಬೇಡˌ ಅದೇನಿದ್ದರೂ ಅವನಿಗೆ ಮಾತ್ರ ಸಂಬಂಧಪಟ್ಟದ್ದು. ನಿನಗೂ ಅದಕ್ಕೂ ಸಂಬಂಧವಿಲ್ಲ. ನೀನು ಅಲ್ಲೆ ಚೆನ್ನಾಗಿರು. ಅವಕಾಶವಾದಾಗ ನಾನೆ ಅಲ್ಲಿಗೆ ಬರುತ್ತೇನೆ. ನೀನು ಇಲ್ಲಿಗೆ ಬಂದು ನಿನ್ನಪ್ಪನ ಬಾಯಿಗೆ ಬೀಳುವುದು ಬೇಡ. ಅವನು ಯಾವತ್ತೂ ನೀನಿದ್ದಲ್ಲಿಗೆ ಬರಲಾರ."


"ಈಗ ಬದರಿನಾರಾಯಣನಿಗೆ ಅನಿಸಿತು ತಾನು ಜಯಕರನ ದಾರಿ ತಪ್ಪಿಸಿದ್ದು ಹೇಗೆ ಎಂದು ಸುಪ್ರಿಯಾಳಿಗೆ ಹೇಳಬೇಕಾಗಿತ್ತು ಎಂದು. 

"ಸುಪ್ರಿಯಾ ಎಲ್ಲಿ?" ಎಂದು ಜಯಕರ ಆ ದಿನ ಕೇಳಿದ್ದಾಗˌ ಅನಿರೀಕ್ಷಿತ ಪ್ರಶ್ನೆಯ ಹೊಡೆತದಿಂದ ತಪ್ಪಿಸಿಕೊಳ್ಳಲು ಒಂದು ಕ್ಷಣ ಬೇಕಾಯಿತು. ಆದರೆ ಅಪೂರ್ವ ಪ್ರಸಂಗಾವಧಾನತೆಯ ಮನುಷ್ಯ ಬದರಿನಾರಾಯಣ.


"ಸುಪ್ರಿಯಾಳನ್ನು ನಾನು ನನ್ನ ಮಗಳಂತೆ ನೋಡಿಕೊಂಡೆ ಜಯಕರ. ಎಂಬಿಬಿಎಸ್ ವರೆಗೆ ಓದಿಸಿದೆ. ಆಮೇಲೆ ಎಂಡಿ ಓದಲು ಅಮೇರಿಕೆಗೆ ಕಳಿಸಿದೆ. ಅವಳು ಎಂಡಿ ಮುಗಿಸಿ ಅಲ್ಲೆ ಮದುವೆ ಮಾಡಿಕೊಂಡಳು. ಹುಡುಗನೂ ನಮ್ಮ ದೇಶದವನೆˌ ಪಂಜಾಬಿನವನು. ಅವನೂ ಡಾಕ್ಟರ್. ಅಲ್ಲಿಂದ ಅವರಿಬ್ಬರೂ ಕೆನಡಾಕ್ಕೆ ಹೋದರು. ಆರು ತಿಂಗಳ ಹಿಂದೆ ಕೆನಡಾದಿಂದ ಪತ್ರ ಬಂತು. ಅದು ಅವಳು ಕೆನಡಾದಿಂದ ಬರೆದಿದ್ದ ಮೊದಲ ಪತ್ರ. ಅದರ ಬಳಿಕ ಅವಳ ಗಂಡನಿಂದ ಒಂದು ಪತ್ರ ಬಂತು. ಅದರಲ್ಲಿ ಒಂದು ಆಕ್ಸಿಡೆಂಟಲ್ಲಿ ಸುಪ್ರಿಯಾ ಮೃತಳಾದಳು ಎಂದಿತ್ತು. ಸುಪ್ರಿಯಾ ಬರೆದ ಮೊದಲ ಪತ್ರದಲ್ಲಿ ಒಂದು ಆಸ್ಪತ್ರೆಯ ವಿಳಾಸವಿತ್ತು. ಅವಳ ಗಂಡನಿಂದ ಬಂದ ಪತ್ರದಲ್ಲಿ ಯಾವುದೆ ವಿಳಾಸವಿರಲಿಲ್ಲ" ಇಷ್ಟು ಕಥೆ ಸಾಕು ಎಂದು ಬದರಿನಾರಾಯಣ ನಿಲ್ಲಿಸಿದ.


- ಕೂಡ್ಲು ತಿಮ್ಮಪ್ಪ ಗಟ್ಟಿ.

Tuesday, September 6, 2016

ಗಣಪತಿ ಬಪ್ಪದೆ ಹೋಗಯ್ಯ, ಈಗ ಆದ ಅನಾಹುತವೇ ನಮಗೆ ಸಾಕಯ್ಯಾ........





ಪಾಪ, ಉದಾತ್ತ ಮನಸ್ಸಿನ ಮಹಾನುಭಾವರಾಗಿದ್ದ ಅಮರ ಹೋರಾಟಗಾರ ಬಾಲಗಂಗಾಧರ ತಿಲಕರ ಆಶಯವೇ ಅಸಲಿಗೆ ಬೇರೆ ಇತ್ತೇನೋ! ಆದರೆ ಈಗಿನ ಬಹುತೇಕ ಹುಟ್ಟಾ 'ಚಂದಾ'ಮಾಮಂದಿರಾದ ಭಂಡಮುಂಡೆಗಂಡರು ಅದನ್ನ ಸಂಪೂರ್ಣ ಹಳ್ಳ ಹಿಡಿಸಿ ಬಿಟ್ಟು, "ಗಣಪತಿ ಹಬ್ಬ"ವನ್ನ ಸಾರ್ವಜನಿಕವಾಗಿ ಆಚರಿಸೋದು ಎಂದರೆ ಸಾರ್ವತ್ರಿಕವಾಗಿ ಗಲಭೆ ಮಾಡೋದು ಹಾಗೂ ಮಾಡಿಸೋದು ಅಂತಲೇ ತೀರ್ಮಾನಿಸಿಬಿಟ್ಟ ಹಾಗಿದೆ. ಈತನಕ 'ಗಣಪತಿ'ಯ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಯ ವಿಷಯ ಹಿಂದೂ ಹಾಗೂ ಮುಸಲ್ಮಾನರ ನಡುವಿನ ಕೋಮು ಗಲಭೆಗೆ ಮಾತ್ರ ಸೀಮಿತವಾಗಿತ್ತು. ಆದರೆ ಇದೀಗ ಜಾತಿ ಹಾಗೂ ಸ್ಪರ್ಶ್ಯತೆ - ಅಸ್ಪರ್ಶ್ಯತೆಗೂ ಅದನ್ನ ಯಶಸ್ವಿಯಾಗಿ ನಾಚಿಕೆ ಬಿಟ್ಟು ತಳುಕಿಸಲಾಗಿದೆ.

ಬರುಬರುತ್ತಾ, ಈ ಸಾರ್ವಜನಿಕ ಆಚರಣೆಯ 'ಗಣಪತಿ ಹಬ್ಬ' ಸಹ 'ಕಾಂಗ್ರೆಸ್ ಸಂಸ್ಥೆ'ಯಂತೆ ಆಗಿಹೋಗಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತಿದ್ದಂತೆ ಈ ಸಾರ್ವಜನಿಕ ಗಣಪತಿ ಉತ್ಸವದಂತೆ ಆ ಕಾಂಗ್ರೆಸ್ ಕೂಡಾ ಅಪ್ರಸ್ತುತವಾಗಿ ಹೋಗಿಯಾಗಿದೆ. ಅವೆರಡರ ಸ್ಥಾಪನೆಯ ಉದ್ದೇಶವೂ ಸ್ವಾತಂತ್ರ್ಯ ಸಾಧನೆಯ ಮೂಲಕ ತೀರಿದ ಮೇಲೆ ಅವೆರಡನ್ನೂ ಮುಚ್ಚಿಕೊಂಡು ವಿಸರ್ಜಿಸೋದು ಬಿಟ್ಟು ನಮ್ಮ ಜನ ಇಲ್ಲಸಲ್ಲದ ಜಾತಿ - ಕೋಮುಗಳ ಪುಕಾರು ಹಬ್ಬಿಸಿಕೊಂಡು ಇವೆರಡು ಸ್ಥಾಪಿತ ಹಿತಾಸಕ್ತಿಗಳನ್ನೂ ಪ್ರಬಲವಾಗಿ ಪೋಷಿಸಿಕೊಂಡು ಎಂತೆಂತದೋ ಚಿತಾವಣೆ ಮಾಡಲು ಜೀವಂತವಾಗಿಟ್ಟುಕೊಂಡೇ ಬರುತ್ತಿದ್ದಾರೆ. ನನ್ನ ಅನುಭದ ಮಟ್ಟಿಗಂತೂ ಹಿಂದೂ ಮುಸ್ಲಿಮ್ ನಡುವಿನ ಅಸಹನೆಗೆ ಇನ್ನಷ್ಟು ಸೀಮೆ ಎಣ್ಣೆ ಸುರಿದು ಫಕ್ಕನೆ ಬೆಂಕಿ ಹಚ್ಚಲಿಕ್ಕೆ ಸಾರ್ವಜನಿಕ ಗಣಪತಿ ಉತ್ಸವಗಳಷ್ಟು ಪ್ರಶಸ್ತವಾದ ಅವಕಾಶ ಸದ್ಯಕ್ಕೆ ಮತ್ತೊಂದು ಇರಲಿಕ್ಕಿಲ್ಲ.

ನಿಮ್ಮೆಲ್ಲರಿಗೆ ಶಿವಮೊಗ್ಗದ ಶ್ರೀರಾಮಣ್ಣ ಶ್ರೇಷ್ಠಿ ಪಾರ್ಕಿನ ಗಣಪತಿ ಉತ್ಸವದ ಭಯಾನಕ ಚರಿತ್ರೆ ನೆನಪಿರಬಹುದು. ಮಹಾವೀರ ಸರ್ಕಲ್ಲಿನಲ್ಲಿ ಹಿಂದೊಮ್ಮೆ ಆತನ ವಿಸರ್ಜನಾ ಮೆರವಣಿಗೆಯ ಕಾಲದಲ್ಲಿ ನಡೆದ ಮಾರಾಮಾರಿಯಲ್ಲಿ ಶಿವಮೂರ್ತಿ ಎಂಬ ಯುವಕನಿಗೆ ಯಾರೋ ಚೂರಿ ಹಾಕಿ, ಮೆರವಣಿಗೆಯ ಹುಮ್ಮಸ್ಸಿನಲ್ಲಿದ್ದ ಗಣಪತಿ ನಡು ನಡುಬೀದಿಯಲ್ಲಿಯೇ ಅನಾಥನಾಗಿ ಉಳಿದು. ಬೇಡ ಕಥೆ! ಈಗ ಅದರ ಪಕ್ಕದ ಸರ್ಕಲ್ಲಿಗೆ ಅದೇ ಸತ್ತ ಶಿವಮೂರ್ತಿಯ ಹೆಸರನ್ನಿಟ್ಟು ಆ ಗಲಭೆಯ ನೆನಪನ್ನ ಸದಾಕಾಲಕ್ಕೂ ಜೀವಂತವಾಗಿರಿಸಲಾಗಿದೆ?!

ಇವತ್ತಿಗೂ ಪ್ರತಿವರ್ಷ ರಾಮಣ್ಣ ಸೆಟ್ಟರ ಈ ಜನರ ದುಡ್ಡಿನ ದೊಡ್ದ ಗಾತ್ರದ ಗಣಪ ಹಾಗೂ ಹಿಂದೂ ಮಹಾಸಭಾ ಗಣಪತಿಯ ಹೊಳೆ ಸೇರಲು ಸಾಗುವ ಹಾದಿಯಲ್ಲಿ ಸಿಗುವ ಅಮೀರ್ ಅಹಮದ್ ಸರ್ಕಲ್ಲಿನ ಬಳಿ ಬರುತ್ತಿದ್ದಂತೆ, ಸದಾ ಸಜ್ಜಾಗಿಯೇ ಬರುವ 'ಕೆಲವರು' ಪಕ್ಕದಲ್ಲಿರುವ ಮಸೀದಿಗೆ ಸಂಪ್ರದಾಯದಂತೆ ಒಂದಷ್ಟು ಕಲ್ಲನ್ನ ಮುಲಾಜಿಲ್ಲದೆ ಎಸೆದು ಮುಂದೆ ಹೋಗುತ್ತಾರೆ! ಇನ್ನೇನು ಮುಳುಗಿ ಮರೆಯಾಗಲಿರುವ ಗಣಪತಿಗೆ ಜಯಕಾರ ಕೂಗಲಾದರೂ ಈ ಗಡವರು ಮರೆತಾರು, ಆದರೆ ಮಸೀದಿಗೆ ಕಲ್ಲೆಸೆಯುವುದನ್ನ ಮಾತ್ರ ಯಾವತ್ತಿಗೂ ಮರೆಯರು. ಆಮೇಲೆ ಕರೆದು ಕೇಳಿದರೆ, "ಮಸೀದಿಯಿಂದಲೇ ಕಲ್ಲುಗಳು ಬಂದು ಮೆರವಣಿಗೆಯ ಮೇಲೆ ಬಿದ್ದವು!" ಅನ್ನುವ ಅನುಗಾಲದ ಅದೇ ಹಸೀ ಸುಳ್ಳೊಂದನ್ನ ಕೇಳಿದವರ ಮುಖಕ್ಕೆ ಎಸೆದು ಮಿಣ್ಣಗೆ ಮರೆಯಾಗಿ ಹೋಗುವುದರಲ್ಲಿ, ಈ ಸೆಟ್ಟರ ಗಣಪಣ್ಣನ ಕಳ್ಳ ಭಕ್ತ ಕೋತಿಗಳು ಬಲು ನಿಸ್ಸೀಮರು.

ಹಿರಿಯ ಗೆಳೆಯರೊಬ್ಬರ ಮಧ್ಯ ಕರ್ನಾಟಕದ ಹುಟ್ಟೂರೊಂದರಲ್ಲಿ ಈ ಸಾರಿ ಜಾತಿ ಜಗಳ ತೆಗೆದು ಗಣಪತಿ ಕೂರಿಸಲು ಅನುಮತಿ ಸಿಗದೆ ಹೋಗುವಂತಾಯಿತಂತೆ. ಲಿಂಗಾಯತರು ಹಾಗೂ ಗೊಲ್ಲರು ಸಲ್ಲದ ಸಂಪ್ರದಾಯದ ಜಾತಿ ಜಗಳ ತೆಗೆದು ಗಣಪಣ್ಣನಿಗೆ ಸಾರ್ವಜನಿಕ ಬೈಠಕ್ ಜಸ್ಟ್‍ಮಿಸ್ ಮಾಡಿಸಿಬಿಟ್ಟರಂತೆ!. ಇದನ್ನ ಕೇಳಿದಾಗ ಮೇಲಿನದೆಲ್ಲಾ ನೆನಪಿಗೆ ಬಂತು. ಒಟ್ಟಿನಲ್ಲಿ ಊರೊಗ್ಗಟ್ಟಿಗೆ ಕಾರಣವಾಗಬೇಕಿದ್ದ ಉತ್ಸವವೊಂದು ಊರೊಟ್ಟಿನ ಒಡುಕಿಗೆ ನೇರ ಕಾರಣವಾಗುತ್ತಿರೋದು ಮಾತ್ರ ನಾಚಿಗೆಗೇಡು.

ಕಾಲ ಕಳೆದ ಹಾಗೆ ತಂತ್ರಜ್ಞಾನ, ಸವಲತ್ತು ಹಾಗೂ ಸಂವಹನ ಕೇವಲ ವಿಶ್ವವನ್ನಷ್ಟೆ ಕುಗ್ರಾಮವನ್ನಾಗಿಸುತ್ತಿಲ್ಲ. ಜನರೂ ಸಹ ಮಾನಸಿಕವಾಗಿ ದಿನದಿಂದ ದಿನಕ್ಕೆ ಕುಬ್ಜರಾಗುತ್ತಾ ತಮ್ಮ 'ಸಣ್ಣತನಗಳಿಂದ' ಮರಳಿ ಶಿಲಾಯುಗದ ಹಾದಿಗೆ ಹೊರಳುತ್ತಿದ್ದಾರೆ ಅನ್ನಿಸುತಿದೆ.

Friday, December 11, 2015

ವಲಿ - ೩೮








ಅಲ್ ತೈಫ್ ಕೋಟೆಯ ಮೇಲೆ ಸತತವಾಗಿ ಲಗ್ಗೆ ಇಟ್ಟರೂ ಸಹ ಅವರನ್ನ ಅಲುಗಾಡಿಸಲಾಗದೆ ಮಹಮದನ ಪಡೆ ಮೆಕ್ಕಾ ಯಾತ್ರೆ ಮುಗಿಸಿ ಮದೀನಾವನ್ನು ಬಂದು ಮುಟ್ಟಿ ಆಗಲೆ ಹತ್ತು ತಿಂಗಳು ಕಳೆದಿತ್ತು. ಆ ಅತೃಪ್ತಿ ಆತನ ಒಳಮನಸಿನಲ್ಲಿ ಆಗಾಗ ಮುಳ್ಳಿನಂತೆ ಚುಚ್ಚುತ್ತಲೆ ಉಳಿದಿತ್ತು. 'ನರಿಯನ್ನು ನರಿಯ ಬಿಲದಲ್ಲಿಯೆ ಇರಲು ಬಿಟ್ಟರೆ ಅದು ಯಾರಿಗೂ ತೊಂದರೆ ಕೊಡಲಾರದು!' ಅನ್ನುವ ಯುದ್ಧನೀತಿಯ ವಿವೇಕವನ್ನು ಮಹಮದ್ ಒಲ್ಲದ ಮನಸ್ಸಿನಿಂದಲೆ ಆಗ ಅಂಗೀಕರಿಸಿ ತುಸು ಕಾಲ ಸುಮ್ಮನಾಗಲು ಒಪ್ಪಿದ್ದ. ಆದರೆ ಆತ ಅವರನ್ನು ಸುಮ್ಮನೆ ಇರಗೊಟ್ಟಿದ್ದರೂ ಸಹ ಅಲ್ ತೈಫಿನ ಸುತ್ತಮುತ್ತಲಿನ ಆತನ ಮತಾವಲಂಭಿ ಮುಸಲ್ಮಾನರು ಆ ನೀತಿಯನ್ನ ಪಾಲಿಸಿರಲಿಲ್ಲ. ಹವಾಜಿನರಂತೂ ಅನಗತ್ಯವಾಗಿ ಅವಕಾಶ ಸಿಕ್ಕಾಗಲೆಲ್ಲ ಅಲ್ ತೈಫಿನವರನ್ನ ಕಾಡಿಸಿ ಪೀಡಿಸಿ ವಿಕೃತ ಆನಂದ ಅನುಭವಿಸುತ್ತಿದ್ದರು. ಅವರ ತೋಟ, ಜಮೀನು ಹಾಗೂ ಇನ್ನಿತರ ಆಸ್ತಿ ಪಾಸ್ತಿಗಳನ್ನ ಬೇಕಂತಲೆ ಹಾಳುಗೆಡವಿ ಉಪದ್ರ ನೀಡುತ್ತಿದ್ದರು.


ಈ ಮಧ್ಯೆ ಎಮನ್ ದೇಶಕ್ಕೆ ಯುದ್ಧ ತಂತ್ರಗಳ ಕಲಿಕೆಗಾಗಿ ಹೋಗಿದ್ದ ಅಲ್ ತೈಫಿನ ಮುಖಂಡರಲೊಬ್ಬನಾಗಿದ್ದ ಓರ್ವಾ ಇಬ್ನ್ ಮಸೂದ್ ಎಂಬಾತ ಅಲ್ಲಿಂದ ತನ್ನ ಮನೆಗೆ ಮರಳುವ ದಾರಿಯಲ್ಲಿ ಮದೀನಕ್ಕೆ ಭೇಟಿ ಕೊಟ್ಟು ಅಲ್ಲಿ ಮಹಮದನನ್ನು ಮುಖತಃ ಭೇಟಿಯಾದ. ಅಲ್ ಹೊಬೈಡಿಯಾದಲ್ಲಿ ಆತ ಈಗಾಗಲೆ ಮುಸಲ್ಮಾನರ ಸಂಪರ್ಕಕ್ಕೆ ಬಂದಿದ್ದ. ಅಲ್ಲಿ ಆತ ಅವರ ಮತಾಚರಣೆಯ ಶಿಸ್ತು, ಧಾರ್ಮಿಕ ನಡುವಳಿಕೆ ಹಾಗೂ ಆಚರಣೆಗಳಿಂದ ಪ್ರಭಾವಿತನೂ ಆಗಿದ್ದ. ಹೀಗಾಗಿ ಮಹಮದನನ್ನು ಭೇಟಿಯಾದ ಆತ ಇಸ್ಲಾಮಿಗೆ ಮತಾಂತರಿತನಾದ. ತಾನು ಅನಂತರ ಅಲ್ ತೈಫಿಗೆ ಹಿಂದಿರುಗಿ ಅಲ್ಲಿನವರನ್ನ ಇಸ್ಲಾಮಿನತ್ತ ಒಲಿಸಿ ಮತಾಂತರ ಮಾಡುವ ಪ್ರಯತ್ನಕ್ಕಿಳಿಯುತ್ತೇನೆ ಎಂದು ತನ್ನ ಮನದಾಸೆಯನ್ನ ಅರುಹಿದ.



ಮಹಮದನಿಗೆ ಅಲ್ ತೈಫ್ ಜನರ ಅನಾಗರೀಕ ನಡುವಳಿಕೆಯ ಸ್ಪಷ್ಟ ಪರಿಚಯವಿತ್ತು. ಆವರು ಯಾವುದೆ ಕಾರಣಕ್ಕೂ ಅವರು ಮತಾಂತರವಾಗಲಿಕ್ಕೆ ಒಪ್ಪದೆ ಅಜ್ಞಾನದಿಂದ ಅವನ ಮೇಲೆ ಎಗರಿ ಬೀಳಬಹುದು ಎಂದು ತರ್ಕಿಸಿ ಮಸೂದನಿಗೆ ಮರಳಿ ಮನೆಗೆ ಹೋಗದಂತೆ ಸೂಚಿಸಿದ. ಆದರೆ ತನ್ನವರ ಮೇಲೆ ಅಪಾರವಾದ ಭರವಸೆಯನ್ನು ಇರಿಸಿಕೊಂಡಿದ್ದ ಮಸೂದ್ ಮಾತ್ರ ಇದರಿಂದ ವಿಚಲಿತನಾಗದೆ ಅಲ್ ತೈಫಿನತ್ತ ಪಾದ ಬೆಳೆಸಿದ. ಮನೆಯನ್ನ ಮುಟ್ಟಿದವನೆ ತನ್ನ ಬಂಧು ಬಾಂಧವರಲ್ಲಿ ಆತ ತಾನು ಇಸ್ಲಾಮಿನ ಅನುಯಾಯಿಯಾಗಿ ಬದಲಾದ ವಿಷಯವನ್ನ ಹೇಳಿಕೊಂಡ. ಅವರೆಲ್ಲರೂ ಸಹ ತನ್ನನ್ನು ಅನುಸರಿಸಬೇಕೆಂದು ಆತ ಕರೆ ನೀಡಿದ. ಈ ಘೋಷಣೆಯ ನಂತರ ಬಂಧುಗಳೆಲ್ಲಾ ಚದುರಿ ತಮ್ಮ ತಮ್ಮ ಮನೆಯನ್ನ ಸೇರಿಕೊಂಡರು. ಅವರೆಲ್ಲಾ ತಮ್ಮ ತಮ್ಮೊಳಗೆ ಆಪ್ತ ಸಮಾಲೋಚನೆ ನಡೆಸಿಕೊಂಡರು.



ಮರು ಬೆಳಗ್ಯೆ ಉತ್ಸಾಹದಿಂದ ತನ್ನ ಮನೆಯ ಛಾವಣಿಯನ್ನೇರಿದ ಮಸೂದ್ ಅಲ್ಲಾಹೋ ಅಕ್ಬರ್ ಎಂದು ಪ್ರಾರ್ಥನೆಯ ಕರೆಕೊಟ್ಟು ಅವರೆಲ್ಲರನ್ನ ಪ್ರಾರ್ಥನೆಗೆ ಆಹ್ವಾನಿಸಲು ಯತ್ನಿಸುತ್ತಿರುವಾಗ ಎಲ್ಲಾ ದಿಕ್ಕುಗಳಿಂದ ಬಿರು ಬಾಣಗಳ ಪ್ರತಿಕ್ರಿಯೆ ಅವನಿಗೆ ಸಿಕ್ಕಿತು! ಹೀಗೆ ಸಿಕ್ಕ ಪ್ರತ್ಯುತ್ತರದಿಂದ ಘಾಸಿಯಾದ ಆತ ನೆತ್ತರು ಸುರಿಸುತ್ತಾ ನೆಲಕ್ಕುರುಳಿ ಅಸು ನೀಗಿದ. ಆತನ ಮಿತ್ರರು ಪ್ರಾಥಮಿಕ ಉಪಚಾರ ಮಾಡಿದ್ದೂ ಸಹ ಉಪಯೋಗಕ್ಕೆ ಬರಲಿಲ್ಲ. ಆದರೆ ಸಾಯುವ ಮುನ್ನ ಆತ ಹೊನೈನ್'ನ ಯುದ್ಧದಲ್ಲಿ ಮಡಿದ ಮುಸಲ್ಮಾನರ ಗೋರಿಗಳ ಪಕ್ಕದಲ್ಲಿ ತನ್ನನ್ನೂ ಸಹ ಹೂಳಬೇಕೆಂದು ಕೋರಿಕೊಂಡ. ಈ ಸುದ್ದಿ ಮಹಮದನ ಕಿವಿಗೆ ಬೀಳುತ್ತಲೆ ಆತ ಕ್ಷುದ್ರನಾದ, ಮಸೂದನನ್ನು ಆತ ಹುತಾತ್ಮನೆಂದು ಕೊಂಡಾಡಿದ.


