Saturday, November 28, 2015

ವಲಿ - ೩೭








ಈಗ ಅರೇಬಿಯಾದ ಧಾರ್ಮಿಕ ನಾಯಕತ್ವದ ಜೊತೆಗೆ ಸೈನಿಕ ಬಲದ ಮುಖ್ಯಸ್ಥನಾಗಿಯೂ ಮಹಮದ್ ಹೊರ ಹೊಮ್ಮಿದ್ದ. ಆತನ ಪ್ರಬಲ ವಿರೋಧಿಗಳಾಗಿದ್ದ ಖುರೈಷಿಗಳೂ ಸಹ ಈಗ ಅವನ ಅಡಿಯಾಳುಗಳಾಗಿ ಆತನ ಪಾಳಯದ ಬೆಂಬಲಕ್ಕೆ ಬಂದ ಕಾರಣದಿಂದ ಆತನಿಗೆ ಎದುರಾಗಿ ವಾದಿಸುವ ಅಥವಾ ಹೋರಾಡುವ ಸ್ಥೈರ್ಯವುಳ್ಳ ಯಾರೊಬ್ಬರೂ ಸಹ ಆರನೆ ಶತಮಾನದ ಅರೇಬಿಯಾ ಪ್ರಸ್ಥಭೂಮಿಯಲ್ಲಿ ಇರಲೆ ಇಲ್ಲ. ಸಹಜವಾಗಿ ಆತನ ಪ್ರತಿಷ್ಠೆ ಮರುಭೂಮಿಯಾಚೆಗೂ ಹರಡಿ ಮದೀನಾದಲ್ಲಿ ಅನೇಕ ಹೊರ ರಾಜ್ಯಗಳ ರಾಯಭಾರ ಕಛೇರಿಗಳೂ ಸಹ ಆರಂಭಗೊಂಡವು. ಹಾಗೆ ರಾಯಭಾರ ಹೊತ್ತು ಬಂದವರನ್ನ ಮಹಮದ್ ಯಥೋಚಿತವಾಗಿ ಸತ್ಕರಿಸಿದ. ಸ್ವದೇಶಕ್ಕೆ ಅವರು ಹಿಂದಿರುಗುವಾಗ ಅವರ ಅಂತಸ್ತಿಗೆ ತಕ್ಕಂತಹ ಉಡುಗೊರೆಗಳೊಂದಿಗೆ ಬೀಳ್ಕೊಟ್ಟ. ಅರೇಬಿಯಾದ ಶರಣಾಗತ ಬುಡಕಟ್ಟುಗಳಲ್ಲಿ ಅನೇಕ ಗುಂಪುಗಳಿಗೆ ಆಂತರಿಕ ಸ್ವಾತಂತ್ರ್ಯವನ್ನೂ ಸಹ ನೀಡಿದ. ಅವರಿಂದ ಕಾಲಾಕಾಲಕ್ಕೆ ಕಪ್ಪಕಾಣಿಕೆಗಳನ್ನ ನಿಯಮಿತವಾಗಿ ಒಪ್ಪಿಸಿಕೊಳ್ಳುತ್ತಾ ಗೌರವದಿಂದಲೆ ಆ ಜನಾಂಗಗಳನ್ನೂ ಸಹ ನಡೆಸಿಕೊಂಡ.


ಕ್ರಿಸ್ತಶಕ ಆರುನೂರಾ ಮೂವತ್ತರ ಅಕ್ಟೋಬರ್ ತಿಂಗಳಿನಲ್ಲಿ ತನ್ನ ಸಾಮ್ರಾಜ್ಯಶಾಹಿತ್ವವನ್ನ ಇನ್ನಷ್ಟು ಹಿಗ್ಗಿಸಲು ಆತ ಒಂದು ಪ್ರಬಲ ದಂಡನ್ನ ಸಿರಿಯಾದ ಗಡಿ ಪ್ರದೇಶಕ್ಕೆ ಕೊಂಡೊಯ್ಯಲು ನಿರ್ಧರಿಸಿದ. ಅಲ್ಲಿ ಕೆಲವು ಬುಡಕಟ್ಟುಗಳು ಹೆಚ್ಚು ಪ್ರಬಲವಾಗಿದ್ದುದರಿಂದ ಅವರನ್ನು ಹತ್ತಿಕ್ಕುವ ಉದ್ದೇಶ ಈ ದಂಡಿನ ಧಾಳಿಯ ಹಿಂದಿತ್ತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೮೪೦ರಲ್ಲಿ. ಆ ಪ್ರದೇಶಗಳೆಲ್ಲಾ ರೋಮನ್ ಸಾಮ್ರಾಜ್ಯದ ಅವಿಭಾಜ್ಯ ಅಂಗಗಳಾಗಿದ್ದು ತನ್ನ ಗಡಿ ಮೇರೆಯ ಎಲ್ಲಾ ನಾಯಕರಿಗೂ ಮಹಮದನ ದಂಡಯಾತ್ರೆಯ ಬಾತ್ಮಿ ತಿಳಿದ ರೋಮನ್ ಚಕ್ರವರ್ತಿ ಎಚ್ಚರಿಕೆಯ ಸಂದೇಶ ರವಾನಿಸಿದ. ಸೂಕ್ತ ರಕ್ಷಣಾ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಲು ಅದರಲ್ಲಿ ಸೂಚಿಸಲಾಗಿತ್ತು. ಮಹಮದ್ ಕೂಡಾ ಈ ಬಾರಿ ಅದ್ವಿತೀಯವಾದ ಸಂಖ್ಯೆಯಲ್ಲಿಯೆ ಸೈನ್ಯವನ್ನು ಜಮಾಯಿಸಲು ನಿರ್ಧರಿಸಿದ್ದ. ಹೀಗಾಗಿ ಪಡೆಯಲ್ಲಿ ಯೋಧರಾಗಿ ಶಾಮೀಲಾಗಲು ತನ್ನ ಎಲ್ಲಾ ಹಿತೈಶಿಗಳಿಗೆ, ಕುಲ ಬಾಂಧವರಿಗೆ, ಬೆಂಬಲಿತ ಬುಡಕಟ್ಟುಗಳ ಮುಖಂಡರಿಗೆ ಹಾಗೂ ತನ್ನ ಅಧೀನದಲ್ಲಿದ್ದ ಎಲ್ಲಾ ಪ್ರದೇಶಗಳ ಮುಖಂಡರುಗಳಿಗೆ ಮಹಮದ್ ಆಜ್ಞಾಪಿಸಿದ.


ಎಲ್ಲಾ ಕಡೆಗಳಿಂದ ಸೂಕ್ತ ಪ್ರತಿಸ್ಪಂದನೆ ಬಂದರೂ ಸಹ ಮದೀನಾದ ಪ್ರಜೆಗಳಿಂದ ಹಾಗೂ ಬೆದಾವಿನರಿಂದ ಮಾತ್ರ ನಿರಾಶಾದಾಯಕ ಪ್ರತ್ಯುತ್ತರ ಬಂದಿತು. ಅವರಿಬ್ಬರೂ ಅವನ ಯುದ್ಧೋತ್ಸಾಹದ ಕರೆಗೆ ಕೂಡಲೆ ಪ್ರತಿಸ್ಪಂದಿಸಲಿಲ್ಲ. ಸಿರಿಯಾದ ಗಡಿ ಮದೀನಾದಿಂದ ಬಹು ದೂರವಿದ್ದು ಬಿಸಿಲಝಳವನ್ನು ಸಹಿಸಲು ಅವರಲ್ಲಿ ಯಾರೂ ತಯ್ಯಾರಿಲ್ಲದಿದ್ದುದೆ ಇದಕ್ಕೆ ಪ್ರಮುಖ ಕಾರಣವಾಗಿತ್ತು. ಮಹಮದನಿಗೆ ಇದರಿಂದ ಮುಖಭಂಗವಾದರೂ ಆತ ಮದೀನಾದ ಪ್ರಜೆಗಳ ಮೇಲೆ ನಿರಾಶೆಯನ್ನ ವ್ಯಕ್ತ ಪಡಿಸುವ ಸ್ಥಿತಿಯಲ್ಲಿರಲಿಲ್ಲ. ಎಷ್ಟೆಂದರೂ ಅವರು ತನಗೂ, ತನ್ನ ಆರಂಭಿಕ ಅನುಚರರಿಗೂ ಕಷ್ಟಕಾಲದಲ್ಲಿ ಅನ್ನ ಬಟ್ಟೆ ಕೊಟ್ಟ ಉದಾರಿ ಆಶ್ರಯದಾತರಾಗಿದ್ದರು. ಆದರೆ ಬೆದಾವಿನರ ಬಗ್ಗೆ ಮಾತ್ರ ಅಂತಹ ಯಾವುದೆ ಮುಲಾಜನ್ನ ಆತ ಇಟ್ಟುಕೊಳ್ಳಲಿಲ್ಲ. ಮಹಮದನ ಇನ್ನಿತರ ಅನುಯಾಯಿಗಳು ಉತ್ಸಾಹದಿಂದಲೆ ಮಹಮದನ ಈ ದಂಡಯಾತ್ರೆಗೆ ಬೆಂಬಲ ಸೂಚಿಸಿ ತನು ಮನ ಧನದಿಂದ ಅತನ ಕರೆಗೆ ಸ್ಪಂದಿಸಿದರು.



ಮದೀನಾ ನಗರದ ಹೊರ ಭಾಗದಲ್ಲಿ ಸೈನ್ಯವನ್ನು ಜಮಾಯಿಸಲಾಯಿತು. ಮಹಮದನ ಮಾವ ಅಬು ಬಕರನನ್ನು ದಂಡಿನ ಪ್ರಾರ್ಥನಾ ವಿಧಿಗಳನ್ನ ನಿರ್ವಹಿಸಲು ನೇಮಿಸಲಾಯಿತು. ಮಹಮದನ ಅಳಿಯ ಅಲಿಯನ್ನು ಮದೀನಾದಲ್ಲಿಯೆ ಉಳಿಸಿ ಕುಟುಂಬದ ರಕ್ಷಣೆಯ ಹೊಣೆಯನ್ನ ಅವನ ಹೆಗಲಿಗೆ ಹೊರೆಸಲಾಯಿತು. ಜಮಾಯಿಸಿದ್ದ ಸೈನ್ಯದ ಅಂದಾಜು ಸಂಖ್ಯೆ ಮೂವತ್ತು ಸಾವಿರಕ್ಕೂ ಅಧಿಕವಿದ್ದು ಅರೇಬಿಯಾದ ಇತಿಹಾಸದಲ್ಲಿಯೆ ಅಷ್ಟು ಅಪಾರ ಪ್ರಮಾಣದ ಸೈನ್ಯ ಎಂದೂ ನೆರೆದಿರಲಿಲ್ಲ ಅನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೮೪೩ರಲ್ಲಿ. ಈ ಬಲಿಷ್ಠ ದಂಡು ಶಸ್ತ್ರ ಸನ್ನದವಾಗಿ ಸಿರಿಯಾದತ್ತ ಹೊರಟಿತು. ದಾರಿ ಮಧ್ಯೆ ಅಲ್ ಹಿಜ್ರ್ ಕಣಿವೆಯಲ್ಲಿ ಅದು ತಂಗಿತು. ಅಲ್ಲಿ ನೀರಿನ ಬಾವಿಗಳಿಗೆ ಕೊರತೆ ಇಲ್ಲದಿದ್ದರೂ ಆ ತನಕ ಶತ್ರು ಪಾಳಯದ ವಶದಲ್ಲಿದ್ದ ಅಲ್ಲಿನ ಬಾವಿಗಳ ನೀರಿಗೆ ವಿಷ ಬೆರೆಸಿರಬಹುದು ಎನ್ನುವ ಊಹಾಪೋಹದ ಗಾಳಿಸುದ್ದಿ ಭಯಂಕರವಾಗಿ ಹರಡಿ ಅವರ್ಯಾರೂ ಆ ನೀರನ್ನು ಉಪಯೋಗಿಸುವ ಗೋಜಿಗೆ ಹೋಗದೆ ಅತಿ ಸಂಕಷ್ಟಕ್ಕೆ ಒಳಗಾದರು. ಆದರೆ ಅದೃಷ್ಟವಾಶಾತ್ ಆ ರಾತ್ರಿ ಉತ್ತಮ ಮಳೆಯಾಗಿ ಅವರೆಲ್ಲರ ನೀರಿನ ಅವಶ್ಯಕತೆ ಪೂರೈಸಿತು. ಮಹಮದನ ಪ್ರಾರ್ಥನೆಗೆ ಓಗೊಟ್ತಟ್ಟ ದೈವ ಕೃಪೆ ತೋರಿ ಮಳೆ ಬರಿಸಿದ್ದರಿಂದಲೆ ಈ ಚಮತ್ಕಾರವಾಯಿತು ಅನ್ನುವ ನಂಬಿಕೆ ಸೈನ್ಯದಲ್ಲಿ ಆಗ ಹುಟ್ಟಿತು.



ಅಲ್ಲಿಂದ ಮುಂದೆ ಸಾಗಿದ ದಂಡು ತೆಬೂಕ್ ಎನ್ನುವ ಇನ್ನೊಂದು ಭಾಗದಲ್ಲಿ ಬೀಡು ಬಿಟ್ಟಿತು. ಅಲ್ಲಿ ವೃಕ್ಷ ಸಂಪತ್ತು ಹಾಗೂ ಜಲ ಮೂಲದ ಆಸರೆಗಳು ಅಪಾರವಾಗಿದ್ದು ಅವರಿಗೆ ಅಲ್ಲಿನ ವಾತಾವರಣ ನೆಮ್ಮದಿ ತಂದಿತು. ಸೈನ್ಯ ಬೀಡು ಬಿಡಲು ಅದು ಪ್ರಶಸ್ತ ಸ್ಥಳವಾಗಿತ್ತು. ತನ್ನ ಬೇಹು ಪಡೆ ರೋಮನ್ ಚಕ್ರವರ್ತಿಯ ಪ್ರತ್ಯರ್ಥದ ಸುದ್ದಿ ಸುಳ್ಳು ಅದೆಲ್ಲಾ ಊಹಾಪೋಹ ಎನ್ನುವ ಖಚಿತ ಮಾಹಿತಿಯನ್ನ ತಂದು ಮುಟ್ಟಿಸಿದಾಗ ಮಹಮದ್ ನೆಮ್ಮದಿಯ ನಿಟ್ಟುಸಿರು ಬಿಟ್ಟ. ಹತ್ತಿರದಲ್ಲೆ ಇದ್ದ ಅಲ್ ದೂಮಾ ಪ್ರದೇಶದ ಮೇಲೆ ಆರಂಭಿಕ ಧಾಳಿಯನ್ನ ಸಂಘಟಿಸಲಾಯಿತು. ಖಲೀದ್ ಯಶಸ್ವಿಯಾಗಿ ತನ್ನ ಪಡೆಯೊಂದಿಗೆ ಆ ಪ್ರಬಲ ಸಂಸ್ಥಾನವನ್ನು ಮಣಿಸಿ ಮರಳಿ ಬಂದ. ಸುತ್ತಲಿನ ಯಹೂದಿ ಹಾಗೂ ಕ್ರೈಸ್ತ ಸಂಸ್ಥಾನಗಳಲ್ಲಿ ಹಲವರನ್ನು ಸಾಮಂತರನ್ನಾಗಿಸಿ ಅಪಾರ ಕಪ್ಪ ಕಾಣಿಕೆಗಳನ್ನು ಅವರಿಂದ ಪಡೆದು ಅದೆ ವರ್ಷದ ದಿಸೆಂಬರ್ ತಿಂಗಳಿನಲ್ಲಿ ಮಹಮದನ ಪಡೆ ಹೆಚ್ಚು ಹಾನಿಗೊಳಗಾಗದೆಯೆ ಮರಳಿ ಮದೀನವನ್ನು ಮುಟ್ಟಿತು.



ಈ ದಂಡಯಾತ್ರೆ ಮಹಮದನ ನೇತೃತ್ವದಲ್ಲಿ ಕೈಗೊಂಡ ಕಟ್ಟಕಡೆಯ ಯುದ್ಧ ಕಾರ್ಯಾಚರಣೆಯಾಗಿತ್ತು. ಅನಂತರ ಯಾವುದೆ ರಣರಂಗಕ್ಕೂ ಸ್ವತಃ ಮಹಮದ್ ಸೈನ್ಯವನ್ನು ಮುನ್ನಡೆಸಲಿಲ್ಲ. ದಣಿದು ಮುದಿಯಾಗಿದ್ದ ದೈಹಿಕ ಕಾರಣಗಳು ಹಾಗೂ ಮಾಗುತ್ತಿದ್ದ ಪ್ರಾಯ ಅವನಿಗೆ ಅಂತಹ ದುಸ್ಸಾಹಸಗಳನ್ನು ಕೈಗೊಳ್ಳಲು ಪೂರಕವಾಗಿಟ್ಟಿರಲಿಲ್ಲ.  ಈ ಕೊನೆಯ ದಂಡಯಾತ್ರೆಯ ಹಿನ್ನೆಲೆಯಲ್ಲಿ ಒಂದು ಗಮನೀಯ ಘಟನೆ ಘಟಿಸಿತ್ತು. ವಾಡಿಕೆಯಂತೆ ತನ್ನ ಹಿಂಬಾಲಕ ಬುಡಕಟ್ಟುಗಳಿಗೆಲ್ಲಾ ಮಹಮದ್ ಯುದ್ಧದಲ್ಲಿ ಭಾಗವಹಿಸುವಂತೆ ಕರೆ ಕೊಟ್ಟಿದ್ದನಷ್ಟೆ. ಹಾಗೆ ಆಹ್ವಾನ ಪಡೆದವರಲ್ಲಿ ಪ್ರಬಲನಾದ ಅಲ್ ಝೆಡ್ ಬಿನ್ಖೈಸ್ ಸಹ ಒಬ್ಬನಾಗಿದ್ದ. ಆದರೆ ಆತ ಆ ಕರೆಯನ್ನ ಸರಾಸಗಟಾಗಿ ನಿರಾಕರಿಸಿದ್ದ.



ಆತ ಅದಕ್ಕಾಗಿ ತನ್ನ ಕಚ್ಚೆ ಹರುಕತನ ಹಾಗೂ ಸ್ತ್ರೀ ಲೋಲುಪತೆಯ ಕಾರಣವನ್ನೆ ಭಿಡೆಯಿಲ್ಲದೆ ನೀಡಿದ್ದ ಸಹ! ತಬೂಕ್ ಪ್ರಾಂತ್ಯದ ಮೇಲೆ ಧಾಳಿ ಕೈಗೊಳ್ಳುವ ಅಸಲು ವಿಚಾರವನ್ನ ಮುಚ್ಚಿಟ್ಟು ಮಹಮದ್ ಕೇವಲ ಬೆಜಂಟೈನ್ ನಿಯಂತ್ರಣದ ಸ್ಥಳಗಳಿಗೆ ಮಾತ್ರ ಧಾಳಿ ಸಂಘಟಿಸುವ ವಿಚಾರ ತಿಳಿಸಿ ಮೋಸ ಮಾಡಿದ್ದಾನೆ ಎಂದು ಆತ ಖಾಸಗಿಯಾಗಿ ಆರೋಪಿಸಿದ. ಅದೆಲ್ಲಾ ತನ್ನ ಹುಡುಗಿಯರ ಹುಚ್ಚನ್ನ ಅರಿತು ಮಾಡಿದ ಕುತಂತ್ರ! ಗ್ರೀಕ್ ಪ್ರದೇಶದ ಹೆಂಗಸರು ಸಹಜ ಸುಂದರಿಯರು, ಅವರ ಆಕರ್ಷಣೆಗೆ ಜೊಲ್ಲು ಸುರಿಸಿಕೊಂಡು ನಾನು ಆ ರಣ ಕಣಕ್ಕೆ ಇಳಿಯಲಿ ಎನ್ನುವ ಉದ್ದೇಶದಿಂದ ಮಹಮದ್ ತನಗೆ ಆಸೆ ಹುಟ್ಟಿಸಲು ಈ ಕಥೆ ಹೆಣೆದಿದ್ದಾನೆ ಎಂದು ಆತ ಯುದ್ಧಕ್ಕೆ ತೆರಳಲು ನಿರಾಕರಿಸಿದ. ಅಂತಃಪುರವೆ ತನಗೆ ಯುದ್ಧ ಭೂಮಿಯಿಂದ ಹಿತ ಎಂದಾತ ಮಾರೋಲೆ ಕಳಿಸಿದ! ಇದರ ಕುರುಹಾಗಿ ಖುರ್ಹಾನಿನ ಸುರಾ ಸಂಖ್ಯೆ ೯/೪೯ನ್ನ ಆಸಕ್ತರು ಗಮನಿಸಬಹುದು.


ಮಹಮದ್ ಕೈಗೊಂಡಿದ್ದ ಈ ತಬೂಕ್ ದ್ಮ್ಡಯಾತ್ರೆಯ ಅವಧಿ ಅರೇಬಿಯ್ತಾ ಪ್ರಸ್ಥಭೂಮಿಯಲ್ಲಿ ಕಡು ಬೇಸಗೆಯ ಕಾಲವಾಗಿತ್ತು. ಈ ಸುಡು ಬಿಸಿಲಿನಲ್ಲಿ ಸದುದ್ದೇಶಕ್ಕಗಿಯೆ ಆಗಿದ್ದರೂ ಸಹ ತೆರೆದ ಬಯಲಿನಲ್ಲಿ ಕಾದಾಡುವುದೆಂದರೆ ಯಾರಿಗೂ ಅಸಹನೀಯವೆ ಆಗಿತ್ತು. ಮದೀನಾದ ಮುಸಲ್ಮಾನೇತರ ಅವಿಶ್ವಾಸಿಗಳಿಗೂ ಈ ಕಾರಣದಿಂದಲೆ ಅದರಲ್ಲಿ ಕಿಂಚಿತ್ ಆಸಕ್ತಿಯೂ ಹುಟ್ಟಿರಲಿಲ್ಲ. ಹೀಗಾಗಿ ಅವರೂ ಸಹ ಈ ಆಹ್ವಾನವನ್ನು ಸರಾಸಗಟಾಗಿ ನಿರಾಕರಿಸಿದ್ದರು. ಅದನ್ನೂ ಸಹ ಖುರ್ಹಾನಿನ ಸುರಾ ಸಂಖ್ಯೆ ೯/೮೧ರಲ್ಲಿ ಆಸಕ್ತರು ಗಮನಿಸಬಹುದು.


ಹತ್ತು ಹದಿನೈದು ದಿನಗಳನ್ನ ತಬೂಕಿನಲ್ಲಿ ಕಳೆದು ಮರಳಿ ಮದೀನಾದ ಹಾದಿ ಹಿಡಿದಿದ್ದಾಗ ಅವನ ಸಾಗುವಿಕೆಯ ಸುಳಿವು ಹಿಡಿದ ಸ್ಥಳಿಯ ಅದ್ ದಿರಾರ್ ಬುಡಕಟ್ಟಿನ ಮಂದಿ ಅವನನ್ನು ಭೇಟಿ ಮಾಡಿ, ತಾವು ನೂತನವಾಗಿ ನಿರ್ಮಿಸಿದ ಮಸೀದಿಗೆ ಭೇಟಿ ನೀಡುವಂತೆ ವಿನಂತಿಯ ಆಹ್ವಾನ ಕೊಟ್ಟರು. ಅಸ್ವಸ್ಥರು ಹಾಗೂ ಬಡವರಿಗಾಗಿ ನಿರ್ಮಿಸಿಲಾಗಿದ ಅಲ್ಲಿ ಮಹಮದ್ ತಂಗಿ ಪ್ರಾರ್ಥನೆಯ ವಿಧಿಗಳನ್ನ ನಿರ್ವಹಿಸಲಿ ಅನ್ನುವ ಮನೋಭಿಲಾಶೆ ಅವರೆಲ್ಲರಿಗೂ ಇತ್ತು. ಆದರೆ ದೈವವಾಣಿಯ ಪ್ರಕಾರ ಮಹಮದ್ ಆ ಮಸೀದಿ ಅವಿಶ್ವಾಸಿಗಳ ನಿರ್ಮಾಣವಾಗಿದೆ ಎಂದು ಸಾರಿ ಆ ಆಹ್ವಾನವನ್ನು ತಿರಸ್ಕರಿಸಿದ. ಸಾಲದ್ದಕ್ಕೆ ಅದನ್ನು ಕೆಡವಲು ಅಲ್ಲಾಹನು ಸಂದೇಶ ರವಾನಿಸಿದ್ದಾನೆ ಎಂದಾತ ತಿಳಿಸಿ ಅವರೆಲ್ಲರನ್ನೂ ಕಂಗಾಲುಗೊಳಿಸಿಬಿಟ್ಟ! ಈ ದೈವ ಸಂದೇಶದ ಆದೇಶದಂತೆ ಆತನ ಸೈನಿಕರು ಆ ಹೊಚ್ಚಹೊಸ ಇಡಿ ಮಸೀದಿಯನ್ನೆ ಸುಟ್ಟು ಭಸ್ಮ ಮಾಡಿ ಅದರ ಕುರುಹುಗಳನ್ನೆಲ್ಲಾ ಇನ್ನಿಲ್ಲವಾಗಿಸಿಬಿಟ್ಟರು! ಅದನ್ನೆ ಮುಸಲ್ಮಾನ ಪ್ರಪಂಚ ಇಂದು 'ಕೇಡಿನ ಮಸೀದಿ' ಅಥವಾ 'ಮಸ್ಝಿದ್ ಎ ದೀದಾರ್' ಎಂದು ಗುರುತಿಸುತ್ತದೆ.


ದೂಮಾದಲ್ಲಿನ ಕ್ರೈಸ್ತ ರಾಜ ಒಕೈಧೀರ್ ಹಾಗೂ ಅವನ ಸಹೋದರರನ್ನು ಸೆರೆ ಹಿಡಿಸಿ ಖಾಲಿದ್ ಅವರ ಖಜಾನೆಯ ದೋಚಿದ ಅಪಾರ ಸಂಪತ್ತಿನೊಂದಿಗೆ ಮದೀನಕ್ಕೆ ನಡೆಸಿಕೊಂಡು ಬಂದಿದ್ದ. ಅಲ್ಲಿ ಮಹಮದ್ ಅವರನ್ನ ಇಸ್ಲಾಮಿಗೆ ಮತಾಂತರ ಮಾಡಿ ಅವರಿಬ್ಬರ ಜೀವವನ್ನ ಉಳಿಸಿದ. ಇದೆ ಸಮಯದಲ್ಲಿ ಮದೀನಾದಲ್ಲಿ ತನ್ನನ್ನ ಧಿಕ್ಕರಿಸಿ ನಡೆದಿದ್ದ ಅವಿಶ್ವಾಸಿಗಳ ಬಗ್ಗೆ ಮಹಮದನ ಮನಸ್ಸಿನಲ್ಲಿ ಸುಶುಪ್ತವಾಗಿದ್ದ ಸಿಟ್ಟು ದೈವವಾಣಿಯ ರೂಪದಲ್ಲಿ ಹೊರ ಹೊಮ್ಮಿ ಬಂತು! ಅವರ ಆಶಾಢಭೂತಿ ನಡುವಳಿಕೆಗಳನ್ನ, ಉದಾಸೀನತೆಯ ಉತ್ತುಂಗವನ್ನ ಹಾಗೂ ಮಹಮದನ ದಂಡಯಾತ್ರೆಯ ಬಗ್ಗೆ ಅವರು ಪ್ರಕಟ ಪಡಿಸಿದ ನಿರುತ್ಸಾಹವನ್ನ ದೈವವಾಣಿಯ ಮೂಲಕ ಖುರ್ಹಾನಿನ ಸುರಾ ಸಂಖ್ಯೆ ೯/೩೮, ೫/೪೧,೪೨,೮೨ ಹಾಗೂ ೮೫ರಲ್ಲಿ ಮಹಮದ್ ಕಟುವಾಗಿ ಖಂಡಿಸಿದ.



ಇನ್ನು ಮರುಭೂಮಿಯ ಬೆದಾವಿನರ ಅವಿಧೇಯತೆಯ ಬಗೆಗಂತೂ ಎಲ್ಲೆ ಮೀರಿದ ಹತಾಶೆಯ ಸಿಟ್ಟನ್ನ ಮಹಮದ್ ಹೊರಹಾಕಿದ. ಅವರನ್ನ ಚಂಚಲಚಿತ್ತ, ಹಟಮಾರಿ, ಅಜ್ಞಾನಿ ಹಾಗೂ ಅವಿಶ್ವಾಸಿಗಳೆಂದು ನೇರವಾಗಿ ತನ್ನ ಸುರಾಗಳಲ್ಲಿ ದೈವದ ಮಾತಿನ ಮೊಹರಿನೊಂದಿಗೆ ಆತ ಬೈದ. ಅವರ ಅಂತ್ಯ ನರಕದ ಸುಡು ಜ್ವಾಲೆಯಾಗಿದೆ ಎಂದು ಶಾಪವಿತ್ತ. ಅವರನ್ನು ಹೇಯಕರವಾದ ಜನಾಂಗದವರು ಕೊಳಕರು ಹಾಗೂ ಅವಲಕ್ಷಣದ ಅಧಮರು ಎಂದೆಲ್ಲಾ ನಿಂದಿಸಿದ ಸುರಾ ಸಂಖ್ಯೆ ೯/೯೦-೯೧ನ್ನು ಆತ ದೇವರ ಹೆಸರಿನಲ್ಲಿ ತಾನೆ ಸೃಷ್ಟಿಸಿ ಪಡೆದುಕೊಂಡ! ಈ ಸಿಟ್ಟಿನ ಉರಿ ಅಷ್ಟಕ್ಕೆ ಶಮನವಾಗದೆ ಅವರು ತಮ್ಮ ಉಪಯೋಗಕ್ಕೆಂತು ಕೋಬಾ ನಗರದಲ್ಲಿ ನಿರ್ಮಿಸಿಕೊಂಡಿದ್ದ ಮಸೀದಿಯನ್ನ ಕಾರಣವೆ ಇಲ್ಲದೆ ಕೆಡವಿಸುವ ಮಟ್ಟಿಗೆ ಜ್ವಲಿಸಿ ಅರ್ಭಟಿಸಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೮೩೭ರಲ್ಲಿ. ಮಹಮದನ ಅಸಂತೋಷ ಒಂದೊಮ್ಮೆ ಅವಿಶ್ವಾಸಿಗಳೆಂದು ಆತನಿಂದ ಕರೆಸಿಕೊಂಡು ಆಶಾಢಭೂತಿಗಳೆಂದು ಜರಿಸಿಕೊಂಡವರ ಮೇಲೆ ಹರಿದರೆ ಅದರ ಪರಿಣಾಮ ಏನಾಗಬಹುದು ಅನ್ನುವುದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿತ್ತು.



ಮದೀನಾದ ಗಣ್ಯ ಹಾಗೂ ಮಹಮದನ ಕಪಟದ ಪ್ರಬಲ ಟೀಕಾಕಾರನೂ ಆಗಿದ್ದ ಅಬ್ದುಲ್ಲಾ ಇಬ್ನ್ ಒಬೈ'ನ ಮರಣ ಈ ತಬೂಕ್ ಯಾತ್ರೆಯಿಂದ ಮಹಮದ್ ಹಿಂದಿರುಗಿದ ಎರಡು ತಿಂಗಳ ಅನಂತರ ಆಯಿತು. ಅನೇಕ ಸಂದರ್ಭಗಳಲ್ಲಿ ಯಹೂದಿಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದ ಅಬ್ದುಲ್ಲಾ ಇಬ್ನ್ ಒಬೈ ಅವರ ಪರವಾಗಿ ಮಹಮದನ ಗೂಂಡಾಗಿರಿಯನ್ನ ವಿರೋಧಿಸಿ ವಾದಿಸಿದ್ದ. ಅವರ ವಿನಾಶ ಹಾಗೂ ಸಾಮೂಹಿಕ ಕೊಲೆಯನ್ನ ತಪ್ಪಿಸಿದ್ದು ಮಹಮದನಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಅದೇನೆ ಅಸಂತೋಷ ಮನದೊಳಗೆ ಮನೆ ಮಾಡಿದ್ದರೂ ಸಹ ಮೇಲ್ನೋಟಕ್ಕೆ ಆತನೊಂದಿಗೆ ಸಭ್ಯವಾಗಿ ಸೌಹಾರ್ದತೆಯೊಂದಿಗೆ ಮಹಮದ್ ವ್ಯವಹರಿಸುತ್ತಿದ್ದ. ಇದಕ್ಕೆ ಕಾರಣ ಅತಿ ಸರಳವಾಗಿತ್ತು. ಅಬ್ದುಲ್ಲಾ ಇಬ್ನ್ ಒಬೈ ಕೂಡಾ ಅಪಾರ ಬೆಂಬಲಿಗರನ್ನ ಮದೀನಾ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಹೊಂದಿದ್ದು ಅವರೆಲ್ಲಾ ಅವನನ್ನು ಅಪಾರವಾಗಿ ಗೌರವಿಸುತ್ತಿದ್ದರು ಹಾಗೂ ಯಾವುದೆ ಕಾರಣಕ್ಕೂ ಅಂತಹ ಪ್ರಬಲನೊಬ್ಬನನ್ನ ತನ್ನ ಸ್ಥಳಿಯ ವಿರೋಧಿಯನ್ನಾಗಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಮಹಮದನೂ ಆಗ ಇರಲಿಲ್ಲ. ಹೀಗಾಗಿ ಅತಿ ಚಾಣಾಕ್ಷತೆಯಿಂದ ಆತನೊಂದಿಗೆ ಒಂದು ಅನುಬಂಧದ ಜಾಲವನ್ನ ಹೆಣೆದು ಅದು ಎಂದಿಗೂ ಕಡಿದು ಬೀಳದಂತೆ ಮಹಮದ್ ಮುಂಜಾಗ್ರತೆ ವಹಿಸಿದ್ದ.



ಆದರೆ ಈಗ ಅವನ ನೈಸರ್ಗಿಕ ಅಂತ್ಯವೂ ಆಗಿ ಹೋಗಿ ಆಂತರಿಕ ವಲಯದಲ್ಲಿ ಮಹಮದನ ಪಾಲಿನ ವಿರೋಧಿಗಳೆಲ್ಲಾ ಸರಾಸಗಟಾಗಿ ನಿರ್ನಾಮವಾಗಿ ಹೋಗಿದ್ದರು. ಆತನ ಧರ್ಮ ವಿಸ್ತರಣೆಯ ಹೆಸರಿನ ತೋಳ್ಬಲ ಪ್ರದರ್ಶನಕ್ಕೆ ಈಗ ಇನ್ಯಾವ ಅಡ್ಡಿ ಆತಂಕಗಳೂ ಉಳಿದಿರಲಿಲ್ಲ. ಇಸ್ಲಾಮಿನ ಹಾದಿ ಈಗ ಸುಗಮವಾಗಿತ್ತು. ಮಹಮದ್ ಮದೀನಾದ ಸರ್ವಾಧಿಕಾರಿಯಾದದ್ದು ಹೀಗೆ. ಅಲ್ಲಿಂದ ಹೊರಟ ಆತನ ಕೀರ್ತಿಯ ಕಹಳೆ ಅರೇಬಿಯಾದ ದಕ್ಷಿಣದ ತುದಿಯಿಂದ ಹಿಡಿದು ಸಿರಿಯಾದ ಗಡಿ ಭಾಗದವರೆಗೂ ಅನುರಣಿಸಿತು. ಈ ಕಾರಣದಿಂದ ಇಸ್ಲಾಮಿನ ಅನುಯಾಯಿಗಳಿಗಂತೂ ಇನ್ನು ಧರ್ಮ ಸಂಸ್ಥಾಪನೆಗೆ ಆಯುಧಗಳ ಅಗತ್ಯ ಅಷ್ಟಾಗಿ ಕಂಡು ಬಾರದೆ ಅವರೆಲ್ಲಾ ಅವನ್ನ ಮಾರಲು ಸಿದ್ಧರಾದರು! ಆದರೆ ಇದರಿಂದ ವಿಚಲಿತನಾದ ಮಹಮದ್ ಹಾಗೆಲ್ಲಾ ಹುಚ್ಚಾಟಕ್ಕಿಳಿಯಬಾರದಾಗಿ ಅವರೆಲ್ಲರನ್ನೂ ನಿರ್ಬಂಧಿಸಿದ. ಕ್ರೈಸ್ತ ವಿರೋಧಿಗಳಲ್ಲಿ ಕೊಟ್ಟ ಕೊನೆಯವನು ಜೀವಂತವಾಗಿರುವವರೆಗೂ ತನ್ನ ಯಾವೊಬ್ಬ ಅನುಯಾಯಿಯೂ ಸಹ ಧರ್ಮ ಸಂಗ್ರಾಮವನ್ನ ನಿಲ್ಲಿಸಬೇಕಾಗಿಲ್ಲ!' ಎನ್ನುವ ಜೆಹಾದಿನ ಕರೆಯನ್ನಾತ ನೀಡಿದ. ಹೀಗಾಗಿ ಸತತವಾಗಿ ಯುದ್ಧ ಸನ್ನದರಾಗಿಯೆ ಉಳಿಯಬೇಕೆಂಬ ಆಜ್ಞೆ ಆತನಿಂದ ಹೊರಟಿತು.



ಆದರೆ ಎಲ್ಲಾ ತನ್ನ ಅನುಯಾಯಿಗಳೂ ಸಹ ರಣರಂಗದಲ್ಲಿ ಕಾರ್ಯಾಚರಿಸುವುದು ಖಡ್ಡಾಯವಲ್ಲ ಎಂತಲೂ ಆತ ಇದೆ ಸಂದರ್ಭದಲ್ಲಿ ತಿಳಿಸಿದ. ಕೆಲವು ಅಕ್ಷರಸ್ಥರೂ ಆದ ತನ್ನ ಬುದ್ಧಿವಂತ ಅನುಯಾಯಿಗಳು ಧಾರ್ಮಿಕ ವ್ಯಾಸಾಂಗದಲ್ಲಿ ತೊಡಗಿ ತನ್ನ ಉಪದೇಶಾಮೃತವನ್ನ ಸತತವಾಗಿ ಅಧ್ಯಯನ ಮಾಡುತ್ತಾ ಮನನ ಮಾಡಿಕೊಳ್ಳಬೇಕೆಂದು ಆತ ಆದೇಶಿದ. ಅವರ ಧರ್ಮ ಬೋಧನೆಯ ಅತ್ಯುತ್ತಮ ಅಂಶಗಳನ್ನ ಇನ್ನಿತರ ಶ್ರೀಸಾಮಾನ್ಯರ ಮನದಲ್ಲೂ ಅಗಾಗ ಬಿತ್ತುತ್ತಾ, ಧರ್ಮವನ್ನ ಉಳಿಸಿ ಬೆಳೆಸುವ ಹೊಣೆಗಾರಿಕೆ ಅಂತಹ ಜ್ಞಾನ ಜಿಜ್ಞಾಸುಗಳದ್ದಾಗಿರುತ್ತದೆ ಎಂದಾತ ವಿವರಿಸಿದ. ಖುರ್ಹಾನಿನ ಸುರಾ ಸಂಖ್ಯೆ ೯/ ೧೨೩ರಲ್ಲಿ ಈ ಹಿತೋಪದೇಶವನ್ನು ಆಸಕ್ತರು ಗಮನಿಸಬಹುದು.



( ಇನ್ನೂ ಇದೆ.)

Friday, November 27, 2015

ವಲಿ - ೩೬









ಮೊದಲೆ ಸ್ಪಷ್ಟ ಪಡಿಸಿದ್ದಂತೆ ಮೆಕ್ಕಾ ಒಂದು ಸರ್ವಧರ್ಮ ಕೇಂದ್ರವಾಗಿತ್ತು. ಧಾರ್ಮಿಕವಾಗಿ ಅದು ಇಂದು ಮುಸಲ್ಮಾನರ ಏಕಸಾಮ್ಯಕ್ಕೆ ಒಳಪಟ್ಟಿದೆ ಅನ್ನುವ ಕ್ಷುಲ್ಲಕ ಕಾರಣಕ್ಕೆ ಯಾರಾದರೂ ಅದನ್ನ ಹೀಗಳೆದು ಮಾತನಾಡುವುದು ಅಕ್ಷಮ್ಯ. ಯಾರಿಗೆ ಗೊತ್ತು? ಇರುಳು ಹರಿದು ಮತ್ತೆ ಬೆಳಕಾಗುವಂತೆ ಮರಳಿ ಅಲ್ಲಿ ಸರ್ವಧರ್ಮೀಯರೂ ಪ್ರವೇಶಿಸುವ ಕಾಲವೂ ಸನ್ನಿಹಿತವಾಗುತ್ತಿರಬಹುದು. ಅಲ್ಲಿ ಮುಸಲ್ಮಾನೇತರರಿಗೆ ಖಡ್ಡಾಯವಾಗಿ ಪ್ರವೇಶ ನಿಷೇಧಿಸಿರುವ ಇಸ್ಲಾಮಿನ ಗೂಂಡಾಗಿರಿಗೂ ಒಂದು ಕೊನೆ ದಿನ ಮುಂದೆ ಇದ್ದಿರಬಹುದು. ಈಗ ವಿಷಯಕ್ಕೆ ಬರೋಣ. ಪವಿತ್ರ ನಗರಿಯಾಗಿ ಹೊರ ಹೊಮ್ಮಿದ್ದ ಮೆಕ್ಕಾದ ಕಾಬಾ ಗುಡಿಯ ಮೇಲಿನ ಅಧಿಪತ್ಯವನ್ನ ವಂಶಪಾರಂಪರ್ಯವಾಗಿ ಸೌರಮಾನ ಪಂಚಾಂಗ ಹಾಗೂ ದಿನಮಾನಗಳ ಅನುಸಾರ ಧಾರ್ಮಿಕ ವಿಧಿವಿಧಾನಗಳನ್ನು ನಡೆಸುವ ಜವಾಬ್ದಾರಿಯೊಂದಿಗೆ ಖುರೈಷಿ ಕುಲಸ್ಥರು ಪಡೆದಿದ್ದರು. ಈಗ ಅವೆಲ್ಲವೂ ಬಲಾತ್ಕಾರವಾಗಿ ಮಹಮದನ ವಶಕ್ಕೆ ಹೋಗಿದ್ದವು. ಅವನು ಇಚ್ಛಿಸಿದವರಿಗೆ ಅಲ್ಲಿನ ಜವಾಬ್ದಾರಿಗಳನ್ನ ಹೊರಿಸಲು ಸ್ವತಂತ್ರ್ಯನಾಗಿದ್ದನು. ಅದನ್ನ ಪ್ರಶ್ನಿಸುವ ಎದೆಗಾರಿಕೆ ಅಲ್ಲಿನ ಇನ್ಯಾರಿಗೂ ಉಳಿದಿರಲಿಲ್ಲ.



ಹಾಗಂತ ಆತ ಅಲ್ಲಿನ ಯಾವುದೆ ಪ್ರಾಚೀನ ಧಾರ್ಮಿಕ ವಿಧಿ ವಿಧಾನಗಳನ್ನಾಗಲಿ - ಕಾಯ್ದೆ ಕಟ್ಟಳೆಗಳನ್ನಾಗಲಿ ಎಂದೂ ಬದಲಿಸುವ ಗೋಜಿಗೆ ಹೋಗಲಿಲ್ಲ. ವಿಗ್ರಹಾರಾಧನೆ ಇದ್ದ ಇಸ್ಲಾಂ ಪೂರ್ವದ ಆಚರಣೆಗಳನ್ನೆ ವಿಧಿವತ್ತಾಗಿ ಮುಂದೆಯೂ ಆಚರಿಸಲು ಆತ ಅನುವು ಮಾಡಿಕೊಟ್ಟಿದ್ದ. ಅವನ್ನೆ ಅಷ್ಟಿಷ್ಟು ತಿದ್ದಿ ತೀಡಿ ತನ್ನ ಇಸ್ಲಾಮಿನಲ್ಲಿಯೂ ಅಳವಡಿಸಿಕೊಳ್ಳುವ ಜಾಣ್ಮೆಯನ್ನಾತ ಮೆರೆದ. ಹಿಂದಿನಿಂದಲೂ ಸುತ್ತಮುತ್ತಲಿನ ಬುಡಕಟ್ಟಿನವರು ನಂಬಿ ಆಚರಿಸಿಕೊಂಡು ಬರುತ್ತಿದ್ದ ಯಾವುದೆ ಆರಾಧನೆ ಹಾಗೂ ಹರಕೆಯ ವಿಧಿವಿಧಾನಗಳಿಗೂ ಹೀಗಾಗಿ ಯಾವುದೆ ಚ್ಯುತಿ ಬರಲಿಲ್ಲ. ಹಿಂದಿನ ಧಾರ್ಮಿಕ ರೀತಿನೀತಿಗಳನ್ನ ತ್ಯಜಿಸದೆ, ಅಲ್ಲಿನ ಯಾವುದೆ ನಂಬಿಕೆಯ ಆಚರಣೆಗಳಿಗೆ ಅಡ್ಡಿ ಪಡಿಸದೆ ಆತ ಭಾವನೆಗಳಿಗೆ ಧಕ್ಕೆ ಮಾಡದೆ ತನ್ನ ನೂತನ ಧರ್ಮದಲ್ಲೂ ಅವನ್ನೆಲ್ಲಾ ಅಳವಡಿಸಿದ್ದು ಅವನ ನೂತನ ಹಿಂಬಾಲಕರಿಗೆಲ್ಲಾ ಸರ್ವಸಮ್ಮತವಾಗಿತ್ತು. ಇದರ ಪರಿಣಾಮವಾಗಿಯೆ ಅರೆಬಿಯಾ ಪ್ರಸ್ಥಭೂಮಿಯಲ್ಲಿ ಇಸ್ಲಾಮ್ ಬಲವಾಗಿ ಬೇರೂರಿತು.


ಇಸ್ಲಾಮಿನ ಸ್ಥಾಪನೆಯೊಂದಿಗೆ ಅದನ್ನ ಒಪ್ಪಿ ಅಪ್ಪಿ ನಡೆದವರೆಲ್ಲಾ ಏಕ ದೈವತ್ವ ಹಾಗೂ ಮಹಮದನ ಪ್ರವಾದಿತ್ವವನ್ನು ಸ್ವೀಕರಿಸಿ ಮುನ್ನಡೆದರೂ ಸಹ ಅವರು ಆತನ ಧರ್ಮೇತರ ಜಾತ್ಯತೀತ ಅಧಿಪತ್ಯಕ್ಕೂ ಸಹ ತಲೆಬಾಗಲೆ ಬೇಕಾಯಿತು. ಧರ್ಮಪಾಲನೆಯ ಜೊತೆಗೆ ಧಾರ್ಮಿಕ ಕಾಣಿಕೆಯನ್ನೂ ಸಹ ಒಪ್ಪಿಸುವ ಕ್ರಮ ಕಟ್ಟುನಿಟ್ಟಿನಿಂದ ಜಾರಿಗೆ ಬಂತು. ಅದು ಕಪ್ಪದ ರೂಪದಲ್ಲಿರದೆ ಪ್ರತ್ಯೇಕವಾಗಿ ವರ್ಷಕ್ಕೊಂದಾವರ್ತಿ ತಮ್ಮ ದುಡಿಮೆಯ ಒಟ್ಟು ಪಾಲಿನ ನಿಗದಿತ ಪರಿಮಾಣವನ್ನು ಧಾರ್ಮಿಕ ದೇಣಿಗೆಯಾಗಿ ನೀಡುವ ಹೊಸ ಕ್ರಮವಾಗಿತ್ತು. ಆದರೆ ವಿಧರ್ಮೀಯರಾದ ಯಹೂದಿ, ಕ್ರೈಸ್ತ ಹಾಗೂ ಇನ್ನಿತರ ಮೂರ್ತಿಪೂಜಕ ಬುಡಕಟ್ಟಿನವರು ಮಾತ್ರ ಈಗ ಒತ್ತಾಯದ ತಲೆಗಂದಾಯವಾಗಿ ಕಟ್ಟುನಿಟ್ಟಿನ ಕಪ್ಪ ಒಪ್ಪಿಸಲೇ ಬೇಕಾಗಿ ಬಂತು.

ಮಹಮದ್ ಮೆಕ್ಕಾದ ನೂತನ ಅಧಿಪತಿಯಾದ ನಂತರ ಈ ಎಲ್ಲಾ ಕಂದಾಯಗಳನ್ನ ಕಾಲಕಾಲಕ್ಕೆ ಕಟ್ಟುನಿಟ್ಟಾಗಿ ಸಂಗ್ರಹಿಸಲು ಅಧಿಕಾರಿಗಳನ್ನ ಅತನ್ನ ಪರವಾಗಿ ನೇಮಿಸಿದ ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೮೨೧ರಲ್ಲಿ. ಅದರಲ್ಲಿ ಆ ಅಧಿಕಾರಗಳ ವಿವರವಾದ ಪಟ್ಟಿಯನ್ನೆ ಮುಬಾರಖಿ ನೀಡಿದ್ದು ಆಸಕ್ತರು ಗಮನಿಸಬಹುದು. ಈ ಕಂದಾಯಗಳಿಗೆ ಮಹಮದನ ಅನುಯಾಯಿಗಳಿದ್ದ ಪ್ರದೇಶಗಳಲ್ಲಿ ಔಚಿತ್ಯಪೂರ್ಣವಾದ ಸ್ವಾಗತ ದೊರೆತು ಸ್ವ ಇಚ್ಛೆಯಿಂದಲೆ ಕಂದಾಯ ಸಲ್ಲಿಸುವ ಪರಿಪಾಠ ಆರಂಭವಾಯಿತು. ಆದರೆ ಎಲ್ಲಾ ಕಡೆಯಲ್ಲಿಯೂ ಇದೆ ಪರಿಯಲ್ಲಿ ಅಧಿಕಾರಿಗಳು ಹೃತ್ಪೂರ್ವತೆಯನ್ನ ಕಾಣಲಾಗಲಿಲ್ಲ. ಪ್ರತಿರೋಧಗಳನ್ನೂ ಸಹ ಆಲ್ಲಿ ಅವರು ಕಾಣಬೇಕಾಗಿ ಬಂತು. ಬೆನ್ ತಮೀಮ್ ಬುಡಕಟ್ಟಿನವರೂ ಹೀಗೆ ಸೆಡ್ಡು ಹೊಡೆದವರಲ್ಲಿ ಒಬ್ಬರಾಗಿದ್ದರು. ಕಂದಾಯ ಸಂಗ್ರಹಕ್ಕೆ ಅಧಿಕಾರಗಳು ಬಂದಿದ್ದಾಗ ಬಂಡೆದ್ದ ಬುಡಕಟ್ಟಿನವರು ಅವರನ್ನ ಮುಲಾಜಿಲ್ಲದೆ ಒದ್ದು ಓಡಿಸಿದರು.

ಸುದ್ದಿ ಮಹಮದನಿಗೆ ಬಂದು ಮುಟ್ಟಿದಾಗ ತನ್ನ ವಿರುದ್ಧ ಬಂಡೆದ್ದ ಅವರಿಗೆ ಬುದ್ಧಿ ಕಲಿಸಲು ಆತ ಒಂದು ದಂಡನ್ನ ಕಳುಹಿಸಿದ. ಒಯ್ಯಾನ್ ಎಂಬ ಆತನ ನೆಚ್ಚಿನ ಬಂಟನ ನೇತೃತ್ವದಲ್ಲಿ ನಡೆದ ಈ ಧಾಳಿ ಯಶಸ್ವಿಯಾಗಿ ಆತ ಅಲ್ಲಿ ಆಗ ಇದ್ದ ಗಂಡಸರು, ಹೆಂಗಸರು, ಮಕ್ಕಳು ಮುದುಕರು ಹಾಗೂ ಜಾನುವಾರುಗಳೆನ್ನದೆ ಎಲ್ಲರನ್ನೂ ಸೆರೆ ಹಿಡಿದು ಮಹಮದನ ಬಳಿ ಕರೆತಂದ. ಇವರನ್ನೆಲ್ಲ ಸೆರೆಯಲ್ಲಿಡಲಾಗಿತ್ತು. ಅವರ ಪರವಾಗಿ ಬಿಡುಗಡೆಗಾಗಿ ಪ್ರಾರ್ಥಿಸಲು ಅಳಿದುಳಿದ ಬೆನ್ ತಮೀಮ್ ಬುಡಕಟ್ಟಿನ ಕೆಲವರು ನಿಯೋಗ ತಂದರು. ಅವರು ಈ ಹಿಂದೆ ಮಹಮದನ ಪರವಾಗಿ ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದವರೆ ಆಗಿದ್ದು ಆತನಿಂದ ಶೌರ್ಯಕ್ಕೆ ಶಾಭಾಷಗಿರಿಯನ್ನೂ ಸಹ ಪಡೆದಿದ್ದರು. ಅದನ್ನೆಲ್ಲಾ ಆತನಿಗೆ ವಿವರವಾಗಿ ನೆನಪಿಸಿಕೊಡಲು ಅವರು ನಿರ್ಧರಿಸಿದರು. ಬೆದಾವಿನರಲ್ಲಿ ಒಂದು ಉಪ ಬುಡಕಟ್ಟಾಗಿದ್ದ ಬೆನ್ ತಮೀಮರು ಸ್ವಭಾವತಃ ಒರಟರಾಗಿದ್ದರು.



ಅವರ ಸಂಸ್ಕೃತಿ, ಭಾಷೆ ಹಾಗೂ ನಡೆನುಡಿ ತೀರಾ ಕಚ್ಚಾವಾಗಿದ್ದು ಅವರೆಲ್ಲಾ ಮಹಮದನ ಮನೆಯ ಮುಂದೆ ನಿಂತು 'ಏ ಮಹಮದ್! ಹೊರಗೆ ಬಾ. ನಮ್ಮ ಬಳಿಗೆ ಬಾ' ಎಂದು ಬೊಬ್ಬಿಡಲು ಆರಂಭಿಸಿದರು. ಮಹಮದ್ ಈಗೀಗ ಅರೇಬಿಯಾದಲ್ಲಿಯೆ ಒಬ್ಬ ಗಣ್ಯವ್ಯಕ್ತಿಯಾಗಿ ಗುರುತಿಸಪಡುತ್ತಿದ್ದ. ಅವನನ್ನು ಕೇವಲ ಒಬ್ಬ ಸಾಮಾನ್ಯ ದಾರಿಹೋಕನಂತೆ ಹೀಗೆ ಅಸಭ್ಯವಾಗಿ ಕೂಗಿ ಕರೆಯುವುದು ಅವನಿಗೆ ಅಸಹನೀಯವೆನ್ನಿಸಿತು. ಅವನು ಸಿಟ್ಟಿನಿಂದಲೆ ಹೊರಬಂದ. ಮಧ್ಯಾಹ್ನದ ಪ್ರಾರ್ಥನೆಯ ಹೊತ್ತು ಸಮೀಪವಾಗಿದ್ದರಿಂದ ಆತ ನಮಾಝ್ ಮುಗಿಸಿ ಬಂದು ಮಸೀದಿಯ ಪಡಸಾಲೆ ಪಕ್ಕದ ಕೋಣೆಯಲ್ಲಿ ಬೆನ್ ತಮೀಮ್ ಪ್ರತಿನಿಧಿಗಳ ಅಹವಾಲನ್ನ ಆಲಿಸಿದ. ಅವರು ವಿಚಿತ್ರವಾದ ಸವಾಲೊಂದನ್ನ ಅವನ ಮುಂದೊಡ್ಡಿದರು. ಮದೀನಾ ನಗರದಲ್ಲಿಯೆ ವಾಕ್ ಸಾಮರ್ಥ್ಯವಿರುವ ಯಾರಾದರೂ ತಮ್ಮ ಕವಿತ್ವದ ಪ್ರತಿಭಾ ಪ್ರದರ್ಶನ ಮಾಡಬಹುದಂತಲೂ, ಅವರು ಆತನನ್ನ ಕವಿತ್ವದಲ್ಲಿ ಸೋಲಿಸಿದರೆ ತಮ್ಮವರನ್ನ ಬಿಡಬೇಕಂತಲೂ ಅವರು ಪಂಥಾಹ್ವಾನ ಕೊಟ್ಟರು. ಮಹಮದ್ ಈಗ ಇಕ್ಕಟ್ಟಿನಲ್ಲಿ ಸಿಕ್ಕಿ ಬಿದ್ದ. ಈ ನೂತನ ಮೇಲಾಟದ ವಿಧಾನ ಅವನ ಪಾಲಿಗಂತೂ ಹೊಸತೆ ಆಗಿತ್ತು. ಆದರೆ ತನ್ನ ಮುಖ ಉಳಿಸಿಕೊಳ್ಳಲು ಕಡೆಗೂ ಆತ ಈ ವಿಲಕ್ಷಣ ಸ್ಪರ್ಧೆಗೆ ಸಮ್ಮತಿಸಿದ.


ಬೆನ್ ತಮೀಮ್ ಪಾಳಯದಿಂದ ಹಲವಾರು ಕವಿ ಪುಂಗವರು ತಮ್ಮಾ ಕವಿತಾ ಸಾಮರ್ಥ್ಯವನ್ನ ತೋರಿಸಿದರು. ಅವರಿಗೆ ಪೈಪೋಟಿಯಾಗಿ ಮದೀನಾದ ವಿದ್ವನ್ಮಣಿಗಳು ಹಾಗೂ ಕವಿ ಸರ್ವೋತ್ತಮರೂ ಸಹ ತಮ್ಮೆಲ್ಲಾ ಪ್ರತಿಭೆಗಳನ್ನ ಮೆರೆದರು. ಮಹಮದನ ಆಪ್ತ ಹಾಗೂ ಆತನ ಸೂಳೆ ಮೇರಿಯ ಮೂಲಕ ಶಡ್ಡಕನಾಗುತ್ತಿದ್ದ ಕವಿ ಹಸನ್ ಭಾವಪೂರ್ಣವಾಗಿ ಉತ್ತಮವಾದ ಕವಿತೆಯನ್ನ ತನ್ಮಯತೆಯಿಂದ ಪಠಿಸಿದಾಗ ನೆರೆದಿದ್ದವರೆಲ್ಲಾ ಆನಂದಾಶ್ಚರ್ಯಗಳಿಂದ ಹರ್ಷೋದ್ಗಾರ ಮಾಡಿದರು. ವಿರೋಧಿ ಬೆನ್ ತಮೀಮರೂ ಅದನ್ನ ಉತ್ಕೃಷ್ಟ ರಚನೆ ಎಂದು ಒಪ್ಪಿಕೊಂಡು ತಲೆದೂಗಿದರು. ಅವರ ಈ ಪ್ರತಿಕ್ರಿಯೆಯಿಂದ ಸಂತುಷ್ಟನಾದ ಮಹಮದ್ ಮೊತ್ತಮೊದಲ ಬಾರಿಗೆ ಮನಃಪೂರ್ವಕವಾಗಿ ಎಲ್ಲಾ ಬಂಧಿತ ಜನ ದನ ಜಾನುವಾರುಗಳನ್ನ ಬಿಡುಗಡೆಗೊಳಿಸಿದ. ಅವರ ಪ್ರತಿಭೆಗೆ ಮೆಚ್ಚಿ ಉದಾರವಾಗಿ ಕೈತುಂಬ ಕೊಡುಗೆಗಳನ್ನೂ ಸಹ ದಯಪಾಲಿಸಿ ಊರಿಗೆ ಕಳುಹಿಸಿಕೊಟ್ಟ. ಇದರಿಂದ ಒರಟ ಬೆನ್ ತಮೀಮರೂ ಆನಂದಿತರಾಗಿ ಅವರಲ್ಲಿ ಇಸ್ಲಾಮ್ ಸ್ವೀಕರಿಸದೆ ತಟಸ್ಥರಾಗಿದ್ದವರೂ ಸಹ ಈಗ ಮತಾಂತರವಾಗಿ ಮುಸಲ್ಮಾನರಾದರು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಕಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೨೨೬ರಲ್ಲಿ.



ಕ್ಷಮಿಸಿ ಬೀಳ್ಕೊಟ್ಟರೂ ಸಹ ಅವರ ಅಸಭ್ಯ ಭಾಷಾ ಪ್ರಯೋಗ ಹಾಗೂ ಅನಾಗರಿಕ ವರ್ತನೆಗಳನ್ನ ಮಹಮದ್ ಮರೆಯಲಿಲ್ಲ. ದೈವವಾಣಿಯನ್ನ ಪಡೇದುಕೊಂಡು ಒಂದು ಸುರಾದ ಮೂಲಕ ತನ್ನ ಅಂತಸ್ತಿನ ಬಗ್ಗೆ, ತನ್ನನ್ನ ಭೇಟಿ ಮಾಡಲು ಬರುವ ಅತಿಥಿಗಳು ಗಮನ ಕೊಡಬೇಕಾದ ಸಭ್ಯತೆಯ ಬಗ್ಗೆ ಹಾಗೂ ಅವರ ನಡೆನುಡಿಗಳ ಅಪೇಕ್ಷಣೀಯತೆಯ ಬಗ್ಗೆ ಕೆಲವು ಟೀಕೆ ಟಿಪ್ಪಣಿಗಳನ್ನ ಮಾಡಿದನು. ಸುರಾ ಸಂಖ್ಯೆ ೩೩/೫೩ರಲ್ಲಿ ಇದನ್ನ ಆಸಕ್ತರು ಗಮನಿಸಬಹುದು. ಇದೆ ಸಮಯದಲ್ಲಿ ಆತ ಕಪ್ಪ ವಸೂಲಿಯ ಕಾರಣಕ್ಕೆ ಅನೇಕ ದಂಡಯಾತ್ರೆಗಳನ್ನೂ ಸಹ ಕೈಗೊಂಡ. ಇದರ ಜೊತೆಗೆ ಆತ ಕೆಲವು ವಿರೋಧಿಗಳನ್ನ ಮಣಿಸುವ ಉದ್ದೇಶವನ್ನೂ ಸಹ ಇಟ್ಟುಕೊಂಡು ಮುನ್ನಡೆದಿದ್ದ. ಜೆಡ್ಡಾದ ಮೇಲೆ ಆತ ನಡೆಸಿದ್ದ ಅಂತಹ ಒಂದು ದಂಡಯಾತ್ರೆ ಇಲ್ಲಿ ಅತಿಮುಖ್ಯವಾಗುತ್ತದೆ. ಅಬಿಸೀನಿಯಾದವರ ಜೊತೆಜೊತೆಗೆ ಜೆಡ್ಡಾದ ಜನತೆ ಕೂಡಾ ಆರಂಭದಲ್ಲಿ ಪ್ರತಿರೋಧಿಸಿ ಸೆಡ್ಡು ಹೊಡೆದು ನಿಂತಿದ್ದರು. ಅವರನ್ನ ಮಣಿಸಲು ಮಹಮದ್ ಒಂದು ದೊಡ್ಡ ಪಡೆಯನ್ನೆ ಅಲ್ಲಿಗೆ ಕಳುಹಿಸಿದ್ದ.


ಅದೆ ಹೊತ್ತಿನಲ್ಲಿ ತನ್ನ ಅಳಿಯ ಅಲಿಯನ್ನು ಸಹ ಬೆನ್ ಥೈ ಬುಡಕಟ್ಟಿನವರ ಮೇಲೆ ಛೂ ಬಿಟ್ಟ. ಅವರು ವಿಗ್ರಹಾರಾಧಕರಾಗಿದ್ದು ಒಂದು ಬೃಹತ್ ಗುಡಿ ಕಟ್ಟಿಕೊಂಡು ಅಲ್ಲಿ ತಮ್ಮ ದೇವರ ಪೂಜೆ ಪುನಸ್ಕಾರವನ್ನ ಶ್ರದ್ಧಾಭಕ್ತಿಯಿಂದ ಮುಂದುವರೆಸಿದ್ದರು. ಅಲಿ ತನ್ನ ಪಡೆಯೊಂದಿಗೆ ಅಲ್ಲಿಗೆ ಧಾಳಿ ಇಟ್ಟು ಬೆನ್ ಥೈ ಬುಡಕಟ್ಟಿನವರನ್ನು ಸೋಲಿಸಿ ಅವರ ಸಕಲ ಸಂಪತ್ತನ್ನೂ ದೋಚಿ ತಂದ. ಹಲವಾರು ಸ್ತ್ರೀ ಪುರುಷರು ಅಲಿಗೆ ಗುಲಾಮರಾಗಿ ಸೆರೆ ಸಿಕ್ಕಿದರು. ಇತಿಹಾಸ ಪ್ರಸಿದ್ಧ ಹಾಥಿಮ್ ತಾಯ್ ಪುತ್ರಿಯೂ ಈ ಸೆರೆಯಾಳುಗಳಲ್ಲಿ ಒಬ್ಬಳಾಗಿದ್ದಳು. ಅವಳ ಅಣ್ಣ ಆದಿ ಎಂಬಾತ ಅಲಿಯ ಪಡೆ ಅಲ್ಲಿಗೆ ನುಗ್ಗುವ ಸೂಚನೆ ದೊರೆತ ಕೂಡಲೆ ಸಿರಿಯಾದತ್ತ ಪಲಾಯನಗೈದಿದ್ದ.