ಮಸೂದನ ಬಲಿದಾನ ಮಹಮದನನ್ನು ಅಲ್ ತೈಫರ ಮೇಲೆ ಇನ್ನಷ್ಟು ಕಠಿಣನಾಗಿ ವರ್ತಿಸುವಂತೆ ಮಾಡಿತು. ಅಲ್ ತೈಫರೂ ಸಹ ಇದನ್ನೆಲ್ಲಾ ಪರಿಗಣನೆಗೆ ಆರಂಭದಲ್ಲಿ ತೆಗೆದುಕೊಳ್ಳದಿದ್ದರೂ ಸಹ ಮುಸಲ್ಮಾನರ ನಿರಂತರ ಪೀಡೆ ಅವರನ್ನ ಕಂಗಾಲು ಮಾಡತೊಡಗಿತು. ಬೇರೆ ಉಪಾಯ ಕಾಣದೆ ಅವರು ಒಂದು ಸಂಧಾನ ಸೂತ್ರಕ್ಕೆ ಒಳಪಡುವ ಉದ್ದೇಶದಿಂದ ತಮ್ಮ ಪ್ರಮುಖ ಆರು ಮುಖಂಡರ ನೇತೃತ್ವದಲ್ಲಿ ಪ್ರತ್ಯೇಕ ಇಪ್ಪತ್ತು ಪ್ರತಿನಿಧಿಗಳ ಸಂಧಾನದ ಸಮಾಲೋಚಕ ತಂಡವನ್ನು ಮಹಮದನ ಬಳಿ ಕಳುಹಿಸಿಕೊಟ್ಟರು. ಮಹಮದ್ ಅವರನ್ನ ಆದರದಿಂದಲೆ ಬರ ಮಾಡಿಕೊಂಡು ತನ್ನ ಮಸೀದಿಯ ಪಕ್ಕದಲ್ಲಿಯೆ ಅವರಿಗೆ ಬಿಡಾರ ಕಲ್ಪಿಸಿ ಉಳಿಯುವ ವ್ಯವಸ್ಥೆ ಮಾಡಿದ.



ದಿನವಿಡಿ ಅವರೆಲ್ಲರಿಗೆ ತನ್ನ ಧರ್ಮೋಪದೇಶ ನೀಡಿದ. ಪ್ರಮುಖವಾಗಿ ಅದರಲ್ಲಿ ಮೂರ್ತಿ ಪೂಜೆಗೆ ನಿಷೇಧವಿತ್ತು. ಆದರೆ ಅಲ್ ತೈಫ್ ಜನರು ಯಾವುದೆ ಕಾರಣಕ್ಕೂ ಈ ಹಿಂದಿನ ತಮ್ಮ ದೇವತೆಯನ್ನ ಬಿಟ್ಟುಕೊಡಲು ರಾಜಿಯಾಗಲಿಲ್ಲ. ತಮ್ಮ ಆರಾಧನೆಯ ಶಕ್ತಿ ದೇವತೆ ಸನಾತನರ ಕಾಳಿಯನ್ನ ಹೋಲುವ ಅಲ್ ಲಾಟಳ ವಿಗ್ರಹವನ್ನ ನಾಶ ಪಡಿಸಲಿಕ್ಕೆ ಸುತರಂ ಒಪ್ಪಲಿಲ್ಲ. ಇಸ್ಲಾಮನ್ನ ಸ್ವೀಕರಿಸಿದರೂ ಸಹ ಅಲ್ ಲಾಟಳನ್ನ ಒಡೆದು ವಿಛಿದ್ರ ಗೊಳಿಸುವುದು ಅಸಾಧ್ಯ ಎಂದವರು ಸ್ಪಷ್ಟ ಪಡಿಸಿದರು. ಇದರಿಂದ ವಿಚಲಿತನಾದ ಮಹಮದ್ ತನಗೆ ವಿಗ್ರಹಾರಾಧನೆಯ ಬಗೆಗಿರುವ ಅಸಹನೆ, ಅಪನಂಬಿಕೆ ಹಾಗೂ ಅಸಮಾಧಾನವನ್ನು ಅವರಿಗೆ ಮನದಟ್ಟು ಮಾಡಿಕೊಡಲು ಹೆಣಗಿದ. ಏಕ ದೈವದ ಆರಾಧನೆಗೆ ಒತ್ತು ಕೊಡುವ ಇಸ್ಲಾಮಿನಲ್ಲಿ ಮೂರ್ತಿ ಪೂಜೆಯನ್ನ ಪ್ರೋತ್ಸಾಹಿಸಲಾಗದು ಎಂದಾತ ನುಡಿದ.




ತಾನು ಸಾರುವ ತತ್ವಗಳು ವಿಗ್ರಹಾರಾಧನೆಗೆ ಪೂರಕವಾಗಿಲ್ಲ ಎಂದಾತ ಅವರೆಲ್ಲರಿಗೆ ತಿಳಿಯ ಪಡಿಸಿದ. ಇಸ್ಲಾಮ್ ಹಾಗೂ ವಿಗ್ರಹಾರಾಧನೆ ಒಟ್ಟೊಟ್ಟಿಗೆ ಸಾಗಲಾರದು ಎಂದೂ ಸಹ ಆತ ಹೇಳಿಕೆ ನೀಡಿದ. ಕಾಲಾನುಕ್ರಮದಲ್ಲಿ ಅದನ್ನ ಪರಗಣಿಸುವ ಹಾಗೂ ವಿಗ್ರಹ ನಾಶಕ್ಕೆ ಸೂಕ್ತ ಸಮಯಾವಕಾಶ ಕೋರುವ ಅವರ ಮನವಿಗಳನ್ನೆಲ್ಲಾ ಆತ ತಿರಸ್ಕಾರ ಸೂಚಿಸಿ ಈ ಕೂಡಲೆ ಅದನ್ನ ಒಡೆದು ಹಾಕಲೇಬೇಕೆಂದು ಪಟ್ಟು ಹಿಡಿದ.


ಆ ಕಾರ್ಯ ಮುಗಿದ ನಂತರ ಇಸ್ಲಾಮಿಗೆ ಒಳಪಟ್ಟ ಎಲ್ಲರೂ ನಿತ್ಯ ಅಲ್ಲಾನನ್ನು ಪ್ರಾರ್ಥಿಸಬೇಕು. ಪ್ರಾರ್ಥನೆಯ ಆಚರಣೆ ಇಲ್ಲದ ಇಸ್ಲಾಮಿಗೆ ಬೆಲೆ ಇಲ್ಲ ಎಂದಾತ ನುಡಿದ. ವಿಧಿ ಇಲ್ಲದೆ ನೆಮ್ಮದಿಗೆ ಕಾದಿದ್ದ ಅಲ್ ತೈಫಿನ ಮಂದಿ ಸಹ ಇದಕ್ಕೆ ಅನಿವಾರ್ಯವಾಗಿ ಸಮ್ಮತಿ ಸೂಚಿಸಿದರು. ಆದರೆ ಅವರೂ ಕೂಡ ಒಂದು ನಿಬಂಧನೆಯನ್ನ ಒಡ್ದಿದರು. ಅಲ್ ತೈಫ್ ಕಾಡಿನ ಪರಿಸರದಲ್ಲಿನ ಮೃಗಗಳನ್ನ ಮುಂದೆ ಬೇಟೆಯಾಡುವಂತಿಲ್ಲ ಎಂದವರು ಮನವಿ ಮಾಡಿಕೊಂಡದ್ದಕ್ಕೆ ಮಹಮದ್ ಸಮ್ಮತಿಸಿದ. ಆ ಬಗ್ಗೆ ಒಂದು ಸಾರ್ವಜನಿಕ ಶಾಸನ ಪತ್ರವನ್ನಾತ ಹೊರಡಿಸಿದ. ಅದರಲ್ಲಿ ಅಲ್ ತೈಫ್ ಕಾಡನ್ನ ಸುರಕ್ಷಿತಾರಣ್ಯವೆಂದು ಘೋಷಿಸಿ ಯಾರಾದರೂ ಅಲ್ಲಿನ ಮೃಗ ಖಗ ಹಾಗೂ ವೃಕ್ಷಗಳನ್ನ ನಾಶ ಪಡಿಸಿದ್ದು ಕಂಡು ಬಂದರೆ ಅಂತವರನ್ನ ಮುಲಾಜಿಲ್ಲದೆ ಹಿಡಿದು ಹಿಂಸಿಸಿ ಅವರ ಬಟ್ಟೆ ಕಳಚಿ ಬಿಡಲಾಗುವುದು ಎಂದೆನ್ನಲಾಗಿತ್ತು. ಅದಕ್ಕೂ ಮೀರಿ ಮತ್ತೆಯೂ ಮುಂದುವರೆದರೆ ಅಂತವರನ್ನ ಮಹಮದನ ಮುಂದೆ ಹಿಡಿದೆಳೆತಂದು ಆತ ಸೂಚಿಸುವ ಶಿಕ್ಷೆಗಳಿಗೆ ಒಳಪಡಿಸಲಾಗುವುದು ಎಂದು ಎಚ್ಚರಿಸಲಾಗಿತ್ತು ಎನ್ನುತ್ತಾರೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತಮ್ಮ ಕೃತಿ 'ಲೈಫ್ ಆಫ್ ಮಹಮದ್'ನ ಪುಟ ಸಂಖ್ಯೆ ೪೫೧ರಲ್ಲಿ.



ಅಬು ಸಫ್ಯಾನ್ ಹಾಗೂ ಅಲ್ ಮೊಘಿರಾರನ್ನು ಪ್ರತ್ಯೇಕವಾಗಿ ಅಲ್ ಲಾಟಳ ವಿಗ್ರಹವನ್ನ ಹಾಳುಗೆಡವಲೆಂದೆ ಅವರೊಂದಿಗೆ ಕಳುಹಿಸಿಕೊಡಲಾಯಿತು. ಗುಡಿಯಲ್ಲಿ ಪ್ರಾರ್ಥಿಸುತ್ತಿದ್ದವರ ಹತಾಶ ರಕ್ಷಣಾ ಪ್ರಯತ್ನ ಹಾಗೂ ಕಡು ವಿರೋಧವನ್ನ ಬರ್ಬರವಾಗಿ ಹತ್ತಿಕ್ಕಿ ಅವರಿಬ್ಬರೂ ಮಚ್ಚು, ಗುದ್ದಲಿ ಹಿಡಿದು ಅಲ್ಲಿನ ಮೂರ್ತಿಯನ್ನ ಬುಡಸಹಿತ ಛಿದ್ರಗೊಳಿಸಿ ಒಡೆದು ಹಾಕಿದರು. ಈ ಗುಡಿಯ ನಾಶದೊಂದಿಗೆ ಮಹಮದನ ವಿರುದ್ಧ ಸೆಣೆಸುತ್ತಿದ್ದ ಅ ಕೊನೆಯ ಸಂಸ್ಥಾನ ಅಲ್ ತೈಫ್ ಕೂಡಾ ತನ್ನ ಸ್ವಾತಂತ್ರ್ಯವನ್ನ ಕಳೆದುಕೊಂಡು ಮಹಮದನ ಕಪಿಮುಷ್ಠಿಯಲ್ಲಿ ಚಿರ ಬಂಧಿಯಾಯಿತು.


ಕ್ರಿಸ್ತ ಶಕ ೬೩೧ರಲ್ಲಿ ವಾರ್ಷಿಕ ಮೆಕ್ಕಾ ಯಾತ್ರೆಗೆ ತಾನು ತೆರಳದೆ ಮಾವ ಅಬು ಬಕರನ್ನು ಮೂರು ಸಾವಿರ ಯಾತ್ರಿಕರೊಂದಿಗೆ ಮಹಮದ್ ಕಳುಹಿಸಿಕೊಟ್ಟ. ಅದಕ್ಕಾತ ಕೊಟ್ಟ ಕಾರಣ ಕುತೂಹಲಕರವಾಗಿತ್ತು. ಈಗಲೂ ಅಲ್ಲಿ ವಿಧರ್ಮೀಯರು ಬಂದು ಹರಕೆ ತೀರಿಸುತ್ತಿದ್ದಾರೆ. ಯಾವತ್ತು ಕೇವಲ ಮುಸಲ್ಮಾನರು ಮಾತ್ರ ಅಲ್ಲಿಗೆ ಬರುವಂತಾಗಿ ಉಳಿದವರನ್ನೆಲ್ಲಾ ದೂರ ತಳ್ಳಲಾಗುತ್ತದೆಯೋ ಅಂದು ತಾನು ಆ ಸ್ಥಳದ ಪಾವಿತ್ರ್ಯವನ್ನು ಒಪ್ಪಿಕೊಳ್ಳುತ್ತೇನೆ ಎಂದಾತ ಹೇಳಿಕೊಂಡ. ಅದರ ಸಂಬಂಧ ಅಲಿಯ ಕೈಗೆ ಒಂದು ಆಜ್ಞಾ ಪರ್ತವನ್ನ ದಾಟಿಸಿ ಅದನ್ನ ಯಾತ್ರೆಯ ಮಧ್ಯದಲ್ಲಿದ್ದ ಮಾವ ಅಬು ಬಕರನಿಗೆ ಮುಟ್ಟಿಸುವಂತೆ ಹೆಳಿದ. ಆ ಬಿಡುಗಡೆ ಪತ್ರ ಆತನಿಗೆ ಸಿಕ್ಕಿದ ಖುರ್ಹಾನಿನ ಸುರಾ ೯/೧೨೯ರ ಸಾರಾಂಶವಾಗಿದೆ. ಆಸಕ್ತರು ಸುರಾ ಸಂಖ್ಯೆ ೫/೨೮ - ೯/೧ನ್ನು ಸಹ ಈ ನಿಟ್ಟಿನಲ್ಲಿ ಗಮನಿಸಬಹುದು.


ಅದರನುಸಾರ ವಿಧರ್ಮೀಯರ ಮೇಲಿನ ಯಾವುದೆ ರಕ್ಷಣೆಯ ಹೊಣೆಗಾರಿಕೆಯಿಂದ ಆತನನ್ನು ಹಾಗೂ ಆತನ ಸ್ವ ಘೋಷಿತ ಪ್ರವಾದಿತ್ವವನ್ನು ಮುಕ್ತ ಮಾಡಲಾಗಿತ್ತು! ಅಂದರೆ ಸರಳ ಮಾತುಗಳಲ್ಲಿ ಮುಸಲ್ಮಾನನಾದವನು ಮೆಕ್ಕಾದಲ್ಲಿ ಮುಸಲ್ಮಾನನಲ್ಲದವನ ಕೊಳೆಯನ್ನ ಮಾಡಲು ಪರೋಕ್ಷವಾಗಿ ಮಹಮದ್ ಕುಮ್ಮಕ್ಕಿನ ಕರೆಕೊಟ್ಟಿದ್ದ. ಯಾತ್ರೆಯ ದಿನದಂದು ವಿಧರ್ಮೀಯರು ಪಶ್ಚಾತಾಪ ಪಟ್ಟರೆ ಅವರಿಗೆ ಒಳಿತಾಗುತ್ತದೆ. ಇಲ್ಲದೆ ಹೋದರೆ ಅವರಿಗೆಲ್ಲಾ ಘೋರ ಶಿಕ್ಷೆ ಕಾದಿದೆ. ಅಂತವರನ್ನೆಲ್ಲ ಮುಂದಿನ ನಾಲ್ಕು ತಿಂಗಳು ಸಮಯಾವಕಾಶ ನೀಡಿ ಹಾಗೆಯೆ ಬಿಡಲಾಗುವುದು. ಅಷ್ಟರೊಳಗೆ ಅವರು ಇಸ್ಲಾಮನ್ನು ಒಪ್ಪಿಕೊಂಡು ಮುಸಲ್ಮಾನರಾಗಬೇಕು.



ಅನಂತರವೂ ಅವರು ಅವಿಶ್ವಾಸಿಗಳಾಗಿಯೆ ಉಳಿದರೆ ಅವರ ವಿರುದ್ಧ ಹೋರಾಡಿ ಅಂತಹ ಅಧರ್ಮಿಗಳನ್ನ ಸೆರೆ ಹಿಡಿಯಲಾಗುವುದು. ಆ ಮೇಲೆ ಕಪ್ಪ ಪಡೆದು ಬಿಡುಗಡೆ ಮಾಡುವುದೋ, ಇಲ್ಲವೆ ಕೊಂದು ಕೊನೆಗಾಣಿಸುವುದೋ ಎಂಬುದನ್ನ ಸಂದರ್ಭಾನುಸಾರ ನಿರ್ಧರಿಸಲಾಗುತ್ತದೆ. ಅಲ್ಲದೆ ವಿಧರ್ಮೀಯರು ಸ್ವಚ್ಛರಲ್ಲದ ಕಾರಣ ಅವರು ಮೆಕ್ಕಾವನ್ನು ಪ್ರವೇಶಿಸಿ ಅಲ್ಲಿನ ಪರಿಸರವನ್ನ ಕಲುಷಿತಗೊಳಿಸುವಂತಿಲ್ಲ ಎಂದಾತ ಸಾರಿದ. ಈ ಅಸಂಬದ್ಧ ಹೇಳಿಕೆ ಮುಸಲ್ಮಾನರನ್ನೂ ಸಹ ಇನ್ನಿತರರಿಗಿಂತ ಅತಿ ಅತಿ ಕೊಳಕರೆಂದೆ ತೀರ್ಮಾನಿಸಿರುವ ಇನ್ನಿತರ ಬುಡಕಟ್ಟಿನವರ ವಿನೋದದ ನಡುವೆ ಹಾಸ್ಯಾಸ್ಪದ ಪ್ರಹಸನವಾಗಿ ಚಾಲ್ತಿಗೂ ಬಂದಿತು.



ಅಲಿ ಇದನ್ನ ಮೀನಾದಲ್ಲಿ ಯಾತ್ರೆಯ ಅಂತಿಮದಿನ ಸೈತಾನನಿಗೆ ಕಲ್ಲೆಸೆಯುವ ಸ್ಥಳದಲ್ಲಿ ನೆರೆದಿದ್ದ ಯಾತ್ರಿಕರನ್ನ ಉದ್ದೇಶಿಸಿ ದೊಡ್ದ ಗಂಟಲಿನಲ್ಲಿ ಓದಿ ಹೇಳಿದ. ಹಾಗೆ ಆತ ಉದುಇರಿಸಿದ ಅಣಿಮುತ್ತುಗಳನ್ನ ಶಾಂತವಾಗಿ ಆಲೈಸಿದ ಯಾತ್ರಿಕರು ಅದನ್ನ ತಮ್ಮ ತಮ್ಮ ಊರುಗಳಿಗೆ ಹಿಂದಿರುಗಿದ ನಂತ ಅರೇಬಿಯಾದ ಉದ್ದಗಲಕ್ಕೂ ಪಸರಿಸಿದರು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೮೬೦ರಲ್ಲಿ.



ಇದರ ಫಲಿತಾಂಶ ಮುಂದೆ ನಿರೀಕ್ಷೆಯಂತೆಯೆ ಹಿಂಸಾತ್ಮಕವಾಗಿದ್ದಿತು. ಎಲ್ಲೆಲ್ಲಿ ಆ ತನಕ ಇಸ್ಲಾಮನ್ನ ವಿರೋಧಿಸಲಾಗುತ್ತಿತ್ತೋ ಅಲ್ಲಿಗೆಲ್ಲಾ ಮಹಮದನ ಮತೋನ್ಮತ್ತ ಮುಸಲ್ಮಾನರ ರಕ್ಕಸ ಪಡೆ ನುಗ್ಗಿ ಅವರನ್ನೆಲ್ಲಾ ಸದೆ ಬಡಿಯಿತು. ಅಂತಹ ಸಂಸ್ಥಾನಗಳ ವಿರುದ್ಧ ಕೇವಲ ಧಾರ್ಮಿಕ ಕಾರಣಕ್ಕೆ ಕ್ರೂರವಾದ ಯುದ್ಧಾಚರಣೆಯನ್ನ ನಡೆಸಿ ಹಿಂಸೆಯ ಉತ್ತುಂಗದಲ್ಲಿ ವಿರೋಧಿಸಿ ತಮ್ಮ ಮಾತೃಧರ್ಮ ಉಳಿಸಿಕೊಳ್ಳಲು ಹೆಣಗಾಡಿದ ನಿಶ್ಪಾಪಿಗಳನ್ನ ಮಣಿಸಲಾಯಿತು. ಈ ಮೂಲಕ ಅರೇಬಿಯಾದ ಪ್ರತಿಯೊಂದು ಕ್ಷೇತ್ರ, ಸಂಸ್ಥಾನ ಹಾಗೂ ಪ್ರಾಂತ್ಯದಲ್ಲಿ ಇಸ್ಲಾಮ್ ಒತ್ತಾಯಪೂರ್ವಕವಾಗಿ ಲಗ್ಗೆ ಇಟ್ಟು ಪಸರಿಸಿತು ಹಾಗೂ ಬಲವಾಗಿ ಆರಂಭದ ದಿನಗಳಲ್ಲಿಯೆ ಬೇರೂರಿ ಮರಳುಗಾಡಿನ ಜಾಲಿಯಂತೆ ವಿಫುಲವಾಗಿ ಚಿಗುರಿ ಬೆಳೆದು ನಿಂತಿತು.



( ಇನ್ನೂ ಇದೆ.)

Saturday, November 28, 2015

ವಲಿ - ೩೭








ಈಗ ಅರೇಬಿಯಾದ ಧಾರ್ಮಿಕ ನಾಯಕತ್ವದ ಜೊತೆಗೆ ಸೈನಿಕ ಬಲದ ಮುಖ್ಯಸ್ಥನಾಗಿಯೂ ಮಹಮದ್ ಹೊರ ಹೊಮ್ಮಿದ್ದ. ಆತನ ಪ್ರಬಲ ವಿರೋಧಿಗಳಾಗಿದ್ದ ಖುರೈಷಿಗಳೂ ಸಹ ಈಗ ಅವನ ಅಡಿಯಾಳುಗಳಾಗಿ ಆತನ ಪಾಳಯದ ಬೆಂಬಲಕ್ಕೆ ಬಂದ ಕಾರಣದಿಂದ ಆತನಿಗೆ ಎದುರಾಗಿ ವಾದಿಸುವ ಅಥವಾ ಹೋರಾಡುವ ಸ್ಥೈರ್ಯವುಳ್ಳ ಯಾರೊಬ್ಬರೂ ಸಹ ಆರನೆ ಶತಮಾನದ ಅರೇಬಿಯಾ ಪ್ರಸ್ಥಭೂಮಿಯಲ್ಲಿ ಇರಲೆ ಇಲ್ಲ. ಸಹಜವಾಗಿ ಆತನ ಪ್ರತಿಷ್ಠೆ ಮರುಭೂಮಿಯಾಚೆಗೂ ಹರಡಿ ಮದೀನಾದಲ್ಲಿ ಅನೇಕ ಹೊರ ರಾಜ್ಯಗಳ ರಾಯಭಾರ ಕಛೇರಿಗಳೂ ಸಹ ಆರಂಭಗೊಂಡವು. ಹಾಗೆ ರಾಯಭಾರ ಹೊತ್ತು ಬಂದವರನ್ನ ಮಹಮದ್ ಯಥೋಚಿತವಾಗಿ ಸತ್ಕರಿಸಿದ. ಸ್ವದೇಶಕ್ಕೆ ಅವರು ಹಿಂದಿರುಗುವಾಗ ಅವರ ಅಂತಸ್ತಿಗೆ ತಕ್ಕಂತಹ ಉಡುಗೊರೆಗಳೊಂದಿಗೆ ಬೀಳ್ಕೊಟ್ಟ. ಅರೇಬಿಯಾದ ಶರಣಾಗತ ಬುಡಕಟ್ಟುಗಳಲ್ಲಿ ಅನೇಕ ಗುಂಪುಗಳಿಗೆ ಆಂತರಿಕ ಸ್ವಾತಂತ್ರ್ಯವನ್ನೂ ಸಹ ನೀಡಿದ. ಅವರಿಂದ ಕಾಲಾಕಾಲಕ್ಕೆ ಕಪ್ಪಕಾಣಿಕೆಗಳನ್ನ ನಿಯಮಿತವಾಗಿ ಒಪ್ಪಿಸಿಕೊಳ್ಳುತ್ತಾ ಗೌರವದಿಂದಲೆ ಆ ಜನಾಂಗಗಳನ್ನೂ ಸಹ ನಡೆಸಿಕೊಂಡ.