ಹಾಥಿಮ್ ತಾಯ್'ನ ಪುತ್ರಿ ತನ್ನ ತಂದೆಯ ಪ್ರಾಮುಖ್ಯತೆಯನ್ನ ವಿವರಿಸಿ ಅಳುತ್ತಾ ಮಹಮದನ ಕೃಪೆಗಾಗಿ ಯಾಚಿಸಿದಳು. ಮಹಮದ್ ಕನಿಕರಗೊಂಡು ಸೂಕ್ತ ಗೌರವಾದರಗಳೊಂದಿಗೆ ಅವಳನ್ನ ಬಿಡುಗಡೆ ಮಾಡಿದ. ಅವಳಿಗೆ ಸೂಕ್ತ ಸಮ್ಮಾನ ಒದಗಿಸಿ ಉಡುಗೊರೆಗಳೊಂದಿಗೆ ಹಿಂದಕ್ಕೆ ಕಳುಹಿಸಿಕೊಟ್ತ. ಮನೆಮುಟ್ಟಿದ ಅವಳು ತನ್ನ ಅಣ್ಣನನ್ನು ಅರಸುತ್ತಾ ಸಿರಿಯಾದತ್ತ ತೆರಳಿದಳು. ಅಲ್ಲಿ ಕಾಣ ಸಿಕ್ಕ ಆದಿಯನ್ನ ಮನ ಒಲಿಸಿ ಮಹಮದನ ಬಳಿಗೆ ಕರೆ ತಂದಳು. ಮಹಮದ್ ಅವನನ್ನು ಮನ್ನಿಸಿ ಇಸ್ಲಾಮಿಗೆ ಸೇರಿಸಿಕೊಂಡ. ಮುಂದೆ ಮಹಮದನ ಪರವಾಗಿ ಆದಿ ಅನೇಕ ದಂಡಯಾತ್ರೆಗಳಲ್ಲಿ ಹೋರಾಡಿ ಪ್ರಸಿದ್ಧನೂ ಆದ. ಅವನ ಬುಡಕಟ್ಟಿನ ನೇತೃತ್ವವನ್ನ ಅವನಿಗೆ ಪಟ್ಟ ಕಟ್ಟಲಾಯಿತು. ಅಲ್ಲಿಗೆ ಇನ್ನೊಂದು ಪ್ರದೇಶ ಇಸ್ಲಾಮಿನ ತೆಕ್ಕೆಗೆ ಬಂತು.


ಇದೆ ಹೊತ್ತಿನಲ್ಲಿ ಮೆಕ್ಕಾದ ಕವಿಗಳಲ್ಲಿ ಒಬ್ಬನಾಗಿದ್ದ ಕಾಬ್'ನ ಕಥೆಯ ದೃಷ್ಟಾಂತವನ್ನು ಇತಿಹಾಸದ ಪುಟಗಳಲ್ಲಿ ನೀಡಲಾಗಿದೆ. ಅವನ ಸಹೋದರ ಮಹಮದನ ಇಸ್ಲಾಮಿಗೆ ಮತಾಂತರವಾಗಿದ್ದ. ಅದನ್ನ ಸಹಿಸದ ಕಾಬ್ ತನ್ನ ಅಣ್ಣನ ವಿರೋಧವಾಗಿಯೆ ಅಸಮಾಧಾನದಿಂದ ತನ್ನ ವಿರೋಧ ಹಾಗೂ ಶಂಕೆಯನ್ನ ತೋರ್ಪಡಿಸುತ್ತಾ ಕವನಗಳನ್ನ ರಚಿಸಿ ಸಿಟ್ಟು ತೋಡಿಕೊಂಡಿದ್ದ. ಈ ವಿಷಯ ಮಹಮದನ ಗಮನಕ್ಕೆ ಬರುತ್ತಲೂ ಆತನ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸುವ ಇಂಗಿತವನ್ನು ವ್ಯಕ್ತಪಡಿಸಿದ. ಇದರಿಂದ ಬೆದರಿದ ಕಾಬ್'ನ ಅಣ್ಣ ತಮ್ಮನತ್ತ ದೌಡಾಯಿಸಿ ಒಂದೋ ಇಲ್ಲಿಂದ ಓಡಿ ಪಾರಾಗು ಇಲ್ಲವೆ ಮಹಮದನ ಇಸ್ಲಾಮ್ ಸ್ವೀಕರಿಸಿ ಅವನ ಅನುಯಾಯಿಯಾಗಿ ತಲೆ ಉಳಿಸಿಕೋ ಎಂದು ಪರಿಪರಿಯಾಗಿ ಅವನನ್ನು ಓಲೈಸಿ ದಾರಿಗೆ ತರಲು ಯತ್ನಿಸಿದ. ಆರಂಭದಲ್ಲಿ ಕಾಬ ಅಣ್ಣನ ಮಾತನ್ನು ಕಾಬ್ ಸರಾಸಗಟಾಗಿ ಧಿಕ್ಕರಿಸಿದರೂ ಸಹ ಅನಂತರದ ಕೆಲವು ಕಹಿ ಘಟನೆಗಳ ಹಿನ್ನೆಲೆಯಲ್ಲಿ ಕಂಗಾಲಾಗಿ ಮಹಮದನನ್ನೆ ಖುದ್ದಾಗಿ ಕಂಡು ಈ ಸಂಕಟಗಳಿಂದ ಪಾರಾಗಲು ಮದೀನಾದತ್ತ ಹೊರಡುವುದು ಅನಿವಾರ್ಯವಾಯಿತು.


ಮಹಮದನ ಮಸೀದಿಯ ದ್ವಾರದಲ್ಲಿ ನಿಂತು ಗಟ್ಟಿ ಧ್ವನಿಯಲ್ಲಿ ಮಹಮದನ ಕಿವಿಗೆ ಬೀಳುವ ಹಾಗೆ "ಜುಹೈರ್'ನ ಕಾಬ್ ಎಂಬುವವ ನಿಮ್ಮ ಬಳಿ ಬಂದು ತಮ್ಮ ವಿಶ್ವಾಸ ಹಾಗೂ ಕ್ಷಮಾಪಣೆ ಬೇಡಲು ತಯ್ಯಾರಾಗಿದ್ದಾನೆ! ನಾನು ಅವನನ್ನು ಕರೆ ತಂದರೆ ಕ್ಷಮಿಸುವಿರೇನು?" ಎಂದು ಭಿನ್ನವಿಸಿದ. ಮಹಮದ್ ಅದನ್ನು ಸಮ್ಮತಿಸಿ ಅಸ್ತು ಎಂದ ಕೂಡಲೆ ಆತ ಇನ್ಯಾರು ಅಲ್ಲ ನಾನೆ ಎಂದು ಕಾಬ್ ಸ್ಪಷ್ಟ ಪಡಿಸಿದ! ತನ್ನ ಕೃತಜ್ಞತೆಯ ದ್ಯೋತಕವಾಗಿ ಒಂದು ಆಶು ಕವಿತೆಯನ್ನ ಸ್ಥಳದಲ್ಲಿಯೆ ರಚಿಸಿ ಹಾಡಿದ. ಅದೆ ಮುಂದೆ ಇತಿಹಾಸದ ಪುಟಗಳಲ್ಲಿ 'ಕ್ವಾಸಿದ್ಧತ್ ಅಲ್ ಬುರ್ದ್' ಅಥವಾ 'ಪೊಯಮ್ ಆಫ್ ಮ್ಯಾಂಟ್ಲ್" ( poem of mantle) ಎಂದೆ ಪ್ರಸಿದ್ಧವಾಗಿದೆ.


ಆ ಹೊಗಳು ಪದಗಳೆ ತುಂಬಿದ್ದ ಕವಿತೆಯ ಸಾಲೊಂದು ಸಾರುವಂತೆ 'ಹೌದು, ಪ್ರವಾದಿ ದೇವರ ಆಯುಧಶಾಲೆಯಲ್ಲಿನ ಒಂದು ಬಿಚ್ಚುಗತ್ತಿ! ವಿಶ್ವಕ್ಕೆ ಬೆಳಕು ನೀಡುವ ದೀಪ?!' ಎಂದು ಭಟ್ಟಂಗಿಯಾಗಿ ಹಾಡಿದ್ದಾನೆ ಕಾಬ್. ತನ್ನ ವೈಭವ, ಕೀರ್ತಿ ಹಾಗೂ ಉದಾರತೆಯನ್ನು ಸಾರುವ ಮಹೋನ್ನತ ಮುಖಸ್ತುತಿಗಳೆ ತುಂಬಿದ್ದ ರಚನೆಯ ಆ ಕವಿತೆಯನ್ನ ಕೇಳಿ ಮಹಮದ್ ಸಹಜವಾಗಿ ಉಬ್ಬಿ ಆನಂದ ತುಂದಿಲನಾದ. ಉಕ್ಕಿ ಹರಿದ ಖುಷಿಯಲ್ಲಿ ಆತ ಎದ್ದು ನಿಂತು ತಾನು ಧರಿಸಿದ್ದ ಮೇಲಂಗಿಯನ್ನೆ ತೆಗೆದು ಕಾಬನ ಮೈ ಮೇಲೆ ಗೌರವಪೂರ್ವಕವಾಗಿ ಹೊದೆಸುತ್ತಾ ಆತನನ್ನು ಕ್ಷಮಿಸಿ ತನ್ನ ಸಂತೋಷವನ್ನು ಪ್ರಕಟ ಪಡಿಸಿದ. ಈ ಮೇಲಂಗಿಯನ್ನ ಕೊಡುಗೆಯಾಗಿ ಗಿಟ್ಟಿಸಿದ್ದ ಕವಿತೆಯಾಗಿರುವ ಕಾರಣದಿಂದಲೆ ಮುಂದೆ ಈ ಕವಿತೆ 'ಮೇಲಂಗಿಯ ಕವಿತೆ' ಎಂದು ಪ್ರಸಿದ್ಧಿ ಪಡೆಯಿತು. ಕ್ರಮೇಣ ಕಾಲಾನುಕ್ರಮದಲ್ಲಿ ಈ ಮೇಲಂಗಿ ಕಾಬನ ವಂಶಸ್ಥ್ರಿಂದ ಖಲೀಫರ ಖಜಾನೆ ಹೋಗಿ ಸೇರಿತು. ಅದರ ಒಂದು ತುಣುಕು ಇಂದಿಗೂ ತುರ್ಕಿಯ ಇಸ್ತಾಂಬುಲ್ಲಿನಲ್ಲಿದೆ.



( ಇನ್ನೂ ಇದೆ.)

Tuesday, November 24, 2015

ವಲಿ - ೩೫








ಈ ನಡುವೆ ಮಹಮದನ ವಯಕ್ತಿಕ ಹಾಗೂ ಸಾಂಸಾರಿಕ ಬದುಕಿನಲ್ಲಿಯೂ ಹಲವಾರು ಬದಲಾವಣೆಗಳಾಗಿದ್ದವು. ತನ್ನನ್ನ ಏಳು ವರ್ಷಗಳ ಕಾಲ ಅಗಲಿದ್ದ ಪುತ್ರಿ ಝೈನಬ್ ತನ್ನೊಂದಿಗೆ ಇದ್ದು ಬಾಳಲು ಮದೀನಾಕ್ಕೆ ಬಂದ ಕೆಲವೆ ಕಾಲದಲ್ಲಿ ಗರ್ಭಪಾತದ ನಂತರ ಉಂಟಾಗಿದ್ದ ಒಳಬೇನೆಯಿಂದ ನರಳಿ ಸತ್ತು ಹೋದಳು. ಬಹುಕಾಲದ ಅಸ್ವಾಸ್ಥ್ಯದಿಂದ ಇನ್ನೊಬ್ಬ ಮಗಳಾದ ಉಮ್ ಕುಲ್ತುಮ್ ಸಹ ಅದಾಗಿ ಎರಡು ತಿಂಗಳಿಗೆ ಇಹಲೋಕವನ್ನ ತ್ಯಜಿಸಿದಳು. ಈಗ ಸಂತಾನವಾಗಿ ಉಳಿದಿದ್ದುದು ಕೇವಲ ಫಾತಿಮಾ ಮಾತ್ರ. ಇಷ್ಟಾದರೂ ಮಹಮದನು ಈವರೆಗೆ ಗಂಡು ಸಂತಾನವನ್ನ ಪಡೆದಿರಲಿಲ್ಲ. ಲೈಂಗಿಕ ಬದುಕು ನಿಯಮಿತವಾಗಿ ಅಡೆತಡೆಯಿಲ್ಲದೆ ತೃಪ್ತಿಕರವಾಗಿ ಸಾಗುತ್ತಿದ್ದರೂ ಸಂತಾನ ಭಾಗ್ಯದ ವಿಚಾರದಲ್ಲಿ ಮಾತ್ರ ಆತ ತೀರಾ ನತದೃಷ್ಟನಾಗಿದ್ದ.


ಹೀಗಿರೋವಾಗ ಆತ ಮತ್ತೊಮ್ಮೆ ಅಪ್ಪನಾಗುವ ಹಾಗಾಯಿತು. ಆದರೆ ಅವನಿಗೆ ಈ ಖುಷಿಯನ್ನ ದೊರಕಿಸಿಕೊಟ್ಟವಳು ಅಧಿಕೃತ ಪತ್ನಿಯರಲ್ಲಿ ಯಾರೊಬ್ಬರೂ ಆಗಿರದೆ, ಆತನಿಗೆ ರೋಮನ್ ರಾಜ್ಯಪಾಲನಿಂದ ಸಂದಿದ್ದ ಕೊಡುಗೆಯಾಗಿ ದೊರಕಿದ್ದ ಈಜಿಪ್ಟಿಯನ್ ಸೂಳೆ ಮೇರಿ ಆತನಿಂದ ಗರ್ಭ ಧರಿಸಿದ್ದಳು. ಕಾಪ್ಟ್ ಸುಂದರಿ ಮೇರಿ ಕ್ರೈಸ್ತಳಾಗಿಯೆ ಉಳಿದಿದ್ದು ಆತನ ಸೂಳೆಯಾಗಲು ಮಾತ್ರ ಅರ್ಹವಾಗುಳಿದಿದ್ದಳು. ಆಕೆಯ ಜೊತೆಗೆ ಕೊಡುಗೆಯ ರೂಪದಲ್ಲಿ ಬಂದಿದ್ದ ಅವಳ ಅಕ್ಕ ಶಿರೀನ್ ಕವಿ ಹಸನ್'ನ ಸೂಳೆಯಾಗಿ ಉಳಿದುಕೊಂಡದ್ದನ್ನ ನೆನಪಿಸಿಕೊಳ್ಳಿ. ಪ್ರತ್ಯೇಕವಾದ ತೋಟದ ಮನೆಯೊಂದರಲ್ಲಿ ಇರಿಸಲಾಗಿದ್ದ ಮೇರಿ ಗರ್ಭವತಿಯಾಗಿ ನವಮಾಸ ತುಂಬಿದ ನಂತರ ಗಂಡು ಮಗುವೊಂದನ್ನ ಮಹಮದನಿಗೆ ಹೆತ್ತು ಕೊಟ್ಟಳು.



ಬಹಳ ವರ್ಷಗಳ ನಂತರ ತನ್ನನ್ನು ಅಪ್ಪನ ಪಟ್ಟಕ್ಕೇರಿಸಿದ ಮಗನ ಬಗ್ಗೆ ಮಹಮದ್ ವಿಪರೀತ ಖುಷಿಯಾಗಿದ್ದ. ಸಾಲದ್ದಕ್ಕೆ ಆತನ ಏಕೈಕ ಗಂಡು ಸಂತಾನ ಬೇರೆ! ಸಂಭ್ರಮದ ಸಮಾರಂಭವನ್ನ ಏರ್ಪಡಿಸಿ ಮಗುವಿಗೆ ಇಬ್ರಾಹಿಂ ಎಂದು ನಾಮಕರಣ ಮಾಡಲಾಯಿತು. ಹೆಚ್ಚು ಕಡಿಮೆ ಕಾಲು ಶತಮಾನಗಳ ನಂತರ ಮಹಮದನಿಂದಾಗಿ ಹೆಣ್ಣೊಬ್ಬಳ ಮಡಿಲು ತುಂಬಿತ್ತು. ವಾಡಿಕೆಯಂತೆ ಮಗುವಿಗೆ ಏಳು ದಿನಗಳ ಪ್ರಾಯ ತುಂಬಿದ ನಂತರ ಅಪ್ಪನಾದ ಮಹಮದ್ ತನ್ನ ತಲೆ ಬೋಳಿಸಿಕೊಂಡ. ಆ ಕೂದಲ ತೂಕದ ಬೆಳ್ಳಿಯನ್ನ ಬಡವರಲ್ಲಿ ಹಂಚಿ ಅನಂತರ ಆ ಮುಂಡನದ ಕೂದಲನ್ನ ನೆಲದಲ್ಲಿ ಹೂಳಲಾಯಿತು. ಾದನ್ನ ಪೂರೈಸಿ ಕೃತಜ್ಞತಾ ಸ್ವರೂಪವಾಗಿ ದೇವರಿಗೊಂದು ಪ್ರಾಣಿಬಲಿಯನ್ನೂ ಸಹ ನೀಡಲಾಯಿತು.



ಆದರೆ ಈ ಸಂಭ್ರಮದ ಪರಿಣಾಮ ಮಹಮದನ ಅಂತಃಪುರದೊಳಗೆ ಮಾತ್ರ ತೀರಾ ವ್ಯತಿರಿಕ್ತವಾಗಿತ್ತು. ಊರೆಲ್ಲಾ ಪ್ರವಾದಿಯ ಈ 'ಸಾಧನೆ'ಯನ್ನ ಮೆಚ್ಚಿ ಕೊಂಡಾಡುತ್ತಿದ್ದರೆ, ಇತ್ತ ಆತನ ಜನಾನದಲ್ಲಿ ಮಾತ್ರ ಇನ್ನಿತರ ಹೆಂಡತಿಯರು ಹೊಟ್ಟೆಕಿಚ್ಚಿನಿಂದ ಬೆಂದು ನರಳಿ ಹೋದರು! ಈ ಈರ್ಷ್ಯೆಗೆ ಹೊಸ ಮಗುವಾದ ನಂತರ ಮೇರಿಯೆಡೆಗೆ ಹೆಚ್ಚಿದ ಮಹಮದನ ವಿಶೇಷ ಕಾಳಜಿ ಹಾಗೂ ಪ್ರೀತಿ ಸಹ ಕಾರಣವಾಗಿತ್ತು. ಸ್ತ್ರೀ ಸಹಜ ಮತ್ಸರದಿಂದ ಅವರೆಲ್ಲಾ ಚಡಪಡಿಸಿದರು. ತಮ್ಮಿಂದ ಸಾಧ್ಯವಾಗದ್ದು ಯಕಶ್ಚಿತ್ ಒಬ್ಬ ಸೂಳೆಯಿಂದ ಆಯಿತಲ್ಲ! ಅನ್ನುವುದು ಅವರೆಲ್ಲರಿಗೂ ಆಶ್ಚರ್ಯದ ಹಾಗೂ ಮತ್ಸರದ ಕಾರಣವಾಗಿತ್ತು ಎನ್ನುತ್ತಾರೆ ಇತಿಹಾಸಕಾರ ಥಾಮಸ್ ವಿಲಿಯಂ ಬೆಯಿಲ್ ತಮ್ಮ ಕೃತಿ 'ಆನ್ ಓರಿಯೆಂಟಲ್ ಭಯಾಗ್ರಫಿಸ್ ಆಫ್ ಡಿಕ್ಷನರಿ' ಕೃತಿಯ ಪುಟ ಸಂಖ್ಯೆ ೨೫೭ರಲ್ಲಿ.



ಈ ಸಂದರ್ಭದಲ್ಲಿ ನಡೆದ ಒಂದು ಕುತೂಹಲಕರ ಸಂಗತಿಯ ಬಗ್ಗೆ ಅವರು ವಿವರ ನೀಡುತ್ತಾರೆ. ಮೊದಲಿನಿಂದಲೂ ಮಹಮದ್ ತನ್ನ ಪ್ರತಿಯೊಬ್ಬ ಹೆಂಡತಿಯರೊಂದಿಗೂ ದಿನಕ್ಕೊಬ್ಬರಂತೆ ಕಾಲ ಕಳೆಯುವ ಸ್ವ ನಿಯಮಕ್ಕೆ ಬದ್ಧನಾಗಿದ್ದನಷ್ಟೆ? ಅಂತೆಯೆ ಆ ದಿನ ಹಫ್ಸಾಳ ಸರದಿಯ ದಿನ ಬಂದಿತ್ತು. ಅದು ಸಂದು ಮರುದಿನ ಆತ ಇನ್ನೊಬ್ಬಳ ಅಂತಃಪುರ ಹೊಕ್ಕುವ ದಿನವಾದದ್ದರಿಂದ ಆಕೆ ನಿರಾತಂಕವಾಗಿ ಆ ಬಿಡುವನ್ನ ಉಪಯೋಗಿಸಿಕೊಂಡು ತನ್ನ ಅಪ್ಪನ ಮನೆಗೆ ಹೋಗಿದ್ದಳು. ಮರಳಿ ಮನೆಗೆ ಬಂದಾಗ ಆಕೆಗೆ ಅಘಾತಕಾರಿಯಾದ ಒಂದು ದೃಶ್ಯ ಕಾಣಬೇಕಾದ ಪರಿಸ್ಥಿತಿ ಕಾದುಕೊಂಡಿತ್ತು. ಅಂದು ಅವಳು ತುಸು ಬೇಗ ಮರಳಿ ಬಂದದ್ದೆ ಎಡವಟ್ಟಿಗೆ ಕಾರಣವಾಗಿತ್ತು. ಮಾನ್ಯ ಪ್ರವಾದಿವರ್ಯರು ಅಂದು ಅವಳ ಮನೆಯಲ್ಲಿ ತಮ್ಮ ಖಾಸಗಿ ಸೂಳೆ ಮೇರಿಯಿಂದಿಗೆ ಸ್ವರ್ಗ ಸುಖದಲ್ಲಿ ತಲ್ಲೀನರಾಗಿದ್ದರು! ಈ ಪರಮಪವಿತ್ರ ಕಾರ್ಯ ತನ್ನ ಹಕ್ಕಾಗಿದ್ದ ಕೋಣೆಯಲ್ಲಿ, ತನ್ನದೆ ಖಾಸಗಿ ಹಾಸಗೆಯ ಮೇಲೆ ನಿರ್ವಾಣವಾಗಿದ್ದ ಅವರಿಬ್ಬರೂ ನಿರಾತಂಕವಾಗಿ, ಅದೂ ಹಾಡ ಹಗಲಿನಲ್ಲಿಯೆ ನಡೆಸುತ್ತಿದ್ದದ್ದನ್ನ ಕಂಡಾಗ ಆಕೆ ಸ್ತ್ರೀ ಸಹಜವಾಗಿ ಕೆರಳಿ ಕೆಂಡವಾದಳು.



ಕೂಡಲೆ ಅರ್ಧ ಸಂಕಟ ಅರ್ಧ ಹೊಟ್ಟೆಕಿಚ್ಚಿನಿಂದ ಸವತಿ ಆಯೇಷಾಳ ಮನೆಗೆ ನುಗ್ಗಿದ ಆಕೆ ತನ್ನ ಎದೆಯಾಳದ ಅಹವಾಲನ್ನ ತೋಡಿಕೊಂಡು ಕಣ್ಣೀರಿಟ್ಟಳು. ಆಯೆಷಾ ಇದನ್ನೆ ಇನ್ನಿತರ ಸವತಿಯರಿಗೂ ಕರೆದು ತಿಳಿಸಿ ಕೋಲಾಹಲವೆಬ್ಬಿಸಲು ಅವರೆಲ್ಲರಿಗೂ ಕುಮ್ಮಕ್ಕು ಕೊಟ್ಟಳು. ಈಗಾಗಲೆ ಮಗು ಹೆತ್ತ ಕಾರಣಕ್ಕೆ ಮಹಮದನ ದೃಷ್ಟಿಯಲ್ಲಿ ಹೆಚ್ಚಿದ್ದ ಮೇರಿಯ ಪ್ರಾಮುಖ್ಯತೆಯನ್ನ ಕಾಣುವಾಗ ಅವರೆಲ್ಲಾ ನೊಂದು ಒಳಗೊಳಗೆ ಸಂಕಟ ಪಟ್ಟಿದ್ದರಷ್ಟೆ? ರೋಷದಿಂದ ಕುದ್ದು ಕೆಂಡವಾದ ಎಲ್ಲರೂ ಮಹಮದನನ್ನು ತಾವೆ ಮುಂದಾಗಿ ದೂರವಿಟ್ಟರು! ಮಾತು ಬಿಟ್ಟರು. ಮಹಮದ್ ವಿಧವಿಧವಾಗಿ ಅವರನ್ನೆಲ್ಲಾ ಸಂಭಾಳಿಸಿ ಒಲಿಸಲು ಯತ್ನಿಸಿ ಸೋತ. ಯಾರೊಬ್ಬರೂ ಒಂಚೂರೂ ಜಗ್ಗಲಿಲ್ಲ. ಪತಿಯ ಕಚ್ಚೆ ಹರುಕತನವನ್ನ ಅವರ್ಯಾರೂ ಕ್ಷಮಿಸಲೂ ಇಲ್ಲ, ಅವರ ಮುನಿಸು ತಗ್ಗಲೂ ಇಲ್ಲ.



ಇದರಿಂದ ವಿಚಲಿತನಾದ ಮಹಮದ್ ಸಹ ಖಾಯಂ ಆಗಿ ಮೇರಿಯ ತೋಟದ ಮನೆಯಲ್ಲಿಯೆ ಠಿಕಾಣಿ ಹೂಡಿಬಿಟ್ಟ! ತಾನೂ ಅವರಂತೆಯೆ ಅವರನ್ನು ದೂರವಿಟ್ಟು ಮಾತು ಬಿಟ್ಟ. ಕಡೆಗಣಿಸಿ ಅವರನ್ನ ಬಗ್ಗಿಸಲು ಹೊರಟಿದ್ದ ಮಹಮದನಿಗೆ ತನ್ನ ಪ್ರಯತ್ನದ ಸಾಫಲ್ಯದ ಬಗ್ಗೆ ಭರವಸೆ ಇತ್ತು. ಅದರೆ ಚಪಲವೊಂದು ಆತನಲ್ಲಿ ವಿಪರೀತವಾಗಿ ಹೆಡೆಯಾಡಿಸುತ್ತಲೆ ಇತ್ತಲ್ಲ! ಅದು ಅವರನ್ನ ಬಿಗಿಯಾಗಿಯೆ ಇಟ್ಟಿದ್ದರೂ ಇವನನ್ನ ಮಾತ್ರ ವಿಪರೀತ ಸಡಿಲ ಗೊಳಿಸಿಬಿಟ್ಟಿತು! ಅನಿವಾರ್ಯವಾಗಿ ಆತ ಆಗ ದೈವವಾಣಿಯ ಮೊರೆ ಹೋದ. ದೈವ ಸಹ ಮಹಮದನಂತೆಯೆ ಆತನ ಹೆಂಡಿರ ಅಕಾರ್ಯದ ಬಗ್ಗೆ ಮುನಿದಿತ್ತು! ಅವರ ಅವಿಧೇಯತೆಯನ್ನ ಸರ್ವಶಕ್ತನಾದ ಅಲ್ಲಾಹನೆಂಬ ದೇವರು ಕಟು ಮಾತುಗಳಲ್ಲಿ ಖಂಡಿಸಿದರು?! ಮೇರಿಯನ್ನೂ ಯಾವುದೆ ಕಾರಣಕ್ಕೂ ಬಿಡಲೆ ಕೂಡದು ಅಂತಲೂ, ಆ ಸೊಕ್ಕಿನ ಹೆಂಗಸರ ಹಟ ಹೀಗೆ ಮುಂದುವರೆದರೆ ಅವರಿಗೆಲ್ಲಾ ಮುಲಾಜಿಲ್ಲದೆ ತಲ್ಲಾಖ್ ಕೊಟ್ಟು ತನಗೆ ಚೆಂದ ಕಂಡ ಇನ್ಯಾರಾದರೂ ಹೆಂಗಸರನ್ನ ಮಾನ್ಯ ಪ್ರವಾದಿಗಳು ಮದುವೆಯಾಗಿ 'ಸುಖ'(?)ವಾಗಿ ಇರಬಹುದು ಎಂದು ದೈವಾಜ್ಞೆಯಾಯಿತು.



ಈ ಅನಿರೀಕ್ಷಿತ ನಡೆಯಿಂದ ಮಹಮದನ ಮುನಿದ ಹೆಂಡಿರೆಲ್ಲಾ ಕಂಗಾಲಾದರು. ಹೀಗೆ ಆದರೆ ನಮ್ಮೆಲ್ಲರ ಬದುಕು ಮೂರಾಬಟ್ಟೆಯಾಗುವ ಸಾಧ್ಯತೆ ಇದೆ ಎಂದವರಿಗೆ ಜ್ಞಾನೋದಯವಾಗಿತು. ಹೀಗಾಗಿ ರಾಜಿ ಕಬೂಲಿ ಶುರುವಾಯಿತು. ಇದಕ್ಕೊಂದು ದೈವಿಕ ಸ್ಪರ್ಷ ನೀಡುವ ಉದ್ದೇಶದಿಂದ ಮೊದಲು ಹಫ್ಸಾಳನ್ನ ಮಹಮದ್ ಯಕ್ಷ ಗ್ರೇಬ್ರಿಯಲ್'ನ ಮೂಲಕ ಕರೆಸಿಕೊಂಡು ಆಕೆ ಕಣ್ಣೀರಾಗಿ ಶರಣಾಗಿ ಕಾಲಿಗೆ ಬಿದ್ದಾಗ ಮಹಮದ್ ಕ್ಷಮಿಸಿದನೆಂತಲೂ, ಆಕೆಯ ಮೂಲಕ ಇನ್ನಿತರ ನೊಂದ ಜೀವಗಳನ್ನೂ ಮತ್ತೆ ಸಂತೈಸಿ ಮರಳಿ ಹಾಸಿಗೆಗೆ ಬಿಟ್ಟುಕೊಳ್ಳಲಾಯಿತು ಅಂತಲೂ ಕಥೆ ಕಟ್ಟಲಾಯಿತು. ಯಥಾಪ್ರಕಾರ ಮೊದಲಿನ ನಿಯಮಾವಳಿಯಂತೆ ದಿನಕ್ಕೊಬ್ಬಳ ಸಂಗಡ ರಾತ್ರಿ ಕಳೆಯುವ ಏರ್ಪಾಡನ್ನೆ ಮುಂದುವರೆಸಲು ಮಹಮದ್ ನಿರ್ಧರಿಸಿದ.