ಕ್ರಿಸ್ತಶಕ ಆರುನೂರಾ ಮೂವತ್ತರ ಅಕ್ಟೋಬರ್ ತಿಂಗಳಿನಲ್ಲಿ ತನ್ನ ಸಾಮ್ರಾಜ್ಯಶಾಹಿತ್ವವನ್ನ ಇನ್ನಷ್ಟು ಹಿಗ್ಗಿಸಲು ಆತ ಒಂದು ಪ್ರಬಲ ದಂಡನ್ನ ಸಿರಿಯಾದ ಗಡಿ ಪ್ರದೇಶಕ್ಕೆ ಕೊಂಡೊಯ್ಯಲು ನಿರ್ಧರಿಸಿದ. ಅಲ್ಲಿ ಕೆಲವು ಬುಡಕಟ್ಟುಗಳು ಹೆಚ್ಚು ಪ್ರಬಲವಾಗಿದ್ದುದರಿಂದ ಅವರನ್ನು ಹತ್ತಿಕ್ಕುವ ಉದ್ದೇಶ ಈ ದಂಡಿನ ಧಾಳಿಯ ಹಿಂದಿತ್ತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೮೪೦ರಲ್ಲಿ. ಆ ಪ್ರದೇಶಗಳೆಲ್ಲಾ ರೋಮನ್ ಸಾಮ್ರಾಜ್ಯದ ಅವಿಭಾಜ್ಯ ಅಂಗಗಳಾಗಿದ್ದು ತನ್ನ ಗಡಿ ಮೇರೆಯ ಎಲ್ಲಾ ನಾಯಕರಿಗೂ ಮಹಮದನ ದಂಡಯಾತ್ರೆಯ ಬಾತ್ಮಿ ತಿಳಿದ ರೋಮನ್ ಚಕ್ರವರ್ತಿ ಎಚ್ಚರಿಕೆಯ ಸಂದೇಶ ರವಾನಿಸಿದ. ಸೂಕ್ತ ರಕ್ಷಣಾ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಲು ಅದರಲ್ಲಿ ಸೂಚಿಸಲಾಗಿತ್ತು. ಮಹಮದ್ ಕೂಡಾ ಈ ಬಾರಿ ಅದ್ವಿತೀಯವಾದ ಸಂಖ್ಯೆಯಲ್ಲಿಯೆ ಸೈನ್ಯವನ್ನು ಜಮಾಯಿಸಲು ನಿರ್ಧರಿಸಿದ್ದ. ಹೀಗಾಗಿ ಪಡೆಯಲ್ಲಿ ಯೋಧರಾಗಿ ಶಾಮೀಲಾಗಲು ತನ್ನ ಎಲ್ಲಾ ಹಿತೈಶಿಗಳಿಗೆ, ಕುಲ ಬಾಂಧವರಿಗೆ, ಬೆಂಬಲಿತ ಬುಡಕಟ್ಟುಗಳ ಮುಖಂಡರಿಗೆ ಹಾಗೂ ತನ್ನ ಅಧೀನದಲ್ಲಿದ್ದ ಎಲ್ಲಾ ಪ್ರದೇಶಗಳ ಮುಖಂಡರುಗಳಿಗೆ ಮಹಮದ್ ಆಜ್ಞಾಪಿಸಿದ.


ಎಲ್ಲಾ ಕಡೆಗಳಿಂದ ಸೂಕ್ತ ಪ್ರತಿಸ್ಪಂದನೆ ಬಂದರೂ ಸಹ ಮದೀನಾದ ಪ್ರಜೆಗಳಿಂದ ಹಾಗೂ ಬೆದಾವಿನರಿಂದ ಮಾತ್ರ ನಿರಾಶಾದಾಯಕ ಪ್ರತ್ಯುತ್ತರ ಬಂದಿತು. ಅವರಿಬ್ಬರೂ ಅವನ ಯುದ್ಧೋತ್ಸಾಹದ ಕರೆಗೆ ಕೂಡಲೆ ಪ್ರತಿಸ್ಪಂದಿಸಲಿಲ್ಲ. ಸಿರಿಯಾದ ಗಡಿ ಮದೀನಾದಿಂದ ಬಹು ದೂರವಿದ್ದು ಬಿಸಿಲಝಳವನ್ನು ಸಹಿಸಲು ಅವರಲ್ಲಿ ಯಾರೂ ತಯ್ಯಾರಿಲ್ಲದಿದ್ದುದೆ ಇದಕ್ಕೆ ಪ್ರಮುಖ ಕಾರಣವಾಗಿತ್ತು. ಮಹಮದನಿಗೆ ಇದರಿಂದ ಮುಖಭಂಗವಾದರೂ ಆತ ಮದೀನಾದ ಪ್ರಜೆಗಳ ಮೇಲೆ ನಿರಾಶೆಯನ್ನ ವ್ಯಕ್ತ ಪಡಿಸುವ ಸ್ಥಿತಿಯಲ್ಲಿರಲಿಲ್ಲ. ಎಷ್ಟೆಂದರೂ ಅವರು ತನಗೂ, ತನ್ನ ಆರಂಭಿಕ ಅನುಚರರಿಗೂ ಕಷ್ಟಕಾಲದಲ್ಲಿ ಅನ್ನ ಬಟ್ಟೆ ಕೊಟ್ಟ ಉದಾರಿ ಆಶ್ರಯದಾತರಾಗಿದ್ದರು. ಆದರೆ ಬೆದಾವಿನರ ಬಗ್ಗೆ ಮಾತ್ರ ಅಂತಹ ಯಾವುದೆ ಮುಲಾಜನ್ನ ಆತ ಇಟ್ಟುಕೊಳ್ಳಲಿಲ್ಲ. ಮಹಮದನ ಇನ್ನಿತರ ಅನುಯಾಯಿಗಳು ಉತ್ಸಾಹದಿಂದಲೆ ಮಹಮದನ ಈ ದಂಡಯಾತ್ರೆಗೆ ಬೆಂಬಲ ಸೂಚಿಸಿ ತನು ಮನ ಧನದಿಂದ ಅತನ ಕರೆಗೆ ಸ್ಪಂದಿಸಿದರು.



ಮದೀನಾ ನಗರದ ಹೊರ ಭಾಗದಲ್ಲಿ ಸೈನ್ಯವನ್ನು ಜಮಾಯಿಸಲಾಯಿತು. ಮಹಮದನ ಮಾವ ಅಬು ಬಕರನನ್ನು ದಂಡಿನ ಪ್ರಾರ್ಥನಾ ವಿಧಿಗಳನ್ನ ನಿರ್ವಹಿಸಲು ನೇಮಿಸಲಾಯಿತು. ಮಹಮದನ ಅಳಿಯ ಅಲಿಯನ್ನು ಮದೀನಾದಲ್ಲಿಯೆ ಉಳಿಸಿ ಕುಟುಂಬದ ರಕ್ಷಣೆಯ ಹೊಣೆಯನ್ನ ಅವನ ಹೆಗಲಿಗೆ ಹೊರೆಸಲಾಯಿತು. ಜಮಾಯಿಸಿದ್ದ ಸೈನ್ಯದ ಅಂದಾಜು ಸಂಖ್ಯೆ ಮೂವತ್ತು ಸಾವಿರಕ್ಕೂ ಅಧಿಕವಿದ್ದು ಅರೇಬಿಯಾದ ಇತಿಹಾಸದಲ್ಲಿಯೆ ಅಷ್ಟು ಅಪಾರ ಪ್ರಮಾಣದ ಸೈನ್ಯ ಎಂದೂ ನೆರೆದಿರಲಿಲ್ಲ ಅನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೮೪೩ರಲ್ಲಿ. ಈ ಬಲಿಷ್ಠ ದಂಡು ಶಸ್ತ್ರ ಸನ್ನದವಾಗಿ ಸಿರಿಯಾದತ್ತ ಹೊರಟಿತು. ದಾರಿ ಮಧ್ಯೆ ಅಲ್ ಹಿಜ್ರ್ ಕಣಿವೆಯಲ್ಲಿ ಅದು ತಂಗಿತು. ಅಲ್ಲಿ ನೀರಿನ ಬಾವಿಗಳಿಗೆ ಕೊರತೆ ಇಲ್ಲದಿದ್ದರೂ ಆ ತನಕ ಶತ್ರು ಪಾಳಯದ ವಶದಲ್ಲಿದ್ದ ಅಲ್ಲಿನ ಬಾವಿಗಳ ನೀರಿಗೆ ವಿಷ ಬೆರೆಸಿರಬಹುದು ಎನ್ನುವ ಊಹಾಪೋಹದ ಗಾಳಿಸುದ್ದಿ ಭಯಂಕರವಾಗಿ ಹರಡಿ ಅವರ್ಯಾರೂ ಆ ನೀರನ್ನು ಉಪಯೋಗಿಸುವ ಗೋಜಿಗೆ ಹೋಗದೆ ಅತಿ ಸಂಕಷ್ಟಕ್ಕೆ ಒಳಗಾದರು. ಆದರೆ ಅದೃಷ್ಟವಾಶಾತ್ ಆ ರಾತ್ರಿ ಉತ್ತಮ ಮಳೆಯಾಗಿ ಅವರೆಲ್ಲರ ನೀರಿನ ಅವಶ್ಯಕತೆ ಪೂರೈಸಿತು. ಮಹಮದನ ಪ್ರಾರ್ಥನೆಗೆ ಓಗೊಟ್ತಟ್ಟ ದೈವ ಕೃಪೆ ತೋರಿ ಮಳೆ ಬರಿಸಿದ್ದರಿಂದಲೆ ಈ ಚಮತ್ಕಾರವಾಯಿತು ಅನ್ನುವ ನಂಬಿಕೆ ಸೈನ್ಯದಲ್ಲಿ ಆಗ ಹುಟ್ಟಿತು.



ಅಲ್ಲಿಂದ ಮುಂದೆ ಸಾಗಿದ ದಂಡು ತೆಬೂಕ್ ಎನ್ನುವ ಇನ್ನೊಂದು ಭಾಗದಲ್ಲಿ ಬೀಡು ಬಿಟ್ಟಿತು. ಅಲ್ಲಿ ವೃಕ್ಷ ಸಂಪತ್ತು ಹಾಗೂ ಜಲ ಮೂಲದ ಆಸರೆಗಳು ಅಪಾರವಾಗಿದ್ದು ಅವರಿಗೆ ಅಲ್ಲಿನ ವಾತಾವರಣ ನೆಮ್ಮದಿ ತಂದಿತು. ಸೈನ್ಯ ಬೀಡು ಬಿಡಲು ಅದು ಪ್ರಶಸ್ತ ಸ್ಥಳವಾಗಿತ್ತು. ತನ್ನ ಬೇಹು ಪಡೆ ರೋಮನ್ ಚಕ್ರವರ್ತಿಯ ಪ್ರತ್ಯರ್ಥದ ಸುದ್ದಿ ಸುಳ್ಳು ಅದೆಲ್ಲಾ ಊಹಾಪೋಹ ಎನ್ನುವ ಖಚಿತ ಮಾಹಿತಿಯನ್ನ ತಂದು ಮುಟ್ಟಿಸಿದಾಗ ಮಹಮದ್ ನೆಮ್ಮದಿಯ ನಿಟ್ಟುಸಿರು ಬಿಟ್ಟ. ಹತ್ತಿರದಲ್ಲೆ ಇದ್ದ ಅಲ್ ದೂಮಾ ಪ್ರದೇಶದ ಮೇಲೆ ಆರಂಭಿಕ ಧಾಳಿಯನ್ನ ಸಂಘಟಿಸಲಾಯಿತು. ಖಲೀದ್ ಯಶಸ್ವಿಯಾಗಿ ತನ್ನ ಪಡೆಯೊಂದಿಗೆ ಆ ಪ್ರಬಲ ಸಂಸ್ಥಾನವನ್ನು ಮಣಿಸಿ ಮರಳಿ ಬಂದ. ಸುತ್ತಲಿನ ಯಹೂದಿ ಹಾಗೂ ಕ್ರೈಸ್ತ ಸಂಸ್ಥಾನಗಳಲ್ಲಿ ಹಲವರನ್ನು ಸಾಮಂತರನ್ನಾಗಿಸಿ ಅಪಾರ ಕಪ್ಪ ಕಾಣಿಕೆಗಳನ್ನು ಅವರಿಂದ ಪಡೆದು ಅದೆ ವರ್ಷದ ದಿಸೆಂಬರ್ ತಿಂಗಳಿನಲ್ಲಿ ಮಹಮದನ ಪಡೆ ಹೆಚ್ಚು ಹಾನಿಗೊಳಗಾಗದೆಯೆ ಮರಳಿ ಮದೀನವನ್ನು ಮುಟ್ಟಿತು.



ಈ ದಂಡಯಾತ್ರೆ ಮಹಮದನ ನೇತೃತ್ವದಲ್ಲಿ ಕೈಗೊಂಡ ಕಟ್ಟಕಡೆಯ ಯುದ್ಧ ಕಾರ್ಯಾಚರಣೆಯಾಗಿತ್ತು. ಅನಂತರ ಯಾವುದೆ ರಣರಂಗಕ್ಕೂ ಸ್ವತಃ ಮಹಮದ್ ಸೈನ್ಯವನ್ನು ಮುನ್ನಡೆಸಲಿಲ್ಲ. ದಣಿದು ಮುದಿಯಾಗಿದ್ದ ದೈಹಿಕ ಕಾರಣಗಳು ಹಾಗೂ ಮಾಗುತ್ತಿದ್ದ ಪ್ರಾಯ ಅವನಿಗೆ ಅಂತಹ ದುಸ್ಸಾಹಸಗಳನ್ನು ಕೈಗೊಳ್ಳಲು ಪೂರಕವಾಗಿಟ್ಟಿರಲಿಲ್ಲ.  ಈ ಕೊನೆಯ ದಂಡಯಾತ್ರೆಯ ಹಿನ್ನೆಲೆಯಲ್ಲಿ ಒಂದು ಗಮನೀಯ ಘಟನೆ ಘಟಿಸಿತ್ತು. ವಾಡಿಕೆಯಂತೆ ತನ್ನ ಹಿಂಬಾಲಕ ಬುಡಕಟ್ಟುಗಳಿಗೆಲ್ಲಾ ಮಹಮದ್ ಯುದ್ಧದಲ್ಲಿ ಭಾಗವಹಿಸುವಂತೆ ಕರೆ ಕೊಟ್ಟಿದ್ದನಷ್ಟೆ. ಹಾಗೆ ಆಹ್ವಾನ ಪಡೆದವರಲ್ಲಿ ಪ್ರಬಲನಾದ ಅಲ್ ಝೆಡ್ ಬಿನ್ಖೈಸ್ ಸಹ ಒಬ್ಬನಾಗಿದ್ದ. ಆದರೆ ಆತ ಆ ಕರೆಯನ್ನ ಸರಾಸಗಟಾಗಿ ನಿರಾಕರಿಸಿದ್ದ.



ಆತ ಅದಕ್ಕಾಗಿ ತನ್ನ ಕಚ್ಚೆ ಹರುಕತನ ಹಾಗೂ ಸ್ತ್ರೀ ಲೋಲುಪತೆಯ ಕಾರಣವನ್ನೆ ಭಿಡೆಯಿಲ್ಲದೆ ನೀಡಿದ್ದ ಸಹ! ತಬೂಕ್ ಪ್ರಾಂತ್ಯದ ಮೇಲೆ ಧಾಳಿ ಕೈಗೊಳ್ಳುವ ಅಸಲು ವಿಚಾರವನ್ನ ಮುಚ್ಚಿಟ್ಟು ಮಹಮದ್ ಕೇವಲ ಬೆಜಂಟೈನ್ ನಿಯಂತ್ರಣದ ಸ್ಥಳಗಳಿಗೆ ಮಾತ್ರ ಧಾಳಿ ಸಂಘಟಿಸುವ ವಿಚಾರ ತಿಳಿಸಿ ಮೋಸ ಮಾಡಿದ್ದಾನೆ ಎಂದು ಆತ ಖಾಸಗಿಯಾಗಿ ಆರೋಪಿಸಿದ. ಅದೆಲ್ಲಾ ತನ್ನ ಹುಡುಗಿಯರ ಹುಚ್ಚನ್ನ ಅರಿತು ಮಾಡಿದ ಕುತಂತ್ರ! ಗ್ರೀಕ್ ಪ್ರದೇಶದ ಹೆಂಗಸರು ಸಹಜ ಸುಂದರಿಯರು, ಅವರ ಆಕರ್ಷಣೆಗೆ ಜೊಲ್ಲು ಸುರಿಸಿಕೊಂಡು ನಾನು ಆ ರಣ ಕಣಕ್ಕೆ ಇಳಿಯಲಿ ಎನ್ನುವ ಉದ್ದೇಶದಿಂದ ಮಹಮದ್ ತನಗೆ ಆಸೆ ಹುಟ್ಟಿಸಲು ಈ ಕಥೆ ಹೆಣೆದಿದ್ದಾನೆ ಎಂದು ಆತ ಯುದ್ಧಕ್ಕೆ ತೆರಳಲು ನಿರಾಕರಿಸಿದ. ಅಂತಃಪುರವೆ ತನಗೆ ಯುದ್ಧ ಭೂಮಿಯಿಂದ ಹಿತ ಎಂದಾತ ಮಾರೋಲೆ ಕಳಿಸಿದ! ಇದರ ಕುರುಹಾಗಿ ಖುರ್ಹಾನಿನ ಸುರಾ ಸಂಖ್ಯೆ ೯/೪೯ನ್ನ ಆಸಕ್ತರು ಗಮನಿಸಬಹುದು.


ಮಹಮದ್ ಕೈಗೊಂಡಿದ್ದ ಈ ತಬೂಕ್ ದ್ಮ್ಡಯಾತ್ರೆಯ ಅವಧಿ ಅರೇಬಿಯ್ತಾ ಪ್ರಸ್ಥಭೂಮಿಯಲ್ಲಿ ಕಡು ಬೇಸಗೆಯ ಕಾಲವಾಗಿತ್ತು. ಈ ಸುಡು ಬಿಸಿಲಿನಲ್ಲಿ ಸದುದ್ದೇಶಕ್ಕಗಿಯೆ ಆಗಿದ್ದರೂ ಸಹ ತೆರೆದ ಬಯಲಿನಲ್ಲಿ ಕಾದಾಡುವುದೆಂದರೆ ಯಾರಿಗೂ ಅಸಹನೀಯವೆ ಆಗಿತ್ತು. ಮದೀನಾದ ಮುಸಲ್ಮಾನೇತರ ಅವಿಶ್ವಾಸಿಗಳಿಗೂ ಈ ಕಾರಣದಿಂದಲೆ ಅದರಲ್ಲಿ ಕಿಂಚಿತ್ ಆಸಕ್ತಿಯೂ ಹುಟ್ಟಿರಲಿಲ್ಲ. ಹೀಗಾಗಿ ಅವರೂ ಸಹ ಈ ಆಹ್ವಾನವನ್ನು ಸರಾಸಗಟಾಗಿ ನಿರಾಕರಿಸಿದ್ದರು. ಅದನ್ನೂ ಸಹ ಖುರ್ಹಾನಿನ ಸುರಾ ಸಂಖ್ಯೆ ೯/೮೧ರಲ್ಲಿ ಆಸಕ್ತರು ಗಮನಿಸಬಹುದು.


ಹತ್ತು ಹದಿನೈದು ದಿನಗಳನ್ನ ತಬೂಕಿನಲ್ಲಿ ಕಳೆದು ಮರಳಿ ಮದೀನಾದ ಹಾದಿ ಹಿಡಿದಿದ್ದಾಗ ಅವನ ಸಾಗುವಿಕೆಯ ಸುಳಿವು ಹಿಡಿದ ಸ್ಥಳಿಯ ಅದ್ ದಿರಾರ್ ಬುಡಕಟ್ಟಿನ ಮಂದಿ ಅವನನ್ನು ಭೇಟಿ ಮಾಡಿ, ತಾವು ನೂತನವಾಗಿ ನಿರ್ಮಿಸಿದ ಮಸೀದಿಗೆ ಭೇಟಿ ನೀಡುವಂತೆ ವಿನಂತಿಯ ಆಹ್ವಾನ ಕೊಟ್ಟರು. ಅಸ್ವಸ್ಥರು ಹಾಗೂ ಬಡವರಿಗಾಗಿ ನಿರ್ಮಿಸಿಲಾಗಿದ ಅಲ್ಲಿ ಮಹಮದ್ ತಂಗಿ ಪ್ರಾರ್ಥನೆಯ ವಿಧಿಗಳನ್ನ ನಿರ್ವಹಿಸಲಿ ಅನ್ನುವ ಮನೋಭಿಲಾಶೆ ಅವರೆಲ್ಲರಿಗೂ ಇತ್ತು. ಆದರೆ ದೈವವಾಣಿಯ ಪ್ರಕಾರ ಮಹಮದ್ ಆ ಮಸೀದಿ ಅವಿಶ್ವಾಸಿಗಳ ನಿರ್ಮಾಣವಾಗಿದೆ ಎಂದು ಸಾರಿ ಆ ಆಹ್ವಾನವನ್ನು ತಿರಸ್ಕರಿಸಿದ. ಸಾಲದ್ದಕ್ಕೆ ಅದನ್ನು ಕೆಡವಲು ಅಲ್ಲಾಹನು ಸಂದೇಶ ರವಾನಿಸಿದ್ದಾನೆ ಎಂದಾತ ತಿಳಿಸಿ ಅವರೆಲ್ಲರನ್ನೂ ಕಂಗಾಲುಗೊಳಿಸಿಬಿಟ್ಟ! ಈ ದೈವ ಸಂದೇಶದ ಆದೇಶದಂತೆ ಆತನ ಸೈನಿಕರು ಆ ಹೊಚ್ಚಹೊಸ ಇಡಿ ಮಸೀದಿಯನ್ನೆ ಸುಟ್ಟು ಭಸ್ಮ ಮಾಡಿ ಅದರ ಕುರುಹುಗಳನ್ನೆಲ್ಲಾ ಇನ್ನಿಲ್ಲವಾಗಿಸಿಬಿಟ್ಟರು! ಅದನ್ನೆ ಮುಸಲ್ಮಾನ ಪ್ರಪಂಚ ಇಂದು 'ಕೇಡಿನ ಮಸೀದಿ' ಅಥವಾ 'ಮಸ್ಝಿದ್ ಎ ದೀದಾರ್' ಎಂದು ಗುರುತಿಸುತ್ತದೆ.


ದೂಮಾದಲ್ಲಿನ ಕ್ರೈಸ್ತ ರಾಜ ಒಕೈಧೀರ್ ಹಾಗೂ ಅವನ ಸಹೋದರರನ್ನು ಸೆರೆ ಹಿಡಿಸಿ ಖಾಲಿದ್ ಅವರ ಖಜಾನೆಯ ದೋಚಿದ ಅಪಾರ ಸಂಪತ್ತಿನೊಂದಿಗೆ ಮದೀನಕ್ಕೆ ನಡೆಸಿಕೊಂಡು ಬಂದಿದ್ದ. ಅಲ್ಲಿ ಮಹಮದ್ ಅವರನ್ನ ಇಸ್ಲಾಮಿಗೆ ಮತಾಂತರ ಮಾಡಿ ಅವರಿಬ್ಬರ ಜೀವವನ್ನ ಉಳಿಸಿದ. ಇದೆ ಸಮಯದಲ್ಲಿ ಮದೀನಾದಲ್ಲಿ ತನ್ನನ್ನ ಧಿಕ್ಕರಿಸಿ ನಡೆದಿದ್ದ ಅವಿಶ್ವಾಸಿಗಳ ಬಗ್ಗೆ ಮಹಮದನ ಮನಸ್ಸಿನಲ್ಲಿ ಸುಶುಪ್ತವಾಗಿದ್ದ ಸಿಟ್ಟು ದೈವವಾಣಿಯ ರೂಪದಲ್ಲಿ ಹೊರ ಹೊಮ್ಮಿ ಬಂತು! ಅವರ ಆಶಾಢಭೂತಿ ನಡುವಳಿಕೆಗಳನ್ನ, ಉದಾಸೀನತೆಯ ಉತ್ತುಂಗವನ್ನ ಹಾಗೂ ಮಹಮದನ ದಂಡಯಾತ್ರೆಯ ಬಗ್ಗೆ ಅವರು ಪ್ರಕಟ ಪಡಿಸಿದ ನಿರುತ್ಸಾಹವನ್ನ ದೈವವಾಣಿಯ ಮೂಲಕ ಖುರ್ಹಾನಿನ ಸುರಾ ಸಂಖ್ಯೆ ೯/೩೮, ೫/೪೧,೪೨,೮೨ ಹಾಗೂ ೮೫ರಲ್ಲಿ ಮಹಮದ್ ಕಟುವಾಗಿ ಖಂಡಿಸಿದ.



ಇನ್ನು ಮರುಭೂಮಿಯ ಬೆದಾವಿನರ ಅವಿಧೇಯತೆಯ ಬಗೆಗಂತೂ ಎಲ್ಲೆ ಮೀರಿದ ಹತಾಶೆಯ ಸಿಟ್ಟನ್ನ ಮಹಮದ್ ಹೊರಹಾಕಿದ. ಅವರನ್ನ ಚಂಚಲಚಿತ್ತ, ಹಟಮಾರಿ, ಅಜ್ಞಾನಿ ಹಾಗೂ ಅವಿಶ್ವಾಸಿಗಳೆಂದು ನೇರವಾಗಿ ತನ್ನ ಸುರಾಗಳಲ್ಲಿ ದೈವದ ಮಾತಿನ ಮೊಹರಿನೊಂದಿಗೆ ಆತ ಬೈದ. ಅವರ ಅಂತ್ಯ ನರಕದ ಸುಡು ಜ್ವಾಲೆಯಾಗಿದೆ ಎಂದು ಶಾಪವಿತ್ತ. ಅವರನ್ನು ಹೇಯಕರವಾದ ಜನಾಂಗದವರು ಕೊಳಕರು ಹಾಗೂ ಅವಲಕ್ಷಣದ ಅಧಮರು ಎಂದೆಲ್ಲಾ ನಿಂದಿಸಿದ ಸುರಾ ಸಂಖ್ಯೆ ೯/೯೦-೯೧ನ್ನು ಆತ ದೇವರ ಹೆಸರಿನಲ್ಲಿ ತಾನೆ ಸೃಷ್ಟಿಸಿ ಪಡೆದುಕೊಂಡ! ಈ ಸಿಟ್ಟಿನ ಉರಿ ಅಷ್ಟಕ್ಕೆ ಶಮನವಾಗದೆ ಅವರು ತಮ್ಮ ಉಪಯೋಗಕ್ಕೆಂತು ಕೋಬಾ ನಗರದಲ್ಲಿ ನಿರ್ಮಿಸಿಕೊಂಡಿದ್ದ ಮಸೀದಿಯನ್ನ ಕಾರಣವೆ ಇಲ್ಲದೆ ಕೆಡವಿಸುವ ಮಟ್ಟಿಗೆ ಜ್ವಲಿಸಿ ಅರ್ಭಟಿಸಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೮೩೭ರಲ್ಲಿ. ಮಹಮದನ ಅಸಂತೋಷ ಒಂದೊಮ್ಮೆ ಅವಿಶ್ವಾಸಿಗಳೆಂದು ಆತನಿಂದ ಕರೆಸಿಕೊಂಡು ಆಶಾಢಭೂತಿಗಳೆಂದು ಜರಿಸಿಕೊಂಡವರ ಮೇಲೆ ಹರಿದರೆ ಅದರ ಪರಿಣಾಮ ಏನಾಗಬಹುದು ಅನ್ನುವುದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿತ್ತು.



ಮದೀನಾದ ಗಣ್ಯ ಹಾಗೂ ಮಹಮದನ ಕಪಟದ ಪ್ರಬಲ ಟೀಕಾಕಾರನೂ ಆಗಿದ್ದ ಅಬ್ದುಲ್ಲಾ ಇಬ್ನ್ ಒಬೈ'ನ ಮರಣ ಈ ತಬೂಕ್ ಯಾತ್ರೆಯಿಂದ ಮಹಮದ್ ಹಿಂದಿರುಗಿದ ಎರಡು ತಿಂಗಳ ಅನಂತರ ಆಯಿತು. ಅನೇಕ ಸಂದರ್ಭಗಳಲ್ಲಿ ಯಹೂದಿಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದ ಅಬ್ದುಲ್ಲಾ ಇಬ್ನ್ ಒಬೈ ಅವರ ಪರವಾಗಿ ಮಹಮದನ ಗೂಂಡಾಗಿರಿಯನ್ನ ವಿರೋಧಿಸಿ ವಾದಿಸಿದ್ದ. ಅವರ ವಿನಾಶ ಹಾಗೂ ಸಾಮೂಹಿಕ ಕೊಲೆಯನ್ನ ತಪ್ಪಿಸಿದ್ದು ಮಹಮದನಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಅದೇನೆ ಅಸಂತೋಷ ಮನದೊಳಗೆ ಮನೆ ಮಾಡಿದ್ದರೂ ಸಹ ಮೇಲ್ನೋಟಕ್ಕೆ ಆತನೊಂದಿಗೆ ಸಭ್ಯವಾಗಿ ಸೌಹಾರ್ದತೆಯೊಂದಿಗೆ ಮಹಮದ್ ವ್ಯವಹರಿಸುತ್ತಿದ್ದ. ಇದಕ್ಕೆ ಕಾರಣ ಅತಿ ಸರಳವಾಗಿತ್ತು. ಅಬ್ದುಲ್ಲಾ ಇಬ್ನ್ ಒಬೈ ಕೂಡಾ ಅಪಾರ ಬೆಂಬಲಿಗರನ್ನ ಮದೀನಾ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಹೊಂದಿದ್ದು ಅವರೆಲ್ಲಾ ಅವನನ್ನು ಅಪಾರವಾಗಿ ಗೌರವಿಸುತ್ತಿದ್ದರು ಹಾಗೂ ಯಾವುದೆ ಕಾರಣಕ್ಕೂ ಅಂತಹ ಪ್ರಬಲನೊಬ್ಬನನ್ನ ತನ್ನ ಸ್ಥಳಿಯ ವಿರೋಧಿಯನ್ನಾಗಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಮಹಮದನೂ ಆಗ ಇರಲಿಲ್ಲ. ಹೀಗಾಗಿ ಅತಿ ಚಾಣಾಕ್ಷತೆಯಿಂದ ಆತನೊಂದಿಗೆ ಒಂದು ಅನುಬಂಧದ ಜಾಲವನ್ನ ಹೆಣೆದು ಅದು ಎಂದಿಗೂ ಕಡಿದು ಬೀಳದಂತೆ ಮಹಮದ್ ಮುಂಜಾಗ್ರತೆ ವಹಿಸಿದ್ದ.



ಆದರೆ ಈಗ ಅವನ ನೈಸರ್ಗಿಕ ಅಂತ್ಯವೂ ಆಗಿ ಹೋಗಿ ಆಂತರಿಕ ವಲಯದಲ್ಲಿ ಮಹಮದನ ಪಾಲಿನ ವಿರೋಧಿಗಳೆಲ್ಲಾ ಸರಾಸಗಟಾಗಿ ನಿರ್ನಾಮವಾಗಿ ಹೋಗಿದ್ದರು. ಆತನ ಧರ್ಮ ವಿಸ್ತರಣೆಯ ಹೆಸರಿನ ತೋಳ್ಬಲ ಪ್ರದರ್ಶನಕ್ಕೆ ಈಗ ಇನ್ಯಾವ ಅಡ್ಡಿ ಆತಂಕಗಳೂ ಉಳಿದಿರಲಿಲ್ಲ. ಇಸ್ಲಾಮಿನ ಹಾದಿ ಈಗ ಸುಗಮವಾಗಿತ್ತು. ಮಹಮದ್ ಮದೀನಾದ ಸರ್ವಾಧಿಕಾರಿಯಾದದ್ದು ಹೀಗೆ. ಅಲ್ಲಿಂದ ಹೊರಟ ಆತನ ಕೀರ್ತಿಯ ಕಹಳೆ ಅರೇಬಿಯಾದ ದಕ್ಷಿಣದ ತುದಿಯಿಂದ ಹಿಡಿದು ಸಿರಿಯಾದ ಗಡಿ ಭಾಗದವರೆಗೂ ಅನುರಣಿಸಿತು. ಈ ಕಾರಣದಿಂದ ಇಸ್ಲಾಮಿನ ಅನುಯಾಯಿಗಳಿಗಂತೂ ಇನ್ನು ಧರ್ಮ ಸಂಸ್ಥಾಪನೆಗೆ ಆಯುಧಗಳ ಅಗತ್ಯ ಅಷ್ಟಾಗಿ ಕಂಡು ಬಾರದೆ ಅವರೆಲ್ಲಾ ಅವನ್ನ ಮಾರಲು ಸಿದ್ಧರಾದರು! ಆದರೆ ಇದರಿಂದ ವಿಚಲಿತನಾದ ಮಹಮದ್ ಹಾಗೆಲ್ಲಾ ಹುಚ್ಚಾಟಕ್ಕಿಳಿಯಬಾರದಾಗಿ ಅವರೆಲ್ಲರನ್ನೂ ನಿರ್ಬಂಧಿಸಿದ. ಕ್ರೈಸ್ತ ವಿರೋಧಿಗಳಲ್ಲಿ ಕೊಟ್ಟ ಕೊನೆಯವನು ಜೀವಂತವಾಗಿರುವವರೆಗೂ ತನ್ನ ಯಾವೊಬ್ಬ ಅನುಯಾಯಿಯೂ ಸಹ ಧರ್ಮ ಸಂಗ್ರಾಮವನ್ನ ನಿಲ್ಲಿಸಬೇಕಾಗಿಲ್ಲ!' ಎನ್ನುವ ಜೆಹಾದಿನ ಕರೆಯನ್ನಾತ ನೀಡಿದ. ಹೀಗಾಗಿ ಸತತವಾಗಿ ಯುದ್ಧ ಸನ್ನದರಾಗಿಯೆ ಉಳಿಯಬೇಕೆಂಬ ಆಜ್ಞೆ ಆತನಿಂದ ಹೊರಟಿತು.



ಆದರೆ ಎಲ್ಲಾ ತನ್ನ ಅನುಯಾಯಿಗಳೂ ಸಹ ರಣರಂಗದಲ್ಲಿ ಕಾರ್ಯಾಚರಿಸುವುದು ಖಡ್ಡಾಯವಲ್ಲ ಎಂತಲೂ ಆತ ಇದೆ ಸಂದರ್ಭದಲ್ಲಿ ತಿಳಿಸಿದ. ಕೆಲವು ಅಕ್ಷರಸ್ಥರೂ ಆದ ತನ್ನ ಬುದ್ಧಿವಂತ ಅನುಯಾಯಿಗಳು ಧಾರ್ಮಿಕ ವ್ಯಾಸಾಂಗದಲ್ಲಿ ತೊಡಗಿ ತನ್ನ ಉಪದೇಶಾಮೃತವನ್ನ ಸತತವಾಗಿ ಅಧ್ಯಯನ ಮಾಡುತ್ತಾ ಮನನ ಮಾಡಿಕೊಳ್ಳಬೇಕೆಂದು ಆತ ಆದೇಶಿದ. ಅವರ ಧರ್ಮ ಬೋಧನೆಯ ಅತ್ಯುತ್ತಮ ಅಂಶಗಳನ್ನ ಇನ್ನಿತರ ಶ್ರೀಸಾಮಾನ್ಯರ ಮನದಲ್ಲೂ ಅಗಾಗ ಬಿತ್ತುತ್ತಾ, ಧರ್ಮವನ್ನ ಉಳಿಸಿ ಬೆಳೆಸುವ ಹೊಣೆಗಾರಿಕೆ ಅಂತಹ ಜ್ಞಾನ ಜಿಜ್ಞಾಸುಗಳದ್ದಾಗಿರುತ್ತದೆ ಎಂದಾತ ವಿವರಿಸಿದ. ಖುರ್ಹಾನಿನ ಸುರಾ ಸಂಖ್ಯೆ ೯/ ೧೨೩ರಲ್ಲಿ ಈ ಹಿತೋಪದೇಶವನ್ನು ಆಸಕ್ತರು ಗಮನಿಸಬಹುದು.



( ಇನ್ನೂ ಇದೆ.)

Friday, November 27, 2015

ವಲಿ - ೩೬









ಮೊದಲೆ ಸ್ಪಷ್ಟ ಪಡಿಸಿದ್ದಂತೆ ಮೆಕ್ಕಾ ಒಂದು ಸರ್ವಧರ್ಮ ಕೇಂದ್ರವಾಗಿತ್ತು. ಧಾರ್ಮಿಕವಾಗಿ ಅದು ಇಂದು ಮುಸಲ್ಮಾನರ ಏಕಸಾಮ್ಯಕ್ಕೆ ಒಳಪಟ್ಟಿದೆ ಅನ್ನುವ ಕ್ಷುಲ್ಲಕ ಕಾರಣಕ್ಕೆ ಯಾರಾದರೂ ಅದನ್ನ ಹೀಗಳೆದು ಮಾತನಾಡುವುದು ಅಕ್ಷಮ್ಯ. ಯಾರಿಗೆ ಗೊತ್ತು? ಇರುಳು ಹರಿದು ಮತ್ತೆ ಬೆಳಕಾಗುವಂತೆ ಮರಳಿ ಅಲ್ಲಿ ಸರ್ವಧರ್ಮೀಯರೂ ಪ್ರವೇಶಿಸುವ ಕಾಲವೂ ಸನ್ನಿಹಿತವಾಗುತ್ತಿರಬಹುದು. ಅಲ್ಲಿ ಮುಸಲ್ಮಾನೇತರರಿಗೆ ಖಡ್ಡಾಯವಾಗಿ ಪ್ರವೇಶ ನಿಷೇಧಿಸಿರುವ ಇಸ್ಲಾಮಿನ ಗೂಂಡಾಗಿರಿಗೂ ಒಂದು ಕೊನೆ ದಿನ ಮುಂದೆ ಇದ್ದಿರಬಹುದು. ಈಗ ವಿಷಯಕ್ಕೆ ಬರೋಣ. ಪವಿತ್ರ ನಗರಿಯಾಗಿ ಹೊರ ಹೊಮ್ಮಿದ್ದ ಮೆಕ್ಕಾದ ಕಾಬಾ ಗುಡಿಯ ಮೇಲಿನ ಅಧಿಪತ್ಯವನ್ನ ವಂಶಪಾರಂಪರ್ಯವಾಗಿ ಸೌರಮಾನ ಪಂಚಾಂಗ ಹಾಗೂ ದಿನಮಾನಗಳ ಅನುಸಾರ ಧಾರ್ಮಿಕ ವಿಧಿವಿಧಾನಗಳನ್ನು ನಡೆಸುವ ಜವಾಬ್ದಾರಿಯೊಂದಿಗೆ ಖುರೈಷಿ ಕುಲಸ್ಥರು ಪಡೆದಿದ್ದರು. ಈಗ ಅವೆಲ್ಲವೂ ಬಲಾತ್ಕಾರವಾಗಿ ಮಹಮದನ ವಶಕ್ಕೆ ಹೋಗಿದ್ದವು. ಅವನು ಇಚ್ಛಿಸಿದವರಿಗೆ ಅಲ್ಲಿನ ಜವಾಬ್ದಾರಿಗಳನ್ನ ಹೊರಿಸಲು ಸ್ವತಂತ್ರ್ಯನಾಗಿದ್ದನು. ಅದನ್ನ ಪ್ರಶ್ನಿಸುವ ಎದೆಗಾರಿಕೆ ಅಲ್ಲಿನ ಇನ್ಯಾರಿಗೂ ಉಳಿದಿರಲಿಲ್ಲ.



ಹಾಗಂತ ಆತ ಅಲ್ಲಿನ ಯಾವುದೆ ಪ್ರಾಚೀನ ಧಾರ್ಮಿಕ ವಿಧಿ ವಿಧಾನಗಳನ್ನಾಗಲಿ - ಕಾಯ್ದೆ ಕಟ್ಟಳೆಗಳನ್ನಾಗಲಿ ಎಂದೂ ಬದಲಿಸುವ ಗೋಜಿಗೆ ಹೋಗಲಿಲ್ಲ. ವಿಗ್ರಹಾರಾಧನೆ ಇದ್ದ ಇಸ್ಲಾಂ ಪೂರ್ವದ ಆಚರಣೆಗಳನ್ನೆ ವಿಧಿವತ್ತಾಗಿ ಮುಂದೆಯೂ ಆಚರಿಸಲು ಆತ ಅನುವು ಮಾಡಿಕೊಟ್ಟಿದ್ದ. ಅವನ್ನೆ ಅಷ್ಟಿಷ್ಟು ತಿದ್ದಿ ತೀಡಿ ತನ್ನ ಇಸ್ಲಾಮಿನಲ್ಲಿಯೂ ಅಳವಡಿಸಿಕೊಳ್ಳುವ ಜಾಣ್ಮೆಯನ್ನಾತ ಮೆರೆದ. ಹಿಂದಿನಿಂದಲೂ ಸುತ್ತಮುತ್ತಲಿನ ಬುಡಕಟ್ಟಿನವರು ನಂಬಿ ಆಚರಿಸಿಕೊಂಡು ಬರುತ್ತಿದ್ದ ಯಾವುದೆ ಆರಾಧನೆ ಹಾಗೂ ಹರಕೆಯ ವಿಧಿವಿಧಾನಗಳಿಗೂ ಹೀಗಾಗಿ ಯಾವುದೆ ಚ್ಯುತಿ ಬರಲಿಲ್ಲ. ಹಿಂದಿನ ಧಾರ್ಮಿಕ ರೀತಿನೀತಿಗಳನ್ನ ತ್ಯಜಿಸದೆ, ಅಲ್ಲಿನ ಯಾವುದೆ ನಂಬಿಕೆಯ ಆಚರಣೆಗಳಿಗೆ ಅಡ್ಡಿ ಪಡಿಸದೆ ಆತ ಭಾವನೆಗಳಿಗೆ ಧಕ್ಕೆ ಮಾಡದೆ ತನ್ನ ನೂತನ ಧರ್ಮದಲ್ಲೂ ಅವನ್ನೆಲ್ಲಾ ಅಳವಡಿಸಿದ್ದು ಅವನ ನೂತನ ಹಿಂಬಾಲಕರಿಗೆಲ್ಲಾ ಸರ್ವಸಮ್ಮತವಾಗಿತ್ತು. ಇದರ ಪರಿಣಾಮವಾಗಿಯೆ ಅರೆಬಿಯಾ ಪ್ರಸ್ಥಭೂಮಿಯಲ್ಲಿ ಇಸ್ಲಾಮ್ ಬಲವಾಗಿ ಬೇರೂರಿತು.


ಇಸ್ಲಾಮಿನ ಸ್ಥಾಪನೆಯೊಂದಿಗೆ ಅದನ್ನ ಒಪ್ಪಿ ಅಪ್ಪಿ ನಡೆದವರೆಲ್ಲಾ ಏಕ ದೈವತ್ವ ಹಾಗೂ ಮಹಮದನ ಪ್ರವಾದಿತ್ವವನ್ನು ಸ್ವೀಕರಿಸಿ ಮುನ್ನಡೆದರೂ ಸಹ ಅವರು ಆತನ ಧರ್ಮೇತರ ಜಾತ್ಯತೀತ ಅಧಿಪತ್ಯಕ್ಕೂ ಸಹ ತಲೆಬಾಗಲೆ ಬೇಕಾಯಿತು. ಧರ್ಮಪಾಲನೆಯ ಜೊತೆಗೆ ಧಾರ್ಮಿಕ ಕಾಣಿಕೆಯನ್ನೂ ಸಹ ಒಪ್ಪಿಸುವ ಕ್ರಮ ಕಟ್ಟುನಿಟ್ಟಿನಿಂದ ಜಾರಿಗೆ ಬಂತು. ಅದು ಕಪ್ಪದ ರೂಪದಲ್ಲಿರದೆ ಪ್ರತ್ಯೇಕವಾಗಿ ವರ್ಷಕ್ಕೊಂದಾವರ್ತಿ ತಮ್ಮ ದುಡಿಮೆಯ ಒಟ್ಟು ಪಾಲಿನ ನಿಗದಿತ ಪರಿಮಾಣವನ್ನು ಧಾರ್ಮಿಕ ದೇಣಿಗೆಯಾಗಿ ನೀಡುವ ಹೊಸ ಕ್ರಮವಾಗಿತ್ತು. ಆದರೆ ವಿಧರ್ಮೀಯರಾದ ಯಹೂದಿ, ಕ್ರೈಸ್ತ ಹಾಗೂ ಇನ್ನಿತರ ಮೂರ್ತಿಪೂಜಕ ಬುಡಕಟ್ಟಿನವರು ಮಾತ್ರ ಈಗ ಒತ್ತಾಯದ ತಲೆಗಂದಾಯವಾಗಿ ಕಟ್ಟುನಿಟ್ಟಿನ ಕಪ್ಪ ಒಪ್ಪಿಸಲೇ ಬೇಕಾಗಿ ಬಂತು.

ಮಹಮದ್ ಮೆಕ್ಕಾದ ನೂತನ ಅಧಿಪತಿಯಾದ ನಂತರ ಈ ಎಲ್ಲಾ ಕಂದಾಯಗಳನ್ನ ಕಾಲಕಾಲಕ್ಕೆ ಕಟ್ಟುನಿಟ್ಟಾಗಿ ಸಂಗ್ರಹಿಸಲು ಅಧಿಕಾರಿಗಳನ್ನ ಅತನ್ನ ಪರವಾಗಿ ನೇಮಿಸಿದ ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೮೨೧ರಲ್ಲಿ. ಅದರಲ್ಲಿ ಆ ಅಧಿಕಾರಗಳ ವಿವರವಾದ ಪಟ್ಟಿಯನ್ನೆ ಮುಬಾರಖಿ ನೀಡಿದ್ದು ಆಸಕ್ತರು ಗಮನಿಸಬಹುದು. ಈ ಕಂದಾಯಗಳಿಗೆ ಮಹಮದನ ಅನುಯಾಯಿಗಳಿದ್ದ ಪ್ರದೇಶಗಳಲ್ಲಿ ಔಚಿತ್ಯಪೂರ್ಣವಾದ ಸ್ವಾಗತ ದೊರೆತು ಸ್ವ ಇಚ್ಛೆಯಿಂದಲೆ ಕಂದಾಯ ಸಲ್ಲಿಸುವ ಪರಿಪಾಠ ಆರಂಭವಾಯಿತು. ಆದರೆ ಎಲ್ಲಾ ಕಡೆಯಲ್ಲಿಯೂ ಇದೆ ಪರಿಯಲ್ಲಿ ಅಧಿಕಾರಿಗಳು ಹೃತ್ಪೂರ್ವತೆಯನ್ನ ಕಾಣಲಾಗಲಿಲ್ಲ. ಪ್ರತಿರೋಧಗಳನ್ನೂ ಸಹ ಆಲ್ಲಿ ಅವರು ಕಾಣಬೇಕಾಗಿ ಬಂತು. ಬೆನ್ ತಮೀಮ್ ಬುಡಕಟ್ಟಿನವರೂ ಹೀಗೆ ಸೆಡ್ಡು ಹೊಡೆದವರಲ್ಲಿ ಒಬ್ಬರಾಗಿದ್ದರು. ಕಂದಾಯ ಸಂಗ್ರಹಕ್ಕೆ ಅಧಿಕಾರಗಳು ಬಂದಿದ್ದಾಗ ಬಂಡೆದ್ದ ಬುಡಕಟ್ಟಿನವರು ಅವರನ್ನ ಮುಲಾಜಿಲ್ಲದೆ ಒದ್ದು ಓಡಿಸಿದರು.

ಸುದ್ದಿ ಮಹಮದನಿಗೆ ಬಂದು ಮುಟ್ಟಿದಾಗ ತನ್ನ ವಿರುದ್ಧ ಬಂಡೆದ್ದ ಅವರಿಗೆ ಬುದ್ಧಿ ಕಲಿಸಲು ಆತ ಒಂದು ದಂಡನ್ನ ಕಳುಹಿಸಿದ. ಒಯ್ಯಾನ್ ಎಂಬ ಆತನ ನೆಚ್ಚಿನ ಬಂಟನ ನೇತೃತ್ವದಲ್ಲಿ ನಡೆದ ಈ ಧಾಳಿ ಯಶಸ್ವಿಯಾಗಿ ಆತ ಅಲ್ಲಿ ಆಗ ಇದ್ದ ಗಂಡಸರು, ಹೆಂಗಸರು, ಮಕ್ಕಳು ಮುದುಕರು ಹಾಗೂ ಜಾನುವಾರುಗಳೆನ್ನದೆ ಎಲ್ಲರನ್ನೂ ಸೆರೆ ಹಿಡಿದು ಮಹಮದನ ಬಳಿ ಕರೆತಂದ. ಇವರನ್ನೆಲ್ಲ ಸೆರೆಯಲ್ಲಿಡಲಾಗಿತ್ತು. ಅವರ ಪರವಾಗಿ ಬಿಡುಗಡೆಗಾಗಿ ಪ್ರಾರ್ಥಿಸಲು ಅಳಿದುಳಿದ ಬೆನ್ ತಮೀಮ್ ಬುಡಕಟ್ಟಿನ ಕೆಲವರು ನಿಯೋಗ ತಂದರು. ಅವರು ಈ ಹಿಂದೆ ಮಹಮದನ ಪರವಾಗಿ ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದವರೆ ಆಗಿದ್ದು ಆತನಿಂದ ಶೌರ್ಯಕ್ಕೆ ಶಾಭಾಷಗಿರಿಯನ್ನೂ ಸಹ ಪಡೆದಿದ್ದರು. ಅದನ್ನೆಲ್ಲಾ ಆತನಿಗೆ ವಿವರವಾಗಿ ನೆನಪಿಸಿಕೊಡಲು ಅವರು ನಿರ್ಧರಿಸಿದರು. ಬೆದಾವಿನರಲ್ಲಿ ಒಂದು ಉಪ ಬುಡಕಟ್ಟಾಗಿದ್ದ ಬೆನ್ ತಮೀಮರು ಸ್ವಭಾವತಃ ಒರಟರಾಗಿದ್ದರು.



ಅವರ ಸಂಸ್ಕೃತಿ, ಭಾಷೆ ಹಾಗೂ ನಡೆನುಡಿ ತೀರಾ ಕಚ್ಚಾವಾಗಿದ್ದು ಅವರೆಲ್ಲಾ ಮಹಮದನ ಮನೆಯ ಮುಂದೆ ನಿಂತು 'ಏ ಮಹಮದ್! ಹೊರಗೆ ಬಾ. ನಮ್ಮ ಬಳಿಗೆ ಬಾ' ಎಂದು ಬೊಬ್ಬಿಡಲು ಆರಂಭಿಸಿದರು. ಮಹಮದ್ ಈಗೀಗ ಅರೇಬಿಯಾದಲ್ಲಿಯೆ ಒಬ್ಬ ಗಣ್ಯವ್ಯಕ್ತಿಯಾಗಿ ಗುರುತಿಸಪಡುತ್ತಿದ್ದ. ಅವನನ್ನು ಕೇವಲ ಒಬ್ಬ ಸಾಮಾನ್ಯ ದಾರಿಹೋಕನಂತೆ ಹೀಗೆ ಅಸಭ್ಯವಾಗಿ ಕೂಗಿ ಕರೆಯುವುದು ಅವನಿಗೆ ಅಸಹನೀಯವೆನ್ನಿಸಿತು. ಅವನು ಸಿಟ್ಟಿನಿಂದಲೆ ಹೊರಬಂದ. ಮಧ್ಯಾಹ್ನದ ಪ್ರಾರ್ಥನೆಯ ಹೊತ್ತು ಸಮೀಪವಾಗಿದ್ದರಿಂದ ಆತ ನಮಾಝ್ ಮುಗಿಸಿ ಬಂದು ಮಸೀದಿಯ ಪಡಸಾಲೆ ಪಕ್ಕದ ಕೋಣೆಯಲ್ಲಿ ಬೆನ್ ತಮೀಮ್ ಪ್ರತಿನಿಧಿಗಳ ಅಹವಾಲನ್ನ ಆಲಿಸಿದ. ಅವರು ವಿಚಿತ್ರವಾದ ಸವಾಲೊಂದನ್ನ ಅವನ ಮುಂದೊಡ್ಡಿದರು. ಮದೀನಾ ನಗರದಲ್ಲಿಯೆ ವಾಕ್ ಸಾಮರ್ಥ್ಯವಿರುವ ಯಾರಾದರೂ ತಮ್ಮ ಕವಿತ್ವದ ಪ್ರತಿಭಾ ಪ್ರದರ್ಶನ ಮಾಡಬಹುದಂತಲೂ, ಅವರು ಆತನನ್ನ ಕವಿತ್ವದಲ್ಲಿ ಸೋಲಿಸಿದರೆ ತಮ್ಮವರನ್ನ ಬಿಡಬೇಕಂತಲೂ ಅವರು ಪಂಥಾಹ್ವಾನ ಕೊಟ್ಟರು. ಮಹಮದ್ ಈಗ ಇಕ್ಕಟ್ಟಿನಲ್ಲಿ ಸಿಕ್ಕಿ ಬಿದ್ದ. ಈ ನೂತನ ಮೇಲಾಟದ ವಿಧಾನ ಅವನ ಪಾಲಿಗಂತೂ ಹೊಸತೆ ಆಗಿತ್ತು. ಆದರೆ ತನ್ನ ಮುಖ ಉಳಿಸಿಕೊಳ್ಳಲು ಕಡೆಗೂ ಆತ ಈ ವಿಲಕ್ಷಣ ಸ್ಪರ್ಧೆಗೆ ಸಮ್ಮತಿಸಿದ.