ಈ ಬಗೆಗಿನ ಸುರಾವನ್ನು ಈ ಪ್ರಕರಣವನ್ನೆ ಖಚಿತವಾಗಿ ಆಧಾರವಾಗಿಟ್ಟುಕೊಂಡು ಪಡೆಯಲಾಗಿದೆ. ಅದನ್ನ ಸುರಾ ಸಂಖ್ಯೆ ೬೬/೧-೪ರಲ್ಲಿ ಆಸಕ್ತರು ಗಮನಿಸಬಹುದು.  ಸುರಾ ೬೬/೩ ಸಾರುವಂತೆ, ಪ್ರವಾದಿಯವರು ತಮ್ಮ ಒಬ್ಬಳು ಪತ್ನಿಯೊಡದನೆ ಮಾತೊಂದನ್ನ ರಹಸ್ಯವಾಗಿ ಹೇಳಿದ್ದರು. ಆ ಹೆಂಡತಿ ಅದೆ ರಹಸ್ಯವನ್ನ ಇನ್ನೊಬ್ಬಳಲ್ಲಿ ಬಯಲುಗೊಳಿಸಿಬಿಟ್ಟಾಗ ಹಾಗೂ ಆ ವಿಷಯ ಅಲ್ಲಾಹನ ಮೂಲಕ ಪ್ರವಾದಿಯವರ ಅರಿವಿಗೂ ಬಂದಾಗ ಅವರು, ಅದರ ಸ್ವಲ್ಪಾಂಶವನ್ನ ಹೆಂಡತಿಗೂ ತಿಳಿಸಿ ಇನ್ನು ಸ್ವಲ್ಪವನ್ನು ಕಡೆಗಣಿಸಿದರು! (ಗಮನಿಸಿ ಅಲ್ಲಾಹನ ಮಾತನ್ನೆ ಪ್ರವಾದಿಯವರು ಕಡೆಗಣಿಸಿದರು ಎನ್ನುತ್ತದೆ ಈ ಸುರಾ, ಅಂದರೆ ಅಲ್ಲಾಹನ  ನುಡಿಯನ್ನೂ ಸಹ ಪ್ರವಾದಿ ಚಾಡಿಯೆಂದೆ ಪರಿಗಣಿಸಿದ್ದರು ಎಂದಾಯಿತು!) ನಂತರ ಅವರು ನಿಮಗೆ ಈ ವಿಷಯವನ್ನ ಯಾರು ಹೇಳಿದ್ದು? ಎಂದು ಕೇಳಿದಾಗ, ಮಹಿಮಾಪೂರ್ಣನೂ ಸರ್ವಜ್ಞನೂ ಆದ ವಿವರಪೂರ್ಣನೆ ಈ ಸುದ್ದಿಯನ್ನ ನೇರವಾಗಿ ಹೇಳಿದರು! ಎಂದು ಪ್ರವಾದಿ ಉತ್ತರಿಸಿದರು.


"ನೀವಿಬ್ಬರೂ ಈ ಕಾರಣಕ್ಕಾಗಿ ಅಲ್ಲಾಹನೊಡನೆ ಪಶ್ಚಾತಾಪ ಪಡುತ್ತೀರಾದರೆ, ಅದು ವಾಸ್ತವದಲ್ಲಿ ನಿಮ್ಮ ಪಾಲಿಗೆ ಅತ್ಯುತ್ತಮವಾದುದಾಗಿದೆ. ಏಕೆಂದರೆ ನಿಮ್ಮ ಹೃದಯಗಳು ನೇರ ಮಾರ್ಗದಿಂದ ಸರಿದುಹೋಗಿವೆ. ಹಾಗೂ ನೀವು ಇನ್ನು ಮುಂದೆಯೂ ಸಹ ಪ್ರವಾದಿಯವರ ವಿರುದ್ಧ ಗುಂಪುಗಾರಿಕೆ ನಡೆಸಿದರೆ ಅಲ್ಲಾಹನು ಅವರ ಸಂರಕ್ಷಕನಾಗಿದ್ದಾನೆ! ಅವನ ನಂತರ ಜೆಬ್ರೀಲರು, ಎಲ್ಲಾ ಸಜ್ಜನ ಸತ್ಯ ವಿಶ್ವಾಸಿಗಳೂ ಹಾಗೂ ಎಲ್ಲಾ ದೇವಚರರು ಅವರ ಸಂಗಾತಿಗಳೂ ಹಾಗೂ ಸಹಾಯಕರೂ ಆಗಿರುವವರೆಂದು ನಿಮಗೆ ತಿಳಿದಿರಲಿ?!" ಎಂದು ಬೆದರಿಕೆಯ ರೂಪದಲ್ಲಿ ಉಳಿದೆಲ್ಲಾ ಹೆಂಡಂದಿರನ್ನೂ ಈ ಸುರಾ ಎಚ್ಚರಿಸುತ್ತದೆ.



ಮೇಲ್ನೋಟಕ್ಕೆ ಈ ಪ್ರಕರಣ ಇಲ್ಲಿಗೆ ಮುಕ್ತಾಯವಾದಂತೆ ಕಂಡರೂ ಸಹ ವಾಸ್ತ್ಯವದಲ್ಲಿ ಇದು ಇನ್ನೊಂದು ಮಗ್ಗುಲಿಗೆ ಹೊರಳಿಕೊಂಡಿತ್ತು. ಎಲ್ಲಕ್ಕೂ ಮೂಲವಾಗಿದ್ದ ಮೇರಿಯ ಮೇಲೆ ಈ ವಿಷಯದಲ್ಲಿ ಸವತಿಯರೆಲ್ಲರೂ ತಿರುಗಿಬಿದ್ದಿದ್ದರು. ಸವತಿ ಮಾತ್ಸರ್ಯದ ಧಗೆ ಹದಿನೈದು ದಿನದ ಎಳೆ ಮಗು ಇಬ್ರಾಹಮನಿಗೆ ವಿಷ ಉಣಿಸುವುದರ ಮೂಲಕ ಪರ್ಯಾವಸನಗೊಂಡಿತು! ಏನೂ ಅರಿಯದ, ಪ್ರಪಂಚವನ್ನೆ ಕಾಣದ ಈ ನಿಶ್ಪಾಪಿ ಮಗು ತೀವೃ ಅಸ್ವಾಸ್ಥ್ಯಕ್ಕೆ ಒಳಗಾಗಿ ನರಳಿ ನರಳಿ ಪ್ರಾಣ ಬಿಟ್ಟಿತು. ಮಗುವನ್ನ ಉಳಿಸಿಕೊಳ್ಳಲು ಲಭ್ಯವಿದ್ದ ಎಲ್ಲಾ ವೈದ್ಯಕೀಯ ಶೂಶ್ರಷೆಯ ಮೊರೆ ಹೋದ ಮಹಮದ್ ತನ್ನ ಕೊನೆಯಿರದ ಪ್ರಯತ್ನಗಳ ಹೊರತಾಗಿಯೂ ಮಗು ಬದುಕಿ ಉಳಿಯುವ ಲಕ್ಷಣ ಕಂಡು ಬಾರದೆ ಹೋದಾಗ ಎಳೆ ಕೂಸನ್ನ ತನ್ನ ತೋಳಿನಲ್ಲಿ ಎತ್ತಿಕೊಂಡು ವಿಪರೀತ ಗೋಳಾಡಿದ. ಆ ಹೊತ್ತಿನಲ್ಲಿ ಆತನ ಪ್ರವಾದಿತ್ವವೂ ಆತನ ಕೈ ಹಿಡಿಯದೆ ಕೇವಲ ಅಪ್ಪಟ ಅಪ್ಪನೊಬ್ಬನಾಗಿ ಆತ ಕಂಬನಿ ಹರಿಸಿ ತನ್ನ ಅಸಾಹಯಕತೆಯನ್ನ ಬಹಿರಂಗವಾಗಿ ತೋರ್ಪಡಿಸಿಕೊಂಡ.



ಮೃತ್ಯು ಶಯ್ಯೆಯಲ್ಲಿದ್ದ ತನ್ನ ಕಂದನ ಹಿಡಿದು ಅತ್ಯಂತ ಶೋಕ ಹಾಗೂ ದುಃಖ ಪೀಡಿತನಾಗಿದ್ದ ಮಹಮದನನ್ನು ಅತನ ಬಂಧುಗಳೆಲ್ಲಾ ಕೂಡಿ ಸಂತೈಸಿದರು. ನೊಂದ ಅವನ ಮನಕ್ಕೆ ತಮ್ಮಿಂದಾದಷ್ಟು ಧೈರ್ಯ ತುಂಬಿದರು. ಆದರೂ ಅವನ ಗೋಳಾಟವನ್ನ ತಡೆಯುವುದು ಬಹಳ ಕಷ್ಟವಾಯಿತು. ತಾನು ಕಣ್ಣೀರಿಡುತ್ತಿರುವುದು ದಃಖಿಸುತ್ತಿರುವುದು ತನ್ನ ಹೃದಯದಲ್ಲಿ ಮಗನ ಮೇಲೆ ಮಡುಗಟ್ಟಿರುವ ಪ್ರೀತಿ, ಮಮತೆ ಹಾಗೂ ಕನಿಕರದ ಕಾರಣದಿಂದ ಎಂದಾತ ಗದ್ಗದನಾಗಿಯೆ ಅವರಿಗೆಲ್ಲರಿಗೂ ಮಾರುತ್ತರಿಸಿದ. ಯಾರು ಈ ವೇಳೆ ಮಗುವಿನ ಸಾವಿಗೆ ಕನಿಕರ ಪ್ರಕಟಪಡಿಸುವುದಿಲ್ಲವೋ ಅಂತವರ ಬಗ್ಗೆ ತಾನೂ ಸಹ ಮುಂದೆ ಯಾವತ್ತೂ ಕನಿಕರ ತೋರಿಸುವ ಪ್ರಶ್ನೆಯೆ ಇಲ್ಲ ಅಂದಾತ ಗೋಳಾಡುತ್ತಲೆ ಸ್ಪಷ್ಟ ಪಡಿಸಿದ.



ಸ್ವಲ್ಪ ಸಮಯದಲ್ಲಿಯೆ ನಂಜಿನ ಬಾಧೆಯಿಂದ ನರಳಿದ ಎಳೆಮಗು ಇಬ್ರಾಹಿಂ ಪ್ರಾಣ ತ್ಯಜಿಸಿತು. ಆದ ಪಿತೂರಿಯ ಸಂಗತಿ ಬಯಲಾಗಿ ಅದೆ ಒಂದು ಹೊಸ ಪ್ರಕರಣವಾಗಿ ಬೆಳೆಯುವುದು ಮಹಮದನಿಗೂ ಸಹ ಬೇಕಿರಲಿಲ್ಲ. ಹೀಗಾಗಿ ಆದಷ್ಟು ಬೇಗ ಶವ ಸಂಸ್ಕಾರ ನಡೆಸಿ ಎಲ್ಲಾ ಸಂಚಿನ ಕಥೆಯನ್ನ ಶಾಶ್ವತವಾಗಿ ಮಣ್ಣಿನಡಿ ಹೂತುಬಿಡುವ ನಿರ್ಧಾರಕ್ಕೆ ಆತನೂ ಬಂದ. ಮಗುವಿಗಾಗಿ ರೋಧಿಸುತ್ತಿದ್ದ ಮೇರಿ ಹಾಗೂ ಶಿರೀನರನ್ನು ಒಪ್ಪಿಸಿ ಶವವನ್ನ ಪಡೆದು ಅದನ್ನ ಶವಪೆಟ್ಟಿಗೆಯಲ್ಲಿ ಇರಿಸಲಾಯಿತು. ಸ್ಮಶಾನದಲ್ಲಿ ಆದಷ್ಟು ಶೀಘ್ರವಾಗಿ ಮಗುವಿನ ಹೆಣವನ್ನ ಶವಪೆಟ್ಟಿಗೆ ಸಹಿತ ದಫನ್ ಮಾಡಿ ಸಮಾಧಿಯೊಂದನ್ನ ಕಟ್ಟಲಾಯಿತು. ಸಮಾಧಿಯ ಮೇಲೆ ನೀರನ್ನು ಚುಮುಕಿಸುತ್ತಾ ಭಾವುಕನಾಗಿ ಅಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಮಹಮದ್ ಕೆಲ ಮಾತುಗಳನ್ನೂ ಸಹ ಆಡಿದ.


"ಇದನ್ನ ಮಾಡುವಾಗ ಬಹಳ ಎಚ್ಚರಿಕೆಯಿಂದ ಮಾಡಬೇಕು. ಏಕೆಂದರೆ ಇದು ಶೋಕಭರಿತ ಹೃದಯಕ್ಕೆ ಸಾಂತ್ವಾನವನ್ನು ನೀಡುತ್ತದೆ. ಮೃತ್ಯುವಿಗೆ ಈಡಾದವರಿಗೆ ಇದು ಲಾಭವನ್ನೂ ತರುವುದಿಲ್ಲ, ಅಂತೆಯೆ ಇದರಿಂದ ಅವರಿಗೆ ಯಾವುದೆ ಹಾನಿಯೂ ಉಂಟಾಗುವುದಿಲ್ಲ. ಆದರೆ ಬದುಕಿರುವವರ ಹೃದಯಕ್ಕೆ ಮಾತ್ರ ಸಾಂತ್ವಾನದ ಮಳೆ ಸುರಿಸುತ್ತದೆ."


ಅಂದು ಕಾಕತಾಳೀಯವಾಗಿ ಸೂರ್ಯಗ್ರಹಣವಾಯಿತು.  ಜನರು ಅದನ್ನ ಸತ್ತ ಮಗು ಇಬ್ರಾಹಿಮನ ಪುಣ್ಯವಂತಲೂ, ದೇವರು ಅವನಿಗೆ ಈ ಮೂಲಕ ಶುಭ ಶಕುನವನ್ನ ಹೊತ್ತು ತಂದಿದ್ದಾನೆ ಅಂತಲೂ ಅಲ್ಲಾಹನನ್ನು ಸ್ತುತಿಸಿ ತಮ್ಮೊಳಗೆ ವ್ಯಾಖ್ಯಾನಿಸಿದರು. ಆದರೆ ಮಹಮದ್ ಅದನ್ನು ಸರಾ ಸಗಟಾಗಿ ತಿರಸ್ಕರಿಸಿದನು. 'ಗ್ರಹಣಗಳು ದೈವೀಕ ನಿಯಮದ ಚಿನ್ಹೆಗಳು. ಅವು ಯಾರದೆ ಒಬ್ಬರ ಸಾವಿನ ಸೂಚಕವಾಗಿ ಘಟಿಸುವುದಿಲ್ಲ. ಗ್ರಹಣವಾದಲ್ಲಿ ನೀವೆಲ್ಲರೂ ಅದನ್ನ ತಲೆಗೊಬ್ಬರಂತೆ ಅರ್ಥೈಸದೆ ಅದು ಬಿಡುವವರೆಗೂ ಪ್ರಾರ್ಥನೆಯಲ್ಲಿ ತೊಡಗಿಕೊಂಡಿರಿ." ಎಂದು ಆತ ಜನರಿಗೆ ಉಪದೇಶಿಸಿದ. ಈ ಗ್ರಹಣ ಕಳೆದ ನಂತರ ಆತ ಕೃತಜ್ಞತಾ ಸೂಚಕವಾಗಿ ಮಗುವಿನ ಶೂಶ್ರಷೆಗಾಗಿ ನೇಮಕವಾಗಿದ್ದ ದಾದಿ ಉಮ್ ಬುರ್ದಾ ಎಂಬಾಕೆಗೆ ಖರ್ಜೂರದ ತೋಟವೊಂದನ್ನ ಆತ್ಮ ಸಂತೋಷಕ್ಕಾಗಿ ದಾನ ಮಾಡಿದ.



( ಇನ್ನೂ ಇದೆ.)

Saturday, November 21, 2015

ವಲಿ - ೩೩








ಮಹಮದ್ ಮೆಕ್ಕಾದಿಂದ ಮದೀನಾಕ್ಕೆ ಮರಳುವ ನಿರ್ಧಾರಕ್ಕೆ ಬಂದ ಹೊತ್ತಿಗೆ ಅನಿವಾರ್ಯವಾಗಿ ಮತ್ತೊಮ್ಮೆ ಶಸ್ತ್ರಧಾರಿಯಾಗಿ ಯುದ್ಧ ಕಣದಲ್ಲಿ ಧುಮುಕಿ ಹೋರಾಡುವ ಅನಿವಾರ್ಯತೆ ಒದಗಿ ಬಂತು. ಮೆಕ್ಕಾದ ಈಶಾನ್ಯ ದಿಕ್ಕಿನ ಗುಡ್ಡ ಪ್ರದೇಶದಲ್ಲಿ ಪ್ರಬಲರಾಗಿದ್ದ ಬೆನ್ ಹವಾಜಿನ್ ಬುಡಕಟ್ಟಿನವರು ವಾಸಿಸುತ್ತಿದ್ದರು. ಬಹುತೇಕ ಅರೇಬಿಯಾದ ಬುಡಕಟ್ಟುಗಳೆಲ್ಲಾ ಮಹಮದನ ಪಡೆಯ ಉಪಟಳಕ್ಕೆ ಹೆದರಿ ಮರು ಮಾತಿಲ್ಲದೆ ಇಸ್ಲಾಮನ್ನ ಒಪ್ಪಿಕೊಂಡು ಮುಸಲ್ಮಾನರಾಗಿದ್ದರೂ ಸಹ ಈ ಹವಾಜಿನರು ಮಾತ್ರ ಅದಕ್ಕೆಲ್ಲಾ ಸೊಪ್ಪು ಹಾಕದೆ, ಮಹಮದನ ಕಡೆಯಿಂದ ಮತಾಂತರಕ್ಕೆ ಬಂದ ಸೂಚನೆಗಳನ್ನೆಲ್ಲ ಲೆಕ್ಕಕ್ಕೂ ತೆಗೆದುಕೊಳ್ಳದೆ ತಮ್ಮ ಮೂಲ ವಿಗ್ರಹಾರಾಧಕ ಧರ್ಮವನ್ನೆ ನೆಚ್ಚಿಕೊಂಡು ನೆಮ್ಮದಿಯಾಗಿದ್ದರು.




ಆದರೆ ಅನಿರೀಕ್ಷಿತ ತಿರುವುಗಳನ್ನ ಒಳಗೊಂಡಿದ್ದ ಮಹಮದನ ಮೆಕ್ಕಾದ ಈ ಬರಿಯ ತೀರ್ಥ ಹಾಗೂ ದಂಡಯಾತ್ರೆ ಏಕಾಏಕಿ ಆತನ ಸರ್ವಾಧಿಕಾರದಲ್ಲಿ ಅಂತ್ಯವಾಗಿದ್ದು ಆ ಜನಾಂಗದ ಜನರನ್ನ ಸ್ವಲ್ಪ ಮಟ್ಟಿಗೆ ಭಯಭೀತಗೊಳಿಸಿತ್ತು. ಅವರು ಖುರೈಷಿಗಳೆ ಶರಣಾಗಿ ಹೊಸ ಧರ್ಮದ ಅನುಯಾಯಿಗಳಾಗಿದ್ದನ್ನು ಕಂಡು ತಕ್ಕಮಟ್ಟಿಗೆ ಆತಂಕಿತರೂ ಆಗಿದ್ದರು. ಅದೆ ಜನಾಂಗಕ್ಕೆ ಸೇರಿದ್ದ ಇನ್ನೊಂದು ಉಪ ಗೋತ್ರವಾದ ಬೆನ್ ಥಾಕಿಫ್ ಗುಂಪಿನ ಮಂದಿಗೂ ಸಹ ಇದೆ ಭೀತಿ ಮನದಲ್ಲಿ ಮನೆ ಮಾಡಿತ್ತು. ಹೀಗಾಗಿ ತಮ್ಮ ಪಾಡಿಗೆ ತಾವು ತಮ್ಮ ವಸತಿಗಳ ರಕ್ಷಣೆಯ ಏರ್ಪಾಡನ್ನ ಮಾಡಿಕೊಂಡರು. ತನಗೆ ಶರಣಾಗಿ ತನ್ನ ಕಾಲ ಬಳಿ ಮಂಡಿ ಊರಿಕೊಂಡು ಬಿದ್ದಿರುತ್ತಾರೆ ಎಂದು ಗ್ರಹಿಸಿದರೆ, ಅವರು ಹೀಗೆ ತನ್ನ ಆಜ್ಞೆಗಳನ್ನ ಸರಸಗಟಾಗಿ ಧಿಕ್ಕರಿಸಿ ಮುನ್ನಡೆದಿದ್ದು ಮಹಮದನನ್ನು ಅಪಾರವಾಗಿ ಕೆರಳಿಸಿತು. ಅವರ ಮೇಲೆ ದಂಡಯಾತ್ರೆ ನಡೆಸಿ ಅವರಿಗೆ ಒದ್ದು ಬುದ್ಧಿ ಕಲಿಸಲು ಅವನು ನಿರ್ಧರಿಸಿ ಬಿಟ್ಟ.


ಅವನ ಹನ್ನೆರಡು ಸಾವಿರ ಯೋಧರ ಪಡೆ ಬೆನ್ ಹವಾಜಿನರನ್ನ ಹೆಡೆಮುರಿಗೆ ಕಟ್ಟಲು ಹೊರಟಿತು. ಈ ಸುದ್ದಿ ತಿಳಿದ ಹವಾಜಿನರೂ ಸಹ ಆತ್ಮರಕ್ಷಣೆಗಾಗಿ ಮಲ್ಲಿಕ್ ಎಂಬ ವೀರಾಗ್ರಣಿಯ ನೇತೃತ್ವದಲ್ಲಿ ಔಟಸ್ ಎನ್ನುವ ಬಯಲಿನಲ್ಲಿ ಈ ಮುಸಲ್ಮಾನರ ಪಡೆಯನ್ನ ಎದುರಿಸಲು ಶಸ್ತ್ರಸನ್ನದರಾಗಿ ನಿಂತರು. ಕ್ರಿಸ್ತ ಶಕ ಆರುನೂರಾ ಮೂವತ್ತರ ಫೆಬ್ರವರಿ ತಿಂಗಳ ಒಂದನೆ ತಾರೀಖಿನಂದು ಎರಡೂ ಪಡೆಗಳು ರಣಭೂಮಿಯಲ್ಲಿ ಮುಖಾಮುಖಿಯಾದವು. ನಡೆದ ಭೀಕರ ಕಾಳಗದಲ್ಲಿ ಮೊದಲಿಗೆ ಮುಸಲ್ಮಾನರ ಪಡೆಗೆ ಹಿನ್ನಡೆಯೆ ಆಗಿತ್ತು. ಆದರೆ ಪಡೆಯ ನಟ್ಟ ನಡುವೆ ಇದ್ದ ಮಹಮದ್ 'ತಾನು ದೇವರ ಪ್ರವಾದಿ! ಓಡಬೇಡಿರಿ, ಜಯ ನಮಗೆ ಶತಸಿದ್ಧ' ಎಂದು ಗಂಟಲು ಹರಿದು ಹೋಗುವ ಹಾಗೆ ಹತಾಶೆಯಿಂದ ಕೂಗಿ ಪಲಾಯನಗೈಯುತ್ತಿದ್ದ ಯೋಧರನ್ನ ಹುರಿದುಂಬಿಸಿದ. ಅವನ ಉತ್ತೇಜನದ ನುಡಿಗಳು ಆಗಷ್ಟೇ ಮತಾಂತರವಾಗಿದ್ದ ಮೆಕ್ಕಾದ ಪ್ರಜೆಗಳ ಮೇಲೆ ಮೂರು ಕಾಸಿನ ಪರಿಣಾಮ ಬೀರದಿದ್ದರೂ ಸಹ ಮದೀನಾದ ಅವನ ಅನುಯಾಯಿಗಳು ಇದರಿಂದ ರೋಮಾಂಚಿತರಾದರು. ಅದೆ ಪುಳಕದ ಆವೇಶದಲ್ಲಿ ಹವಾಜಿನರ ಮೇಲೆ ಬರ್ಬರವಾಗಿ ಮುರಕೊಂಡು ಬಿದ್ದರು. ಅವರ ಕೆಚ್ಚೆದೆಯ ಹೋರಾಟ ಕಂಡು ಮೆಕ್ಕಾದವರೂ ಸಹ ಸ್ವಲ್ಪ ಹುಮ್ಮಸ್ಸಿಗೆ ಮರಳುವಂತಾಯಿತು.



'ನಾನು ದೇವರ ದೂತ! ತನ್ನ ಸೈನ್ಯಕ್ಕೆ ದೇವರ ಬೆಂಬಲ ನಿರಂತರವಾಗಿದೆ. ಅಲ್ಲಾಹನ ಕೃಪೆ ನಮ್ಮ ಮೇಲಿರುವಾಗ ಹೋರಾಡಿ ಜಯ ನಮ್ಮದೇನೆ ಶತಸಿದ್ಧ!' ಎಂದಾತ ಮಾಡಿದ ಅಬ್ಬರಕ್ಕೆ ಎಲ್ಲರೂ ಹುರಿದುಂಬಿತರಾಗಿ ಪ್ರಾಣದಾಸೆ ತೊರೆದು ಹೋರಾಡುವಂತೆ ಮಾಡಿತು. ಪಲಾಯನಗೈಯುವ ಸ್ಥಿತಿಯಲ್ಲಿದ್ದ ಮುಸಲ್ಮಾನರು ತಿರುಗಿ ಬಿದ್ದ ಹೊಡೆತಕ್ಕೆ ಹವಾಜಿನರು ಚೆಲ್ಲಾಪಿಲ್ಲಿಯಾದರು. ಅವರು ಹಿಮ್ಮೆಟ್ಟಿ ಮಹಮದನ ಸೈನ್ಯ ಜಯ ಸಾಧಿಸಿತು. ಯುದ್ಧ ಪಿಪಾಸುತನದಲ್ಲಿ ಉನ್ಮತ್ತರಾಗಿದ್ದ ಮುಸಲ್ಮಾನರು ಸಿಕ್ಕ ಸಿಕ್ಕವರನ್ನ ಎಲ್ಲರನ್ನೂ ಕೊಚ್ಚಿ ಕೊಂದರು. ಮಕ್ಕಳು ಹೆಂಗಸರು ಸಹ ಅವರ ಕರುಣೆ ಗಿಟ್ಟಿಸಲು ಸಾಧ್ಯವಾಗಲಿಲ್ಲ. ಈ ಕ್ರೌರ್ಯತೆಯ ನಂತರ ಸುಮಾರು ಇಪ್ಪತ್ತನಾಲ್ಕು ಸಾವಿರದಷ್ಟು ಅಪಾರ ಒಂಟೆಗಳ ಗುಂಪು, ನಲವತ್ತು ಸಾವಿರ ಜಾನುವಾರುಗಳು ಹಾಗೂ ನಲವತ್ತು ಸಾವಿರ ಔನ್ಸ್'ಗಳಷ್ಟು ಚೊಕ್ಕ ಬೆಳ್ಳಿ ಮಹಮದನ ವಶವಾಯಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ 'ದ ಸೀಲ್ಡ್ ನೆಕ್ಟರ್'ರಿನ ಪುಟ ಸಂಖ್ಯೆ ೮೦೪ರಲ್ಲಿ.



ಇದಷ್ಟೆ ಅಲ್ಲದೆ ಇನ್ನಷ್ಟು ತಲೆ ಮರೆಸಿಕೊಂಡು ಪ್ರಾಣ ಉಳಿಸಿಕೊಂಡಿದ್ದ ಸೆರೆಯಾಳುಗಳೂ ಸಹ ಅನಂತರ ಅವನ ಕೈ ವಶವಾದರು. ಅವರನ್ನ ಹುಡುಕಿಕೊಂಡು ಖಂಡಿತಾ ಬೆನ್ ಹವಾಜಿನರು ಬಿಡಿಸಿಕೊಳ್ಳಲು ಬಂದೆ ಬರುತ್ತಾರೆ. ಆಗ ಅವರ ಬಂಧುಗಳಿಂದ ಅಪಾರ ಒತ್ತೆ ಹಣವನ್ನೂ ಸಹ ವಸೂಲಿ ಮಾಡಬಹುದೆಂದು ಹಂಚಿಕೆ ಹಾಕಿಕೊಂಡು ಮಹಮದ್ ಕುಳಿತಿದ್ದ. ಅವನ ಪಡೆಯಲ್ಲೂ ಅಪಾರ ಪ್ರಾಣಹಾನಿ ಆಗಿತ್ತು. ಅವರೆಲ್ಲರೂ ಹೊಸತಾಗಿ ಇಸ್ಲಾಮ್ ಸ್ವೀಕರಿಸಿ ಮುಸಲ್ಮಾನರಾಗಿ ಅವನ ಹಿಂಬಾಲಕರಾಗಿದ್ದರು. ಅವರೆಲ್ಲರ ಕುಟುಂಬಸ್ಥರಿಗೆ ಧೈರ್ಯ ಹಾಗೂ ಸಾಂತ್ವಾನ ತುಂಬುವ ಕಾರಣಕ್ಕಾಗಿ ಮಹಮದ್ ವಿಶೇಷ ಪ್ರಾರ್ಥನಾ ಸಭೆಯನ್ನ ಏರ್ಪಡಿಸಿದ. ಯುದ್ಧದಲ್ಲಿ ಸಂದ ಜಯಕ್ಕೆ ಅಲ್ಲಾಹನೆ ನೇರ ಕಾರಣ ಎಂದು ಬಲವಾಗಿ ನಂಬಿದ್ದ ಮಹಮದ್ ಖುರ್ಹಾನಿನ ಸುರಾ ಸಂಖ್ಯೆ ೯/೨೫ರಲ್ಲಿ ಅದನ್ನ ಸುದೀರ್ಘವಾಗಿ ವಿವರಿಸಿದ್ದಾನೆ.


ಬೇಗ ಅರೇಬಿಯಾದ ಉದ್ದಗಲಕ್ಕೂ ಇಸ್ಲಾಮನ್ನ ಪಸರಿಸಿಯೆ ತೀರುವ ಛಲ ಅವನಲ್ಲಿ ಮೂಡಿತ್ತು. ತಾನು ಹಿಂದೆ ಯುದ್ಧ ಜರುಗಿಸಿ ಗೆದ್ದಿದ್ದರೂ ಸಹ ಮತಾಂತರ ಮಾಡದೆ ಬಿಟ್ಟಿದ್ದ ಬುಡಕಟ್ಟಿನವರನ್ನೆಲ್ಲಾ ಮುಸಲ್ಮಾನರಾಗಿಸಿಯೆ ತೀರಲು ಆತ ನಿರ್ಧರಿಸಿದ. ಈ ನಿಟ್ಟಿನಲ್ಲಿ ಆತನ ಮೊದಲ ಗುರಿ ಅಲ್ ತೈಫ್ ಆಗಿತ್ತು. ಮರಳಿ ಆತನ ಪಡೆ ಆ ಕೋಟೆಗೆ ಲಗ್ಗೆ ಇಟ್ಟಾಗ ಕೋಟೆಯ ಮೇಲಿನಿಂದ ವಿಷ ಸವರಿದ ಮೊನೆಯ ಬಾಣಗಳು ಅವನ ಪಡೆಯನ್ನು ಎದುರುಗೊಂಡವು. ಅನೇಕ ಹೆಣಗಳು ಹೋರಾಟಕ್ಕೂ ಮುನ್ನವೆ ಉರುಳಿದವು. ಸೈನ್ಯ ಹಿಮ್ಮೆಟ್ಟುವುದು ಅನಿವಾರ್ಯವಾಯಿತು. ಹೀಗಾಗಿ ಬೇರೊಂದು ಯುದ್ಧತಂತ್ರಕ್ಕೆ ಮೊರೆ ಹೋಗುವುದು ಆತನಿಗೆ ಅನಿವಾರ್ಯವಾಯಿತು.


ಅವನು ತನ್ನ ನವ ಬೆಂಬಲಿಗರಾಗಿ ಪರಿವರ್ತಿತರಾಗಿದ್ದ ಕೋಟೆ ಏರಿ ಯುದ್ಧ ಮಾಡುವ ನೈಪುಣ್ಯತೆ ಇದ್ದ ಮೆಕ್ಕಾ ಸಮೀಪದ ಕೆಲವು ಕಾಟು ಬುಡಕಟ್ಟಿನ ಮಂದಿಯನ್ನ ಅಲ್ಲಿಗೆ ಕರೆಸಿದ. ಅವರು ಕೋಟೆಯ ಮೇಲೆ ಕವಣೆ ಕಲ್ಲನ್ನು ಗುರಿಯಿಟ್ಟು ಹೊಡೆಯುವುದರಲ್ಲಿ ನಿಪುಣರಾಗಿದ್ದರು. ಅಲ್ಲದೆ ತಲೆಯ ಮೇಲೆ ಗುರಾಣಿ ತಟ್ಟೆಗಳನ್ನ ಒತ್ತೊತ್ತಾಗಿ ಪೇರಿಸಿ ಸೈನಿಕರನ್ನ ಮುನ್ನುಗ್ಗುವಂತೆ ಮಾಡುವುದರಲ್ಲಿ ನಿಷ್ಣಾತರೂ ಆಗಿದ್ದರು. ಆದರೆ ಈ ಬಗ್ಗೆ ಕೋಟೆಯೊಳಗಿದ್ದವರಿಗೆ ಸುಳಿವು ದೊರಕಿ ಅವರು ಮುಂಜಾಗ್ರತೆ ವಹಿಸಿದರು. ಸುಡು ಕಬ್ಬಿಣದ ಉಂಡೆಗಳನ್ನ ಮೇಲಿನಿಂದ ಶತ್ರು ಪಾಳಯದ ಮೇಲೆ ಬೇಕಾಬಿಟ್ಟಿ ಸುರಿಯಲಾಯಿತು. ಮಹಮದನ ಪಡೆ ದಿಕ್ಕಾಪಾಲಾಗಿ ಓಡಿ ಹೋಯಿತು.


ಮಹಮದ್ ಇದರಿಂದ ವಿಪರೀತ ವಿಚಲಿತನಾದ. ಈ ಅಲ್ ತೈಫ್ ಅವನ ಪಾಲಿಗೆ ಕಗ್ಗಂಟಾಯಿತು. ಹೇಗಾದರೂ ಸರಿ ಉಪಾಯ ಹೂಡಿ ಆ ಕೋಟೆಯೊಳಗಿದ್ದ ಮಂದಿಯನ್ನ ಮಣಿಸಲೆ ಬೇಕಿತ್ತವನಿಗೆ. ಇದಕ್ಕಾಗಿ ಉಪಾಯ ಹಣೆಯಲು ಅವರ ಬಾಳ್ವೆಯ ರೀತಿ ರಿವಾಜುಗಳನ್ನ ಹಾಗೂ ಅವರ ಧಾರ್ಮಿಕ ನಂಬಿಕೆಗಳ ಬಗ್ಗೆ ವಿವರವಾಗಿ ಆತ ಮಾಹಿತಿ ಕಲೆ ಹಾಕಿದ. ಅವರು ಪ್ರಕೃತಿ ಆರಾಧಕರಾಗಿದ್ದು ಕೋಟೆಯ ಹೊರ ವಲಯದಲ್ಲಿದ್ದ ಅವರ ತೋಟ ಹಾಗೂ ಖರ್ಜೂರದ ಫಲವತ್ತಾದ ಮರಗಳನ್ನ ಕಡಿದು ನಾಶ ಪಡಿಸಿದರೆ ಅವರು ಶರಣಗತಿ ಸೂಚಿಸುವುದು ಅನಿವಾರ್ಯವಾಗುತ್ತದೆ ಎಂದಾತ ಹಂಚಿಕೆ ಹಾಕಿದ. ಅವನ ಈ ಹಾಲಾಲುಕೋರ ಹಂಚಿಕೆ ಖಚಿತ ಫಲ ನೀಡಿತು.




ಕೋಟೆಯೊಳಗಿದ್ದ ಅಸಹಾಯಕ ನಿಶ್ಪಾಪಿಗಳು ದೇವರ ಮೇಲೆ ಭಾರ ಹಾಕಿ ತಮ್ಮ ಹಾಗೂ ತಮ್ಮ ತೋಟಗಳ ಸಂರಕ್ಷಣೆಗೆ ದೀನವಾಗಿ ಮೊರೆಯಿಟ್ಟರು. ಅವರ ಆರ್ತ ಧ್ವನಿ ದಯನೀಯವಾಗಿತ್ತು. ಅವರ ವೇದನೆಯ ಮೊರೆ ಮಹಮದನನ್ನೂ ತುಸು ತಟ್ಟಿತು. ಆತ ತೋಟದ ನಾಶವನ್ನ ತತ್ಕಾಲಿಕವಾಗಿ ನಿಲ್ಲಿಸಲು ಆದೇಶಿಸಿದ. ಆದರೆ ಅವರನ್ನ ಕೋಟೆಯಿಂದ ಹೊರಗೆಳೆಯುವ ಮಾರ್ಗೋಪಾಯಗಳು ಮಾತ್ರ ಆತನಿಗೆ ಹೊಳೆಯಲೆ ಇಲ್ಲ. ಬೆದಾವಿನರೊಟ್ಟಿಗೆ ಈ ಬಗ್ಗೆ ಸಮಾಲೋಚನೆ ನಡೆಸಿದ. ಆಗ ಬಂದ ಒಂದು ಸಲಹೆ ಅಮೂಲ್ಯವಾಗಿತ್ತು. 'ಒಂದು ನರಿ ತನ್ನ ಬಿಲದಲ್ಲಿ ಅಡಗಿ ಕುಳಿತಿದ್ದರೆ ಅದನ್ನ ಮೇಲೆ ಬಿದ್ದು ಹಿಡಿಯಲು ಬಹಳ ಕಾಲ ಬೇಕಾಗುತ್ತದೆ! ಅದನ್ನ ಹಾಗೆಯೆ ಬಿಟ್ಟರೆ ನಿನಗೇನೂ ನಷ್ಟವಿಲ್ಲ, ಹಸಿವಾದಾಗ ಅದು ಹೊರಬರಲೆ ಬೇಕಲ್ಲವೆ?' ಅನ್ನುವ ಮೌಲಿಕವಾದ ಸಮರ ಸಲಹೆಯನ್ನವರು ಮಹಮದನಿಗೆ ಕೊಟ್ಟರು. ಅದು ಅವನ ಮನಸ್ಸಿಗೂ ಸಹ ಬಂದಿತು.


ಅದರನುಸಾರ ಆತ ಅಲ್ ತೈಫಿಗೆ ಹಾಕಿದ್ದ ಮುತ್ತಿಗೆಯನ್ನು ತೆಗೆದು ಸೇನೆಯನ್ನು ಅಲ್ ಜಿರಾನ ಎನ್ನುವ ಇನ್ನೊಂದು ಸಮೀಪದ ಜಾಗಕ್ಕೆ ಸ್ಥಳಾಂತರಿಸಿದನು. ಅಲ್ಲಿ ಬೆನ್ ಹವಾಜಿನ್ ಸೆರೆಯಾಳುಗಳನ್ನ ಸಹ ಇಡಲಾಗಿತ್ತು. ಅವರ ವಿಲೇವಾರಿಯತ್ತ ಮಹಮದ್ ಈಗ ಗಮನ ಕೊಟ್ಟ. ಸೆರೆಯಾಳುಗಳನ್ನ ಬಿಡಿಸಿಕೊಳ್ಳಲು ಪ್ರವಾಹೋಪಾದಿಯಲ್ಲಿ ಹವಾಜಿನರಲ್ಲಿ ಉಳಿದ ಇನ್ನಷ್ಟು ಮಂದಿ ಬಂದು ಅವನ ಕಾಲಿಗೆ ಸಹ ಬಿದ್ದರು. ಬೇಡಿಕೊಂಡರು. ಆ ಮಂದಿಯಲ್ಲಿದ್ದ ಒಬ್ಬ ಮುದುಕಿ ತಾನು ಬಾಲ್ಯಕಾಲದಲ್ಲಿ ಮಹಮದನನ್ನು ಎತ್ತಿ ಆಡಿಸಿದ್ದ ಅವನ ದೊಡ್ದಪ್ಪನ ಮನೆಯ ಸೌಕರಳಾಗಿದ್ದೆ ಎಂದು ಮುಸಲ್ಮಾನ ಸೈನಿಕರನ್ನು ಹೆದರಿಸಿದಳು! ಅವಳನ್ನು ಮಹಮದನ ಸನ್ನಿಧಾನಕ್ಕೆ ಎಳೆದೊಯ್ಯಲಾಯಿತು. ಅಲ್ಲಿ ಆಕೆಯ ಗುರುತು ಹಿಡಿದ ಮಹಮದ್ ಆಕೆಯ ಮಾತುಗಳು ನಿಜವೆಂದು ಒಪ್ಪಿಕೊಂಡು ತನ್ನೊಂದಿಗೆ ಆಕೆಯನ್ನೂ ಮದೀನಕ್ಕೆ ಕರೆದೊಯ್ಯುವ ಭರವಸೆ ಇತ್ತು ಬಂಧ ಮುಕ್ತಗೊಳಿಸಿದ.



ಈ ಸುದ್ದಿ ಹವಾಜಿನರಲ್ಲಿ ಜನಜನಿತವಾಗಿ ಆತನ ಕೃಪಾಶಿರ್ವಾದಕ್ಕಾಗಿ ಅವರೂ ಹಾತೊರೆದರು. ಆ ಮೂಲಕವಾದರೂ ಕ್ಷಮೆ ಗಿಟ್ಟಿಸಿ ತಮ್ಮ ಬಂಧಿತ ಬಂಧು ಮಿತ್ರರನ್ನು ಬಿಡಿಸಿಕೊಂಡು ಹೋಗಲವರು ಹವಣಿಸಿದರು. ಅವರ ಅಹವಾಲುಗಳನ್ನ ಆಲಿಸುವಾಗ ನಿಜಕ್ಕೂ ಮಹಮದ್ ಮರುಕಗೊಂಡ. ನಿಮಗೆ ನಿಮ್ಮ ಆಸ್ತಿ ಹಾಗೂ ಬಂಧುಗಳಲ್ಲಿ ಯಾವುದು ಹೆಚ್ಚು ಎಂದಾಗ ಅವರೆಲ್ಲರೂ ಬಂಧುಗಳು ಎಂದರು. ಈ ಭಾವುಕ ಮಾತುಗಳು ಅವನನ್ನು ಸಹ ಆಕರ್ಷಿಸಿತು. ತನ್ನ ಪಾಲಿನ ಸೆರೆಯಾಳುಗಳನ್ನ ಬಿಡುಗಡೆ ಮಾಡಿದನಷ್ಟೆ ಅಲ್ಲದೆ ಇನ್ನಿತರ ವಶದಲ್ಲಿಲಿದ್ದ ಸೆರೆಯಾಳುಗಳನ್ನೂ ಸಹ ಆಜ್ಞೆಯೊಂದನ್ನ ಜಾರಿ ಮಾಡಿ ಬಿಡುಗಡೆ ಮಾಡಿಸಲು ಕಾರಣನಾದ. ಈ ಒತ್ತೆ ಹಣದ ಆಸೆಗೆ ಬೀಳದೆ ಬಿಡುಗಡೆ ಮಾಡಲು ಆತನ ಅನುಯಾಯಿಗಳು ಸಮ್ಮತಿಸಿದರಾದರೂ ಸಹ ಕೊಳ್ಳೆ ಹೊಡೆದ ಆಸ್ತಿಪಾಸ್ತಿ ಸ್ವತ್ತುಗಳನ್ನ ಹಾಗೂ ಧನ, ಜಾನುವಾರುಗಳನ್ನ ಬಿಟ್ಟು ಕೊಡಲು ಮಾತ್ರ ಸುತರಂ ಒಪ್ಪಲಿಲ್ಲ.


ಅದಕ್ಕೆ ಮಣಿದ ಮಹಮದ್ ಎಂದಿನಂತೆ ಐದನೆ ಒಂದು ಭಾಗವನ್ನ ಪ್ರವಾದಿಯ ಪಾಲಾಗಿ ಉಳಿಸಿಕೊಂಡು ಉಳಿದ ಎಲ್ಲಾ ಚರಾಚರ ಲೂಟಿಯ ಸೊತ್ತುಗಳನ್ನ ಅವರೆಲ್ಲರಲ್ಲೂ ಸಮಭಾಗ ಮಾಡಿ ಹಂಚಿದ. ಅದರಲ್ಲಿ ಯಾವ ತಾರತಮ್ಯವೂ ತೋರಲಿಲ್ಲ. ಅದುವರೆಗೂ ತನ್ನ ಶತ್ರುಗಳಾಗಿದ್ದು ಇತ್ತೀಚೆಗಷ್ಟೆ ಮುಸಲ್ಮಾನರಾಗಿದ್ದ ಮಾಜಿ ಖುರೈಷಿ ಮುಖಂಡ ಅಬು ಸಫ್ಯಾನ್ ಹಾಗೂ ಅವನ ಮಕ್ಕಳಿಗೂ ಆ ಆಸ್ತಿ ಹಾಗೂ ಜಾನುವಾರುಗಳ ಕೊಳ್ಳೆಯ ಪಾಲು ಸಿಕ್ಕಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೮೧೪ರಲ್ಲಿ. ಆದರೆ ಈ ಹಂಚಿಕೆ ಅದೆಷ್ಟೆ ಸಮಾನ ಹಾಗೂ ಪ್ರಾಮಾಣಿಕವಾಗಿದ್ದರೂ ಮದೀನಾದ ಪ್ರಜೆಗಳು ಮಾತ್ರ ಅಸಂತುಷ್ಟರಾದರು. ಅವರ ಪ್ರಕಾರ ಕಷ್ಟಕಾಲದಲ್ಲಿ ಸೋತು ಸೊರಗಿದ್ದ ಮಹಮದನನ್ನು ಆದರಿಸಿ ಆಶ್ರಯ ನೀಡಿ ಕಾಪಾಡಿದ್ದ ಅವರನ್ನು ಮಹಮದ್ ಕಡೆಗಣಿಸಿದ್ದ. ತನ್ನ ಮೂಲ ಊರಾದ ಮೆಕ್ಕಾದ ನವ ಮತಾಂತರಿತರಾದ ತನ್ನದೆ ಖುರೈಷಿ ಕುಲದವರೊಂದಿಗೆ ಶಾಮೀಲಾಗಿ ಬೇಕಂತಲೆ ಅವರಿಗೆ ಅಗತ್ಯಕ್ಕಿಂತ ಅಧಿಕ ಪ್ರಾಮುಖ್ಯತೆಯನ್ನ ನೀಡಿದ್ದ.


ಖುರೈಷಿಗಳ ಪರವಾಗಿ ಪಕ್ಷಪಾತದ ವರ್ತನೆ ತೋರುತ್ತಿದ್ದಾನೆ ಎನ್ನುವ ಆಪಾದನೆ ಎದ್ದು ಗುಸುಗುಸು ಹಬ್ಬಿತು. ಪರಿಸ್ಥಿತಿ ಅತೃಪ್ತಿಯ ಕಾರಣ ಭುಗಿಲೆದ್ದು ಪರಿಸ್ಥಿತಿ ಕೈ ಮೀರುವ ಮುನ್ನ ಮದೀನಾದ ಒಬ್ಬ ಪ್ರತಿಷ್ಠಿತ ಮುಸಲ್ಮಾನನಾದ ಸಾದ್ ಒಬ್ನ್ ಒಬಾದ್ ಮಹಮದನ ಬಳಿ ಸಾರಿ ಆ ವಿಷಯವನ್ನವನ ಗಮನಕ್ಕೆ ತಂದ. ಪರಿಸ್ಥಿತಿಯ ಗಹನತೆಯನ್ನ ಅರಿತ ಮಹಮದ್ ತಕ್ಷಣ ಅವರನ್ನೆಲ್ಲಾ ಉದ್ದೇಶಿಸಿ ಮಾತನಾಡಿ ಭರವಸೆ ತುಂಬಲು ಪ್ರಯತ್ನಿಸಿದ. ತಾನು ಎಂದೆಂದಿಗೂ ಮದೀನಾದ ನೆಲಕ್ಕೆ ಹಾಗೂ ಅಲ್ಲಿನ ನಿವಾಸಿಗಳಿಗೆ ಚಿರ ಋಣಿ. ತನ್ನ ಕಷ್ಟ ಕಾಲದಲ್ಲಿ ಆಸರೆ ನೀಡಿದ ಅಲ್ಲಿನ ಆದರ ಹಾಗೂ ಸಾಂತ್ವಾನವನ್ನ ಎಂದಾದರೂ ಮರೆಯಲು ಸಾಧ್ಯವೆ? ಎಂದು ನಾಟಕೀಯವಾಗಿ ಅವರನ್ನ ಪ್ರಶ್ನಿಸಿದ. ಬಹಿಷ್ಕಾರಕ್ಕೊಳಗಾಗಿ ನರಳುತ್ತಿದ್ದ ತನ್ನನ್ನ ಪ್ರೀತಿ ವಿಶ್ವಾಸದಿಂದ ಕಂಡು ಸಲಹಿದ ಮದೀನವನ್ನು ಕಡೆಗಣಿಸಲು ಅಸಾಧ್ಯ ಎಂದಾತ ಭಾವುಕನಾಗಿ ನುಡಿದ. ಆತನ ಕಳಕಳಿಯ ಕೃತಜ್ಞತಾಪೂರ್ವಕ ನುಡಿಗಳು ಸರಿಯಾಗಿ ಮುಟ್ಟಬೇಕಾದ ಗುರಿಯನ್ನ ಹೋಗಿ ಮುಟ್ಟಿತ್ತು. ಅವನನೊಂದಿಗೆ ಭಾವುಕರಾಗಿ ತಾವೂ ಕಂಬನಿಗೆರೆದ ಮದೀನಾದ ವಾಸಿಗಳು ತಾವು ಈ ಉತ್ತರದಿಂದ ನಾವೆಲ್ಲಾ ಸಂತೃಪ್ತರಾಗಿದ್ದೇವೆ! ತಮ್ಮ ಮನದಲ್ಲಿದ್ದ ಶಂಕೆ ದೂರಾಗಿದೆ ಎಂದು ಒಕ್ಕೊರಲಿನಿಂದ ಸಾರಿದರು.


ಆದರೆ ಎಲ್ಲರನ್ನೂ ಏಕಕಾಲದಲ್ಲಿ ಸಂಭಾಳಿಸುವುದು ಆತನಿಗೆ ಕಡುಕಷ್ಟವಾಯಿತು. ಹೀಗಾಗಿ ಎಂದಿನ ಚಾಳಿಯಂತೆ ಆತ ದೈವವಾಣಿಗೆ ಮೊರೆ ಹೋದ. ತನಗೆ ದೊರಕಿದ ಪ್ರವಾದಿಯ ಪಾಲಾದ ಒಟ್ಟು ಕೊಳ್ಳೆಯ ಐದನೆ ಒಂದು ಭಾಗದಲ್ಲಿ ಸಕಲವೂ ಬಡವರ ಹಾಗೂ ನಿರ್ಗತಿಕರ ವೆಚ್ಚಕ್ಕಾಗಿ ಮೀಸಲು. ಇತರರ ಹೃದಯಗಳನ್ನ ಗೆಲ್ಲಲು ಸೆರೆಯಾದ ಎಲ್ಲಾ ಬಂಧಿಗಳನ್ನ ಬಿಡಿಸಲು ಸಾಲ ಬಾಧೆಯಿಂದ ನರಳುತ್ತಿರುವವರನ್ನ ಅದರಿಂದ ಮುಕ್ತರನ್ನಾಗಿಸಲು, ದೇವರ ಸೇವೆಗೈಯಲು ಹಾಗೂ ಪ್ರಯಾಣಿಕರ ಸೌಕರ್ಯಗಳನ್ನ ಅಭಿವೃದ್ಧಿ ಪಡಿಸಲು ವಿನಿಯೋಗಿಸಬೇಕೆಂದು ದೈವವಾಣಿ ದೊರಕಿತು. ಖುರ್ಹಾನಿನ ಸುರಾ ಸಂಖ್ಯೆ ೯/೫೮ರಲ್ಲಿ ಇದನ್ನ ಗಮನಿಸಬಹುದು ಎನ್ನುತ್ತಾರೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತಮ್ಮ ಕೃತಿ 'ಲೈಫ್ ಆಫ್ ಮಹಮದ್'ನ ಪುಟ ಸಂಖ್ಯೆ ೪೨೩ರಲ್ಲಿ.


ಇದನ್ನ ಆತ ಸೆರೆಯಾದ ಬೆನ್ ಹವಾಜಿನರಿಗೂ ಅನ್ವಯಿಸಿದ. ಒಂದೊಮ್ಮೆ ಅವರೆಲ್ಲಾ ಇಸ್ಲಾಮಿಗೆ ಶರಣಾದರೆ ಅವರಿಗೂ ಕೊಡುಗೆಗಳು ಕಾದಿವೆ ಎಂದು ಮಹಮದ್ ಅವರ ನಾಯಕ ಮಲ್ಲಿಕನಿಗೆ ತಿಳಿಸಿದ. ಸೋತು ಸುಣ್ನವಾಗಿದ್ದ ಪಡೆಯ ಮುಖಂಡ ಮಲ್ಲಿಕ್ ಅನಿವಾರ್ಯವಾಗಿ ಸಮ್ಮತಿ ಸೂಚಿಸಿ ಸಂತೋಷದಿಂದಲೆ ಮುಸಲ್ಮಾನನಾಗಿ ಮತಾಂತರವಾದ. ಅವನ ಪಾಲಿಗೆ ನೂರು ಒಂಟೆಗಳ ಕೊಡುಗೆ ಹಾಗೂ ಮಹಮದನ ಸಹಾಯ ಹಸ್ತ ಕೂಡಲೆ ಒಲಿದು ಬಂತು! ಅವರಿಂದ ಹೊಡೆದ ಕೊಳ್ಳೆಯಲ್ಲಿ ಅವರಿಗೆ ಕೊಡುಗೆಯನ್ನ ದಯಪಾಲಿಸಲಾಗಿತ್ತು ಅನ್ನುವುದು ಇಲ್ಲಿ ಗಮನಾರ್ಹ. ಅಲ್ ಜಿರಾನ್ ಕೋಟೆಯನ್ನ ಕೊಳ್ಳೆ ಹೊಡೆದ ಲೂಟಿಯ ವಸ್ತುಗಳನ್ನೆಲ್ಲ ವಿಲೆವಾರಿ ಮಾಡಿದ ಮಹಮದ್ ಮೆಕ್ಕಾದ ಆ ವರ್ಷದ ಯಾತ್ರೆ ಆಲ್ಲಿಗೆ ಮುಗಿಯಿತೆಂದು ಘೋಷಿಸಿ ಮರಳಿ ಮದೀನಾದತ್ತ ಹೆಜ್ಜೆ ಹಾಕಿದ.


ಮಹಮದನ ವಶಕ್ಕೆ ಬರುವವರೆಗೂ ಮೆಕ್ಕಾ ಒಂದು ಧಾರ್ಮಿಕ ಹಾಗೂ ವ್ಯಾಪಾರಿ ಕೇಂದ್ರವಾಗಿ ವಿಜೃಂಭಿಸಿತ್ತು. ಅವನ ಆಗಮನಕ್ಕೂ ಹಿಂದೆ ಸಾರ್ಥದ ನಿಲ್ದಾಣವಾಗಿದ್ದ ಅದು ಬಹುತೇಕ ವ್ಯಾಪಾರಿ ಗುಂಪುಗಳಿಂದ ಗಿಜಿಗುಡುತ್ತಿತ್ತು. ಆದರೆ ಆತ ಕಪಿಮುಷ್ಠಿಗೆ ಸಿಲುಕಿದ ನಂತರ ಅದರ ವ್ಯಾಪಾರಿ ಪ್ರಾಮುಖ್ಯತೆ ಮರೆಯಾಗಿ ಕ್ರಮೆಣ ಇನ್ನಿಲ್ಲವಾಗಿ ಹೋಗಿ ಕೇವಲ ಧಾರ್ಮಿಕ ಯಾತ್ರಾಕ್ಷೇತ್ರವೆಂಬ ಮಾನ್ಯತೆ ಮಾತ್ರ ಶಾಶ್ವತವಾಗುಳಿಯಿತು. ಆದರೆ ವಾಸ್ತವದಲ್ಲಿ ನಗರದ ಬೆಳವಣಿಗೆಗೆ ಅದು ಅನುಕೂಲಕರವಾಗಿಯೆ ಪರಿಣಮಿಸಿತು. ಕಾಲಾಂತರದಲ್ಲಿ ಇಸ್ಲಾಮ್ ತನ್ನ ಬರ್ಬರತೆಯ ಮೂಲಕ ಲೋಕದುದ್ದ ಹರಡತೊಡಗಿದಾಗ ಅದರ ಅನುಯಾಯಿಗಳ ಸಂಖ್ಯೆ ಹೆಚ್ಚಿತಷ್ಟೆ. ಅವರೆಲ್ಲರೂ ಶ್ರದ್ಧಾ ಭಕ್ತಿಯಿಂದ ಅಲ್ಲಿಗೆ ಯಾತ್ರಿಸುವ ಖಡ್ಡಾಯದ ಜೀವನ ವಿಧಿಗೆ ಬದ್ಧರಾಗಿದ್ದರು. ಅವರೆಲ್ಲರೂ ಇತ್ತ ಕಾಣಿಕೆ ಹಾಗೂ ತಂದು ಸುರಿದ ದ್ರವ್ಯ ಧನ ರಾಶಿಯಿಂದ ಮೆಕ್ಕಾ ಸಮೃದ್ಧವಾಗತೊಡಗಿತು.



ಕ್ರಮೇಣ ಪ್ರಪಂಚದಾದ್ಯಂತ ಎದ್ದು ನಿಂತ ಮುಸಲ್ಮಾನ ರಾಜ್ಯಗಳ ಸುಲ್ತಾನರು ಅಪಾರ ಪ್ರಮಾಣದ ಧಾರ್ಮಿಕ ಕಾಣಿಕೆಗಳನ್ನಿಲ್ಲಿಗೆ ತಂದು ಸುರಿದರು. ಇಸ್ಲಾಮಿನ ಕೇಂದ್ರ ವ್ಯಕ್ತಿಗಳಾಗಿ ಮೆರೆದ ಖಲೀಫರುಗಳಂತೂ ತಮ್ಮ ರಾಜಾದಾಯದ ಬಹು ಪಾಲನ್ನ ಆ ನಗರವನ್ನ ಶೃಂಗರಿಸಲು ವೆಚ್ಚ ಮಾಡಿ ಆನಂದಿಸಿದರು. ಮಹಮದ್ ಅದನ್ನು ಕೇವಲ ಇಸ್ಲಾಮಿನ ರಾಜಧಾನಿಯಾಗಿ ಘೋಷಿಸಿ ಮುಸಲ್ಮಾನೇತರರನ್ನ ಅಲ್ಲಿಗೆ ಪ್ರವೇಶಿಸದಂತೆ ನಿರ್ಬಂಧಿಸಿದ. ಮುಸಲ್ಮಾನ ಸಾಮ್ರಾಜ್ಯಶಾಹಿಯ ರಾಜಧಾನಿಗಳು ಕಳೆದ ಶತಮಾನದ ಆರಂಭದ ಇಪ್ಪತ್ತೆರಡು ವರ್ಷಗಳವರೆಗೂ ಜಗತ್ತಿನ ನಾನಾ ನಗರಗಳಿಗೆ ಸ್ಥಳಾಂತರವಾದರೂ, ಸದ್ಯ ಅದರ ಹಿಡಿತ ಅನಧಿಕೃತವಾಗಿ ರಿಯಾದಿನಲ್ಲಿದ್ದರೂ ಆಳುವ ದೊರೆಗಳಲ್ಲಿ ಯಾರೊಬ್ಬರೂ ಮೆಕ್ಕಾವನ್ನ ಮರೆಯಲಿಲ್ಲ. ತಮ್ಮ ರಾಜಧಾನಿಗಳಷ್ಟೆ ಅಕ್ಕರೆ ಹಾಗೂ ಅಸ್ಥೆಯಿಂದ ಮೆಕ್ಕಾವನ್ನು ಸಹ ಅವರೆಲ್ಲಾ ಸಿಂಗರಿಸಿ ತೃಪ್ತಿ ಪಟ್ಟರು.


ಅವರೆಲ್ಲರ ತನು ಮನ ಧನದ ಬೆಂಬಲದಿಂದ ಒಂದಾನೊಂದು ಕಾಲಕ್ಕೆ ಮಹಮದನ ನಿದ್ದೆ ಗೆಡಿಸಿದ್ದ ಮೆಕ್ಕಾ, ಆತನ ರಕ್ತಕ್ಕಾಗಿ ಹಪಾಹಪಿಸಿದ್ದ ಮೆಕ್ಕಾ, ಆತನನ್ನ ನಿರ್ದಾಕ್ಷಿಣ್ಯವಾಗಿ ಒದ್ದು ಓಡಿಸಿದ್ದ ಮೆಕ್ಕಾ, ಅವನ ನವ ಧಾರ್ಮಿಕತೆ ಹಾಗೂ ನಂಬಿಕೆಗಳಿಗೆ ಪ್ರಬಲ ಪ್ರತಿರೋಧ ಒಡ್ಡಿದ್ದ ಮೆಕ್ಕಾ ಇದೀಗ ಇಸ್ಲಾಮಿನ ಉನ್ಮತ್ತಾಭಿಮಾನದ ನಗರವಾಗಿ ಬೆಳೆದು ಉಳಿಯಿತು. ಇಂದಿಗೂ ಅಲ್ಲಿನ ಪ್ರಾವಿತ್ರ್ಯತೆ ಹಾಗೂ ಮೌಲಿಕತೆ ತುಸುವೂ ಕುಂದು ಕಂಡಿಲ್ಲ. ಇನ್ನಿತರ ಮತಾವಲಂಭಿಗಳು ತಮ್ಮ ಜನ್ಮಸಿದ್ಧ ಹಕ್ಕಾಗಿದ್ದರೂ ಅ ನಗರವನ್ನ ಪ್ರವೇಶಿಸದಂತೆ ಮುಸಲ್ಮಾನರು ಮತಾಂಧತೆಯಲ್ಲಿ ಪ್ರತಿಬಂಧಿಸುತ್ತಾರೆ ಅನ್ನುವುದನ್ನ ಬಿಟ್ಟರೆ ಮೆಕ್ಕಾದ ಹಿರಿಮೆ ಅಂದಿದ್ದಷ್ಟೆ ಇಂದೂ ಉಳಿದಿದೆ. ವಾಸ್ತವದ ಭೂತಗನ್ನಡಿಯಲ್ಲಿ ನೋಡಿದರೆ ಮಹಮದ್ ಆ ಪವಿತ್ರ ನಗರಕ್ಕೆ ಕೊಟ್ಟದ್ದಕ್ಕಿಂತ ಆತ ಆ ಧಾರ್ಮಿಕ ಅಯಸ್ಕಾಂತೀಯ ಪ್ರಭಾವದಿಂದ ಬಾಳಿನುದ್ದ ಪಡೆದದ್ದೆ ಹೆಚ್ಚು ಎನ್ನುವುದು ಸುಸ್ಪಷ್ಟವಾಗುತ್ತದೆ.


( ಇನ್ನೂ ಇದೆ,)

Thursday, November 19, 2015

ವಲಿ - ೩೨





ಮೆಕ್ಕಾ ನಗರ ಮಹಮದನ ವಶಕ್ಕೆ ಬರುವ ಮೊದಲು ಸರ್ವ ಜನಾಂಗದ ಶಾಂತಿಯ ತೋಟವಾಗಿತ್ತು. ಅಲ್ಲಿನ ಕಾಬಾಗುಡಿಗೆ ಸುತ್ತಮುತ್ತಲ ಕ್ರೈಸ್ತರು, ಯಹೂದಿಗಳು, ಈಜಿಪ್ಟ್, ಗ್ರೀಕ್ ಹಾಗೂ ರೋಮನ್ ಸಂಪ್ರದಾಯದ ಮೂರ್ತಿಪೂಜಕರು, ಪರ್ಷಿಯಾದ ಅಗ್ನಿ ಆರಾಧಕರು ಜೊತೆಗೆ ಗಡಿ ಹಿಂದೂಸ್ತಾನದ ಸನಾತನಿಗಳು ಎಲ್ಲರೂ ತಮ್ಮತಮ್ಮ ನಂಬಿಕೆಗನುಗುಣವಾಗಿ ಹರಕೆ ಹೊತ್ತು ಬಂದು ಬಲಿ ಹಾಗೂ ಮುಡಿ ನೀಡಿ ಹರಕೆಯನ್ನ ತೀರಿಸುವ ಪದ್ಧತಿ ಇತ್ತು. ನಗರದೊಳಗೂ ಸಹ ಅಲ್ಪಸ್ವಲ್ಪ ಪರಿಮಾಣದಲ್ಲಿ ಈ ಎಲ್ಲಾ ವರ್ಗದ ಮಂದಿ ಯಾವುದೆ ತಂಟೆ ತಕರಾರಿಲ್ಲದೆ ನೆಲೆಸಿ ಸಹಬಾಳ್ವೆ ನಡೆಸುತ್ತಿದ್ದರು. ಸ್ವತಃ ಮಹಮದನ ಬುಡಕಟ್ಟಾದ ಖುರೈಷಿಗಳೆ ಮೂರ್ತಿಪೂಜಕರಾದ ಅರೆ ಸನಾತನಿಗಳಾಗಿದ್ದರು, ಅವರ ಆಚರಣೆಗಳಲ್ಲಿ ಸನಾತನ ಧರ್ಮದಷ್ಟೆ ಗ್ರೀಕನ್ ಆರಾಧಾನ ಪದ್ಧತಿಗಳು ಹಾಗೂ ಯಹೂದಿ ಆಚರಣೆಗಳು ಮಿಳಿತವಾಗಿದ್ದವು. ಸರಳವಾಗಿ ಹೇಳಬೇಕೆಂದರೆ ಒಟ್ಟಿನಲ್ಲಿ ಇಂದಿನ ಭಾರತದ ಯಾವುದೆ ಒಂದು ಪ್ರಸಿದ್ಧ ಯಾತ್ರಾಸ್ಥಳದ ಮಾದರಿಯಲ್ಲಿ ಮೆಕ್ಕಾ ಸಹ ಇತ್ತು.