ಬೆನ್ ತಮೀಮ್ ಪಾಳಯದಿಂದ ಹಲವಾರು ಕವಿ ಪುಂಗವರು ತಮ್ಮಾ ಕವಿತಾ ಸಾಮರ್ಥ್ಯವನ್ನ ತೋರಿಸಿದರು. ಅವರಿಗೆ ಪೈಪೋಟಿಯಾಗಿ ಮದೀನಾದ ವಿದ್ವನ್ಮಣಿಗಳು ಹಾಗೂ ಕವಿ ಸರ್ವೋತ್ತಮರೂ ಸಹ ತಮ್ಮೆಲ್ಲಾ ಪ್ರತಿಭೆಗಳನ್ನ ಮೆರೆದರು. ಮಹಮದನ ಆಪ್ತ ಹಾಗೂ ಆತನ ಸೂಳೆ ಮೇರಿಯ ಮೂಲಕ ಶಡ್ಡಕನಾಗುತ್ತಿದ್ದ ಕವಿ ಹಸನ್ ಭಾವಪೂರ್ಣವಾಗಿ ಉತ್ತಮವಾದ ಕವಿತೆಯನ್ನ ತನ್ಮಯತೆಯಿಂದ ಪಠಿಸಿದಾಗ ನೆರೆದಿದ್ದವರೆಲ್ಲಾ ಆನಂದಾಶ್ಚರ್ಯಗಳಿಂದ ಹರ್ಷೋದ್ಗಾರ ಮಾಡಿದರು. ವಿರೋಧಿ ಬೆನ್ ತಮೀಮರೂ ಅದನ್ನ ಉತ್ಕೃಷ್ಟ ರಚನೆ ಎಂದು ಒಪ್ಪಿಕೊಂಡು ತಲೆದೂಗಿದರು. ಅವರ ಈ ಪ್ರತಿಕ್ರಿಯೆಯಿಂದ ಸಂತುಷ್ಟನಾದ ಮಹಮದ್ ಮೊತ್ತಮೊದಲ ಬಾರಿಗೆ ಮನಃಪೂರ್ವಕವಾಗಿ ಎಲ್ಲಾ ಬಂಧಿತ ಜನ ದನ ಜಾನುವಾರುಗಳನ್ನ ಬಿಡುಗಡೆಗೊಳಿಸಿದ. ಅವರ ಪ್ರತಿಭೆಗೆ ಮೆಚ್ಚಿ ಉದಾರವಾಗಿ ಕೈತುಂಬ ಕೊಡುಗೆಗಳನ್ನೂ ಸಹ ದಯಪಾಲಿಸಿ ಊರಿಗೆ ಕಳುಹಿಸಿಕೊಟ್ಟ. ಇದರಿಂದ ಒರಟ ಬೆನ್ ತಮೀಮರೂ ಆನಂದಿತರಾಗಿ ಅವರಲ್ಲಿ ಇಸ್ಲಾಮ್ ಸ್ವೀಕರಿಸದೆ ತಟಸ್ಥರಾಗಿದ್ದವರೂ ಸಹ ಈಗ ಮತಾಂತರವಾಗಿ ಮುಸಲ್ಮಾನರಾದರು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಕಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೨೨೬ರಲ್ಲಿ.



ಕ್ಷಮಿಸಿ ಬೀಳ್ಕೊಟ್ಟರೂ ಸಹ ಅವರ ಅಸಭ್ಯ ಭಾಷಾ ಪ್ರಯೋಗ ಹಾಗೂ ಅನಾಗರಿಕ ವರ್ತನೆಗಳನ್ನ ಮಹಮದ್ ಮರೆಯಲಿಲ್ಲ. ದೈವವಾಣಿಯನ್ನ ಪಡೇದುಕೊಂಡು ಒಂದು ಸುರಾದ ಮೂಲಕ ತನ್ನ ಅಂತಸ್ತಿನ ಬಗ್ಗೆ, ತನ್ನನ್ನ ಭೇಟಿ ಮಾಡಲು ಬರುವ ಅತಿಥಿಗಳು ಗಮನ ಕೊಡಬೇಕಾದ ಸಭ್ಯತೆಯ ಬಗ್ಗೆ ಹಾಗೂ ಅವರ ನಡೆನುಡಿಗಳ ಅಪೇಕ್ಷಣೀಯತೆಯ ಬಗ್ಗೆ ಕೆಲವು ಟೀಕೆ ಟಿಪ್ಪಣಿಗಳನ್ನ ಮಾಡಿದನು. ಸುರಾ ಸಂಖ್ಯೆ ೩೩/೫೩ರಲ್ಲಿ ಇದನ್ನ ಆಸಕ್ತರು ಗಮನಿಸಬಹುದು. ಇದೆ ಸಮಯದಲ್ಲಿ ಆತ ಕಪ್ಪ ವಸೂಲಿಯ ಕಾರಣಕ್ಕೆ ಅನೇಕ ದಂಡಯಾತ್ರೆಗಳನ್ನೂ ಸಹ ಕೈಗೊಂಡ. ಇದರ ಜೊತೆಗೆ ಆತ ಕೆಲವು ವಿರೋಧಿಗಳನ್ನ ಮಣಿಸುವ ಉದ್ದೇಶವನ್ನೂ ಸಹ ಇಟ್ಟುಕೊಂಡು ಮುನ್ನಡೆದಿದ್ದ. ಜೆಡ್ಡಾದ ಮೇಲೆ ಆತ ನಡೆಸಿದ್ದ ಅಂತಹ ಒಂದು ದಂಡಯಾತ್ರೆ ಇಲ್ಲಿ ಅತಿಮುಖ್ಯವಾಗುತ್ತದೆ. ಅಬಿಸೀನಿಯಾದವರ ಜೊತೆಜೊತೆಗೆ ಜೆಡ್ಡಾದ ಜನತೆ ಕೂಡಾ ಆರಂಭದಲ್ಲಿ ಪ್ರತಿರೋಧಿಸಿ ಸೆಡ್ಡು ಹೊಡೆದು ನಿಂತಿದ್ದರು. ಅವರನ್ನ ಮಣಿಸಲು ಮಹಮದ್ ಒಂದು ದೊಡ್ಡ ಪಡೆಯನ್ನೆ ಅಲ್ಲಿಗೆ ಕಳುಹಿಸಿದ್ದ.


ಅದೆ ಹೊತ್ತಿನಲ್ಲಿ ತನ್ನ ಅಳಿಯ ಅಲಿಯನ್ನು ಸಹ ಬೆನ್ ಥೈ ಬುಡಕಟ್ಟಿನವರ ಮೇಲೆ ಛೂ ಬಿಟ್ಟ. ಅವರು ವಿಗ್ರಹಾರಾಧಕರಾಗಿದ್ದು ಒಂದು ಬೃಹತ್ ಗುಡಿ ಕಟ್ಟಿಕೊಂಡು ಅಲ್ಲಿ ತಮ್ಮ ದೇವರ ಪೂಜೆ ಪುನಸ್ಕಾರವನ್ನ ಶ್ರದ್ಧಾಭಕ್ತಿಯಿಂದ ಮುಂದುವರೆಸಿದ್ದರು. ಅಲಿ ತನ್ನ ಪಡೆಯೊಂದಿಗೆ ಅಲ್ಲಿಗೆ ಧಾಳಿ ಇಟ್ಟು ಬೆನ್ ಥೈ ಬುಡಕಟ್ಟಿನವರನ್ನು ಸೋಲಿಸಿ ಅವರ ಸಕಲ ಸಂಪತ್ತನ್ನೂ ದೋಚಿ ತಂದ. ಹಲವಾರು ಸ್ತ್ರೀ ಪುರುಷರು ಅಲಿಗೆ ಗುಲಾಮರಾಗಿ ಸೆರೆ ಸಿಕ್ಕಿದರು. ಇತಿಹಾಸ ಪ್ರಸಿದ್ಧ ಹಾಥಿಮ್ ತಾಯ್ ಪುತ್ರಿಯೂ ಈ ಸೆರೆಯಾಳುಗಳಲ್ಲಿ ಒಬ್ಬಳಾಗಿದ್ದಳು. ಅವಳ ಅಣ್ಣ ಆದಿ ಎಂಬಾತ ಅಲಿಯ ಪಡೆ ಅಲ್ಲಿಗೆ ನುಗ್ಗುವ ಸೂಚನೆ ದೊರೆತ ಕೂಡಲೆ ಸಿರಿಯಾದತ್ತ ಪಲಾಯನಗೈದಿದ್ದ.


ಹಾಥಿಮ್ ತಾಯ್'ನ ಪುತ್ರಿ ತನ್ನ ತಂದೆಯ ಪ್ರಾಮುಖ್ಯತೆಯನ್ನ ವಿವರಿಸಿ ಅಳುತ್ತಾ ಮಹಮದನ ಕೃಪೆಗಾಗಿ ಯಾಚಿಸಿದಳು. ಮಹಮದ್ ಕನಿಕರಗೊಂಡು ಸೂಕ್ತ ಗೌರವಾದರಗಳೊಂದಿಗೆ ಅವಳನ್ನ ಬಿಡುಗಡೆ ಮಾಡಿದ. ಅವಳಿಗೆ ಸೂಕ್ತ ಸಮ್ಮಾನ ಒದಗಿಸಿ ಉಡುಗೊರೆಗಳೊಂದಿಗೆ ಹಿಂದಕ್ಕೆ ಕಳುಹಿಸಿಕೊಟ್ತ. ಮನೆಮುಟ್ಟಿದ ಅವಳು ತನ್ನ ಅಣ್ಣನನ್ನು ಅರಸುತ್ತಾ ಸಿರಿಯಾದತ್ತ ತೆರಳಿದಳು. ಅಲ್ಲಿ ಕಾಣ ಸಿಕ್ಕ ಆದಿಯನ್ನ ಮನ ಒಲಿಸಿ ಮಹಮದನ ಬಳಿಗೆ ಕರೆ ತಂದಳು. ಮಹಮದ್ ಅವನನ್ನು ಮನ್ನಿಸಿ ಇಸ್ಲಾಮಿಗೆ ಸೇರಿಸಿಕೊಂಡ. ಮುಂದೆ ಮಹಮದನ ಪರವಾಗಿ ಆದಿ ಅನೇಕ ದಂಡಯಾತ್ರೆಗಳಲ್ಲಿ ಹೋರಾಡಿ ಪ್ರಸಿದ್ಧನೂ ಆದ. ಅವನ ಬುಡಕಟ್ಟಿನ ನೇತೃತ್ವವನ್ನ ಅವನಿಗೆ ಪಟ್ಟ ಕಟ್ಟಲಾಯಿತು. ಅಲ್ಲಿಗೆ ಇನ್ನೊಂದು ಪ್ರದೇಶ ಇಸ್ಲಾಮಿನ ತೆಕ್ಕೆಗೆ ಬಂತು.


ಇದೆ ಹೊತ್ತಿನಲ್ಲಿ ಮೆಕ್ಕಾದ ಕವಿಗಳಲ್ಲಿ ಒಬ್ಬನಾಗಿದ್ದ ಕಾಬ್'ನ ಕಥೆಯ ದೃಷ್ಟಾಂತವನ್ನು ಇತಿಹಾಸದ ಪುಟಗಳಲ್ಲಿ ನೀಡಲಾಗಿದೆ. ಅವನ ಸಹೋದರ ಮಹಮದನ ಇಸ್ಲಾಮಿಗೆ ಮತಾಂತರವಾಗಿದ್ದ. ಅದನ್ನ ಸಹಿಸದ ಕಾಬ್ ತನ್ನ ಅಣ್ಣನ ವಿರೋಧವಾಗಿಯೆ ಅಸಮಾಧಾನದಿಂದ ತನ್ನ ವಿರೋಧ ಹಾಗೂ ಶಂಕೆಯನ್ನ ತೋರ್ಪಡಿಸುತ್ತಾ ಕವನಗಳನ್ನ ರಚಿಸಿ ಸಿಟ್ಟು ತೋಡಿಕೊಂಡಿದ್ದ. ಈ ವಿಷಯ ಮಹಮದನ ಗಮನಕ್ಕೆ ಬರುತ್ತಲೂ ಆತನ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸುವ ಇಂಗಿತವನ್ನು ವ್ಯಕ್ತಪಡಿಸಿದ. ಇದರಿಂದ ಬೆದರಿದ ಕಾಬ್'ನ ಅಣ್ಣ ತಮ್ಮನತ್ತ ದೌಡಾಯಿಸಿ ಒಂದೋ ಇಲ್ಲಿಂದ ಓಡಿ ಪಾರಾಗು ಇಲ್ಲವೆ ಮಹಮದನ ಇಸ್ಲಾಮ್ ಸ್ವೀಕರಿಸಿ ಅವನ ಅನುಯಾಯಿಯಾಗಿ ತಲೆ ಉಳಿಸಿಕೋ ಎಂದು ಪರಿಪರಿಯಾಗಿ ಅವನನ್ನು ಓಲೈಸಿ ದಾರಿಗೆ ತರಲು ಯತ್ನಿಸಿದ. ಆರಂಭದಲ್ಲಿ ಕಾಬ ಅಣ್ಣನ ಮಾತನ್ನು ಕಾಬ್ ಸರಾಸಗಟಾಗಿ ಧಿಕ್ಕರಿಸಿದರೂ ಸಹ ಅನಂತರದ ಕೆಲವು ಕಹಿ ಘಟನೆಗಳ ಹಿನ್ನೆಲೆಯಲ್ಲಿ ಕಂಗಾಲಾಗಿ ಮಹಮದನನ್ನೆ ಖುದ್ದಾಗಿ ಕಂಡು ಈ ಸಂಕಟಗಳಿಂದ ಪಾರಾಗಲು ಮದೀನಾದತ್ತ ಹೊರಡುವುದು ಅನಿವಾರ್ಯವಾಯಿತು.


ಮಹಮದನ ಮಸೀದಿಯ ದ್ವಾರದಲ್ಲಿ ನಿಂತು ಗಟ್ಟಿ ಧ್ವನಿಯಲ್ಲಿ ಮಹಮದನ ಕಿವಿಗೆ ಬೀಳುವ ಹಾಗೆ "ಜುಹೈರ್'ನ ಕಾಬ್ ಎಂಬುವವ ನಿಮ್ಮ ಬಳಿ ಬಂದು ತಮ್ಮ ವಿಶ್ವಾಸ ಹಾಗೂ ಕ್ಷಮಾಪಣೆ ಬೇಡಲು ತಯ್ಯಾರಾಗಿದ್ದಾನೆ! ನಾನು ಅವನನ್ನು ಕರೆ ತಂದರೆ ಕ್ಷಮಿಸುವಿರೇನು?" ಎಂದು ಭಿನ್ನವಿಸಿದ. ಮಹಮದ್ ಅದನ್ನು ಸಮ್ಮತಿಸಿ ಅಸ್ತು ಎಂದ ಕೂಡಲೆ ಆತ ಇನ್ಯಾರು ಅಲ್ಲ ನಾನೆ ಎಂದು ಕಾಬ್ ಸ್ಪಷ್ಟ ಪಡಿಸಿದ! ತನ್ನ ಕೃತಜ್ಞತೆಯ ದ್ಯೋತಕವಾಗಿ ಒಂದು ಆಶು ಕವಿತೆಯನ್ನ ಸ್ಥಳದಲ್ಲಿಯೆ ರಚಿಸಿ ಹಾಡಿದ. ಅದೆ ಮುಂದೆ ಇತಿಹಾಸದ ಪುಟಗಳಲ್ಲಿ 'ಕ್ವಾಸಿದ್ಧತ್ ಅಲ್ ಬುರ್ದ್' ಅಥವಾ 'ಪೊಯಮ್ ಆಫ್ ಮ್ಯಾಂಟ್ಲ್" ( poem of mantle) ಎಂದೆ ಪ್ರಸಿದ್ಧವಾಗಿದೆ.


ಆ ಹೊಗಳು ಪದಗಳೆ ತುಂಬಿದ್ದ ಕವಿತೆಯ ಸಾಲೊಂದು ಸಾರುವಂತೆ 'ಹೌದು, ಪ್ರವಾದಿ ದೇವರ ಆಯುಧಶಾಲೆಯಲ್ಲಿನ ಒಂದು ಬಿಚ್ಚುಗತ್ತಿ! ವಿಶ್ವಕ್ಕೆ ಬೆಳಕು ನೀಡುವ ದೀಪ?!' ಎಂದು ಭಟ್ಟಂಗಿಯಾಗಿ ಹಾಡಿದ್ದಾನೆ ಕಾಬ್. ತನ್ನ ವೈಭವ, ಕೀರ್ತಿ ಹಾಗೂ ಉದಾರತೆಯನ್ನು ಸಾರುವ ಮಹೋನ್ನತ ಮುಖಸ್ತುತಿಗಳೆ ತುಂಬಿದ್ದ ರಚನೆಯ ಆ ಕವಿತೆಯನ್ನ ಕೇಳಿ ಮಹಮದ್ ಸಹಜವಾಗಿ ಉಬ್ಬಿ ಆನಂದ ತುಂದಿಲನಾದ. ಉಕ್ಕಿ ಹರಿದ ಖುಷಿಯಲ್ಲಿ ಆತ ಎದ್ದು ನಿಂತು ತಾನು ಧರಿಸಿದ್ದ ಮೇಲಂಗಿಯನ್ನೆ ತೆಗೆದು ಕಾಬನ ಮೈ ಮೇಲೆ ಗೌರವಪೂರ್ವಕವಾಗಿ ಹೊದೆಸುತ್ತಾ ಆತನನ್ನು ಕ್ಷಮಿಸಿ ತನ್ನ ಸಂತೋಷವನ್ನು ಪ್ರಕಟ ಪಡಿಸಿದ. ಈ ಮೇಲಂಗಿಯನ್ನ ಕೊಡುಗೆಯಾಗಿ ಗಿಟ್ಟಿಸಿದ್ದ ಕವಿತೆಯಾಗಿರುವ ಕಾರಣದಿಂದಲೆ ಮುಂದೆ ಈ ಕವಿತೆ 'ಮೇಲಂಗಿಯ ಕವಿತೆ' ಎಂದು ಪ್ರಸಿದ್ಧಿ ಪಡೆಯಿತು. ಕ್ರಮೇಣ ಕಾಲಾನುಕ್ರಮದಲ್ಲಿ ಈ ಮೇಲಂಗಿ ಕಾಬನ ವಂಶಸ್ಥ್ರಿಂದ ಖಲೀಫರ ಖಜಾನೆ ಹೋಗಿ ಸೇರಿತು. ಅದರ ಒಂದು ತುಣುಕು ಇಂದಿಗೂ ತುರ್ಕಿಯ ಇಸ್ತಾಂಬುಲ್ಲಿನಲ್ಲಿದೆ.



( ಇನ್ನೂ ಇದೆ.)

Tuesday, November 24, 2015

ವಲಿ - ೩೫








ಈ ನಡುವೆ ಮಹಮದನ ವಯಕ್ತಿಕ ಹಾಗೂ ಸಾಂಸಾರಿಕ ಬದುಕಿನಲ್ಲಿಯೂ ಹಲವಾರು ಬದಲಾವಣೆಗಳಾಗಿದ್ದವು. ತನ್ನನ್ನ ಏಳು ವರ್ಷಗಳ ಕಾಲ ಅಗಲಿದ್ದ ಪುತ್ರಿ ಝೈನಬ್ ತನ್ನೊಂದಿಗೆ ಇದ್ದು ಬಾಳಲು ಮದೀನಾಕ್ಕೆ ಬಂದ ಕೆಲವೆ ಕಾಲದಲ್ಲಿ ಗರ್ಭಪಾತದ ನಂತರ ಉಂಟಾಗಿದ್ದ ಒಳಬೇನೆಯಿಂದ ನರಳಿ ಸತ್ತು ಹೋದಳು. ಬಹುಕಾಲದ ಅಸ್ವಾಸ್ಥ್ಯದಿಂದ ಇನ್ನೊಬ್ಬ ಮಗಳಾದ ಉಮ್ ಕುಲ್ತುಮ್ ಸಹ ಅದಾಗಿ ಎರಡು ತಿಂಗಳಿಗೆ ಇಹಲೋಕವನ್ನ ತ್ಯಜಿಸಿದಳು. ಈಗ ಸಂತಾನವಾಗಿ ಉಳಿದಿದ್ದುದು ಕೇವಲ ಫಾತಿಮಾ ಮಾತ್ರ. ಇಷ್ಟಾದರೂ ಮಹಮದನು ಈವರೆಗೆ ಗಂಡು ಸಂತಾನವನ್ನ ಪಡೆದಿರಲಿಲ್ಲ. ಲೈಂಗಿಕ ಬದುಕು ನಿಯಮಿತವಾಗಿ ಅಡೆತಡೆಯಿಲ್ಲದೆ ತೃಪ್ತಿಕರವಾಗಿ ಸಾಗುತ್ತಿದ್ದರೂ ಸಂತಾನ ಭಾಗ್ಯದ ವಿಚಾರದಲ್ಲಿ ಮಾತ್ರ ಆತ ತೀರಾ ನತದೃಷ್ಟನಾಗಿದ್ದ.


ಹೀಗಿರೋವಾಗ ಆತ ಮತ್ತೊಮ್ಮೆ ಅಪ್ಪನಾಗುವ ಹಾಗಾಯಿತು. ಆದರೆ ಅವನಿಗೆ ಈ ಖುಷಿಯನ್ನ ದೊರಕಿಸಿಕೊಟ್ಟವಳು ಅಧಿಕೃತ ಪತ್ನಿಯರಲ್ಲಿ ಯಾರೊಬ್ಬರೂ ಆಗಿರದೆ, ಆತನಿಗೆ ರೋಮನ್ ರಾಜ್ಯಪಾಲನಿಂದ ಸಂದಿದ್ದ ಕೊಡುಗೆಯಾಗಿ ದೊರಕಿದ್ದ ಈಜಿಪ್ಟಿಯನ್ ಸೂಳೆ ಮೇರಿ ಆತನಿಂದ ಗರ್ಭ ಧರಿಸಿದ್ದಳು. ಕಾಪ್ಟ್ ಸುಂದರಿ ಮೇರಿ ಕ್ರೈಸ್ತಳಾಗಿಯೆ ಉಳಿದಿದ್ದು ಆತನ ಸೂಳೆಯಾಗಲು ಮಾತ್ರ ಅರ್ಹವಾಗುಳಿದಿದ್ದಳು. ಆಕೆಯ ಜೊತೆಗೆ ಕೊಡುಗೆಯ ರೂಪದಲ್ಲಿ ಬಂದಿದ್ದ ಅವಳ ಅಕ್ಕ ಶಿರೀನ್ ಕವಿ ಹಸನ್'ನ ಸೂಳೆಯಾಗಿ ಉಳಿದುಕೊಂಡದ್ದನ್ನ ನೆನಪಿಸಿಕೊಳ್ಳಿ. ಪ್ರತ್ಯೇಕವಾದ ತೋಟದ ಮನೆಯೊಂದರಲ್ಲಿ ಇರಿಸಲಾಗಿದ್ದ ಮೇರಿ ಗರ್ಭವತಿಯಾಗಿ ನವಮಾಸ ತುಂಬಿದ ನಂತರ ಗಂಡು ಮಗುವೊಂದನ್ನ ಮಹಮದನಿಗೆ ಹೆತ್ತು ಕೊಟ್ಟಳು.



ಬಹಳ ವರ್ಷಗಳ ನಂತರ ತನ್ನನ್ನು ಅಪ್ಪನ ಪಟ್ಟಕ್ಕೇರಿಸಿದ ಮಗನ ಬಗ್ಗೆ ಮಹಮದ್ ವಿಪರೀತ ಖುಷಿಯಾಗಿದ್ದ. ಸಾಲದ್ದಕ್ಕೆ ಆತನ ಏಕೈಕ ಗಂಡು ಸಂತಾನ ಬೇರೆ! ಸಂಭ್ರಮದ ಸಮಾರಂಭವನ್ನ ಏರ್ಪಡಿಸಿ ಮಗುವಿಗೆ ಇಬ್ರಾಹಿಂ ಎಂದು ನಾಮಕರಣ ಮಾಡಲಾಯಿತು. ಹೆಚ್ಚು ಕಡಿಮೆ ಕಾಲು ಶತಮಾನಗಳ ನಂತರ ಮಹಮದನಿಂದಾಗಿ ಹೆಣ್ಣೊಬ್ಬಳ ಮಡಿಲು ತುಂಬಿತ್ತು. ವಾಡಿಕೆಯಂತೆ ಮಗುವಿಗೆ ಏಳು ದಿನಗಳ ಪ್ರಾಯ ತುಂಬಿದ ನಂತರ ಅಪ್ಪನಾದ ಮಹಮದ್ ತನ್ನ ತಲೆ ಬೋಳಿಸಿಕೊಂಡ. ಆ ಕೂದಲ ತೂಕದ ಬೆಳ್ಳಿಯನ್ನ ಬಡವರಲ್ಲಿ ಹಂಚಿ ಅನಂತರ ಆ ಮುಂಡನದ ಕೂದಲನ್ನ ನೆಲದಲ್ಲಿ ಹೂಳಲಾಯಿತು. ಾದನ್ನ ಪೂರೈಸಿ ಕೃತಜ್ಞತಾ ಸ್ವರೂಪವಾಗಿ ದೇವರಿಗೊಂದು ಪ್ರಾಣಿಬಲಿಯನ್ನೂ ಸಹ ನೀಡಲಾಯಿತು.