ಈಗಲೂ ಸಹ ಇಸ್ರೇಲಿನ ಜುರೇಸಲಂ ಹಾಗೂ ಶ್ರೀಲಂಕಾದ ಕದಿರಗಾಮ ಹೀಗೆ ಕೇವಲ ಕೆಲವೇ ಕೆಲವು ಯಾತ್ರಾ ಸ್ಥಳಗಳು ಮಾತ್ರ ನಾನಾ ಮತಾವಲಂಭಿಗಳ ಆರಾಧನ ಸ್ಥಳವಾಗಿ ಉಳಿದಿವೆ. ಆದರೆ ಮಹಮದನ ಸರ್ವಾಧಿಕಾರ ಅಲ್ಲಿ ಆರಂಭಗೊಂಡದ್ದೆ ತಡ ಈ ಎಲ್ಲಾ ಧಾರ್ಮಿಕ ಸ್ವಾತಂತ್ರ್ಯಕ್ಕೆ ಕಡಿವಾಣ ಬಿತ್ತು. ಮುಸಲ್ಮಾನರಾಗದವರು ಅಲ್ಲಿ ಬಾಳುವಂತೆಯೂ ಇರಲಿಲ್ಲ ಹಾಗೂ ಇಸ್ಲಾಮಿನ ಅನುಯಾಯಿಗಳಲ್ಲದ ವ್ಯಕ್ತಿ ಯಾವುದೆ ಕಾರಣಕ್ಕೂ ನಗರವನ್ನ ಪ್ರವೇಶಿಸುವುದೂ ಸಾಧ್ಯವಿರಲಿಲ್ಲ. ಇವತ್ತಿಗೂ ಸುಮಾರು ಹದಿನಾಲ್ಕು ಶತಮಾನಗಳ ನಂತರವೂ ಈ ಧಾರ್ಮಿಕ ಅಸಹಿಷ್ಣು ಪರಿಸ್ಥಿತಿ ಅಲ್ಲಿ ಬದಲಾಗಿಲ್ಲ.


ಮಹಮದ್ ಈಗ ಅಲ್ಲಿನ ನಿರ್ಣಾಯಕ ವಿಧಿಯಾಗಿ ಪರಿಣಮಿಸಿದ ನಂತರ ಅಲ್ಲಿನ ಹತ್ತು ಹನ್ನೆರಡು ಮಂದಿಯನ್ನ ಹೊರತು ಪಡಿಸಿ ಉಳಿದೆಲ್ಲರನ್ನೂ ಅವರ ಹಿಂದಿನ ಎಲ್ಲಾ ಕೃತ್ಯಗಳಿಗಾಗಿ ಕ್ಷಮಿಸಲಾಯಿತು. ಕಾರಣ ಸರಳ ಅವರೆಲ್ಲಾ  ಆತನ ತೋಲ್ಬಲಕ್ಕೆ ಹೆದರಿ ಇಸ್ಲಾಮನ್ನ ಒಪ್ಪಿಕೊಂಡು ಮುಸಲ್ಮಾನರಾಗಿ ದೀಕ್ಷೆ ತೆಗೆದುಕೊಂಡರು. ಹಾಗಂತ ಈ ಹನ್ನೆರಡು ಮಂದಿಯೂ ಇದಕ್ಕೆ ತಯ್ಯಾರಿರಲಿಲ್ಲ ಅಂತೇನಲ್ಲ. ಆದರೆ ಅವರು ಎಸಗಿದ್ದ ಅಪರಾಧಗಳು ಮಹಮದನ ದೃಷ್ಟಿಯಲ್ಲಿ ಯಾವತ್ತಿಗೂ ಕ್ಷಮಾರ್ಹವಾಗಿರಲಿಲ್ಲ.



ಈ ಶಿಕ್ಷೆಗೆ ಗುರಿಯಾದವರಲ್ಲೂ ಸಹ ನಾಲ್ಕು ಮಂದಿಗೆ ಮಾತ್ರ ಮರಣದಂಡನೆಯನ್ನ ವಿಧಿಸಲಾಯಿತು. ಆ ನಾಲ್ವರಲ್ಲಿ ಇಬ್ಬರು ಗರ್ಭಿಣಿಯಾಗಿದ್ದ ಮಹಮದನ ಮೊದಲ ಹೆಂಡತಿ ಖತೀಜಳ ಮಗಳು ಝೈನಬ್ ಮೇಲೆ ಹಲ್ಲೆ ಮಾಡಿ ಅವಳ ಗರ್ಭಪಾತಕ್ಕೆ ಕಾರಣರಾಗಿದ್ದರು. ಮುಂದೆ ಅವಳ ಸಾವಿಗೂ ಅದೆ ಮೂಲವಾಗಿತ್ತು. ಒಬ್ಬ ಮೆಕ್ಕಾ ಪ್ರವೇಶದ ವೇಳೆ ಖಾಲೀದನೊಡನೆ ಕಾದಾಡಿ ಪ್ರತಿರೋಧ ಒಡ್ಡಿದ್ದ ಹಾಗೂ ಕೊನೆಯದಾಗಿ ಕವಯತ್ರಿಯೊಬ್ಬಳು ಮಹಮದನ ಪೊಳ್ಳು ಪ್ರವಾದಿತ್ವವನ್ನ ಗೇಲಿ ಮಾಡಿ ಹಾಡಿ ಇಲ್ಲಿಯವರೆಗೆ ಎಲ್ಲರನ್ನ ರಂಜಿಸುತ್ತಿದ್ದ ಅಪರಾಧಕ್ಕಾಗಿ ಆಕೆಯನ್ನೂ ಸಹ ಸಾವಿನ ಮನೆಗೆ ಅಟ್ಟಲಾಯಿತು.


ಈ ಕ್ಷಮಾದಾನವನ್ನೇನೂ ಮಹಮದ್ ಸಂಪೂರ್ಣ ಸಮ್ಮತಿಯಿಂದ ಇನ್ನಿತರೆಲ್ಲರಿಗೆ ನೀಡಿರಲಿಲ್ಲ ಅನ್ನುವುದನ್ನೂ ಸಹ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ರಿನ ಪುಟ ಸಂಖ್ಯೆ ೭೮೭ರಲ್ಲಿ ಉದಾಹರಣೆ ಸಹಿತ ಎತ್ತಿ ತೋರಿಸುತ್ತಾನೆ. ಅಬ್ದುಲ್ಲಾ ಇಬ್ನ್ ಅಬಿ ಸರ್ಹ್ ಎಂಬಾತ ಮಹಮದನ ಅನುಯಾಯಿಯಾಗಿದ್ದ. ಆತನನ್ನ ಸ್ವತಃ ಅನಕ್ಷರಸ್ಥನಾಗಿದ್ದ ಮಹಮದ್ ತಾನು ಕಾಲಕಾಲಕ್ಕೆ ಉಸುರುವ ಸುರಾಗಳನ್ನ ದಾಖಲಿಸಿ ಬರೆದಿಡಲು ನೇಮಿಸಿದ್ದ. ಆದರೆ ಈ ಕೆಲಸದಿಂದ ಬೇಸತ್ತು ಮತಾಂತರವಾಗಿದ್ದ ನಂತರವೂ ಆತ ಉಪಾಯವಾಗಿ ಮದೀನಾದಿಂದ ತಲೆ ತಪ್ಪಿಸಿಕೊಂಡು ಬಂದು ಮೆಕ್ಕಾದಲ್ಲಿ ಮರಳಿ ನೆಲೆಸಿದ್ದ. ಮತ್ತೆ ಹಳೆಯ ಧಾರ್ಮಿಕ ಆಚರಣೆಗಳಿಗೆ ಜೋತುಬಿದ್ದಿದ್ದ.




ಆತನನ್ನ ವಿಶೇಷ ಸೂಚನೆ ಕೊಟ್ಟು ಮಹಮದ್ ಕೈಸೆರೆ ಹಿಡಿಸಿದ. ಆದರೆ ಶಿಕ್ಷೆ ವಿಧಿಸುವ ಹತ್ತಿನಲ್ಲಿ ಆತನ ಮಲ ಸಹೋದರನ ಕ್ಷಮಾದಾನದ ಬೇಡಿಕೆಗೆ ಮಣಿದು ಅವನ್ನು ಜೀವ ಸಹಿತ ಬಿಟ್ಟು ಕಳುಹಿಸಲಾಯಿತು. ಮನಸ್ಸಿಲ್ಲದ ಮನಸ್ಸಿನಿಂದ ಮಹಮದ್ ಅವನನ್ನು ಕ್ಷಮಿಸಿದ್ದ. ಆತ ತನ್ನ ಸಹೋದರನೊಂದಿಗೆ ಅಲ್ಲಿಂದ ಜೀವ ಸಹಿತ ನಿರ್ಗಮಿಸಿದ ನಂತರ ಮಹಮದ್ ತನ್ನ ಅನುಯಾಯಿಗಳ ಮೇಲೆ ಇದೆ ಕಾರಣಕ್ಕೆ ಸಿಡಿಮಿಡಿಗೊಂಡ. ನಾನು ನ್ಯಾಯ ನೀಡುವ ಮೊದಲೆ ಮುಂದಾಗಿ ನಿಮ್ಮಲ್ಲಿ ಯಾರಾದರೂ ಒಬ್ಬರು ಆ ಧರ್ಮದ್ರೋಹಿ ಅಬ್ದುಲ್ಲಾನ ರುಂಡವನ್ನೇಕೆ ಕಡಿದು ಉರುಳಿಸಲಿಲ್ಲ? ಅಂತಹದೊಂದು ಸ್ವಾಗತಾರ್ಹ ನಡೆಯನ್ನ ನಾನು ನಿಮ್ಮಿಂದ ನಿರೀಕ್ಷಿಸಿದ್ದೆ! ಎಂದು ಆತ ಬೇಸರ ವ್ಯಕ್ತ ಪಡಿಸಿದ. ನೀವ್ಯಾಕೆ ಅದರ ಸೂಚನೆ ನೀಡಲಿಲ್ಲ ಎಂದು ಮರಳಿ ಅವನ್ನನ್ನೆ ಬೆಂಬಲಿಗರು ಪ್ರಶ್ನಿಸಿದಾಗ ಛೆ ಛೆ ಎಲ್ಲದರೂ ಉಂಟೆ! ಹಾಗೆಲ್ಲಾ ಸೂಚನೆ ನೀಡುವುದು ಪ್ರವಾದಿಯಾದವನ ಘನತೆಗೆ ಶೋಭಿಸುವುದಿಲ್ಲ?! ಎಂದಂದುಬಿಟ್ಟ. ಈ ಘಟನೆಯನ್ನ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತಮ್ಮ ಕೃತಿ 'ದ ಲೈಫ್ ಆಫ್ ಮಹಮದ್'ನ ಪುಟ ಸಂಖ್ಯೆ ನಾಲ್ಕುನೂರಾ ಒಂಬತ್ತರಲ್ಲಿ ಖಚಿತಪಡಿಸುತ್ತಾರೆ.


ಮೆಕ್ಕ ಕೈವಶವಾದ ಎರಡನೆಯ ಬೆಳಗ್ಯೆ ಅಧಿಕೃತವಾಗಿ ಮಹಮದ್ ಮೆಕ್ಕಾವನ್ನ ಪವಿತ್ರ ನಗರವೆಂದು ಘೋಷಿಸಿದ. ಇದರ ಪಾವಿತ್ರ್ಯತೆಯ ಊರ್ಜತೆಯ ಅವಧಿ ಅಂತಿಮ ತೀರ್ಪಿನ ದಿನದವರೆಗೂ ಉಳಿಯುವುದೆಂದು ಸಾರಿದ. ಇಲ್ಲಿ ಇನ್ನು ಮುಂದೆ ರಕ್ತಪಾತ ಎಸಗುವಂತಿಲ್ಲ, ಅಗತ್ಯ ಬಿದ್ದರೆ ತಾನು ಮಾತ್ರ ರಕ್ತಪಾತ ಮಾಡಬಲ್ಲೆ. ಪ್ರವಾದಿಯಾಗಿ ತನಗೆ ದೇವರು ದಯಪಾಲಿಸಿದ ವಿಶೇಷ ಅಧಿಕಾರ ಅದಾಗಿದೆ ಎಂದಾತ ತಿಳಿಸಿದ.


ಮೆಕ್ಕಾದ ಸುತ್ತಮುತ್ತಲು ಕಾಬಾ ಹೊರತು ಪಡಿಸಿ ಇನ್ನೂ ಅನೇಕ ಚಿಕ್ಕಪುಟ್ಟ ವಿಗ್ರಹಾರಾಧನೆಯ ಗುಡಿಗಳು ಇದ್ದವು. ಅವ್ಲೆಲ್ಲವನ್ನೂ ಆದ್ಯತೆಯ ಮೇಲೆ ನಾಶ ಪಡಿಸಲು ಆತ ಹಂಚಿಕೆ ಹಾಕಿದ. ಅದಕ್ಕಾಗಿ ಒಂದು ಸೈನ್ಯವನ್ನೆ ಕಳುಹಿಸಲಾಯಿತು. ಅಲ್ಲಿನ ಪ್ರಸಿದ್ಧ ಅಲ್ ಓಝ್ಲಾ ಸುವಾ ಹಾಗೂ ಅಲ್ ಮನ್ನಾತ್ ಎಂಬ ಶಕ್ತಿಶಾಲಿ ದೇವಾನುದೇವತೆಗಳ ಮೂರ್ತಿಗಳನ್ನ ಪುಡಿಗಟ್ಟಲಾಯಿತು. ಈ ಕಾರ್ಯಾಚರಣೆಯ ನೇತೃತ್ವವನ್ನ ಮಹಮದನ ನೆಚ್ಚಿನ ಬಂಟ ಖಾಲಿದ್ ವಹಿಸಿಕೊಂಡಿದ್ದ. ಈ ಅತಿ ನಂಬುಗೆಯ ದೇವಾಲಯಗಳನ್ನು ನಾಶ ಪಡಿಸಿ ಮರಳಿ ಮೆಕ್ಕಾಕ್ಕೆ ಹೋಗುವಾಗ ಈ ಖಾಲಿದ್ ವಿಗ್ರಹಭಂಜಕತೆಯ ಅಮಲಿನಲ್ಲಿ ವಿಪರೀತ ವಿಕೃತವಾಗಿ ವರ್ತಿಸಿದ.



ಝಾದಿಮ್ ಎನ್ನುವ ವಿಗ್ರಹಾರಾಧಕ ಬುಡಕಟ್ಟಿನವರನ್ನು ಆತ ಎದುರುಗೊಂಡ. ಅವರೆಲ್ಲರನ್ನೂ ಇಸ್ಲಾಮ್ ಸ್ವೀಕರಿಸುವಂತೆ ಅದೇಶಿಸಿದ. ಅನ್ಯ ಮಾರ್ಗವಿಲ್ಲದ ಅವರು ಸಹ ಮುಸಲ್ಮಾನರ ಅಪಾರ ಬಲದ ಮುಂದೆ ತೆಪ್ಪಗೆ ಶರಣಾಗಿ ಇಸ್ಲಾಮಿನ ಅನುಯಾಯಿಗಳಾಗಲು ಒಪ್ಪಿ ಮತಾಂತರವಾದರು. ಆದರೆ ಯುದ್ಧ ನೀತಿಗೆ ವಿರುದ್ಧವಾಗಿ ಆ ಶರಣಾಗತರನ್ನೆಲ್ಲಾ ಖಾಲಿದ್ ಸೆರೆ ಹಿಡಿಸಿದ ಹಾಗೂ ಅವರೆಲ್ಲರನ್ನೂ ಹತ್ಯೆ ಮಾಡಿಸುವ ಬರ್ಬರ ನಿರ್ಧಾರಕ್ಕೆ ಬಂದ. ಆದರೆ ಈ ಹೀನಕೃತ್ಯವನ್ನ ಸಹಿಸಲಾಗದೆ ಆತನದೆ ಪಡೆಯಲ್ಲಿದ್ದ ಕೆಲವು ಮದೀನಾವಾಸಿಗಳು ಇದನ್ನ ತಡೆದರು. ಈ ಒಂದು ವಿಷಯಕ್ಕಾಗಿ ಅವರ ವೈರವನ್ನು ಕಟ್ಟಿಕೊಳ್ಳಲು ಇಚ್ಛಿಸದೆ ಖಾಲಿದ್ ಈ ನಿರ್ಧಾರದಿಂದ ಹಿಂದೆ ಸರಿದ.




ಮಹಮದನಿಗೆ ಈ ಸುದ್ದಿ ತಿಳಿದು ಬಂದಾಗ ಆತ ಅತೀವ ದುಃಖಿತನಾದ. ದೇವರಿಗೆ ಕೈ ಮುಗಿಯುತ್ತಾ ಖಾಲಿದನ ಈ ಕುಕೃತ್ಯಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಮೊರೆಯಿಟ್ಟ. ಅದರಿಂದ ತಾನು ಎಂದೂ ಬಾಧಿತನಾಗಲಾರೆ ಎಂದು ಹೇಳುತ್ತಾ ಕಳಕಳಿಯಿಂದ ಪ್ರಾರ್ಥಿಸಿದ. ಆದಾಗ್ಯೂ ಆರಂಭದ ವಿಚಾರಣೆಯ ಹಂತದಲ್ಲಿ ಖಾಲಿದನ ಕತ್ತಿಯ ರುಚಿ ಕಂಡು ಸತ್ತು ನೆಲಕ್ಕೊರಗಿದ ಅಮಾಯಕರ ಸಂಬಂಧಿಗಳನ್ನ ಕರೆಸಿ ತನ್ನಿಂದ ಆದಷ್ಟು ದ್ರವ್ಯ ಸಹಾಯ ಮಾಡಿ ಅವರ ನೋವಿನಲ್ಲಿ ತನ್ನ ಪ್ರಾಮಾಣಿಕ ಸಂತಾಪಗಳನ್ನು ಆತ ತೋರ್ಪಡಿಸಿದ.


ಅದೇ ರೀತಿ ಮೆಕ್ಕಾವನ್ನು ಅತಿಕ್ರಮಿಸಿದ ಮೊದಲ ರಾತ್ರಿ ನಡೆದ ಒಂದು ವಿದ್ರಾವಿಕ ಘಟನೆ ಮಹಮದನ ಹೃದಯವನ್ನ ಕಲಕಿ ಹಾಕಿಬಿಟ್ಟಿತು. ಅಸಲಿಗೆ ಆತ ಖೋಝಾ ಬುಡಕಟ್ಟಿನವರ ನೆರವಿಗೆ ಮೆಕ್ಕಾಕ್ಕೆ ಧಾವಿಸಿದ್ದನಷ್ಟೆ! ಆದರೆ ತನ್ನ ಮೂಲ ಉದ್ದೇಶ ಈಡೇರಿದ ನಂತರ ಆತ ಅವರ ಸಂಗತಿಯನ್ನೆ ಮರೆತುಬಿಟ್ಟಿದ್ದ. ಆದರೆ ಖೋಝಾಗಳು ಅದನ್ನು ಮರೆಯಲು ತಯ್ಯಾರಿರಲಿಲ್ಲ. ಹೀಗಾಗಿ ಆ ರಾತ್ರಿ ಪರಿಸ್ಥಿತಿಯ ಲಾಭ ಪಡೇದು ಅವರು ಏಕಾಂಗಿಗಳಾಗಿ ಬೆನ್ ಬಕರ್'ಗಳ ವಸತಿಯ ಮೇಲೆ ಮುಗಿ ಬಿದ್ದರು ಅಪಾರ ಹಿಂಸಾಚಾರ ನಡೆಸಲಾದ ಈ ಪ್ರತಿಕಾರದ ಕಾರ್ಯಾಚರಣೆಯಲ್ಲಿ ಒಬ್ಬನನ್ನು ಕೊಂದರು.



ಈ ಸಂಗತಿ ಮಹಮದನಿಗೆ ಮರುದಿನ ಬೆಳಗ್ಯೆ ತಿಳಿದುಬಂತು. ತಾನು ಮೆಕ್ಕಾವನ್ನು ಶಾಂತಿಪೂರ್ವಕವಾಗಿ ಆಕ್ರಮಿಸಬೇಕೆಂದು ಬಯಸಿದ್ದರೂ ಈ ಪರಿ ರಕ್ತಪಾತಗಳಾದದ್ದಕ್ಕೆ ಆತ ಖೇದಗೊಂಡಿದ್ದ ಹಾಗೂ ಅವನ ಈ ಬೇಸರ ಪ್ರಾಮಾಣಿಕವಾದದ್ದೇ ಆಗಿತ್ತು ಸಹ! ಹೀಗಾಗಿಯೆ ಕಾಬಾದಲ್ಲಿನ ತನ್ನ ಆ ಮಧ್ಯಾಹ್ನದ ಪ್ರಾರ್ಥನೆಯ ನಂತರ ಭಕ್ತಾಧಿಗಳನ್ನ ಉದ್ದೇಶಿಸಿ ಆತ ಈ ಬಗ್ಗೆ ವಿಶೇಷವಾದ ಪ್ರವಚನ ಕೊಟ್ಟ. ಅದರಲ್ಲಿ "ದೇವರು ಆಕಾಶ ಹಾಗೂ ಭೂಮಿಯನ್ನ ಸೃಷ್ಟಿಸಿದ ದಿನವೆ ಈ ಮೆಕ್ಕಾವನ್ನೂ ಸಹ ಪವಿತ್ರಗೊಳಿಸಿದ. ಇದರ ವ್ಯಾಪ್ತಿಯಲ್ಲಿ ಕೊಳ್ಳೆ ಹೊಡೆಯುವುದು ನನಗಾಗಲಿ ಅಥವಾ ಇನ್ಯಾರಿಗಾಗಲಿ ತರವಲ್ಲ! ಬೆನ್ ಖೋಝಾ ಜನರೆ, ರಕ್ತ ಚೆಲ್ಲಾಡುವ ನಿಮ್ಮ ಪಾಪಿ ಕೈಗಳನ್ನ ಹಿಂದಕ್ಕೆ ಒಯ್ಯಿರಿ. ನೀವು ಕೊಂದ ಆ ಮನುಷ್ಯನಿಗೆ ನಿಮ್ಮ ಪರವಾಗಿ ನಾನು ಸಹಾಯ ಧನ ನೀಡುವೆನು. ಆದರೆ ಈ ಮಾತನ್ನ ಮೀರಿ ಇನ್ನು ಮುಂದೆ ಯಾರು ಕೊಲೆಗಡುಕರಾಗುತ್ತಾರೋ ಅವರನ್ನ ಅದೆ ಕೊಲೆಗಡುಕನ ಕೈಗೆ ಕೊಡಲಾಗುವುದು ಎನ್ನುವುದು ನೆನಪಿರಲಿ?!" ಎಂದು ದೃಢವಾಗಿ ಹೇಳಿಕೆ ನೀಡಿದ.


ಮಮಹಮದನನ್ನು ನಾನಾ ವಿಧವಾಗಿ ಹೀಯ್ಯಾಳಿಸಿ, ನಿಂದಿಸಿ, ಕೋಟಲೆಗಳನ್ನ ಕೊಟ್ಟು ಅಲ್ಲಿಂದ ಒದ್ದು ಓಡಿಸಿದ್ದ ಮೆಕ್ಕಾ ನಗರ ಈಗ ಆತನ ಅಡಿಯಾಳಾಗಿತ್ತು. ಇಡಿ ಮೆಕ್ಕಾದ ಆತನ ವಿರೋಧಿ ಪಡೆಯವರೆಲ್ಲಾ ಬೇಷರತ್ತಾಗಿ ಆತನ ದಾಸಾನುದಾಸರಾಗಿ ಪರಿವರ್ತನೆಯಾಗಿದ್ದರು. ಆತನನ್ನ ಪ್ರವಾದಿ ಎಂದು ಭಕ್ತಿಯೊಂದ ಕರೆಯಲಾರಂಭಿಸಿದ್ದರು. ಆತ ಅದರ ಪ್ರಾಚೀನತೆಯ ಪಾವಿತ್ರ್ಯವನ್ನ ಮೊದಲಿನಂತೆಯೆ ಉಳಿಸಿಕೊಳ್ಳಲು ನಿರ್ಧರಿಸಿದರೂ ಅಲ್ಲಿ ಉಳಿದುಕೊಳ್ಳಲು ಇಚ್ಛಿಸಲಿಲ್ಲ. ಕಷ್ಟಕಾಲದಲ್ಲಿ ತನಗೆ ಆಸರೆ ನೀಡಿದ ಮದೀನಾಕ್ಕೆ ಹಿಂದಿರುಗುವ ನಿರ್ಧಾರವನ್ನಾತ ಕೈಗೊಂಡಾಗಿತ್ತು. ತನಗೂ ತನ್ನ ಅನುಯಾಯಿಗಳಿಗೂ ವಿಪತ್ತಿನ ದಿನಗಳಲ್ಲಿ ಆಸರೆ, ಸಾಂತ್ವಾನ, ಆಹಾರ, ನೆಲೆ ಹಾಗೂ ನೆಮ್ಮದಿಯನ್ನ ದಯಪಾಲಿಸಿದ ತನ್ನ ಕರ್ಮಭೂಮಿ ಮದೀನಾವೆ ತನ್ನ ಮನೆ ಎಂದಾತ ನಿರ್ಧರಿಸಿದ್ದ. ಹೀಗಾಗಿ ತನ್ನ ಪರವಾಗಿ ಮೆಕ್ಕಾದ ಆಡಳಿತಾಧಿಕಾರಿಯಾಗಲು ಖುರೈಷಿಗಳಲ್ಲಿಯೆ ಒಬ್ಬನಾದ ನವ ಮುಸಲ್ಮಾನ ಅತ್ತಾಬ್'ನನ್ನು ನೇಮಕ ಮಾಡಿದ. ಅಂತೆಯೆ ಕಾಬಾ ಹಾಗೂ ಸುತ್ತಮುತ್ತಲ ಇನ್ನಿತರ ಪವಿತ್ರ ಕ್ಷೇತ್ರಗಳ ಧಾರ್ಮಿಕಾಚರಣೆಯನ್ನ ನಿರ್ವಹಿಸುತ್ತಾ ಅದರ ನಿರ್ವಹಣೆ ಮಾಡಲು ಮದೀನಾದ ಪ್ರಜೆ ಓಅದ್ ಇಬ್ನ್ ಝಾಬೆಲ್ ಎಂಬಾತನನ್ನು ನೇಮಿಸಿದ ಅನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ 'ದ ಸೀಲ್ಡ್ ನೆಕ್ಟರ್' ಕೃತಿಯ ಪುಟಸಂಖ್ಯೆ ೭೯೧ರಲ್ಲಿ.




( ಇನ್ನೂ ಇದೆ.)



Tuesday, November 17, 2015

ವಲಿ - ೩೨









ಇನ್ನೊಂದು ವರ್ಷವೂ ಸುಖವಾಗಿ ಸವೆದು ಹೋಯಿತು. ಈಗ ಖುರೈಷಿಗಳೊಂದಿಗಿನ ಅಲ್ ಹೊಡೈಬಿಯಾದಲ್ಲಾದ ಒಪ್ಪಂದಕ್ಕೆ ಎರಡು ವರ್ಷಗಳ ಪ್ರಾಯವಾಗಿತ್ತು. ಈ ಎರಡು ವರ್ಷಗಳ ಅವಧಿಯಲ್ಲಿ ಖುರೈಷಿಗಳೊಂದಿಗಿನ ಬಾಂಧವ್ಯಗಳಲ್ಲಿ ಯಾವುದೆ ತಂಟೆ ತಕರಾರು ಎದುರಾಗದೆ ಕದನ ಕಚ್ಚಾಟ ರಹಿತವಾದ ಶಾಂತ ಸಮಾಧಾನದ ದಿನಗಳಾಗಿ ಪರಿವರ್ತಿತವಾಗಿದ್ದವು. ಈ ಒಪ್ಪಂದದ ಪ್ರಕಾರ ಇನ್ನುಳಿದ ಅರೇಬಿಯಾದ ಬುಡಕಟ್ಟುಗಳ ಜನರು ಒಂದೋ ಖುರೈಷಿಗಳಿಗೆ ಅಥವಾ ಮಹಮದನಿಗೆ ತಮ್ಮ ನಿಷ್ಠೆ ಹಾಗೂ ಸೈನಿಕ ಸಹಾಯದ ಬಾಂಧವ್ಯವನ್ನ ಸೂಚಿಸ ಬಹುದಾಗಿತ್ತು. ಅದರ ಅನುಸಾರ ಮೆಕ್ಕಾ ಸುತ್ತಮುತ್ತಲು ವಾಸಿಸುತ್ತಿದ್ದ ಖೋಝಾ ಬುಡಕಟ್ಟಿನವರು ಮಹಮದನ ನಿಷ್ಠರಾಗಿ ಗುರುತಿಸಿಕೊಂಡು ಅವನಿಗೆ ಅಧೀನರಾಗಿದ್ದರು. ಬೆನ್ ಬಕರ್ ಬುಡಕಟ್ಟಿನ ಮಂದಿ ಮೆಕ್ಕಾದ ಖುರೈಷಿಗಳ ಪಾಳಯ ಸೇರಿಕೊಂಡಿದ್ದರು. ಈ ಎರಡೂ ಬುಡಕಟ್ಟುಗಳವರಿಗೆ ಪರಸ್ಪರ ಆಗಿ ಬರುತ್ತಿರಲಿಲ್ಲ.


ಹೀಗಿರುವಾಗ ಒಂದು ಪುಟ್ಟ ಕಾರಣಕ್ಕೆ ಆ ಎರಡೂ ಪಂಗಡಗಳ ನಡುವೆ ಕದನ ಹುಟ್ಟಿಕೊಂಡಿತು. ಈ ಪುಟ್ಟ ಕಾರಣವೆ ರಕ್ತರಹಿತವಾದ ಒಂದು ದೊಡ್ದ ಕ್ರಾಂತಿಗೆ ಕಾರಣವಾಯಿತು ಅನ್ನುವುದು ನಂಬುವುದು ಕಷ್ಟವಾದರೂ ವಾಸ್ತವ. ಪರಸ್ಪರ ಕತ್ತಿ ಮಸೆಯುತ್ತಲಿದ್ದುದರಿಂದ ಈ ಸಣ್ಣಪುಟ್ಟ ಕಾರಣಗಳಿಗೂ ಪರಸ್ಪರರ ಮೇಲೆ ಎಗರಿ ಬೀಳೋದು ಅವರಿಗೆ ವಿಶೇಷವೇನೂ ಆಗಿರಲಿಲ್ಲ. ಈ ಕೋಳಿಜಗಳದಂತಹ ಚಿಲ್ಲರೆ ಗಲಾಟೆ ವಿಕೋಪಕ್ಕೆ ಹೋಗಿ ಒಂದು ರಾತ್ರಿ ಬೆನ್ ಬಕರ್ ಬುಡಕಟ್ಟಿನವರು ಸಮಯ ಸಾಧಿಸಿ ಖೋಝಾಗಳ ವಸತಿಯ ಮೇಲೆ ಮುಗಿ ಬಿದ್ದು ಅವರ ಹಲವಾರು ಪ್ರಮುಖರನ್ನ ಕೊಚ್ಚಿ ಕೊಂದು ಬಂದರು. ತಮ್ಮ ಅಹವಾಲನ್ನ ಈಗ ಖೋಝಾಗಳು ತಮ್ಮ ಪಕ್ಷದಲ್ಲಿದ್ದ ಮಹಮದನ ಬಳಿಗೆ ಒಯ್ದರು. ಅವನ ಮುಂದೆ ತಮ್ಮ ಗೋಳನ್ನ ಹೇಳಿಕೊಂಡು ಕಷ್ಟ ನಷ್ಟಗಳನ್ನ ತೋಡಿಕೊಂಡರು. ಬೆನ್ ಬಕರ್'ಗಳ ಮೇಲೆ ಪ್ರತಿಕಾರದ ಧಾಳಿ ನಡೆಸಬೇಕಿದೆ ಅನ್ನುವುದನ್ನ ಅವನಿಗೆ ಖೋಝಾ ಮುಖಂಡರು ಮನವರಿಕೆ ಮಾಡಿಸಿ ಕೊಟ್ಟರು. ಮಹಮದ್ ಅಂತಹ ಪ್ರತಿಕಾರದ ಕಾರ್ಯಾಚರಣೆಗೆ ಸಮ್ಮತಿ ನೀಡಿದನಷ್ಟೇ ಅಲ್ಲ ಅಂತಹ ಹೋರಾಟದ ಹೊತ್ತಿನಲ್ಲಿ ಮುಸಲ್ಮಾನರ ಪಡೆಯೂ ಸಹ ಅವರ ಪರವಾಗಿ ಹೋರಾಡಲು ಸಮರಾಂಕಣಕ್ಕೆ ಧುಮುಕಲಿದೆ ಎಂದು ಪ್ರಕಟಿಸಿದ.