ಆದರೆ ಈ ಸಂಭ್ರಮದ ಪರಿಣಾಮ ಮಹಮದನ ಅಂತಃಪುರದೊಳಗೆ ಮಾತ್ರ ತೀರಾ ವ್ಯತಿರಿಕ್ತವಾಗಿತ್ತು. ಊರೆಲ್ಲಾ ಪ್ರವಾದಿಯ ಈ 'ಸಾಧನೆ'ಯನ್ನ ಮೆಚ್ಚಿ ಕೊಂಡಾಡುತ್ತಿದ್ದರೆ, ಇತ್ತ ಆತನ ಜನಾನದಲ್ಲಿ ಮಾತ್ರ ಇನ್ನಿತರ ಹೆಂಡತಿಯರು ಹೊಟ್ಟೆಕಿಚ್ಚಿನಿಂದ ಬೆಂದು ನರಳಿ ಹೋದರು! ಈ ಈರ್ಷ್ಯೆಗೆ ಹೊಸ ಮಗುವಾದ ನಂತರ ಮೇರಿಯೆಡೆಗೆ ಹೆಚ್ಚಿದ ಮಹಮದನ ವಿಶೇಷ ಕಾಳಜಿ ಹಾಗೂ ಪ್ರೀತಿ ಸಹ ಕಾರಣವಾಗಿತ್ತು. ಸ್ತ್ರೀ ಸಹಜ ಮತ್ಸರದಿಂದ ಅವರೆಲ್ಲಾ ಚಡಪಡಿಸಿದರು. ತಮ್ಮಿಂದ ಸಾಧ್ಯವಾಗದ್ದು ಯಕಶ್ಚಿತ್ ಒಬ್ಬ ಸೂಳೆಯಿಂದ ಆಯಿತಲ್ಲ! ಅನ್ನುವುದು ಅವರೆಲ್ಲರಿಗೂ ಆಶ್ಚರ್ಯದ ಹಾಗೂ ಮತ್ಸರದ ಕಾರಣವಾಗಿತ್ತು ಎನ್ನುತ್ತಾರೆ ಇತಿಹಾಸಕಾರ ಥಾಮಸ್ ವಿಲಿಯಂ ಬೆಯಿಲ್ ತಮ್ಮ ಕೃತಿ 'ಆನ್ ಓರಿಯೆಂಟಲ್ ಭಯಾಗ್ರಫಿಸ್ ಆಫ್ ಡಿಕ್ಷನರಿ' ಕೃತಿಯ ಪುಟ ಸಂಖ್ಯೆ ೨೫೭ರಲ್ಲಿ.



ಈ ಸಂದರ್ಭದಲ್ಲಿ ನಡೆದ ಒಂದು ಕುತೂಹಲಕರ ಸಂಗತಿಯ ಬಗ್ಗೆ ಅವರು ವಿವರ ನೀಡುತ್ತಾರೆ. ಮೊದಲಿನಿಂದಲೂ ಮಹಮದ್ ತನ್ನ ಪ್ರತಿಯೊಬ್ಬ ಹೆಂಡತಿಯರೊಂದಿಗೂ ದಿನಕ್ಕೊಬ್ಬರಂತೆ ಕಾಲ ಕಳೆಯುವ ಸ್ವ ನಿಯಮಕ್ಕೆ ಬದ್ಧನಾಗಿದ್ದನಷ್ಟೆ? ಅಂತೆಯೆ ಆ ದಿನ ಹಫ್ಸಾಳ ಸರದಿಯ ದಿನ ಬಂದಿತ್ತು. ಅದು ಸಂದು ಮರುದಿನ ಆತ ಇನ್ನೊಬ್ಬಳ ಅಂತಃಪುರ ಹೊಕ್ಕುವ ದಿನವಾದದ್ದರಿಂದ ಆಕೆ ನಿರಾತಂಕವಾಗಿ ಆ ಬಿಡುವನ್ನ ಉಪಯೋಗಿಸಿಕೊಂಡು ತನ್ನ ಅಪ್ಪನ ಮನೆಗೆ ಹೋಗಿದ್ದಳು. ಮರಳಿ ಮನೆಗೆ ಬಂದಾಗ ಆಕೆಗೆ ಅಘಾತಕಾರಿಯಾದ ಒಂದು ದೃಶ್ಯ ಕಾಣಬೇಕಾದ ಪರಿಸ್ಥಿತಿ ಕಾದುಕೊಂಡಿತ್ತು. ಅಂದು ಅವಳು ತುಸು ಬೇಗ ಮರಳಿ ಬಂದದ್ದೆ ಎಡವಟ್ಟಿಗೆ ಕಾರಣವಾಗಿತ್ತು. ಮಾನ್ಯ ಪ್ರವಾದಿವರ್ಯರು ಅಂದು ಅವಳ ಮನೆಯಲ್ಲಿ ತಮ್ಮ ಖಾಸಗಿ ಸೂಳೆ ಮೇರಿಯಿಂದಿಗೆ ಸ್ವರ್ಗ ಸುಖದಲ್ಲಿ ತಲ್ಲೀನರಾಗಿದ್ದರು! ಈ ಪರಮಪವಿತ್ರ ಕಾರ್ಯ ತನ್ನ ಹಕ್ಕಾಗಿದ್ದ ಕೋಣೆಯಲ್ಲಿ, ತನ್ನದೆ ಖಾಸಗಿ ಹಾಸಗೆಯ ಮೇಲೆ ನಿರ್ವಾಣವಾಗಿದ್ದ ಅವರಿಬ್ಬರೂ ನಿರಾತಂಕವಾಗಿ, ಅದೂ ಹಾಡ ಹಗಲಿನಲ್ಲಿಯೆ ನಡೆಸುತ್ತಿದ್ದದ್ದನ್ನ ಕಂಡಾಗ ಆಕೆ ಸ್ತ್ರೀ ಸಹಜವಾಗಿ ಕೆರಳಿ ಕೆಂಡವಾದಳು.



ಕೂಡಲೆ ಅರ್ಧ ಸಂಕಟ ಅರ್ಧ ಹೊಟ್ಟೆಕಿಚ್ಚಿನಿಂದ ಸವತಿ ಆಯೇಷಾಳ ಮನೆಗೆ ನುಗ್ಗಿದ ಆಕೆ ತನ್ನ ಎದೆಯಾಳದ ಅಹವಾಲನ್ನ ತೋಡಿಕೊಂಡು ಕಣ್ಣೀರಿಟ್ಟಳು. ಆಯೆಷಾ ಇದನ್ನೆ ಇನ್ನಿತರ ಸವತಿಯರಿಗೂ ಕರೆದು ತಿಳಿಸಿ ಕೋಲಾಹಲವೆಬ್ಬಿಸಲು ಅವರೆಲ್ಲರಿಗೂ ಕುಮ್ಮಕ್ಕು ಕೊಟ್ಟಳು. ಈಗಾಗಲೆ ಮಗು ಹೆತ್ತ ಕಾರಣಕ್ಕೆ ಮಹಮದನ ದೃಷ್ಟಿಯಲ್ಲಿ ಹೆಚ್ಚಿದ್ದ ಮೇರಿಯ ಪ್ರಾಮುಖ್ಯತೆಯನ್ನ ಕಾಣುವಾಗ ಅವರೆಲ್ಲಾ ನೊಂದು ಒಳಗೊಳಗೆ ಸಂಕಟ ಪಟ್ಟಿದ್ದರಷ್ಟೆ? ರೋಷದಿಂದ ಕುದ್ದು ಕೆಂಡವಾದ ಎಲ್ಲರೂ ಮಹಮದನನ್ನು ತಾವೆ ಮುಂದಾಗಿ ದೂರವಿಟ್ಟರು! ಮಾತು ಬಿಟ್ಟರು. ಮಹಮದ್ ವಿಧವಿಧವಾಗಿ ಅವರನ್ನೆಲ್ಲಾ ಸಂಭಾಳಿಸಿ ಒಲಿಸಲು ಯತ್ನಿಸಿ ಸೋತ. ಯಾರೊಬ್ಬರೂ ಒಂಚೂರೂ ಜಗ್ಗಲಿಲ್ಲ. ಪತಿಯ ಕಚ್ಚೆ ಹರುಕತನವನ್ನ ಅವರ್ಯಾರೂ ಕ್ಷಮಿಸಲೂ ಇಲ್ಲ, ಅವರ ಮುನಿಸು ತಗ್ಗಲೂ ಇಲ್ಲ.



ಇದರಿಂದ ವಿಚಲಿತನಾದ ಮಹಮದ್ ಸಹ ಖಾಯಂ ಆಗಿ ಮೇರಿಯ ತೋಟದ ಮನೆಯಲ್ಲಿಯೆ ಠಿಕಾಣಿ ಹೂಡಿಬಿಟ್ಟ! ತಾನೂ ಅವರಂತೆಯೆ ಅವರನ್ನು ದೂರವಿಟ್ಟು ಮಾತು ಬಿಟ್ಟ. ಕಡೆಗಣಿಸಿ ಅವರನ್ನ ಬಗ್ಗಿಸಲು ಹೊರಟಿದ್ದ ಮಹಮದನಿಗೆ ತನ್ನ ಪ್ರಯತ್ನದ ಸಾಫಲ್ಯದ ಬಗ್ಗೆ ಭರವಸೆ ಇತ್ತು. ಅದರೆ ಚಪಲವೊಂದು ಆತನಲ್ಲಿ ವಿಪರೀತವಾಗಿ ಹೆಡೆಯಾಡಿಸುತ್ತಲೆ ಇತ್ತಲ್ಲ! ಅದು ಅವರನ್ನ ಬಿಗಿಯಾಗಿಯೆ ಇಟ್ಟಿದ್ದರೂ ಇವನನ್ನ ಮಾತ್ರ ವಿಪರೀತ ಸಡಿಲ ಗೊಳಿಸಿಬಿಟ್ಟಿತು! ಅನಿವಾರ್ಯವಾಗಿ ಆತ ಆಗ ದೈವವಾಣಿಯ ಮೊರೆ ಹೋದ. ದೈವ ಸಹ ಮಹಮದನಂತೆಯೆ ಆತನ ಹೆಂಡಿರ ಅಕಾರ್ಯದ ಬಗ್ಗೆ ಮುನಿದಿತ್ತು! ಅವರ ಅವಿಧೇಯತೆಯನ್ನ ಸರ್ವಶಕ್ತನಾದ ಅಲ್ಲಾಹನೆಂಬ ದೇವರು ಕಟು ಮಾತುಗಳಲ್ಲಿ ಖಂಡಿಸಿದರು?! ಮೇರಿಯನ್ನೂ ಯಾವುದೆ ಕಾರಣಕ್ಕೂ ಬಿಡಲೆ ಕೂಡದು ಅಂತಲೂ, ಆ ಸೊಕ್ಕಿನ ಹೆಂಗಸರ ಹಟ ಹೀಗೆ ಮುಂದುವರೆದರೆ ಅವರಿಗೆಲ್ಲಾ ಮುಲಾಜಿಲ್ಲದೆ ತಲ್ಲಾಖ್ ಕೊಟ್ಟು ತನಗೆ ಚೆಂದ ಕಂಡ ಇನ್ಯಾರಾದರೂ ಹೆಂಗಸರನ್ನ ಮಾನ್ಯ ಪ್ರವಾದಿಗಳು ಮದುವೆಯಾಗಿ 'ಸುಖ'(?)ವಾಗಿ ಇರಬಹುದು ಎಂದು ದೈವಾಜ್ಞೆಯಾಯಿತು.



ಈ ಅನಿರೀಕ್ಷಿತ ನಡೆಯಿಂದ ಮಹಮದನ ಮುನಿದ ಹೆಂಡಿರೆಲ್ಲಾ ಕಂಗಾಲಾದರು. ಹೀಗೆ ಆದರೆ ನಮ್ಮೆಲ್ಲರ ಬದುಕು ಮೂರಾಬಟ್ಟೆಯಾಗುವ ಸಾಧ್ಯತೆ ಇದೆ ಎಂದವರಿಗೆ ಜ್ಞಾನೋದಯವಾಗಿತು. ಹೀಗಾಗಿ ರಾಜಿ ಕಬೂಲಿ ಶುರುವಾಯಿತು. ಇದಕ್ಕೊಂದು ದೈವಿಕ ಸ್ಪರ್ಷ ನೀಡುವ ಉದ್ದೇಶದಿಂದ ಮೊದಲು ಹಫ್ಸಾಳನ್ನ ಮಹಮದ್ ಯಕ್ಷ ಗ್ರೇಬ್ರಿಯಲ್'ನ ಮೂಲಕ ಕರೆಸಿಕೊಂಡು ಆಕೆ ಕಣ್ಣೀರಾಗಿ ಶರಣಾಗಿ ಕಾಲಿಗೆ ಬಿದ್ದಾಗ ಮಹಮದ್ ಕ್ಷಮಿಸಿದನೆಂತಲೂ, ಆಕೆಯ ಮೂಲಕ ಇನ್ನಿತರ ನೊಂದ ಜೀವಗಳನ್ನೂ ಮತ್ತೆ ಸಂತೈಸಿ ಮರಳಿ ಹಾಸಿಗೆಗೆ ಬಿಟ್ಟುಕೊಳ್ಳಲಾಯಿತು ಅಂತಲೂ ಕಥೆ ಕಟ್ಟಲಾಯಿತು. ಯಥಾಪ್ರಕಾರ ಮೊದಲಿನ ನಿಯಮಾವಳಿಯಂತೆ ದಿನಕ್ಕೊಬ್ಬಳ ಸಂಗಡ ರಾತ್ರಿ ಕಳೆಯುವ ಏರ್ಪಾಡನ್ನೆ ಮುಂದುವರೆಸಲು ಮಹಮದ್ ನಿರ್ಧರಿಸಿದ.



ಈ ಬಗೆಗಿನ ಸುರಾವನ್ನು ಈ ಪ್ರಕರಣವನ್ನೆ ಖಚಿತವಾಗಿ ಆಧಾರವಾಗಿಟ್ಟುಕೊಂಡು ಪಡೆಯಲಾಗಿದೆ. ಅದನ್ನ ಸುರಾ ಸಂಖ್ಯೆ ೬೬/೧-೪ರಲ್ಲಿ ಆಸಕ್ತರು ಗಮನಿಸಬಹುದು.  ಸುರಾ ೬೬/೩ ಸಾರುವಂತೆ, ಪ್ರವಾದಿಯವರು ತಮ್ಮ ಒಬ್ಬಳು ಪತ್ನಿಯೊಡದನೆ ಮಾತೊಂದನ್ನ ರಹಸ್ಯವಾಗಿ ಹೇಳಿದ್ದರು. ಆ ಹೆಂಡತಿ ಅದೆ ರಹಸ್ಯವನ್ನ ಇನ್ನೊಬ್ಬಳಲ್ಲಿ ಬಯಲುಗೊಳಿಸಿಬಿಟ್ಟಾಗ ಹಾಗೂ ಆ ವಿಷಯ ಅಲ್ಲಾಹನ ಮೂಲಕ ಪ್ರವಾದಿಯವರ ಅರಿವಿಗೂ ಬಂದಾಗ ಅವರು, ಅದರ ಸ್ವಲ್ಪಾಂಶವನ್ನ ಹೆಂಡತಿಗೂ ತಿಳಿಸಿ ಇನ್ನು ಸ್ವಲ್ಪವನ್ನು ಕಡೆಗಣಿಸಿದರು! (ಗಮನಿಸಿ ಅಲ್ಲಾಹನ ಮಾತನ್ನೆ ಪ್ರವಾದಿಯವರು ಕಡೆಗಣಿಸಿದರು ಎನ್ನುತ್ತದೆ ಈ ಸುರಾ, ಅಂದರೆ ಅಲ್ಲಾಹನ  ನುಡಿಯನ್ನೂ ಸಹ ಪ್ರವಾದಿ ಚಾಡಿಯೆಂದೆ ಪರಿಗಣಿಸಿದ್ದರು ಎಂದಾಯಿತು!) ನಂತರ ಅವರು ನಿಮಗೆ ಈ ವಿಷಯವನ್ನ ಯಾರು ಹೇಳಿದ್ದು? ಎಂದು ಕೇಳಿದಾಗ, ಮಹಿಮಾಪೂರ್ಣನೂ ಸರ್ವಜ್ಞನೂ ಆದ ವಿವರಪೂರ್ಣನೆ ಈ ಸುದ್ದಿಯನ್ನ ನೇರವಾಗಿ ಹೇಳಿದರು! ಎಂದು ಪ್ರವಾದಿ ಉತ್ತರಿಸಿದರು.


"ನೀವಿಬ್ಬರೂ ಈ ಕಾರಣಕ್ಕಾಗಿ ಅಲ್ಲಾಹನೊಡನೆ ಪಶ್ಚಾತಾಪ ಪಡುತ್ತೀರಾದರೆ, ಅದು ವಾಸ್ತವದಲ್ಲಿ ನಿಮ್ಮ ಪಾಲಿಗೆ ಅತ್ಯುತ್ತಮವಾದುದಾಗಿದೆ. ಏಕೆಂದರೆ ನಿಮ್ಮ ಹೃದಯಗಳು ನೇರ ಮಾರ್ಗದಿಂದ ಸರಿದುಹೋಗಿವೆ. ಹಾಗೂ ನೀವು ಇನ್ನು ಮುಂದೆಯೂ ಸಹ ಪ್ರವಾದಿಯವರ ವಿರುದ್ಧ ಗುಂಪುಗಾರಿಕೆ ನಡೆಸಿದರೆ ಅಲ್ಲಾಹನು ಅವರ ಸಂರಕ್ಷಕನಾಗಿದ್ದಾನೆ! ಅವನ ನಂತರ ಜೆಬ್ರೀಲರು, ಎಲ್ಲಾ ಸಜ್ಜನ ಸತ್ಯ ವಿಶ್ವಾಸಿಗಳೂ ಹಾಗೂ ಎಲ್ಲಾ ದೇವಚರರು ಅವರ ಸಂಗಾತಿಗಳೂ ಹಾಗೂ ಸಹಾಯಕರೂ ಆಗಿರುವವರೆಂದು ನಿಮಗೆ ತಿಳಿದಿರಲಿ?!" ಎಂದು ಬೆದರಿಕೆಯ ರೂಪದಲ್ಲಿ ಉಳಿದೆಲ್ಲಾ ಹೆಂಡಂದಿರನ್ನೂ ಈ ಸುರಾ ಎಚ್ಚರಿಸುತ್ತದೆ.



ಮೇಲ್ನೋಟಕ್ಕೆ ಈ ಪ್ರಕರಣ ಇಲ್ಲಿಗೆ ಮುಕ್ತಾಯವಾದಂತೆ ಕಂಡರೂ ಸಹ ವಾಸ್ತ್ಯವದಲ್ಲಿ ಇದು ಇನ್ನೊಂದು ಮಗ್ಗುಲಿಗೆ ಹೊರಳಿಕೊಂಡಿತ್ತು. ಎಲ್ಲಕ್ಕೂ ಮೂಲವಾಗಿದ್ದ ಮೇರಿಯ ಮೇಲೆ ಈ ವಿಷಯದಲ್ಲಿ ಸವತಿಯರೆಲ್ಲರೂ ತಿರುಗಿಬಿದ್ದಿದ್ದರು. ಸವತಿ ಮಾತ್ಸರ್ಯದ ಧಗೆ ಹದಿನೈದು ದಿನದ ಎಳೆ ಮಗು ಇಬ್ರಾಹಮನಿಗೆ ವಿಷ ಉಣಿಸುವುದರ ಮೂಲಕ ಪರ್ಯಾವಸನಗೊಂಡಿತು! ಏನೂ ಅರಿಯದ, ಪ್ರಪಂಚವನ್ನೆ ಕಾಣದ ಈ ನಿಶ್ಪಾಪಿ ಮಗು ತೀವೃ ಅಸ್ವಾಸ್ಥ್ಯಕ್ಕೆ ಒಳಗಾಗಿ ನರಳಿ ನರಳಿ ಪ್ರಾಣ ಬಿಟ್ಟಿತು. ಮಗುವನ್ನ ಉಳಿಸಿಕೊಳ್ಳಲು ಲಭ್ಯವಿದ್ದ ಎಲ್ಲಾ ವೈದ್ಯಕೀಯ ಶೂಶ್ರಷೆಯ ಮೊರೆ ಹೋದ ಮಹಮದ್ ತನ್ನ ಕೊನೆಯಿರದ ಪ್ರಯತ್ನಗಳ ಹೊರತಾಗಿಯೂ ಮಗು ಬದುಕಿ ಉಳಿಯುವ ಲಕ್ಷಣ ಕಂಡು ಬಾರದೆ ಹೋದಾಗ ಎಳೆ ಕೂಸನ್ನ ತನ್ನ ತೋಳಿನಲ್ಲಿ ಎತ್ತಿಕೊಂಡು ವಿಪರೀತ ಗೋಳಾಡಿದ. ಆ ಹೊತ್ತಿನಲ್ಲಿ ಆತನ ಪ್ರವಾದಿತ್ವವೂ ಆತನ ಕೈ ಹಿಡಿಯದೆ ಕೇವಲ ಅಪ್ಪಟ ಅಪ್ಪನೊಬ್ಬನಾಗಿ ಆತ ಕಂಬನಿ ಹರಿಸಿ ತನ್ನ ಅಸಾಹಯಕತೆಯನ್ನ ಬಹಿರಂಗವಾಗಿ ತೋರ್ಪಡಿಸಿಕೊಂಡ.



ಮೃತ್ಯು ಶಯ್ಯೆಯಲ್ಲಿದ್ದ ತನ್ನ ಕಂದನ ಹಿಡಿದು ಅತ್ಯಂತ ಶೋಕ ಹಾಗೂ ದುಃಖ ಪೀಡಿತನಾಗಿದ್ದ ಮಹಮದನನ್ನು ಅತನ ಬಂಧುಗಳೆಲ್ಲಾ ಕೂಡಿ ಸಂತೈಸಿದರು. ನೊಂದ ಅವನ ಮನಕ್ಕೆ ತಮ್ಮಿಂದಾದಷ್ಟು ಧೈರ್ಯ ತುಂಬಿದರು. ಆದರೂ ಅವನ ಗೋಳಾಟವನ್ನ ತಡೆಯುವುದು ಬಹಳ ಕಷ್ಟವಾಯಿತು. ತಾನು ಕಣ್ಣೀರಿಡುತ್ತಿರುವುದು ದಃಖಿಸುತ್ತಿರುವುದು ತನ್ನ ಹೃದಯದಲ್ಲಿ ಮಗನ ಮೇಲೆ ಮಡುಗಟ್ಟಿರುವ ಪ್ರೀತಿ, ಮಮತೆ ಹಾಗೂ ಕನಿಕರದ ಕಾರಣದಿಂದ ಎಂದಾತ ಗದ್ಗದನಾಗಿಯೆ ಅವರಿಗೆಲ್ಲರಿಗೂ ಮಾರುತ್ತರಿಸಿದ. ಯಾರು ಈ ವೇಳೆ ಮಗುವಿನ ಸಾವಿಗೆ ಕನಿಕರ ಪ್ರಕಟಪಡಿಸುವುದಿಲ್ಲವೋ ಅಂತವರ ಬಗ್ಗೆ ತಾನೂ ಸಹ ಮುಂದೆ ಯಾವತ್ತೂ ಕನಿಕರ ತೋರಿಸುವ ಪ್ರಶ್ನೆಯೆ ಇಲ್ಲ ಅಂದಾತ ಗೋಳಾಡುತ್ತಲೆ ಸ್ಪಷ್ಟ ಪಡಿಸಿದ.



ಸ್ವಲ್ಪ ಸಮಯದಲ್ಲಿಯೆ ನಂಜಿನ ಬಾಧೆಯಿಂದ ನರಳಿದ ಎಳೆಮಗು ಇಬ್ರಾಹಿಂ ಪ್ರಾಣ ತ್ಯಜಿಸಿತು. ಆದ ಪಿತೂರಿಯ ಸಂಗತಿ ಬಯಲಾಗಿ ಅದೆ ಒಂದು ಹೊಸ ಪ್ರಕರಣವಾಗಿ ಬೆಳೆಯುವುದು ಮಹಮದನಿಗೂ ಸಹ ಬೇಕಿರಲಿಲ್ಲ. ಹೀಗಾಗಿ ಆದಷ್ಟು ಬೇಗ ಶವ ಸಂಸ್ಕಾರ ನಡೆಸಿ ಎಲ್ಲಾ ಸಂಚಿನ ಕಥೆಯನ್ನ ಶಾಶ್ವತವಾಗಿ ಮಣ್ಣಿನಡಿ ಹೂತುಬಿಡುವ ನಿರ್ಧಾರಕ್ಕೆ ಆತನೂ ಬಂದ. ಮಗುವಿಗಾಗಿ ರೋಧಿಸುತ್ತಿದ್ದ ಮೇರಿ ಹಾಗೂ ಶಿರೀನರನ್ನು ಒಪ್ಪಿಸಿ ಶವವನ್ನ ಪಡೆದು ಅದನ್ನ ಶವಪೆಟ್ಟಿಗೆಯಲ್ಲಿ ಇರಿಸಲಾಯಿತು. ಸ್ಮಶಾನದಲ್ಲಿ ಆದಷ್ಟು ಶೀಘ್ರವಾಗಿ ಮಗುವಿನ ಹೆಣವನ್ನ ಶವಪೆಟ್ಟಿಗೆ ಸಹಿತ ದಫನ್ ಮಾಡಿ ಸಮಾಧಿಯೊಂದನ್ನ ಕಟ್ಟಲಾಯಿತು. ಸಮಾಧಿಯ ಮೇಲೆ ನೀರನ್ನು ಚುಮುಕಿಸುತ್ತಾ ಭಾವುಕನಾಗಿ ಅಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಮಹಮದ್ ಕೆಲ ಮಾತುಗಳನ್ನೂ ಸಹ ಆಡಿದ.