ಮಹಮದನ ಈ ಸಂಕಲ್ಪದ ಸುದ್ದಿ ಖುರೈಷಿಗಳ ಕಿವಿಯನ್ನ ಮುಟ್ಟಿದಾಗ ಅವರು ಸಹಜವಾಗಿ ಗಾಬರಿಬಿದ್ದರು. ಈ ಪಿಳ್ಳೆ ನೆವದಿಂದೆಲ್ಲಾ ತಮ್ಮ ನಡುವೆ ಕಳೆದೆರಡು ವರ್ಷಗಳಿಂದ ನೆಲೆಸಿದ್ದ ಶಾಂತಮಯ ವಾತಾವರಣ ಕಲಕಿ ಹೋಗುವುದು ಅವರಿಗೆ ಅಪಥ್ಯವಾಗಿತ್ತು. ಹೀಗಾಗಿ ಅವರ ಮುಖಂಡನಾದ ಅಬು ಸಫ್ಯಾನನನ್ನು ಸಂಧಾನ ನಡೆಸಲು ಮದೀನಕ್ಕೆ ಕಳುಹಿಸಲಾಯಿತು. ಸಮರ ನಿಲ್ಲಿಸುವ ಧಾವಂತದಲ್ಲಿದ್ದ ಅಬು ಸಫ್ಯಾನನ ಯಾವುದೆ ಪಟ್ಟಿಗೂ ಮಹಮದ್ ತನ್ನ ಹಠವನ್ನ ಸಡಿಲಿಸಸಲಿಲ್ಲ. ಯುದ್ಧದ ನಿರ್ಧಾರ ಅಂತಿಮಗೊಂಡಿತ್ತು. ಸಂಧಾನ ಪ್ರಕ್ರಿಯೆ ಆರಂಭದಿಂದಲೆ ಹಳಿ ತಪ್ಪಿ ಹೋಗಿದ್ದು ಅಸಲಫತೆಯಲ್ಲಿ ಅದು ಕೊನೆಗೊಂಡಿತು. ಮಹಮದನ ಧಾಳಿ ವಾಸ್ತವವಾಗಿ ಖೋಝಾಗಳಿಗೆ ಸಹಾಯ ನೀಡುವಂತಿದ್ದರೂ ಆತ ಮೆಕ್ಕಾದ ಮೇಲೂ ಮುಗಿ ಬೀಳುವ ಸಾಧ್ಯತೆಯನ್ನ ತಳ್ಳಿ ಹಾಕುವುದಕ್ಕೂ ಸಾಧ್ಯವಿರಲಿಲ್ಲ. ಹೀಗಾಗಿ ಆತನ ಸಮರ ಸಿದ್ಧತೆಯೂ ಸಹ ತೀರಾ ಗೌಪ್ಯವಾಗಿಯೆ ಆತ ನಡೆಸಿದ. ತನ್ನ ಆಪ್ತೇಷ್ಟರಿಗೂ ಸಹ ಇದರ ಗುಟ್ಟು ಬಿಟ್ಟು ಕೊಡದೆ ಸಾಮರಿಕ ವ್ಯೂಹವನ್ನ ಹೆಣೆದ ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ 'ದ ಸೀಲ್ಡ್ ನೆಕ್ಟರ್'ರಿನ ಪುಟ ಸಂಖ್ಯೆ ೭೭೩ರಲ್ಲಿ ಸ್ಪಷ್ಟವಾಗಿ.


ಕ್ರಿಸ್ತಶಕ ೬೩೦ರ ಜನವರಿ ಒಂದನೆ ತಾರೀಕಿಗೆ ಮಹಮದನ ಸುಸಜ್ಜಿತ ಸೈನ್ಯ ಮೆಕ್ಕಾದ ದಿಕ್ಕಿನತ್ತ ಪ್ರಯಾಣಿಸಿತು. ಮಹಮದನ ಪಡೆ ಬೆದಾವಿನರ ಹಾಗೂ ಮುಸಲ್ಮಾನರ ಯೋಧರಿಂದ ತುಂಬಿಹೋಗಿತ್ತು. ಎಂಟು ಸಾವಿರ ಮಂದಿಗೂ ಮೀರಿದ ಸೈನಿಕರಿದ್ದ ಈ ಬೃಹತ್ ಪಡೆಯ ನೇತೃತ್ವವನ್ನ ಅದರ ಸಂಖ್ಯಾ ಬಾಹುಳ್ಯತೆಯ ಬಗ್ಗೆ ಅಪಾರ ಭರವಸೆ ಇದ್ದ ಮಹಮದ್ನೆ ಖುದ್ದಾಗಿ ವಹಿಸಿದ್ದ. ಎಂದಿನಂತೆ ಝೈನಬ್ ಹಾಗೂ ಉಮ್ ಸಲ್ಮಾ ಯುದ್ಧದ ಕಣದಲ್ಲಿ ಪತಿಗೆ ಸಾಂಗತ್ಯ ಒದಗಿಸಲು ದಂಡಿನೊಂದಿಗೆ ಹೊರಟು ನಿಂತಿದ್ದರು. 



ಒಂದು ವಾರದ ಪ್ರಯಾಣದ ನಂತರ ಮಹಮದನ ಸೈನ್ಯ ಅಝ್ ಜೆಹ್ರಾನ್ ಎನ್ನುವ ಸ್ಥಳದಲ್ಲಿ ಅಂತಿಮವಾಗಿ ಬೀಡು ಬಿಟ್ಟಿತು. ಮಹಮದನ ಚಿಕ್ಕಪ್ಪ ಅಲ್ ಅಬ್ಬಾಸ್ ಪರಿಸ್ಥಿತಿಯ ಗಹನತೆ ಹಾಗೂ ಗೆಲುವಿನ ಗಾಳಿ ಬೀಸುತ್ತಿದ್ದ ದಿಕ್ಕನ್ನ ಗ್ರಹಿಸಿ ಸಮಯ ಸಾಧಕನಾಗಿ ಮಹಮದನ ಬಣ ಸೇರಿಕೊಂಡ. ಖುರೈಷಿಗಳ ಒಳಗುಟ್ಟುಗಳೆಲ್ಲ ಮಹಮದನಿಗೆ ಸೋರಿಕೆಯಾಗಲು, ಆ ಮೂಲಕ ಮಹಮದನ ಗೆಲುವಿನ ಹಾದಿ ಸುಗಮವಾಗಲು ಈ ಬೆಳವಣಿಗೆಯಿಂದ ಸುಲಭ ಸಾಧ್ಯವಾಗಿತ್ತು. ಚತುರನಾದ ಮಹಮದ್ ಅವನನ್ನ ಆದರದಿಂದ ಬರ ಮಾಡಿಕೊಂಡು ಸೂಕ್ತ ಸ್ಥಾನಮಾನ ಹಾಗೂ ಸತ್ಕಾರಗಳಿಂದ ಅವನ ಮನಸ್ಸನ್ನು ಗೆದ್ದುಕೊಂಡ.


ಇನ್ನು ಖುರೈಷಿಗಳ ಆತ್ಮಸ್ಥೈರ್ಯವನ್ನ ಕುಗ್ಗಿಸುವ ಮಾನಸಿಕ ಯುದ್ಧದಲ್ಲಿ ಗೆಲುವು ಸಾಧಿಸಬೇಕಾದ ಮೊದಲ ಹೆಜ್ಜೆಯನ್ನಾತ ಇಡಬೇಕಿತ್ತು. ಅದಕ್ಕಾಗಿ ತನ್ನ ಪ್ರತಿಯೊಬ್ಬ ಯೋಧರ ಮೂಲಕವೂ ತಮ್ಮ ಪಕ್ಷದ ಶಕ್ತಿಯ ಸಂಪೂರ್ಣ ಪರಿಚಯ ಮಾಡಿಸಿ ಮಾನಸಿಕವಾಗಿ ಗಾಬರಿ ಹುಟ್ಟಿಸಿ ವಿರೋಧಿ ಪಾಳಯದ ಆತ್ಮಸ್ಥೈರ್ಯವನ್ನ ಕುಗ್ಗಿಸಲು ಹಂಚಿಕೆ ಹಾಕಿದ. ಹೀಗಾಗಿ ಕತ್ತಲಲ್ಲಿ ಪ್ರತಿಯೊಬ್ಬ ಯೋಧರೂ ಸಹ ಸಾಧ್ಯವಾದಷ್ಟು ಕಟ್ಟಿಗೆಯನ್ನ ಪೇರಿಸಿ ಬೆಂಕಿ ಉರಿಸಲು ಆತ ಆದೇಶಿಸಿದ. ಅದರ ಖಚಿತ ಪರಿಣಾಮವನ್ನ ಖುರೈಷಿ ಪಡೆಗಳ ಮೇಲೆ ಆಗುವುದನ್ನ ಆತ ಗ್ರಹಿಸಿದ್ದ. ಆ ಅಗಾಧ ಕಾಂತಿಯನ್ನ ಕಂಡ ಖುರೈಷಿಗಳು ಮೆಕ್ಕಾದ ಒಳಗೆಯೆ ಬೆವರಿ ನೀರಾಗಿ ಹೋದರು. ಹೀಗಾಗಿ ಕಡೆಯದೊಂದು ಪ್ರಯತ್ನ ಮಾಡಿ ಯುದ್ಧದ ಸಾಧ್ಯತೆಯನ್ನ ತಪ್ಪಿಸಲು ಅಬು ಸಫ್ಯಾನನನ್ನು ಬೇಡಿಕೊಂಡರು. ರಕ್ತಪಾತವಾಗುವುದು ಇಷ್ಟವಿಲ್ಲದಿದ್ದ ಅಬು ಸಫ್ಯಾನ್ ಸಹ ಈ ಮಾತಿಗೆ ಸಮ್ಮತಿ ಸೂಚಿಸಿ ಖೋಝಾ ಬಣದ ಮುಖಂಡ ಬುಡೈಲ್'ನೊಂದಿಗೆ ಮಹಮದನನ್ನು ಭೇಟಿ ಮಾಡಲು ಆತನ ಬಿಡಾರದತ್ತ ಹೊರಟ. 



ದೂರದ ಬೆಟ್ಟದ ಕಣಿವೆಯಲ್ಲಿ ಎಂಟರಿಂದ ಹತ್ತು ಸಾವಿರ ದೊಂದಿಯ ಬೆಳಕುಗಳು ಒಂದು ಅದ್ಭುತ ಪ್ರಕಾಶವಲಯವನ್ನೆ ಸೃಷ್ಟಿಸಿತ್ತು. ದೂರದಿಂದ ಅದನ್ನ ಕಾಣುವಾಗಲೆ ಅಬು ಸಫ್ಯಾನ್ ಅವಾಕ್ಕಾಗಿ ಹೋದ. ಆತ ಮುಂದೆ ಸಾಗುವಾಗ ಪಕ್ಷಾಂತರಿ ಅಲ್ ಅಬ್ಬಾಸ್ ಅವನನ್ನು ಅನಿರೀಕ್ಷಿತವಾಗಿ ಎದುರುಗೊಂಡ. ಕತ್ತಲಿನಲ್ಲಿ ದಢೀರ್ ಪ್ರತ್ಯಕ್ಷನಾದಂತೆ ಕಂಡು ಬಂದ ಅವನನ್ನು 'ನೀನು ಏನಿಲ್ಲಿ?' ಎಂದು ಅಬು ಸಫ್ಯಾನ್ ಪ್ರಶ್ನಿಸಿದ. ಆತ ತನ್ನ ನಡೆಯನ್ನ ವಿಶದ ಪಡಿಸಿ ಮಹಮದನ ಪಡೆ ಎಂಟರಿಂದ ಹತ್ತು ಸಾವಿರ ಯೋಧರ ಅಪಾರ ಸಂಖ್ಯೆಯಿಂದ ಕೂಡಿದೆಯೆಂದೂ, ಯಾವುದೇ ಕಾರಣಕ್ಕೂ ಶಸ್ತ್ರಸಜ್ಜಿತರಾದ ಅವರನ್ನ ಒಂದೊಮ್ಮೆ ಯುದ್ಧವಾದರೆ ಮಣಿಸುವುದು ಸಾಧ್ಯವೆ ಇಲ್ಲ ಅಂತಲೂ ಹೇಳಿ ಅವನ ಮನದಲ್ಲಿ ಭಯ ಹುಟ್ಟಿಸಿದ. ಜೊತೆಗೆ ನೀನೂ ಸಹ ನಮ್ಮೊಂದಿಗೆ ಈ ಮುಸಲ್ಮಾನರ ಪಡೆಗೆ ಪಕ್ಷಾಂತರ ಮಾಡಿಬಿಡು! ಹಾಗೂ ಸುಂದರವಾಗಿರುವ ಇಸ್ಲಾಮಿನಲ್ಲಿ ನಂಬಿಕೆ ಇಡು. ನಿನಗೆ ಬೇಕಾದ ಪಟ್ಟ ಪದವಿಗಳನ್ನ ಕೊಡಿಸುವುದು ನನ್ನ ಹೊಣೆ ಎಂದು ಪುಸಲಾಯಿಸಿದ. ಅದಕ್ಕೂ ಬಗ್ಗದಿದ್ದರೆ ನಾಳೆ ನಿನ್ನ ಹೆತ್ತವರು, ಕಟ್ಟಿಕೊಂಡವರು ಹಾಗೂ ನೀನು ಹುಟ್ಟಿಸಿದವರು ನಿನ್ನನ್ನ ನೆನೆಸಿಕೊಂಡು ಕಣ್ಣೀರಿಡುವರು ಎಂದು ಮೆಲುವಾಗಿ ಬೆದರಿಸಿದ. 



ಆತನನ್ನ ತನ್ನ ಕುದುರೆ ಏರಿ ಮಹಮದನ ಭೇಟಿಗೆ ಅಬ್ಬಾಸ್ ಆಹ್ವಾನಿಸಿದ. ಬಿಡಾರಕ್ಕೆ ಬಂದ ಪ್ರತಿಪಕ್ಷದ ಅತಿಥಿಯನ್ನ ಮಹಮದ್ ಯಥೋಚಿತವಾಗಿ ಸತ್ಕರಿಸಿದ. ಇರುಳು ತಂಗಲು ಸುಖ ಸುಪ್ಪೊತ್ತಿಗೆಯ ವ್ಯವಸ್ಥೆ ಮಾಡಿಕೊಡಲಾಯಿತು. ಬೆಳಕು ಹರಿದು ಮಹಮದನನ್ನು ಮತ್ತೆ ಅಬು ಸಫ್ಯಾನ್ ಕಾಣಲು ಬರುವಾಗ, ದೂರದಲ್ಲಿ ಆತ ಕಾಣುತ್ತಲೆ ಮಹಮದೆ ದೊಡ್ದ ಧ್ವನಿಯಲ್ಲಿ 'ದೇವರೊಬ್ಬನೆ! ಅದು ನಿನಗಿನ್ನೂ ಅರಿವಾಗಲಿಲ್ಲವೆ?" ಎಂದು ಎಲ್ಲರಿಗೂ ಕೇಳುವಂತೆ ಪ್ರಶ್ನಿಸಿದ. "ಹಾಗೇನಾದರೂ ದೇವರು ಬೇರೊಬ್ಬನಿದ್ದಿದ್ದರೆ ನನಗೂ ಉಪಯೋಗವಾಗುತ್ತಿತ್ತು?!" ಅಬು ಸಫ್ಯಾನ್ ಮಾರುತ್ತರಿಸಿದ. "ನಾನು ದೇವರ ಪ್ರವಾದಿ ಎಂದೇಕೆ ನೀನು ನಂಬುವುದಿಲ್ಲ?" ಎಂದು ಮಹಮದ್ ಮರು ಪ್ರಶ್ನಿಸಿದ.


ಇದಕ್ಕೆ ಏನು ಉತ್ತರಿಸೋದು ಎನ್ನುವುದು ಅರಿವಾಗದೆ ಅಬು ಸಫ್ಯಾನ್ ಕಕ್ಕಾಬಿಕ್ಕಿಯಾಗಿ ನಿಂತಿರೋವಾಗ ಪಕ್ಕದಲ್ಲಿದ್ದ ಅಲ್ ಅಬ್ಬಾಸ್ "ಇದು ಹಿಂಜರೆಯುವ ಹೊತ್ತಲ್ಲ! ಒಂದೋ ದೇವರ ಪ್ರವಾದಿಯ ಮೇಲೆ ನಂಬಿಕೆ ಇಡು ಹಾಗೂ ಇಸ್ಲಾಮಿಗೆ ಶರಣಾಗು, ಇಲ್ಲವೆ ಇನ್ನು ಕೆಲವೆ ಕ್ಷಣದಲ್ಲಿ ನೆಲಕ್ಕೆ ಬಿದ್ದ ನಿನ್ನ ರುಂಡ ಬೇರೆಯಾದ ನಿನ್ನದೆ ಮುಂಡವನ್ನ ದಿಟ್ಟಿಸಿ ನೋಡಲಿದೆ?!" ಎಂದು ಗುಡುಗಿದ. ಈ ಒತ್ತಡದ ವಾತಾವರಣದ್ಲ್ಲಿ ಇನ್ನೇನೂ ಅನ್ಯ ಮಾರ್ಗವನ್ನ ಕಾಣದೆ "ದೇವರೊಬ್ಬನೆ ಹಾಗೂ ಮಹಮದ್ ಆತನ ಪ್ರವಾದಿ!" ಎಂದು ಸಾಕ್ಷಿ ನುಡಿದು ಅಬು ಸಫ್ಯಾನ್ ಇಸ್ಲಾಮಿಗೆ ಶರಣಾದ! ಜೀವ ಉಳಿಸಿಕೊಳ್ಳಲು ಬೇರೆ ಉಪಾಯಗಳೊಂದೂ ಸಹ ಒಂಟಿಯಾಗಿ ಸಂಧಾನಕ್ಕೆ ಬಂದ ತಪ್ಪಿಗೆ ಅ ಕ್ಷಣ ಆತನ ಮುಂದೆ ಉಳಿದಿರಲೆ ಇಲ್ಲ. ತನ್ನ ಕಡು ವೈರಿಯೆ ಆದ ಖುರೈಷಿಗಳ ನಾಯಕ ಹಾಗೂ ತನ್ನ ಹೆಂಡತಿಯ ಅಪ್ಪ ಈಗ ಮತ ಬಾಂಧವನೂ ಆಗಿ ಇನ್ನಷ್ಟು ಆಪ್ತನಾಗಿದ್ದು ಮಹಮದನ ಇಸ್ಲಾಂನ ಚರಿತ್ರೆಯಲ್ಲಿಯೆ ಒಂದು ಮಹತ್ವದ ಯಶಸ್ಸಿನ ಮೈಲುಗಲ್ಲಾಗಿತ್ತು. 

 

ಮೆಕ್ಕಾಗೆ ಹಿಂದಿರುಗಿ ಅವರೆಲ್ಲರೂ ಇಸ್ಲಾಮಿನತ್ತ ಹೆಜ್ಜೆ ಹಾಕಿದಲ್ಲಿ ಯಾವುದೆ ತೊಂದರೆ ಆಗಲಾರದು ಎನ್ನುವ ಭರವಸೆ ನೀಡಿ ಅವರೆಲ್ಲರನ್ನೂ ಇಸ್ಲಾಮಿನತ್ತ ಕರೆತರುವ ಹೊಣೆಯನ್ನ ನವ ಮತಾಂತರಿ ಅಬು ಸಫ್ಯಾನನಿಗೆ ವಹಿಸಲಾಯಿತು. ಅದರಂತೆಯೆ ಕೂಡಲೆ ಮೆಕ್ಕಾದತ್ತ ಮುಖ ಮಾಡಿದ ಅಬು ಸಫಾಯನ್ ಅಲ್ಲಿಗೆ ಮುಟ್ಟುತ್ತಲೆ ಮಹಮದನ ಲೀಲಾ ವಿನೋದ ಹಾಗೂ ಹೃದಯವಂತಿಕೆಯನ್ನು ತನ್ನೆಲ್ಲಾ ಬೆಂಬಲಿಗರ ಮುಂದೆ ಹಾಡಿ ಹೊಗಳುತ್ತಲೆ ಆತನ ಅಪರಾ ಸೈನ್ಯದ ಬಲಾಬಲವನ್ನೂ ಸಹ ವರ್ಣಿಸಿ, ತನ್ನೊಂದಿಗೆ ನಂಬಿ ಬಂದು ತನ್ನ ಮನೆಯಲ್ಲಿ ಉಳಿಯುವವರಿಗೆ ಮಾತ್ರ ಅಭಯ ನೀಡಲಾಗುವುದು ಎಂದು ಘೋಷಿಸಿದ. ತನ್ನ ಮತಾಂತರದ ಸಂಗತಿಯನ್ನೂ ಸಹ ಕಡೆಯಲ್ಲಿ ಮೆತ್ತಗೆ ಉಸುರಿ ತಾನೀಗ ಮುಸಲ್ಮಾನನಾಗಿರುವುದನ್ನ ಖಚಿತ ಪಡಿಸಿದ. ಜೀವ ಭಯಕ್ಕೆ ಬಿದ್ದ ಅನೇಕ ಖುರೈಷಿಗಳು ಅಬು ಸಫ್ಯಾನನ ಮನೆ ಹಾಗೂ ಕಾಬಾ ಗುಡಿಯ ಆವರಣ ಹೊಕ್ಕು ಆಶ್ರಯ ಪಡೆದರು. 


ಈಗ ರಾಜಕೀಯ ಹಾಗೂ ಸಾಮಾಜಿಕವಾಗಿ ಅಬು ಸಫ್ಯಾನನ ನಾಯಕತ್ವ ಶಿಥಿಲವಾದದ್ದು ಸುಸ್ಪಷ್ಟವಾಗಿತ್ತು. ಅವನಿಗೆ ಖುರೈಷಿ ಸಮಾಜದ ಮೇಲೆ ಹಿಂದೆ ಇದ್ದ ಹಿಡಿತ ಉಳಿದಿರಲಿಲ್ಲ. ಆತ ತೀರಾ ಅಶಕ್ತ ಹಾಗೂ ಪಲಾಯನವಾದಿ ವ್ಯಕ್ತಿಯಾಗಿ ಒಂದೆ ಒಂದು ರಾತ್ರಿಯಲ್ಲಿ ಮಾರ್ಪಾಡಾಗಿದ್ದ. ಆತನ ಪ್ರತಿಷ್ಠೆ ಹಾಗೂ ಧೈರ್ಯ ಇವೆಲ್ಲಾ ಮಣ್ಣು ಪಾಲಾಗಿ ಹೋಗಿದ್ದೆವು. ಇತ್ತ ಮಹಮದ್ ಇದೆ ಅವಧಿಯಲ್ಲಿ ತನ್ನ ಸೈನ್ಯವನ್ನ ನಾಲ್ಕು ಭಾಗಗಳಾಗಿ ವಿಂಗಡಿಸಿ ಚಾಕಚಾಕ್ಯತೆಯಿಂದ ಊರನ್ನ ನಾಲ್ಕೂ ದಿಕ್ಕಿನಿಂದ ನುಗ್ಗಲು ನಿಯೋಜಿಸಿದ. ಶಾಂತಿ ಕಾಪಾಡುವ ಆಜ್ಞೆಯನ್ನ ಕಟ್ಟುನಿಟ್ಟಾಗಿ ಹೇರಿ ರಕ್ತಪಾತ ಅನಿವಾರ್ಯವಲ್ಲದಲ್ಲಿ ಮಾಡಲೆ ಕೂಡದು ಎಂದು ಆದೇಶಿಸಲಾಯಿತು. ಖುರೈಷಿಗಳ ನಾಯಕ ಅಬು ಸಫ್ಯಾನನಎ ಇಸ್ಲಾಮನ್ನ ಒಪ್ಪಿಕೊಂಡು ತನ್ನ ಅನುಯಾಯಿ ಆಗಿರುವಾಗ ಹೆಚ್ಚಿನ ಪ್ರತಿರೋಧವಿಲ್ಲದೆ ಮೆಕ್ಕಾ ತನ್ನ ಕೈವಶವಾಗುವುದು ಆತನಿಗೆ ಖಚಿತವಿತ್ತು. ಆತನ ದಾರಿ ನಿರೀಕ್ಷೆಯಂತೆ ಸುಗಮವಾಗಿತ್ತು. 


ಆದರೆ ಮಹಮದ ಶಾಂತ ಸೇರ್ಪಡೆಯ ಆಸೆ ಅದೆಷ್ಟೆ ಇದ್ದರೂ ಸಹ ಖುರೈಷಿಗಳ ಒಂದು ಪಡೆಯ ಪ್ರತಿರೋಧವನ್ನ ಎದುರಿಸುವುದೂ ಸಹ ಆತನ ಪಡೆಗೆ ಅನಿವಾರ್ಯವಾಯಿತು. ದಕ್ಷಿಣ ದಿಕ್ಕಿನಲ್ಲಿ ನಿಯೋಜಿಸಿದ್ದ ತುಕುಡಿಯನ್ನ ಖುರೈಷಿಗಳಾದ ಸೊಹೈಲ್, ಸಫ್'ವಾನ್ ಹಾಗೂ ಇಕ್ರಮ್ ಇವರೆಲ್ಲರ ತೀವೃ ಪ್ರತಿರೋಧವನ್ನ ಎದುರಿಸಬೇಕಾಯಿತು. ಮುಸಲ್ಮಾನ ಪಡೆಯ ನೇತೃತ್ವ ವಹಿಸಿದ್ದ ಖಲೀಲ್ ವೀರಾವೇಶದಿಂದ ಹೋರಾಡಿ ಈ ಮೂವರು ಯೋಧರನ್ನೂ ಹಿಮ್ಮೆಟ್ಟಿಸಿದ. ಬಾಕಿ ನಾಯಕರು ಪಲಾಯನಗೈದರು, ಎರಡು ಪಡೆಗಳಲ್ಲಿ ಅಪಾರ ಸಾವುನೋವು ಉಂಟಾದವು. ಈ ಸುದ್ದಿ ಮಹಮದನ ಕಿವಿಗೆ ಬಿದ್ದದ್ದೆ ಆತ ಕ್ರೋಧಗೊಂಡ. ತನ್ನ ಯುದ್ಧ ಹೂಡದೆ ರಕ್ತಪಾತ ಮಾಡದೆ ಮುನ್ನಡೆಯುವ ಆಜ್ಞೆಯನ್ನ ಖಲೀದ್ ಉಲ್ಲಂಘಿಸಿದ್ದು ಆತನಿಗೆ ನೋವಿನ ಸಂಗತಿಯಾಗಿ ಪರಿಣಮಿಸಿತ್ತು. ಆದರೆ ಸಮರ ಹೂಡಲೇ ಬೇಕಾದ ಅನಿವಾರ್ಯತೆಯನ್ನ ವಿವರಿಸಿ ಖಲೀದ್ ಸಮಜಾಯಷಿ ನೀಡಿದಾಗ ಮಾತ್ರ "ಎಲ್ಲಾ ದೈವೇಚ್ಛೆ!" ಎಂದು ಆತ ಸುಮ್ಮನಾದ.



ಈಗ ಗೆದ್ದ ನಗರವಾದ ಮೆಕ್ಕಾದತ್ತ ಮಹಮದನ ಸವಾರಿ ಹೊಕ್ಕಿತು. ಯಾವ ಊರಿನಿಂದ ಬೆನ್ನಟ್ಟಿ ಬಂದು ಕೊಲ್ಲಲು ಹವಣಿಸಿ ಪ್ರಾಣಭೀತಿಯಿಂದ ಆತನನ್ನು ಒದ್ದು ಓಡಿಸಲಾಗಿತ್ತೋ ಇಂದು ಏಳು ವರ್ಷದ ಅವಧಿಯಲ್ಲಿಯೆ ಆತ ಅಲ್ಲಿನ ಪ್ರಭುವಾಗಿ ಪರಿಣಮಿಸಿದ್ದ! ನಗರದ ಒಂದು ಭಾಗದಲ್ಲಿ ಒಂದು ಪ್ರಶಸ್ತ ಸ್ಥಳವನ್ನು ಆರಿಸಿಕೊಂಡು ಆತ ಅಲ್ಲಿ ನೆಲೆಸಿದ. ತನ್ನ ಸ್ವಂತ ಮನೆಯಾಗಿದ್ದ ಹಳೆಯ ಸ್ಥಳಕ್ಕೆ ಹೋಗಿ ನೆಲೆಸಲು ಆತ ಅಷ್ಟು ಆಸಕ್ತಿ ತೋರಲಿಲ್ಲ. ಅಲ್ಲಿಂದ ಆತ ಸೀದ ಕಾಬಾ ಗುಡಿಯತ್ತ ಕಾತರದಿಂದ ಚಲಿಸಿದ. ತನ್ನ ನೆಚ್ಚಿನ ಒಂಟೆ ಏರಿ ಸಾಗಿದ್ದ ಆತ ಭಕ್ತಿಯಿಂದ ಹೊರ ಆವರರಣದಲ್ಲಿದ್ದ ಪವಿತ್ರ ಕರಿಕಲ್ಲನ್ನ ಒಂಟೆ ನಡೆಸುವ ಕೈಕೋಲಿನಿಂದಲೆ ಮುಟ್ಟಿ ತಲೆ ಬಾಗುತ್ತಾ ವಂದಿಸಿದ. ಗುಡಿಯನ್ನ ನಂಬಿಕೆಯ ಅನುಸಾರ ಏಳು ಸಾರಿ ಪ್ರದಕ್ಷಿಣೆ ಸಹ ಒಂಟೆ ಏರಿಯೆ ಹಾಕಿದ. ಅನಂತರ ವಿಗ್ರಹಗಳೆ ತುಂಬಿದ್ದ ಗುಡಿಯ ಒಳಗೆ ಕಾಲಿಡಲು ಹೇಸಿಕೊಳ್ಳುತ್ತಾ ಅಸಹ್ಯದ ಮುಖಭಾವ ಹೊತ್ತು ತನ್ನ ಕೈಕೋಲಿನಿಂದ ಗುಡಿಯನ್ನ ನಿರ್ದೇಶಿಸುತ್ತಾ ಅಲ್ಲಿನ ಮೂರ್ತಿಗಳನ್ನೆಲ್ಲ ಕಿತ್ತೆಸೆಯಲು ತನ್ನ ಅನುಯಾಯಿಗಳಿಗೆ ಆಜ್ಞೆ ಇತ್ತ. 


ಮುಖ್ಯ ಆರಾಧ್ಯ ಮೂರ್ತಿಯಾಗಿದ್ದ ಬಹುತೇಕ ಆಕಾರ ಹಾಗೂ ಕಲ್ಪನೆಯಲ್ಲಿ ಹಿಂದೂಗಳ ಮಹಾವಿಷ್ಣುವನ್ನ ಹೋಲುತ್ತಿದ್ದ 'ಹುಬಾಲ್' ಎನ್ನುವ ಮೂರ್ತಿ ಸಬ್ಬಲಿನ ಏಟಿಗೆ ನೆಲಕ್ಕೆ ಭಾರಿ ಸದ್ದಿನೊಂದಿಗೆ ಒರಗುತ್ತಿದ್ದಂತೆ ಸಂತೋಷತಿರೇಕದಲ್ಲಿ 'ದೇವರು ದೊಡ್ಡವನು! ಸತ್ಯ ಬಂದಿದೆ ಅಸತ್ಯ ಮಾಯವಾಗಿದೆ! ಎಷ್ಟೆಂದರೂ ಸತ್ಯದ ಮುಂದೆ ಅಸತ್ಯ ಮಂಕಾಗುವುದಷ್ಟೆ?!" ಎಂದು ದೊಡ್ಡ ಧ್ವನಿಯಲ್ಲಿ ಘೋಷಿಸಿದ ಎನ್ನುತ್ತಾರೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತಮ್ಮ ಕೃತಿ 'ಲೈಫ್ ಆಫ್ ಮಹಮದ್'ನ ಪುಟ ಸಂಖ್ಯೆ ೪೦೮ರಲ್ಲಿ.