"ಇದನ್ನ ಮಾಡುವಾಗ ಬಹಳ ಎಚ್ಚರಿಕೆಯಿಂದ ಮಾಡಬೇಕು. ಏಕೆಂದರೆ ಇದು ಶೋಕಭರಿತ ಹೃದಯಕ್ಕೆ ಸಾಂತ್ವಾನವನ್ನು ನೀಡುತ್ತದೆ. ಮೃತ್ಯುವಿಗೆ ಈಡಾದವರಿಗೆ ಇದು ಲಾಭವನ್ನೂ ತರುವುದಿಲ್ಲ, ಅಂತೆಯೆ ಇದರಿಂದ ಅವರಿಗೆ ಯಾವುದೆ ಹಾನಿಯೂ ಉಂಟಾಗುವುದಿಲ್ಲ. ಆದರೆ ಬದುಕಿರುವವರ ಹೃದಯಕ್ಕೆ ಮಾತ್ರ ಸಾಂತ್ವಾನದ ಮಳೆ ಸುರಿಸುತ್ತದೆ."


ಅಂದು ಕಾಕತಾಳೀಯವಾಗಿ ಸೂರ್ಯಗ್ರಹಣವಾಯಿತು.  ಜನರು ಅದನ್ನ ಸತ್ತ ಮಗು ಇಬ್ರಾಹಿಮನ ಪುಣ್ಯವಂತಲೂ, ದೇವರು ಅವನಿಗೆ ಈ ಮೂಲಕ ಶುಭ ಶಕುನವನ್ನ ಹೊತ್ತು ತಂದಿದ್ದಾನೆ ಅಂತಲೂ ಅಲ್ಲಾಹನನ್ನು ಸ್ತುತಿಸಿ ತಮ್ಮೊಳಗೆ ವ್ಯಾಖ್ಯಾನಿಸಿದರು. ಆದರೆ ಮಹಮದ್ ಅದನ್ನು ಸರಾ ಸಗಟಾಗಿ ತಿರಸ್ಕರಿಸಿದನು. 'ಗ್ರಹಣಗಳು ದೈವೀಕ ನಿಯಮದ ಚಿನ್ಹೆಗಳು. ಅವು ಯಾರದೆ ಒಬ್ಬರ ಸಾವಿನ ಸೂಚಕವಾಗಿ ಘಟಿಸುವುದಿಲ್ಲ. ಗ್ರಹಣವಾದಲ್ಲಿ ನೀವೆಲ್ಲರೂ ಅದನ್ನ ತಲೆಗೊಬ್ಬರಂತೆ ಅರ್ಥೈಸದೆ ಅದು ಬಿಡುವವರೆಗೂ ಪ್ರಾರ್ಥನೆಯಲ್ಲಿ ತೊಡಗಿಕೊಂಡಿರಿ." ಎಂದು ಆತ ಜನರಿಗೆ ಉಪದೇಶಿಸಿದ. ಈ ಗ್ರಹಣ ಕಳೆದ ನಂತರ ಆತ ಕೃತಜ್ಞತಾ ಸೂಚಕವಾಗಿ ಮಗುವಿನ ಶೂಶ್ರಷೆಗಾಗಿ ನೇಮಕವಾಗಿದ್ದ ದಾದಿ ಉಮ್ ಬುರ್ದಾ ಎಂಬಾಕೆಗೆ ಖರ್ಜೂರದ ತೋಟವೊಂದನ್ನ ಆತ್ಮ ಸಂತೋಷಕ್ಕಾಗಿ ದಾನ ಮಾಡಿದ.



( ಇನ್ನೂ ಇದೆ.)

Saturday, November 21, 2015

ವಲಿ - ೩೩








ಮಹಮದ್ ಮೆಕ್ಕಾದಿಂದ ಮದೀನಾಕ್ಕೆ ಮರಳುವ ನಿರ್ಧಾರಕ್ಕೆ ಬಂದ ಹೊತ್ತಿಗೆ ಅನಿವಾರ್ಯವಾಗಿ ಮತ್ತೊಮ್ಮೆ ಶಸ್ತ್ರಧಾರಿಯಾಗಿ ಯುದ್ಧ ಕಣದಲ್ಲಿ ಧುಮುಕಿ ಹೋರಾಡುವ ಅನಿವಾರ್ಯತೆ ಒದಗಿ ಬಂತು. ಮೆಕ್ಕಾದ ಈಶಾನ್ಯ ದಿಕ್ಕಿನ ಗುಡ್ಡ ಪ್ರದೇಶದಲ್ಲಿ ಪ್ರಬಲರಾಗಿದ್ದ ಬೆನ್ ಹವಾಜಿನ್ ಬುಡಕಟ್ಟಿನವರು ವಾಸಿಸುತ್ತಿದ್ದರು. ಬಹುತೇಕ ಅರೇಬಿಯಾದ ಬುಡಕಟ್ಟುಗಳೆಲ್ಲಾ ಮಹಮದನ ಪಡೆಯ ಉಪಟಳಕ್ಕೆ ಹೆದರಿ ಮರು ಮಾತಿಲ್ಲದೆ ಇಸ್ಲಾಮನ್ನ ಒಪ್ಪಿಕೊಂಡು ಮುಸಲ್ಮಾನರಾಗಿದ್ದರೂ ಸಹ ಈ ಹವಾಜಿನರು ಮಾತ್ರ ಅದಕ್ಕೆಲ್ಲಾ ಸೊಪ್ಪು ಹಾಕದೆ, ಮಹಮದನ ಕಡೆಯಿಂದ ಮತಾಂತರಕ್ಕೆ ಬಂದ ಸೂಚನೆಗಳನ್ನೆಲ್ಲ ಲೆಕ್ಕಕ್ಕೂ ತೆಗೆದುಕೊಳ್ಳದೆ ತಮ್ಮ ಮೂಲ ವಿಗ್ರಹಾರಾಧಕ ಧರ್ಮವನ್ನೆ ನೆಚ್ಚಿಕೊಂಡು ನೆಮ್ಮದಿಯಾಗಿದ್ದರು.




ಆದರೆ ಅನಿರೀಕ್ಷಿತ ತಿರುವುಗಳನ್ನ ಒಳಗೊಂಡಿದ್ದ ಮಹಮದನ ಮೆಕ್ಕಾದ ಈ ಬರಿಯ ತೀರ್ಥ ಹಾಗೂ ದಂಡಯಾತ್ರೆ ಏಕಾಏಕಿ ಆತನ ಸರ್ವಾಧಿಕಾರದಲ್ಲಿ ಅಂತ್ಯವಾಗಿದ್ದು ಆ ಜನಾಂಗದ ಜನರನ್ನ ಸ್ವಲ್ಪ ಮಟ್ಟಿಗೆ ಭಯಭೀತಗೊಳಿಸಿತ್ತು. ಅವರು ಖುರೈಷಿಗಳೆ ಶರಣಾಗಿ ಹೊಸ ಧರ್ಮದ ಅನುಯಾಯಿಗಳಾಗಿದ್ದನ್ನು ಕಂಡು ತಕ್ಕಮಟ್ಟಿಗೆ ಆತಂಕಿತರೂ ಆಗಿದ್ದರು. ಅದೆ ಜನಾಂಗಕ್ಕೆ ಸೇರಿದ್ದ ಇನ್ನೊಂದು ಉಪ ಗೋತ್ರವಾದ ಬೆನ್ ಥಾಕಿಫ್ ಗುಂಪಿನ ಮಂದಿಗೂ ಸಹ ಇದೆ ಭೀತಿ ಮನದಲ್ಲಿ ಮನೆ ಮಾಡಿತ್ತು. ಹೀಗಾಗಿ ತಮ್ಮ ಪಾಡಿಗೆ ತಾವು ತಮ್ಮ ವಸತಿಗಳ ರಕ್ಷಣೆಯ ಏರ್ಪಾಡನ್ನ ಮಾಡಿಕೊಂಡರು. ತನಗೆ ಶರಣಾಗಿ ತನ್ನ ಕಾಲ ಬಳಿ ಮಂಡಿ ಊರಿಕೊಂಡು ಬಿದ್ದಿರುತ್ತಾರೆ ಎಂದು ಗ್ರಹಿಸಿದರೆ, ಅವರು ಹೀಗೆ ತನ್ನ ಆಜ್ಞೆಗಳನ್ನ ಸರಸಗಟಾಗಿ ಧಿಕ್ಕರಿಸಿ ಮುನ್ನಡೆದಿದ್ದು ಮಹಮದನನ್ನು ಅಪಾರವಾಗಿ ಕೆರಳಿಸಿತು. ಅವರ ಮೇಲೆ ದಂಡಯಾತ್ರೆ ನಡೆಸಿ ಅವರಿಗೆ ಒದ್ದು ಬುದ್ಧಿ ಕಲಿಸಲು ಅವನು ನಿರ್ಧರಿಸಿ ಬಿಟ್ಟ.


ಅವನ ಹನ್ನೆರಡು ಸಾವಿರ ಯೋಧರ ಪಡೆ ಬೆನ್ ಹವಾಜಿನರನ್ನ ಹೆಡೆಮುರಿಗೆ ಕಟ್ಟಲು ಹೊರಟಿತು. ಈ ಸುದ್ದಿ ತಿಳಿದ ಹವಾಜಿನರೂ ಸಹ ಆತ್ಮರಕ್ಷಣೆಗಾಗಿ ಮಲ್ಲಿಕ್ ಎಂಬ ವೀರಾಗ್ರಣಿಯ ನೇತೃತ್ವದಲ್ಲಿ ಔಟಸ್ ಎನ್ನುವ ಬಯಲಿನಲ್ಲಿ ಈ ಮುಸಲ್ಮಾನರ ಪಡೆಯನ್ನ ಎದುರಿಸಲು ಶಸ್ತ್ರಸನ್ನದರಾಗಿ ನಿಂತರು. ಕ್ರಿಸ್ತ ಶಕ ಆರುನೂರಾ ಮೂವತ್ತರ ಫೆಬ್ರವರಿ ತಿಂಗಳ ಒಂದನೆ ತಾರೀಖಿನಂದು ಎರಡೂ ಪಡೆಗಳು ರಣಭೂಮಿಯಲ್ಲಿ ಮುಖಾಮುಖಿಯಾದವು. ನಡೆದ ಭೀಕರ ಕಾಳಗದಲ್ಲಿ ಮೊದಲಿಗೆ ಮುಸಲ್ಮಾನರ ಪಡೆಗೆ ಹಿನ್ನಡೆಯೆ ಆಗಿತ್ತು. ಆದರೆ ಪಡೆಯ ನಟ್ಟ ನಡುವೆ ಇದ್ದ ಮಹಮದ್ 'ತಾನು ದೇವರ ಪ್ರವಾದಿ! ಓಡಬೇಡಿರಿ, ಜಯ ನಮಗೆ ಶತಸಿದ್ಧ' ಎಂದು ಗಂಟಲು ಹರಿದು ಹೋಗುವ ಹಾಗೆ ಹತಾಶೆಯಿಂದ ಕೂಗಿ ಪಲಾಯನಗೈಯುತ್ತಿದ್ದ ಯೋಧರನ್ನ ಹುರಿದುಂಬಿಸಿದ. ಅವನ ಉತ್ತೇಜನದ ನುಡಿಗಳು ಆಗಷ್ಟೇ ಮತಾಂತರವಾಗಿದ್ದ ಮೆಕ್ಕಾದ ಪ್ರಜೆಗಳ ಮೇಲೆ ಮೂರು ಕಾಸಿನ ಪರಿಣಾಮ ಬೀರದಿದ್ದರೂ ಸಹ ಮದೀನಾದ ಅವನ ಅನುಯಾಯಿಗಳು ಇದರಿಂದ ರೋಮಾಂಚಿತರಾದರು. ಅದೆ ಪುಳಕದ ಆವೇಶದಲ್ಲಿ ಹವಾಜಿನರ ಮೇಲೆ ಬರ್ಬರವಾಗಿ ಮುರಕೊಂಡು ಬಿದ್ದರು. ಅವರ ಕೆಚ್ಚೆದೆಯ ಹೋರಾಟ ಕಂಡು ಮೆಕ್ಕಾದವರೂ ಸಹ ಸ್ವಲ್ಪ ಹುಮ್ಮಸ್ಸಿಗೆ ಮರಳುವಂತಾಯಿತು.



'ನಾನು ದೇವರ ದೂತ! ತನ್ನ ಸೈನ್ಯಕ್ಕೆ ದೇವರ ಬೆಂಬಲ ನಿರಂತರವಾಗಿದೆ. ಅಲ್ಲಾಹನ ಕೃಪೆ ನಮ್ಮ ಮೇಲಿರುವಾಗ ಹೋರಾಡಿ ಜಯ ನಮ್ಮದೇನೆ ಶತಸಿದ್ಧ!' ಎಂದಾತ ಮಾಡಿದ ಅಬ್ಬರಕ್ಕೆ ಎಲ್ಲರೂ ಹುರಿದುಂಬಿತರಾಗಿ ಪ್ರಾಣದಾಸೆ ತೊರೆದು ಹೋರಾಡುವಂತೆ ಮಾಡಿತು. ಪಲಾಯನಗೈಯುವ ಸ್ಥಿತಿಯಲ್ಲಿದ್ದ ಮುಸಲ್ಮಾನರು ತಿರುಗಿ ಬಿದ್ದ ಹೊಡೆತಕ್ಕೆ ಹವಾಜಿನರು ಚೆಲ್ಲಾಪಿಲ್ಲಿಯಾದರು. ಅವರು ಹಿಮ್ಮೆಟ್ಟಿ ಮಹಮದನ ಸೈನ್ಯ ಜಯ ಸಾಧಿಸಿತು. ಯುದ್ಧ ಪಿಪಾಸುತನದಲ್ಲಿ ಉನ್ಮತ್ತರಾಗಿದ್ದ ಮುಸಲ್ಮಾನರು ಸಿಕ್ಕ ಸಿಕ್ಕವರನ್ನ ಎಲ್ಲರನ್ನೂ ಕೊಚ್ಚಿ ಕೊಂದರು. ಮಕ್ಕಳು ಹೆಂಗಸರು ಸಹ ಅವರ ಕರುಣೆ ಗಿಟ್ಟಿಸಲು ಸಾಧ್ಯವಾಗಲಿಲ್ಲ. ಈ ಕ್ರೌರ್ಯತೆಯ ನಂತರ ಸುಮಾರು ಇಪ್ಪತ್ತನಾಲ್ಕು ಸಾವಿರದಷ್ಟು ಅಪಾರ ಒಂಟೆಗಳ ಗುಂಪು, ನಲವತ್ತು ಸಾವಿರ ಜಾನುವಾರುಗಳು ಹಾಗೂ ನಲವತ್ತು ಸಾವಿರ ಔನ್ಸ್'ಗಳಷ್ಟು ಚೊಕ್ಕ ಬೆಳ್ಳಿ ಮಹಮದನ ವಶವಾಯಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ 'ದ ಸೀಲ್ಡ್ ನೆಕ್ಟರ್'ರಿನ ಪುಟ ಸಂಖ್ಯೆ ೮೦೪ರಲ್ಲಿ.



ಇದಷ್ಟೆ ಅಲ್ಲದೆ ಇನ್ನಷ್ಟು ತಲೆ ಮರೆಸಿಕೊಂಡು ಪ್ರಾಣ ಉಳಿಸಿಕೊಂಡಿದ್ದ ಸೆರೆಯಾಳುಗಳೂ ಸಹ ಅನಂತರ ಅವನ ಕೈ ವಶವಾದರು. ಅವರನ್ನ ಹುಡುಕಿಕೊಂಡು ಖಂಡಿತಾ ಬೆನ್ ಹವಾಜಿನರು ಬಿಡಿಸಿಕೊಳ್ಳಲು ಬಂದೆ ಬರುತ್ತಾರೆ. ಆಗ ಅವರ ಬಂಧುಗಳಿಂದ ಅಪಾರ ಒತ್ತೆ ಹಣವನ್ನೂ ಸಹ ವಸೂಲಿ ಮಾಡಬಹುದೆಂದು ಹಂಚಿಕೆ ಹಾಕಿಕೊಂಡು ಮಹಮದ್ ಕುಳಿತಿದ್ದ. ಅವನ ಪಡೆಯಲ್ಲೂ ಅಪಾರ ಪ್ರಾಣಹಾನಿ ಆಗಿತ್ತು. ಅವರೆಲ್ಲರೂ ಹೊಸತಾಗಿ ಇಸ್ಲಾಮ್ ಸ್ವೀಕರಿಸಿ ಮುಸಲ್ಮಾನರಾಗಿ ಅವನ ಹಿಂಬಾಲಕರಾಗಿದ್ದರು. ಅವರೆಲ್ಲರ ಕುಟುಂಬಸ್ಥರಿಗೆ ಧೈರ್ಯ ಹಾಗೂ ಸಾಂತ್ವಾನ ತುಂಬುವ ಕಾರಣಕ್ಕಾಗಿ ಮಹಮದ್ ವಿಶೇಷ ಪ್ರಾರ್ಥನಾ ಸಭೆಯನ್ನ ಏರ್ಪಡಿಸಿದ. ಯುದ್ಧದಲ್ಲಿ ಸಂದ ಜಯಕ್ಕೆ ಅಲ್ಲಾಹನೆ ನೇರ ಕಾರಣ ಎಂದು ಬಲವಾಗಿ ನಂಬಿದ್ದ ಮಹಮದ್ ಖುರ್ಹಾನಿನ ಸುರಾ ಸಂಖ್ಯೆ ೯/೨೫ರಲ್ಲಿ ಅದನ್ನ ಸುದೀರ್ಘವಾಗಿ ವಿವರಿಸಿದ್ದಾನೆ.


ಬೇಗ ಅರೇಬಿಯಾದ ಉದ್ದಗಲಕ್ಕೂ ಇಸ್ಲಾಮನ್ನ ಪಸರಿಸಿಯೆ ತೀರುವ ಛಲ ಅವನಲ್ಲಿ ಮೂಡಿತ್ತು. ತಾನು ಹಿಂದೆ ಯುದ್ಧ ಜರುಗಿಸಿ ಗೆದ್ದಿದ್ದರೂ ಸಹ ಮತಾಂತರ ಮಾಡದೆ ಬಿಟ್ಟಿದ್ದ ಬುಡಕಟ್ಟಿನವರನ್ನೆಲ್ಲಾ ಮುಸಲ್ಮಾನರಾಗಿಸಿಯೆ ತೀರಲು ಆತ ನಿರ್ಧರಿಸಿದ. ಈ ನಿಟ್ಟಿನಲ್ಲಿ ಆತನ ಮೊದಲ ಗುರಿ ಅಲ್ ತೈಫ್ ಆಗಿತ್ತು. ಮರಳಿ ಆತನ ಪಡೆ ಆ ಕೋಟೆಗೆ ಲಗ್ಗೆ ಇಟ್ಟಾಗ ಕೋಟೆಯ ಮೇಲಿನಿಂದ ವಿಷ ಸವರಿದ ಮೊನೆಯ ಬಾಣಗಳು ಅವನ ಪಡೆಯನ್ನು ಎದುರುಗೊಂಡವು. ಅನೇಕ ಹೆಣಗಳು ಹೋರಾಟಕ್ಕೂ ಮುನ್ನವೆ ಉರುಳಿದವು. ಸೈನ್ಯ ಹಿಮ್ಮೆಟ್ಟುವುದು ಅನಿವಾರ್ಯವಾಯಿತು. ಹೀಗಾಗಿ ಬೇರೊಂದು ಯುದ್ಧತಂತ್ರಕ್ಕೆ ಮೊರೆ ಹೋಗುವುದು ಆತನಿಗೆ ಅನಿವಾರ್ಯವಾಯಿತು.


ಅವನು ತನ್ನ ನವ ಬೆಂಬಲಿಗರಾಗಿ ಪರಿವರ್ತಿತರಾಗಿದ್ದ ಕೋಟೆ ಏರಿ ಯುದ್ಧ ಮಾಡುವ ನೈಪುಣ್ಯತೆ ಇದ್ದ ಮೆಕ್ಕಾ ಸಮೀಪದ ಕೆಲವು ಕಾಟು ಬುಡಕಟ್ಟಿನ ಮಂದಿಯನ್ನ ಅಲ್ಲಿಗೆ ಕರೆಸಿದ. ಅವರು ಕೋಟೆಯ ಮೇಲೆ ಕವಣೆ ಕಲ್ಲನ್ನು ಗುರಿಯಿಟ್ಟು ಹೊಡೆಯುವುದರಲ್ಲಿ ನಿಪುಣರಾಗಿದ್ದರು. ಅಲ್ಲದೆ ತಲೆಯ ಮೇಲೆ ಗುರಾಣಿ ತಟ್ಟೆಗಳನ್ನ ಒತ್ತೊತ್ತಾಗಿ ಪೇರಿಸಿ ಸೈನಿಕರನ್ನ ಮುನ್ನುಗ್ಗುವಂತೆ ಮಾಡುವುದರಲ್ಲಿ ನಿಷ್ಣಾತರೂ ಆಗಿದ್ದರು. ಆದರೆ ಈ ಬಗ್ಗೆ ಕೋಟೆಯೊಳಗಿದ್ದವರಿಗೆ ಸುಳಿವು ದೊರಕಿ ಅವರು ಮುಂಜಾಗ್ರತೆ ವಹಿಸಿದರು. ಸುಡು ಕಬ್ಬಿಣದ ಉಂಡೆಗಳನ್ನ ಮೇಲಿನಿಂದ ಶತ್ರು ಪಾಳಯದ ಮೇಲೆ ಬೇಕಾಬಿಟ್ಟಿ ಸುರಿಯಲಾಯಿತು. ಮಹಮದನ ಪಡೆ ದಿಕ್ಕಾಪಾಲಾಗಿ ಓಡಿ ಹೋಯಿತು.


ಮಹಮದ್ ಇದರಿಂದ ವಿಪರೀತ ವಿಚಲಿತನಾದ. ಈ ಅಲ್ ತೈಫ್ ಅವನ ಪಾಲಿಗೆ ಕಗ್ಗಂಟಾಯಿತು. ಹೇಗಾದರೂ ಸರಿ ಉಪಾಯ ಹೂಡಿ ಆ ಕೋಟೆಯೊಳಗಿದ್ದ ಮಂದಿಯನ್ನ ಮಣಿಸಲೆ ಬೇಕಿತ್ತವನಿಗೆ. ಇದಕ್ಕಾಗಿ ಉಪಾಯ ಹಣೆಯಲು ಅವರ ಬಾಳ್ವೆಯ ರೀತಿ ರಿವಾಜುಗಳನ್ನ ಹಾಗೂ ಅವರ ಧಾರ್ಮಿಕ ನಂಬಿಕೆಗಳ ಬಗ್ಗೆ ವಿವರವಾಗಿ ಆತ ಮಾಹಿತಿ ಕಲೆ ಹಾಕಿದ. ಅವರು ಪ್ರಕೃತಿ ಆರಾಧಕರಾಗಿದ್ದು ಕೋಟೆಯ ಹೊರ ವಲಯದಲ್ಲಿದ್ದ ಅವರ ತೋಟ ಹಾಗೂ ಖರ್ಜೂರದ ಫಲವತ್ತಾದ ಮರಗಳನ್ನ ಕಡಿದು ನಾಶ ಪಡಿಸಿದರೆ ಅವರು ಶರಣಗತಿ ಸೂಚಿಸುವುದು ಅನಿವಾರ್ಯವಾಗುತ್ತದೆ ಎಂದಾತ ಹಂಚಿಕೆ ಹಾಕಿದ. ಅವನ ಈ ಹಾಲಾಲುಕೋರ ಹಂಚಿಕೆ ಖಚಿತ ಫಲ ನೀಡಿತು.




ಕೋಟೆಯೊಳಗಿದ್ದ ಅಸಹಾಯಕ ನಿಶ್ಪಾಪಿಗಳು ದೇವರ ಮೇಲೆ ಭಾರ ಹಾಕಿ ತಮ್ಮ ಹಾಗೂ ತಮ್ಮ ತೋಟಗಳ ಸಂರಕ್ಷಣೆಗೆ ದೀನವಾಗಿ ಮೊರೆಯಿಟ್ಟರು. ಅವರ ಆರ್ತ ಧ್ವನಿ ದಯನೀಯವಾಗಿತ್ತು. ಅವರ ವೇದನೆಯ ಮೊರೆ ಮಹಮದನನ್ನೂ ತುಸು ತಟ್ಟಿತು. ಆತ ತೋಟದ ನಾಶವನ್ನ ತತ್ಕಾಲಿಕವಾಗಿ ನಿಲ್ಲಿಸಲು ಆದೇಶಿಸಿದ. ಆದರೆ ಅವರನ್ನ ಕೋಟೆಯಿಂದ ಹೊರಗೆಳೆಯುವ ಮಾರ್ಗೋಪಾಯಗಳು ಮಾತ್ರ ಆತನಿಗೆ ಹೊಳೆಯಲೆ ಇಲ್ಲ. ಬೆದಾವಿನರೊಟ್ಟಿಗೆ ಈ ಬಗ್ಗೆ ಸಮಾಲೋಚನೆ ನಡೆಸಿದ. ಆಗ ಬಂದ ಒಂದು ಸಲಹೆ ಅಮೂಲ್ಯವಾಗಿತ್ತು. 'ಒಂದು ನರಿ ತನ್ನ ಬಿಲದಲ್ಲಿ ಅಡಗಿ ಕುಳಿತಿದ್ದರೆ ಅದನ್ನ ಮೇಲೆ ಬಿದ್ದು ಹಿಡಿಯಲು ಬಹಳ ಕಾಲ ಬೇಕಾಗುತ್ತದೆ! ಅದನ್ನ ಹಾಗೆಯೆ ಬಿಟ್ಟರೆ ನಿನಗೇನೂ ನಷ್ಟವಿಲ್ಲ, ಹಸಿವಾದಾಗ ಅದು ಹೊರಬರಲೆ ಬೇಕಲ್ಲವೆ?' ಅನ್ನುವ ಮೌಲಿಕವಾದ ಸಮರ ಸಲಹೆಯನ್ನವರು ಮಹಮದನಿಗೆ ಕೊಟ್ಟರು. ಅದು ಅವನ ಮನಸ್ಸಿಗೂ ಸಹ ಬಂದಿತು.


ಅದರನುಸಾರ ಆತ ಅಲ್ ತೈಫಿಗೆ ಹಾಕಿದ್ದ ಮುತ್ತಿಗೆಯನ್ನು ತೆಗೆದು ಸೇನೆಯನ್ನು ಅಲ್ ಜಿರಾನ ಎನ್ನುವ ಇನ್ನೊಂದು ಸಮೀಪದ ಜಾಗಕ್ಕೆ ಸ್ಥಳಾಂತರಿಸಿದನು. ಅಲ್ಲಿ ಬೆನ್ ಹವಾಜಿನ್ ಸೆರೆಯಾಳುಗಳನ್ನ ಸಹ ಇಡಲಾಗಿತ್ತು. ಅವರ ವಿಲೇವಾರಿಯತ್ತ ಮಹಮದ್ ಈಗ ಗಮನ ಕೊಟ್ಟ. ಸೆರೆಯಾಳುಗಳನ್ನ ಬಿಡಿಸಿಕೊಳ್ಳಲು ಪ್ರವಾಹೋಪಾದಿಯಲ್ಲಿ ಹವಾಜಿನರಲ್ಲಿ ಉಳಿದ ಇನ್ನಷ್ಟು ಮಂದಿ ಬಂದು ಅವನ ಕಾಲಿಗೆ ಸಹ ಬಿದ್ದರು. ಬೇಡಿಕೊಂಡರು. ಆ ಮಂದಿಯಲ್ಲಿದ್ದ ಒಬ್ಬ ಮುದುಕಿ ತಾನು ಬಾಲ್ಯಕಾಲದಲ್ಲಿ ಮಹಮದನನ್ನು ಎತ್ತಿ ಆಡಿಸಿದ್ದ ಅವನ ದೊಡ್ದಪ್ಪನ ಮನೆಯ ಸೌಕರಳಾಗಿದ್ದೆ ಎಂದು ಮುಸಲ್ಮಾನ ಸೈನಿಕರನ್ನು ಹೆದರಿಸಿದಳು! ಅವಳನ್ನು ಮಹಮದನ ಸನ್ನಿಧಾನಕ್ಕೆ ಎಳೆದೊಯ್ಯಲಾಯಿತು. ಅಲ್ಲಿ ಆಕೆಯ ಗುರುತು ಹಿಡಿದ ಮಹಮದ್ ಆಕೆಯ ಮಾತುಗಳು ನಿಜವೆಂದು ಒಪ್ಪಿಕೊಂಡು ತನ್ನೊಂದಿಗೆ ಆಕೆಯನ್ನೂ ಮದೀನಕ್ಕೆ ಕರೆದೊಯ್ಯುವ ಭರವಸೆ ಇತ್ತು ಬಂಧ ಮುಕ್ತಗೊಳಿಸಿದ.



ಈ ಸುದ್ದಿ ಹವಾಜಿನರಲ್ಲಿ ಜನಜನಿತವಾಗಿ ಆತನ ಕೃಪಾಶಿರ್ವಾದಕ್ಕಾಗಿ ಅವರೂ ಹಾತೊರೆದರು. ಆ ಮೂಲಕವಾದರೂ ಕ್ಷಮೆ ಗಿಟ್ಟಿಸಿ ತಮ್ಮ ಬಂಧಿತ ಬಂಧು ಮಿತ್ರರನ್ನು ಬಿಡಿಸಿಕೊಂಡು ಹೋಗಲವರು ಹವಣಿಸಿದರು. ಅವರ ಅಹವಾಲುಗಳನ್ನ ಆಲಿಸುವಾಗ ನಿಜಕ್ಕೂ ಮಹಮದ್ ಮರುಕಗೊಂಡ. ನಿಮಗೆ ನಿಮ್ಮ ಆಸ್ತಿ ಹಾಗೂ ಬಂಧುಗಳಲ್ಲಿ ಯಾವುದು ಹೆಚ್ಚು ಎಂದಾಗ ಅವರೆಲ್ಲರೂ ಬಂಧುಗಳು ಎಂದರು. ಈ ಭಾವುಕ ಮಾತುಗಳು ಅವನನ್ನು ಸಹ ಆಕರ್ಷಿಸಿತು. ತನ್ನ ಪಾಲಿನ ಸೆರೆಯಾಳುಗಳನ್ನ ಬಿಡುಗಡೆ ಮಾಡಿದನಷ್ಟೆ ಅಲ್ಲದೆ ಇನ್ನಿತರ ವಶದಲ್ಲಿಲಿದ್ದ ಸೆರೆಯಾಳುಗಳನ್ನೂ ಸಹ ಆಜ್ಞೆಯೊಂದನ್ನ ಜಾರಿ ಮಾಡಿ ಬಿಡುಗಡೆ ಮಾಡಿಸಲು ಕಾರಣನಾದ. ಈ ಒತ್ತೆ ಹಣದ ಆಸೆಗೆ ಬೀಳದೆ ಬಿಡುಗಡೆ ಮಾಡಲು ಆತನ ಅನುಯಾಯಿಗಳು ಸಮ್ಮತಿಸಿದರಾದರೂ ಸಹ ಕೊಳ್ಳೆ ಹೊಡೆದ ಆಸ್ತಿಪಾಸ್ತಿ ಸ್ವತ್ತುಗಳನ್ನ ಹಾಗೂ ಧನ, ಜಾನುವಾರುಗಳನ್ನ ಬಿಟ್ಟು ಕೊಡಲು ಮಾತ್ರ ಸುತರಂ ಒಪ್ಪಲಿಲ್ಲ.


ಅದಕ್ಕೆ ಮಣಿದ ಮಹಮದ್ ಎಂದಿನಂತೆ ಐದನೆ ಒಂದು ಭಾಗವನ್ನ ಪ್ರವಾದಿಯ ಪಾಲಾಗಿ ಉಳಿಸಿಕೊಂಡು ಉಳಿದ ಎಲ್ಲಾ ಚರಾಚರ ಲೂಟಿಯ ಸೊತ್ತುಗಳನ್ನ ಅವರೆಲ್ಲರಲ್ಲೂ ಸಮಭಾಗ ಮಾಡಿ ಹಂಚಿದ. ಅದರಲ್ಲಿ ಯಾವ ತಾರತಮ್ಯವೂ ತೋರಲಿಲ್ಲ. ಅದುವರೆಗೂ ತನ್ನ ಶತ್ರುಗಳಾಗಿದ್ದು ಇತ್ತೀಚೆಗಷ್ಟೆ ಮುಸಲ್ಮಾನರಾಗಿದ್ದ ಮಾಜಿ ಖುರೈಷಿ ಮುಖಂಡ ಅಬು ಸಫ್ಯಾನ್ ಹಾಗೂ ಅವನ ಮಕ್ಕಳಿಗೂ ಆ ಆಸ್ತಿ ಹಾಗೂ ಜಾನುವಾರುಗಳ ಕೊಳ್ಳೆಯ ಪಾಲು ಸಿಕ್ಕಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೮೧೪ರಲ್ಲಿ. ಆದರೆ ಈ ಹಂಚಿಕೆ ಅದೆಷ್ಟೆ ಸಮಾನ ಹಾಗೂ ಪ್ರಾಮಾಣಿಕವಾಗಿದ್ದರೂ ಮದೀನಾದ ಪ್ರಜೆಗಳು ಮಾತ್ರ ಅಸಂತುಷ್ಟರಾದರು. ಅವರ ಪ್ರಕಾರ ಕಷ್ಟಕಾಲದಲ್ಲಿ ಸೋತು ಸೊರಗಿದ್ದ ಮಹಮದನನ್ನು ಆದರಿಸಿ ಆಶ್ರಯ ನೀಡಿ ಕಾಪಾಡಿದ್ದ ಅವರನ್ನು ಮಹಮದ್ ಕಡೆಗಣಿಸಿದ್ದ. ತನ್ನ ಮೂಲ ಊರಾದ ಮೆಕ್ಕಾದ ನವ ಮತಾಂತರಿತರಾದ ತನ್ನದೆ ಖುರೈಷಿ ಕುಲದವರೊಂದಿಗೆ ಶಾಮೀಲಾಗಿ ಬೇಕಂತಲೆ ಅವರಿಗೆ ಅಗತ್ಯಕ್ಕಿಂತ ಅಧಿಕ ಪ್ರಾಮುಖ್ಯತೆಯನ್ನ ನೀಡಿದ್ದ.


ಖುರೈಷಿಗಳ ಪರವಾಗಿ ಪಕ್ಷಪಾತದ ವರ್ತನೆ ತೋರುತ್ತಿದ್ದಾನೆ ಎನ್ನುವ ಆಪಾದನೆ ಎದ್ದು ಗುಸುಗುಸು ಹಬ್ಬಿತು. ಪರಿಸ್ಥಿತಿ ಅತೃಪ್ತಿಯ ಕಾರಣ ಭುಗಿಲೆದ್ದು ಪರಿಸ್ಥಿತಿ ಕೈ ಮೀರುವ ಮುನ್ನ ಮದೀನಾದ ಒಬ್ಬ ಪ್ರತಿಷ್ಠಿತ ಮುಸಲ್ಮಾನನಾದ ಸಾದ್ ಒಬ್ನ್ ಒಬಾದ್ ಮಹಮದನ ಬಳಿ ಸಾರಿ ಆ ವಿಷಯವನ್ನವನ ಗಮನಕ್ಕೆ ತಂದ. ಪರಿಸ್ಥಿತಿಯ ಗಹನತೆಯನ್ನ ಅರಿತ ಮಹಮದ್ ತಕ್ಷಣ ಅವರನ್ನೆಲ್ಲಾ ಉದ್ದೇಶಿಸಿ ಮಾತನಾಡಿ ಭರವಸೆ ತುಂಬಲು ಪ್ರಯತ್ನಿಸಿದ. ತಾನು ಎಂದೆಂದಿಗೂ ಮದೀನಾದ ನೆಲಕ್ಕೆ ಹಾಗೂ ಅಲ್ಲಿನ ನಿವಾಸಿಗಳಿಗೆ ಚಿರ ಋಣಿ. ತನ್ನ ಕಷ್ಟ ಕಾಲದಲ್ಲಿ ಆಸರೆ ನೀಡಿದ ಅಲ್ಲಿನ ಆದರ ಹಾಗೂ ಸಾಂತ್ವಾನವನ್ನ ಎಂದಾದರೂ ಮರೆಯಲು ಸಾಧ್ಯವೆ? ಎಂದು ನಾಟಕೀಯವಾಗಿ ಅವರನ್ನ ಪ್ರಶ್ನಿಸಿದ. ಬಹಿಷ್ಕಾರಕ್ಕೊಳಗಾಗಿ ನರಳುತ್ತಿದ್ದ ತನ್ನನ್ನ ಪ್ರೀತಿ ವಿಶ್ವಾಸದಿಂದ ಕಂಡು ಸಲಹಿದ ಮದೀನವನ್ನು ಕಡೆಗಣಿಸಲು ಅಸಾಧ್ಯ ಎಂದಾತ ಭಾವುಕನಾಗಿ ನುಡಿದ. ಆತನ ಕಳಕಳಿಯ ಕೃತಜ್ಞತಾಪೂರ್ವಕ ನುಡಿಗಳು ಸರಿಯಾಗಿ ಮುಟ್ಟಬೇಕಾದ ಗುರಿಯನ್ನ ಹೋಗಿ ಮುಟ್ಟಿತ್ತು. ಅವನನೊಂದಿಗೆ ಭಾವುಕರಾಗಿ ತಾವೂ ಕಂಬನಿಗೆರೆದ ಮದೀನಾದ ವಾಸಿಗಳು ತಾವು ಈ ಉತ್ತರದಿಂದ ನಾವೆಲ್ಲಾ ಸಂತೃಪ್ತರಾಗಿದ್ದೇವೆ! ತಮ್ಮ ಮನದಲ್ಲಿದ್ದ ಶಂಕೆ ದೂರಾಗಿದೆ ಎಂದು ಒಕ್ಕೊರಲಿನಿಂದ ಸಾರಿದರು.


ಆದರೆ ಎಲ್ಲರನ್ನೂ ಏಕಕಾಲದಲ್ಲಿ ಸಂಭಾಳಿಸುವುದು ಆತನಿಗೆ ಕಡುಕಷ್ಟವಾಯಿತು. ಹೀಗಾಗಿ ಎಂದಿನ ಚಾಳಿಯಂತೆ ಆತ ದೈವವಾಣಿಗೆ ಮೊರೆ ಹೋದ. ತನಗೆ ದೊರಕಿದ ಪ್ರವಾದಿಯ ಪಾಲಾದ ಒಟ್ಟು ಕೊಳ್ಳೆಯ ಐದನೆ ಒಂದು ಭಾಗದಲ್ಲಿ ಸಕಲವೂ ಬಡವರ ಹಾಗೂ ನಿರ್ಗತಿಕರ ವೆಚ್ಚಕ್ಕಾಗಿ ಮೀಸಲು. ಇತರರ ಹೃದಯಗಳನ್ನ ಗೆಲ್ಲಲು ಸೆರೆಯಾದ ಎಲ್ಲಾ ಬಂಧಿಗಳನ್ನ ಬಿಡಿಸಲು ಸಾಲ ಬಾಧೆಯಿಂದ ನರಳುತ್ತಿರುವವರನ್ನ ಅದರಿಂದ ಮುಕ್ತರನ್ನಾಗಿಸಲು, ದೇವರ ಸೇವೆಗೈಯಲು ಹಾಗೂ ಪ್ರಯಾಣಿಕರ ಸೌಕರ್ಯಗಳನ್ನ ಅಭಿವೃದ್ಧಿ ಪಡಿಸಲು ವಿನಿಯೋಗಿಸಬೇಕೆಂದು ದೈವವಾಣಿ ದೊರಕಿತು. ಖುರ್ಹಾನಿನ ಸುರಾ ಸಂಖ್ಯೆ ೯/೫೮ರಲ್ಲಿ ಇದನ್ನ ಗಮನಿಸಬಹುದು ಎನ್ನುತ್ತಾರೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತಮ್ಮ ಕೃತಿ 'ಲೈಫ್ ಆಫ್ ಮಹಮದ್'ನ ಪುಟ ಸಂಖ್ಯೆ ೪೨೩ರಲ್ಲಿ.


ಇದನ್ನ ಆತ ಸೆರೆಯಾದ ಬೆನ್ ಹವಾಜಿನರಿಗೂ ಅನ್ವಯಿಸಿದ. ಒಂದೊಮ್ಮೆ ಅವರೆಲ್ಲಾ ಇಸ್ಲಾಮಿಗೆ ಶರಣಾದರೆ ಅವರಿಗೂ ಕೊಡುಗೆಗಳು ಕಾದಿವೆ ಎಂದು ಮಹಮದ್ ಅವರ ನಾಯಕ ಮಲ್ಲಿಕನಿಗೆ ತಿಳಿಸಿದ. ಸೋತು ಸುಣ್ನವಾಗಿದ್ದ ಪಡೆಯ ಮುಖಂಡ ಮಲ್ಲಿಕ್ ಅನಿವಾರ್ಯವಾಗಿ ಸಮ್ಮತಿ ಸೂಚಿಸಿ ಸಂತೋಷದಿಂದಲೆ ಮುಸಲ್ಮಾನನಾಗಿ ಮತಾಂತರವಾದ. ಅವನ ಪಾಲಿಗೆ ನೂರು ಒಂಟೆಗಳ ಕೊಡುಗೆ ಹಾಗೂ ಮಹಮದನ ಸಹಾಯ ಹಸ್ತ ಕೂಡಲೆ ಒಲಿದು ಬಂತು! ಅವರಿಂದ ಹೊಡೆದ ಕೊಳ್ಳೆಯಲ್ಲಿ ಅವರಿಗೆ ಕೊಡುಗೆಯನ್ನ ದಯಪಾಲಿಸಲಾಗಿತ್ತು ಅನ್ನುವುದು ಇಲ್ಲಿ ಗಮನಾರ್ಹ. ಅಲ್ ಜಿರಾನ್ ಕೋಟೆಯನ್ನ ಕೊಳ್ಳೆ ಹೊಡೆದ ಲೂಟಿಯ ವಸ್ತುಗಳನ್ನೆಲ್ಲ ವಿಲೆವಾರಿ ಮಾಡಿದ ಮಹಮದ್ ಮೆಕ್ಕಾದ ಆ ವರ್ಷದ ಯಾತ್ರೆ ಆಲ್ಲಿಗೆ ಮುಗಿಯಿತೆಂದು ಘೋಷಿಸಿ ಮರಳಿ ಮದೀನಾದತ್ತ ಹೆಜ್ಜೆ ಹಾಕಿದ.


ಮಹಮದನ ವಶಕ್ಕೆ ಬರುವವರೆಗೂ ಮೆಕ್ಕಾ ಒಂದು ಧಾರ್ಮಿಕ ಹಾಗೂ ವ್ಯಾಪಾರಿ ಕೇಂದ್ರವಾಗಿ ವಿಜೃಂಭಿಸಿತ್ತು. ಅವನ ಆಗಮನಕ್ಕೂ ಹಿಂದೆ ಸಾರ್ಥದ ನಿಲ್ದಾಣವಾಗಿದ್ದ ಅದು ಬಹುತೇಕ ವ್ಯಾಪಾರಿ ಗುಂಪುಗಳಿಂದ ಗಿಜಿಗುಡುತ್ತಿತ್ತು. ಆದರೆ ಆತ ಕಪಿಮುಷ್ಠಿಗೆ ಸಿಲುಕಿದ ನಂತರ ಅದರ ವ್ಯಾಪಾರಿ ಪ್ರಾಮುಖ್ಯತೆ ಮರೆಯಾಗಿ ಕ್ರಮೆಣ ಇನ್ನಿಲ್ಲವಾಗಿ ಹೋಗಿ ಕೇವಲ ಧಾರ್ಮಿಕ ಯಾತ್ರಾಕ್ಷೇತ್ರವೆಂಬ ಮಾನ್ಯತೆ ಮಾತ್ರ ಶಾಶ್ವತವಾಗುಳಿಯಿತು. ಆದರೆ ವಾಸ್ತವದಲ್ಲಿ ನಗರದ ಬೆಳವಣಿಗೆಗೆ ಅದು ಅನುಕೂಲಕರವಾಗಿಯೆ ಪರಿಣಮಿಸಿತು. ಕಾಲಾಂತರದಲ್ಲಿ ಇಸ್ಲಾಮ್ ತನ್ನ ಬರ್ಬರತೆಯ ಮೂಲಕ ಲೋಕದುದ್ದ ಹರಡತೊಡಗಿದಾಗ ಅದರ ಅನುಯಾಯಿಗಳ ಸಂಖ್ಯೆ ಹೆಚ್ಚಿತಷ್ಟೆ. ಅವರೆಲ್ಲರೂ ಶ್ರದ್ಧಾ ಭಕ್ತಿಯಿಂದ ಅಲ್ಲಿಗೆ ಯಾತ್ರಿಸುವ ಖಡ್ಡಾಯದ ಜೀವನ ವಿಧಿಗೆ ಬದ್ಧರಾಗಿದ್ದರು. ಅವರೆಲ್ಲರೂ ಇತ್ತ ಕಾಣಿಕೆ ಹಾಗೂ ತಂದು ಸುರಿದ ದ್ರವ್ಯ ಧನ ರಾಶಿಯಿಂದ ಮೆಕ್ಕಾ ಸಮೃದ್ಧವಾಗತೊಡಗಿತು.



ಕ್ರಮೇಣ ಪ್ರಪಂಚದಾದ್ಯಂತ ಎದ್ದು ನಿಂತ ಮುಸಲ್ಮಾನ ರಾಜ್ಯಗಳ ಸುಲ್ತಾನರು ಅಪಾರ ಪ್ರಮಾಣದ ಧಾರ್ಮಿಕ ಕಾಣಿಕೆಗಳನ್ನಿಲ್ಲಿಗೆ ತಂದು ಸುರಿದರು. ಇಸ್ಲಾಮಿನ ಕೇಂದ್ರ ವ್ಯಕ್ತಿಗಳಾಗಿ ಮೆರೆದ ಖಲೀಫರುಗಳಂತೂ ತಮ್ಮ ರಾಜಾದಾಯದ ಬಹು ಪಾಲನ್ನ ಆ ನಗರವನ್ನ ಶೃಂಗರಿಸಲು ವೆಚ್ಚ ಮಾಡಿ ಆನಂದಿಸಿದರು. ಮಹಮದ್ ಅದನ್ನು ಕೇವಲ ಇಸ್ಲಾಮಿನ ರಾಜಧಾನಿಯಾಗಿ ಘೋಷಿಸಿ ಮುಸಲ್ಮಾನೇತರರನ್ನ ಅಲ್ಲಿಗೆ ಪ್ರವೇಶಿಸದಂತೆ ನಿರ್ಬಂಧಿಸಿದ. ಮುಸಲ್ಮಾನ ಸಾಮ್ರಾಜ್ಯಶಾಹಿಯ ರಾಜಧಾನಿಗಳು ಕಳೆದ ಶತಮಾನದ ಆರಂಭದ ಇಪ್ಪತ್ತೆರಡು ವರ್ಷಗಳವರೆಗೂ ಜಗತ್ತಿನ ನಾನಾ ನಗರಗಳಿಗೆ ಸ್ಥಳಾಂತರವಾದರೂ, ಸದ್ಯ ಅದರ ಹಿಡಿತ ಅನಧಿಕೃತವಾಗಿ ರಿಯಾದಿನಲ್ಲಿದ್ದರೂ ಆಳುವ ದೊರೆಗಳಲ್ಲಿ ಯಾರೊಬ್ಬರೂ ಮೆಕ್ಕಾವನ್ನ ಮರೆಯಲಿಲ್ಲ. ತಮ್ಮ ರಾಜಧಾನಿಗಳಷ್ಟೆ ಅಕ್ಕರೆ ಹಾಗೂ ಅಸ್ಥೆಯಿಂದ ಮೆಕ್ಕಾವನ್ನು ಸಹ ಅವರೆಲ್ಲಾ ಸಿಂಗರಿಸಿ ತೃಪ್ತಿ ಪಟ್ಟರು.


ಅವರೆಲ್ಲರ ತನು ಮನ ಧನದ ಬೆಂಬಲದಿಂದ ಒಂದಾನೊಂದು ಕಾಲಕ್ಕೆ ಮಹಮದನ ನಿದ್ದೆ ಗೆಡಿಸಿದ್ದ ಮೆಕ್ಕಾ, ಆತನ ರಕ್ತಕ್ಕಾಗಿ ಹಪಾಹಪಿಸಿದ್ದ ಮೆಕ್ಕಾ, ಆತನನ್ನ ನಿರ್ದಾಕ್ಷಿಣ್ಯವಾಗಿ ಒದ್ದು ಓಡಿಸಿದ್ದ ಮೆಕ್ಕಾ, ಅವನ ನವ ಧಾರ್ಮಿಕತೆ ಹಾಗೂ ನಂಬಿಕೆಗಳಿಗೆ ಪ್ರಬಲ ಪ್ರತಿರೋಧ ಒಡ್ಡಿದ್ದ ಮೆಕ್ಕಾ ಇದೀಗ ಇಸ್ಲಾಮಿನ ಉನ್ಮತ್ತಾಭಿಮಾನದ ನಗರವಾಗಿ ಬೆಳೆದು ಉಳಿಯಿತು. ಇಂದಿಗೂ ಅಲ್ಲಿನ ಪ್ರಾವಿತ್ರ್ಯತೆ ಹಾಗೂ ಮೌಲಿಕತೆ ತುಸುವೂ ಕುಂದು ಕಂಡಿಲ್ಲ. ಇನ್ನಿತರ ಮತಾವಲಂಭಿಗಳು ತಮ್ಮ ಜನ್ಮಸಿದ್ಧ ಹಕ್ಕಾಗಿದ್ದರೂ ಅ ನಗರವನ್ನ ಪ್ರವೇಶಿಸದಂತೆ ಮುಸಲ್ಮಾನರು ಮತಾಂಧತೆಯಲ್ಲಿ ಪ್ರತಿಬಂಧಿಸುತ್ತಾರೆ ಅನ್ನುವುದನ್ನ ಬಿಟ್ಟರೆ ಮೆಕ್ಕಾದ ಹಿರಿಮೆ ಅಂದಿದ್ದಷ್ಟೆ ಇಂದೂ ಉಳಿದಿದೆ. ವಾಸ್ತವದ ಭೂತಗನ್ನಡಿಯಲ್ಲಿ ನೋಡಿದರೆ ಮಹಮದ್ ಆ ಪವಿತ್ರ ನಗರಕ್ಕೆ ಕೊಟ್ಟದ್ದಕ್ಕಿಂತ ಆತ ಆ ಧಾರ್ಮಿಕ ಅಯಸ್ಕಾಂತೀಯ ಪ್ರಭಾವದಿಂದ ಬಾಳಿನುದ್ದ ಪಡೆದದ್ದೆ ಹೆಚ್ಚು ಎನ್ನುವುದು ಸುಸ್ಪಷ್ಟವಾಗುತ್ತದೆ.


( ಇನ್ನೂ ಇದೆ,)