ಅಲ್ಲಿಂದ ಆತ ಸೀದ ಸೆಮೆಟಿಕ್ ವಂಶದ ಪಿತಾಮಹ ಅಬ್ರಾಹಮನ ಗುಡಿಯತ್ತ ತೆರಳಿದ. ಅಲ್ಲಿ ತದೇಕ ಚಿತ್ತನಾಗಿ ಪ್ರಾರ್ಥನೆಯನ್ನೂ ಸಹ ಸಲ್ಲಿಸಿದ. ಅನಂತರ ತನ್ನ ಬಂಟ ಬಿಲಾಲನನ್ನು ಕರೆದು ಕೂಡಲೆ ಒಥಮನ್ ಇಬ್ನ್ ತಲ್ಹಾ ಎಂಬ ಅರ್ಚಕನ ಮನೆಗೆ ತೆರಳಿ ಆತನ ವಶದಲ್ಲಿದ್ದ ಗುಡಿಯ ಇನ್ನಿತರ ಭಾಗಗಳ ಕೀಲಿ ಕೈಗಳ ಗೊಂಚಲನ್ನ ತರಲು ಆದೇಶಿಸಿದ. ಬೀಗದ ಕೀಲಿಯಿಂದ ಎಲ್ಲಾ ಮುಚ್ಚಿದ ಬಾಗಿಲುಗಳನ್ನ ತೆಗೆದ ನಂತರ ತಲೆ ಬಾಗಿಸಿ ನೆಲಕ್ಕೆ ಹಣೆಯೂರುತ್ತಾ ಆತ ಗುಡಿಯ ಹೊಸ್ತಿಲಿಗೆ ನಮಸ್ಕರಿಸಿದ. ಅನಂತರ ಅದೆ ಪೂಜಾರಿಯ ಕೈಗೆ ಕೀಲಿ ಕೈಗಳ ಗೊಂಚಲನ್ನ ಹಿಂತಿರುಗಿಸಿಕೊಡುತ್ತಾ ಇಂದಿನಿಂದ ಮೂರ್ತಿ ಪೂಜೆ ಹಾಗೂ ಅಭಿಷೇಕ ಪೂಜೆ ಆರಾಧನೆಗಳಂತಹದ್ದು ನಡೆಸುವಂತಿಲ್ಲವೆಂದೂ ಗುಡಿಯ ಉಸ್ತುವಾರಿಯಾಗಿ ನಿಮ್ಮ ವಂಶದವರೆ ಮುಂದುವರೆಯಿರಿ ಎಂದು ಹೊಣೆಗಾರಿಕೆಯನ್ನ ದಯಪಾಲಿಸಿದ. ತನ್ನ ಪಕ್ಷ ಸೇರಿದ್ದ ಚಿಕ್ಕಪ್ಪ ಅಲ್ ಅಬ್ಬಾಸನ ಕುಟುಂಬದವರಿಗೆ ಪವಿತ್ರ ಝಮ್ ಝಮ್ ಬಾವಿಯ ನೀರನ್ನು ಅಲ್ಲಿಗೆ ಬರುವ ಯಾತ್ರಿಕರಿಗೆ ಕುಡಿಸುವ ಹೊಣೆಗಾರಿಕೆಯನ್ನು ನೀಡಿದ ಅನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ 'ದ ಸೀಲ್ಡ್ ನೆಕ್ಟರ್' ಕೃಅತಿಯ ಪುಟ ಸಂಖ್ಯೆ ೭೮೨ರಲ್ಲಿ.



ಅಲ್ಲಾಹನದೂ ಸೇರಿ ಅಲ್ಲಿ ಇರಿಸಲಾಗಿದ್ದ ಎಲ್ಲಾ ಇನ್ನಿತರ ಮುನ್ನೂರಾ ಅರವತ್ತು ಆರಾಧನಾ ಮೂರ್ತಿಗಳನ್ನ ಆತನ ನಿರ್ದೇಶನದ ಮೇರೆಗೆ ಆಲಿ ಹಾಗೂ ಉಮರ್ ಒಡೆದೊಡೆದು ಕಸದಂತೆ ರಾಶಿ ಹಾಕಿದರು. ಯಹೂದಿ ಪ್ರವಾದಿಗಳ ಲೀಲೆಗಳನ್ನ ಚಿತ್ರಿಸಿ ಬರೆಯಲಾಗಿದ್ದ ಜಾತಕ ಕಥೆಗಳ ಚಿತ್ರವನ್ನು ಗೋಡೆಗಳಿಂದ ಅಳಿಸಿ ಇನ್ನಿಲ್ಲವಾಗಿಸಲಾಯಿತು. ಇದಾದ ನಂತರ ದೊಡ್ಡ ಗಂಟಲಿನ ಬಿಲಾಲನಿಗೆ ಕಾಬಾದ ಗುಡಿಯೊಳಗಿನ ಇಸ್ಲಾಮಿನ ಪ್ರಪ್ರಥಮ ನಮಾಝಿಗೆ ಕರೆ ಕೊಡಲು ತಿಳಿಸಲಾಯಿತು. ಜನರೆಲ್ಲಾ ಬಂದು ನೆರೆದ ನಂತರ ಮದೀನಾದ ಮಸೀದಿಯಲ್ಲಿನ ಪದ್ಧತಿಯಂತೆಯೆ ಅಲ್ಲಿ ಎಲ್ಲರ ಮುಂದೆ ಪ್ರಾರ್ಥನಾ ವಿಧಿಗಳನ್ನ ಮಹಮದ್ ನೆರವೇರಿಸಿದ. 'ಏಕ ದೈವ ಹಾಗೂ ಅಂತಿಮ ದಿನದ ವಿಚಾರಣೆಯನ್ನ ನಂಬುವ ಯಾರೊಬ್ಬರೂ ಇನ್ನು ಮುಂದೆ ತಮ್ಮ ಮನೆಯ ದೇವರ ಮನೆಗಳಲ್ಲಿ ವಿಗ್ರಹಾರಾಧನೆಗಳನ್ನ ಮಾಡುವಂತಿಲ್ಲ!" ಎಂದು ಸಾರ್ವಜನಿಕವಾಗಿ ಘೋಷಿಸಿದ. ಅದನ್ನ ಮೀರಿದವರಿಗೆ ಕಠಿಣ ಶಿಕ್ಷೆಯ ಎಚ್ಚರಿಕೆಯನ್ನೂ ಸಹ ನೀಡಲಾಯಿತು. ಎಲ್ಲರೂ ನಗರದಲ್ಲಿ ವಾಸಿಸುವ ಇಚ್ಛೆ ಇದ್ದಲ್ಲಿ ಬೇಷರತ್ತಾಗಿ ಇಸ್ಲಾಮನ್ನ ಒಪ್ಪಿಕೊಳ್ಳಬೇಕೆಂದು ನಗರದ ಬೀದಿಬೀದಿಗಳಲ್ಲಿ ಡಂಗೂರ ಹೊಡೆಸಲಾಯಿತು. 



ನಗರದ ಖಚಿತ ಸರಹದ್ದುಗಳನ್ನ ಗುರುತಿಸುವ ಗಡಿ ಕಂಭಗಳನ್ನ ಹೊಸತಾಗಿ ನಿಲ್ಲಿಸಲಾಯಿತು. ಮಹಮದ್ ಮೆಕ್ಕಾದ ವಿಗ್ರಹಗಳನ್ನ ಒಡೆಸಿ ಹಾಕಿದರೂ ನಗರದ ಪಾವಿತ್ರ್ಯತೆಯನ್ನ ಹಿಂದಿನಂತೆಯೆ ಕಾಪಾಡಿಕೊಂಡು ಹೋಗುವ ನಿರ್ಧಾರಕ್ಕೆ ಬಂದದ್ದು ಮೆಕ್ಕಾವಾಸಿಗಳ ಅಭದ್ರತೆಯಿಂದ ನರಳುತ್ತಿದ್ದ ಮನಕ್ಕೆ ನೆಮ್ಮದಿ ತಂದಿತ್ತು. ತಮ್ಮ ನಗರ ಮೊದಲಿನಂತೆಯೆ ಯಾತ್ರಾ ಕ್ಷೇತ್ರವಾಗಿ ಉಳಿಯುವ ಬಗ್ಗೆಯೂ ಅವರಿಗೆ ಖುಷಿಯಿತ್ತು. ಇಷ್ಟೆಲ್ಲವನ್ನೂ ಮಾಡಿ ನಾಟಕೀಯವಾಗಿ ಮೆಕ್ಕಾದ ಮೇಲೆ ತನ್ನ ಅಧಿಕಾರವನ್ನ ಅಧಿಕೃತವಾಗಿ ಪ್ರಾರಂಭಿಸಿದ ಮಹಮದನ ಹಿಝರತ್ ಅಂದರೆ ತತ್ಕಾಲಿಕ ವಲಸೆ ಈ ಮೂಲಕ ಮುಗಿದಿತ್ತು. ಈಗ ನಿರಾಶ್ರಿತರ ಪಟ್ಟದಿಂದ ಆತ ಹಾಗೂ ಆತನ ಹಿಂಬಾಲಕರು ಮುಕ್ತರಾಗಿದ್ದರು. ಬಿಡಾರಕ್ಕೆ ಆತ ಬರುವಾಗ ಅಬು ಸಫ್ಯಾನ್ ತನ್ನ ಮುದಿ ತಂದೆಯನ್ನ ಕರೆತಂದು ಆತನ ದಾರಿಯನ್ನೆ ನಿರೀಕ್ಷಿಸುತ್ತಿದ್ದ. ತನ್ನ ಅಳಿಯನ ಆಸೆಯಂತೆ ಆತನ ಅಪ್ಪನಿಗೆ ಸ್ವತಃ ಪ್ರವಾದಿಯಾದ ತಾನೆ ಇಸ್ಲಾಮಿನ ದೀಕ್ಷೆ ಕೊಟ್ಟ ಮಹಮದ್ ಅತ್ಯಂತ ಆನಂದದಿಂದಲೆ ಕಣ್ಣು ಮಂಜಾದ ಆ ಮುಪ್ಪಾನುಮುಪ್ಪಾದ ಮುದುಕನನ್ನೂ ಸಹ ಮುಸಲ್ಮಾನನಾಗಿಸಿ ಸಂತುಷ್ಟನಾದ.


( ಇನ್ನೂ ಇದೆ.)

Monday, November 16, 2015

ವಲಿ - ೩೧







ಹಿಂದಿನ ವರ್ಷ ಅಲ್ ಹೊದೈಬಿಯಾದಲ್ಲಿ ಖುರೈಷಿಗಳೊಂದಿಗೆ ಮಾಡಿಕೊಂಡ ಶಾಂತಿ ಒಪ್ಪಂದದ ಪ್ರಮುಖ ಅಂಶವಾದ ಹಝ್ಝ್ ಯಾತ್ರೆ ಮಾಡುವ ಈ ಸಾಲಿನ ಹಂಗಾಮಿನ ದಿನಗಳು ಓಡೋಡುತ್ತ ಬಂದಿದ್ದವು. ದಿಗ್ವಿಜಯ ಯಾತ್ರೆಗಳಲ್ಲಿ ಮಗ್ನನಾಗಿದ್ದ ಮಹಮದ್ ಅದನ್ನ ಮಾಡದಿರಲು ಕಾರಣಗಳೆ ಇರಲಿಲ್ಲ. ಈ ಬಾರಿ ಉಮ್ರಾ ಅಂದರೆ ಚಿಕ್ಕ ಯಾತ್ರೆಯನ್ನು ಮಾತ್ರ ಮಾಡಲು ನಿರ್ಧರಿಸಿದ ಮಹಮದ್ ತನ್ನ ಎರಡು ಸಾವಿರ ಅನುಯಾಯಿಗಳೊಂದಿಗೆ ಮೆಕ್ಕಾದತ್ತ ಸಾಗಿದ. ಶಾಂತಿ ಒಪ್ಪಂದದ ಶಿಸ್ತಿನ ನಿಯಮಗಳ ಪ್ರಕಾರ ಯಾತ್ರಿಕರು ತಮ್ಮ ಆತ್ಮ ರಕ್ಷಣೆಗಾಗಿ ಕೇವಲ ಒಂದೊಂದು ಆಯುಧಗಳನ್ನ ಮಾತ್ರ ಜೊತೆಗೆ ಇಟ್ಟುಕೊಳ್ಳಬಹುದಿತ್ತು. ಆದರೆ ಮಹಮದ್ ತನ್ನ ಬದಲಾಗಿದ್ದ ಅಂತಸ್ತಿಗೆ ತಕ್ಕಂತೆ ಪ್ರತ್ಯೇಕ ಅಂಗರಕ್ಷಕ ಪಡೆಯನ್ನೆ ಸುಸಜ್ಜಿತವಾದ ಆಯುಧಪಾಣಿಗಳೊಂದಿಗೆ ಜೊತೆಗಿರಿಸಿಕೊಂಡಿದ್ದ. ಈ ಬೆಂಗಾವಲು ಪಡೆ ಪ್ರತ್ಯೇಕವಾಗಿ ಬಲಿ ಕೊಡುವ ಉದ್ದೇಶದಿಂದ ಅರವತ್ತು ಒಂಟೆಗಳನ್ನೂ ಸಹ ತಮ್ಮ ಬೆನ್ನಿಗೆ ಕಟ್ಟಿಕೊಂಡು ಹೊರಟಿದ್ದವು.


ಹೆಚ್ಚು ಗೊಂದಲಕ್ಕೆ ಅವಕಾಶ ನೀಡಲಾಗದಂತೆ ಖುರೈಷಿಗಳು ಮಹಮದನ ಯಾತ್ರೆಗೆ ಅವಕಾಶ ಮಾಡಿಕೊಟ್ಟರು. ಆತ ಮೆಕ್ಕಾದಲ್ಲಿ ಯಾತ್ರಿಸುವ ಸಂದರ್ಭದಲ್ಲಿ ತಾವು ತಮ್ಮ ಪಾಡಿಗೆ ಮೆಕ್ಕಾ ತೊರೆದು ಸಮೀಪದ ಬೆಟ್ಟ ಪ್ರದೇಶದಲ್ಲಿ ತತ್ಕಾಲಿಕ ವಸತಿಯನ್ನ ಹೂಡುವಷ್ಟು ಔದಾರ್ಯದಿಂದಲೂ ಅವರು ನಡೆದುಕೊಂಡರು. ಬರೊಬ್ಬರಿ ಏಳು ವರ್ಷಗಳ ನಂತರ ಮಹಮದ್ ಮೆಕ್ಕಾವನ್ನು ಪ್ರವೇಶಿಸುವ ಭಾಗ್ಯವನ್ನ ಮರಳಿ ಪಡೆದಿದ್ದ. ತನ್ನ ಎರಡು ಸಾವಿರ ಸಹ ಯಾತ್ರಿಕರೊಂದಿಗೆ ಭಾವುಕನಾಗಿಯೆ ಆತ ಪಟ್ಟಣವನ್ನು ಪ್ರವೇಶಿಸಿದ.


ಏಳು ವರ್ಷಗಳ ನಂತರ ಕಾಬಾ ಗುಡಿಯ ದರ್ಶನವನ್ನು ಮಹಮದ್ ಮಾಡಲಿದ್ದ. ಯಾತ್ರಿಕರ ಉಡುಪಾದ ಪಂಚೆ ಹಾಗೂ ಶಾಲನ್ನ ಧರಿಸಿದ್ದ ಮಹಮದ್ ಉತ್ಸಾಹದಿಂದಲೆ ಒಂಟೆಯೇರಿ ಕಾತರನಾಗಿ ಕಾಬಾದ ಎದುರು ಬಂದನು. ಆತ ಗುಡಿಯನ್ನ ಪ್ರವೇಶಿಸಲಿಲ್ಲ. ಒಂಟೆಯಿಂದ ಆತ ಕೆಳಗಿಳಿಯಲಿಲ್ಲ. ಅದರ ಮೇಲೆ ಕುಳಿತೆ ತನ್ನ ಕೈಕೋಲಿನಿಂದ ಗುಡಿಯ ಮೂಲೆಯಲ್ಲಿದ್ದ ಕರಿಕಲ್ಲನ್ನ ಭಕ್ತಿ ಪೂರ್ವಕವಾಗಿ ಆತ ಸ್ಪರ್ಶಿಸಿದ. ನಿಯಮಾನುಸಾರ ನಡೆಸಬೇಕಾದ ಏಳು ಪ್ರದಕ್ಷಿಣೆಗಳನ್ನ ಒಂಟೆಯ ಮೇಲೆ ಕುಳಿತಿದ್ದೆ ಆತ ನಡೆಸಿದ. ಮಹಮದನ ಒಂಟೆಯನ್ನ ಮುನ್ನಡೆಸುತ್ತಿದ್ದ ಅಬ್ದುಲ್ಲಾ ವೀರೋಚಿತವಾದ, ಯುದ್ಧ ಪ್ರೇರಕ ಹಾಡಿನ ಸಾಲುಗಳನ್ನ ದೊಡ್ದ ಧ್ವನಿಯಲ್ಲಿ ಮೊಳಗಿಸುತ್ತಾ ಸಾಗುತ್ತಿದ್ದ. ಇದರಿಂದ ಕುಪಿತನಾದ ಮಹಮದ್ ಅವನನ್ನ ತಡೆದು 'ಅವನಿಲ್ಲದೆ ಇನ್ಯಾರೂ ಇಲ್ಲ! ಬೇರೆ ಇನ್ಯಾರೂ ಅಲ್ಲ, ತನ್ನ ಸೇವಕರನ್ನು ಕಾಪಾಡಿ ಉದ್ಧರಿಸುವವನು ಬೇರೆ ಇನ್ಯಾರೂ ಅಲ್ಲ! ಅವನಲ್ಲದೆ ಇನ್ಯಾರು ಮೋಸ ಕೂಟವನ್ನು ಹಿಮ್ಮೆಟ್ಟಿಸಿದವನು?' ಎಂದು ಧ್ವನಿ ಎತ್ತರಿಸಿ ಘರ್ಜಿಸಿದನು. ನೆರೆದ ಬೆಂಬಲಿಗರು ಇದಕ್ಕೆ ಉತ್ಸಾಹದ ಧ್ವನಿಗೂಡಿಸಿದರು. ಅವರೆಲ್ಲರ ಈ ಸಂತಸದ ಕೂಗು ಸುತ್ತಲ ಬೆಟ್ಟಗುಡ್ಡಗಳಲ್ಲಿ ಮಾರ್ದನಿಸಿತು.



ಪ್ರದಕ್ಷಿಣೆ ಮುಗಿದ ನಂತರ ಮಹಮದ್ ಊರ ಪಕ್ಕದ ಶಿಖರಗಳಾದ ಮರ್ವಾ ಹಾಗೂ ಸಫಾದ ನಡುವೆಯೂ ಸಹ ಒಂಟೆಯನ್ನೇರಿದ್ದಂತೆಯೆ ಏಳೇಳು ಬಾರಿ ಹೋಗಿ ಬಂದ. ಅದೊಂದು ಯಹೂದಿ ಕುಲದ ಪ್ರಾಚೀನ ಆಚರಣ ಪದ್ಧತಿಯಾಗಿತ್ತು. ಮರ್ವಾದ ಶಿಖರದ ಮೇಲೆ ಜೊತೆಗೆ ತಂದಿದ್ದ ಎಲ್ಲಾ ಒಂಟೆಗಳ ಬಲಿಯನ್ನ ಕೊಡಲಾಯಿತು. 'ಇದು ಬಲಿ ಕೊಡಲು ಪ್ರಶಸ್ತ ಸ್ಥಳ ಹಾಗೂ ಇದಷ್ಟೇ ಅಲ್ಲದೆ ಮೆಕ್ಕಾದ ಪ್ರತಿಯೊಂದಿಂಚು ನೆಲವೂ ಸಹ ಬಲಿಗೆ ಹೇಳಿ ಮಾಡಿಸಿದ್ದೇ ಆಗಿದೆ' ಎಂದು ಮಹಮದ್ ಘೋಷಿಸಿದ. ವಾಡಿಕೆಯಂತೆ ತನ್ನ ಮುಡಿ ಕೊಟ್ಟು ತಲೆ ಬೋಳಿಸಿಕೊಂಡ. ಅಲ್ಲಿಗೆ ಆತನ ಚಿಕ್ಕ ಯಾತ್ರೆಯ ವಿಧಿಗಳೆಲ್ಲಾ ಶಾಸ್ತ್ರೋಕ್ತವಾಗಿ ನೆರವೇರಿದವು. ಗಮನಿಸಿ, ಆತ ತನ್ನ ಯಾತ್ರಾ ನಿಯಮಗಳನ್ನೇನೂ ಪ್ರಕಟಿಸದೆ ಆವರೆಗೂ ಜಾರಿಯಲ್ಲಿದ್ದ ಇಸ್ಲಾಂ ಪೂರ್ವದ ಪ್ರಾಚೀನ ಪದ್ಧತಿಯ ಅನುಸಾರವೆ ತನ್ನ ಯಾತ್ರೆಯನ್ನ ನಡೆಸಿದ್ದ. ಆತನ ಇಸ್ಲಾಮ್ ಕೂಡಾ ಮುಂದೆ ಅದೆ ಪದ್ಧತಿಗಳಿಗೆ ಜೋತು ಬಿತ್ತು.


ಮಾರನೆಯ ದಿನ ಮುಂಜಾವಿನಲ್ಲಿ ಮಹಮದ್ ಕಾಬಾ ಗುಡಿಯ ಒಳಾಂಗಣಕ್ಕೆ ಬಂದ. ಗುಡಿಯ ಮೇಲ್ಛಾವಣಿ ಏರಿದ ಅತ ತಾನೆ ಸ್ವತಃ ಮುಂದಾಗಿ ಪ್ರಾರ್ಥನೆಯ ಕರೆಯಾದ ಆಝಾನನ್ನ ನೀಡಿದ. ಮದೀನಾದ ತನ್ನ ಸ್ವಂತ ಮಸೀದಿಯಲ್ಲಿ ನಡೆಸಿ ಕೊಡುತ್ತಿದ್ದ ಕ್ರಮದಲ್ಲಿಯೇ ಇಲ್ಲಿಯೂ ಆತ ಪ್ರಾರ್ಥನೆಗಳನ್ನ ನಡೆಸಿಕೊಟ್ಟ. ಪ್ರಾಚೀನ ಕಾಲದ ಎಲ್ಲಾ ವಿಧಿಯಾಚರಣೆಗಳನ್ನೂ ಸಹ ಚಾಚೂ ತಪ್ಪದೆ ನಡೆಸಿ 'ದೇವರೊಬ್ಬನೆ! ನಾನವನ ಪ್ರವಾದಿ?!' ಎಂದು ದೊಡ್ಡ ಗಂಟಲಿನಲ್ಲಿ ಘೋಷಿಸಿದ. ಕಾಬಾದ ಗುಡಿಯೊಳಗೆ ಅಲ್ಲಾಹನದೂ ಸೇರಿ ಇದ್ದ ಒಟ್ಟು ಮುನ್ನೂರಾ ಅರವತ್ತು ನಾನಾ ದೇವರ ಮೂರ್ತಿಗಳು ಈ ಘೋಷಣೆಗೆ ಮೂಕ ಸಾಕ್ಷಿಗಳಾಗಿ ನಿಂತಿದ್ದವು! ಹಲವಾರು ವಿಗ್ರಹಗಳ ಮುಂದೆ ಮೂರ್ತಿ ಪೂಜನೆಯನ್ನೆ ವಿರೋಧಿಸುತ್ತಿದ್ದ ಮಹಮದ್ ಈ ಪ್ರಾರ್ಥನೆಗಳನ್ನ ಶ್ರದ್ಧಾ ಪೂರ್ವಕವಾಗಿ ನಡೆಸಿಕೊಟ್ಟದ್ದು ಒಂದು ಚರಿತ್ರಾರ್ಹ ಘಟನೆಯಾಗಿತ್ತು ಎನ್ನುತ್ತಾರೆ ಸರ್ ವಿಲಿಯಂ ಮ್ಯೂರ್ ತಮ್ಮ 'ಲೈಫ್ ಆಫ್ ಮಹಮದ್' ಕೃತಿಯ ಪುಟ ಸಂಖ್ಯೆ ಮುನ್ನೂರಾ ಎಂಬತ್ತೆಂಟರಲ್ಲಿ.



ಮೆಕ್ಕಾದ ಮಾರುಕಟ್ಟೆ ಪ್ರದೇಶದಲ್ಲಿ ಒಂಟೆ ಚರ್ಮದಿಂದ ರಚಿಸಲಾಗಿದ್ದ ಗುಡಾರದಲ್ಲಿ ಮಹಮದ್ ಆ ಅವಧಿಯುದ್ದ ತಂಗಿದ್ದ. ಆತ ಯಾವುದೆ ಸಂಬಂಧಿಕರ ಮನೆಗೆ ಹೋಗಲೂ ಇಲ್ಲ, ಹೋಗುವ ಇಚ್ಛೆಯನ್ನೂ ಸಹ ವ್ಯಕ್ತ ಪಡಿಸಲಿಲ್ಲ. ಆದರೆ ತನ್ನನ್ನ ಕಾಣಲು ಅವರಾಗಿಯೆ ಹುಡುಕಿಕೊಂಡು ಬಂದ ರಕ್ತ ಸಂಬಂಧಿ ಖುರೈಷಿಗಳೊಂದಿಗೆ ಕುಶಲ ಸಂಭಾಷಣೆಗಳನ್ನು ಸಹಜವಾಗಿಯೆ ನಡೆಸಿ ಸತ್ಕರಿಸಿ ಬೀಳ್ಕೊಟ್ಟ. ಇದೆ ಅವಧಿಯಲ್ಲಿ ಮತ್ತೊಮ್ಮೆ ಆತನಿಗೆ 'ಶಾದಿ ಭಾಗ್ಯ'(?) ಒದಗಿ ಬಂತು! ತನ್ನ ಚಿಕ್ಕಪ್ಪ ಅಲ್ ಅಬ್ಬಾಸನ ಹೆಂಡತಿಯ ತಂಗಿಯಾಗಿದ್ದ ಇಪ್ಪತ್ತಾರು ವರ್ಷಗಳ ವಿಧವೆ ಮೈಮುನ್ನೀಸಳೊಂದೆಇಗೆ ಆತ ವಿವಾಹ ಸಮಾಗಮವನ್ನು ಕುದುರಿಸಿದ. ಮೂರು ದಿವಸದ ಈ ಅವಧಿಯಲ್ಲಿ ಆತ ಮತ್ತೊಮ್ಮೆ ಹಸೆಮಣೆ ಏರಲು ತಯ್ಯಾರಾದ ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿಯಾದ 'ದ ಸೀಲ್ಡ್ ನೆಕ್ಟರ್'ರಿನ ಪುಟ ಸಂಖ್ಯೆ ಏಳುನೂರಾ ಐವತ್ತಾರರಲ್ಲಿ.


ಈ ಮೂರು ದಿನಗಳಿಗೆ ಮಾತ್ರ ಆತ ಅಲ್ಲಿ ತಂಗಲು ಅನುಮತಿ ಇದ್ದು ಅದನ್ನ ವಿಸ್ತರಿಸುವಂತೆ ಕೇಳಿಕೊಂಡರೂ ಯಾವುದೆ ಪ್ರಯೋಜನವಾಗಲಿಲ್ಲ. ಕೂಡಲೆ ಮೆಕ್ಕಾ ತ್ಯಜಿಸಿ ಮದೀನಾದತ್ತ ಹೊರಡುವಂತೆ ಖುರೈಷಿಗಳಿಂದ ಅವನಿಗೆ ಆಜ್ಞೆ ಬಂತು. ಕನಿಷ್ಠ ನಿಶ್ಚಯವಾಗಿರುವ ಮೈಮುನ್ನಿಸಾಳೊಂದಿಗಿನ ಮದುವೆಯನ್ನ ಮುಗಿಸಿಕೊಂಡಾದರೂ ಹೊರಡಲು ಅನುಮತಿಸಿ ಎಂದು ಮನವಿ ಮಾಡಿಕೊಂಡರೂ ಅದಕ್ಕೂ ಯಾವುದೆ ಪುರಸ್ಕಾರ ಸಿಗಲಿಲ್ಲ. ಬೇರೆ ದಾರಿ ಕಾಣದೆ ಅಸಹಾಯಕನಾದ ಮಹಮದ ತನ್ನ ಗುಡಾರ ಕಿತ್ತು ಮೆಕ್ಕಾದ ಗಡಿ ದಾಟಿ ಹೊರ ನಡೆದ. ಅಲ್ಲಿಂದ ಹತ್ತು ಮೈಲಿ ದೂರವಿದ್ದ ಸರೀಫ್ ಎನ್ನುವ ಜಾಗದಲ್ಲಿ ತತ್ಕಾಲಿಕ ವಸತಿ ಏರ್ಪಡಿಸಿಕೊಳ್ಳಲಾಯಿತು. ಮಹಮದ್ ಹಾಗೂ ಮೈಮುನ್ನಿಸಾಳ ಮದುವೆ ಅಲ್ಲಿಯೆ ಜರುಗಿತು.



ಮಾರನೆಯ ದಿನ ಆತನ ಪರಿವಾರ ನವ ವಧುವಿನೊಂದಿಗೆ ಮದೀನಾಕ್ಕೆ ಹಿಂದಿರುಗಿ ಬಂತು. ಈ ಮೈಮುನ್ನಿಸ ಮಹಮದನ ಮರಣದ ನಂತರವೂ ಐವತ್ತು ವರ್ಷ ಬಾಳಿ ಬದುಕಿದ್ದಳು. ಆಕೆಯ ಕೊನೆಯ ಆಸೆಯ ಪ್ರಕಾರ ಆಕೆಯನ್ನ ಆಕೆ ಹಾಗೂ ಮಹಮದ್ ವಿವಾಹವಾಗಿದ್ದ ಸರೀಫ್'ನಲ್ಲಿಯೆ ಹೂತು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು ಎನ್ನುತ್ತಾರೆ ಸರ್ ವಿಲಿಯಂ ಮ್ಯೂರ್ ತಮ್ಮ ಕೃತಿ 'ದ ಲೈಫ್ ಆಫ್ ಮಹಮದ್'ನ ಪುಟ ಸಂಖ್ಯೆ ಮುನ್ನೂರಾ ಎಂಬತ್ತೊಂಬತ್ತರಲ್ಲಿ.


ಮೈಮುನ್ನೀಸಾ ಮಹಮದನ ಅಂತಃಪುರ ಸೇರುವಾಗ ಮಹಮದನ ಹೆಂಡತಿಯರ ಸಂಖ್ಯೆ ಝೈನಬ್'ಳ ಸಾವಿನೊಂದಿಗೆ ಎಂಟಕ್ಕೆ ಕುಸಿದಿತ್ತು. ಹೀಗಾಗಿ ಅಧಿಕೃತ ಪತ್ನಿಯರ ಸಂಖ್ಯೆ ಒಂಬತ್ತಕ್ಕೆ ಸ್ಥಿರವಾಯಿತು. ಸೂಳೆಯರೂ ಸಹ ರೆಹಾನಾ ಹಾಗೂ ಮೇರಿ ಇಬ್ಬರೆ ಆಗಿದ್ದರು. ಮೈಮುನ್ನೀಸಾಳ ಜೊತೆಗೆ ಅವಳ ತಂಗಿಯರಾದ ಉಮ್ರಾಹ್ ಹಾಗೂ ಸಲ್ಮಾ ಸಹ ಇಸ್ಲಾಮ್ ಸ್ವೀಕರಿಸಿ ಮದೀನಾ ವಾಸಿಗಳಾಗಳು ಹೊರಟಿದ್ದರು. ಅಲಿ, ಜಾಫರ್ ಹಾಗೂ ಝೈದ್ ನಡುವೆ ಅವರನ್ನ ಮನದನ್ನೆಯರನ್ನಾಗಿ ಮಾಡಿಕೊಳ್ಳುವ ಹಂಬಲ ಮೂಡಿದ್ದನ್ನ ಗಮನಿಸಿದ ಮಹಮದ್ ಪೈಪೋಟಿ ಏರ್ಪಟ್ಟು ಅದು ಪರಸ್ಪರ ಕಚ್ಚಾಟಕ್ಕೆ ತಿರುಗುವ ಮುನ್ನವೆ ಉಪಾಯವಾಗಿ ಅವರಿಬ್ಬರನ್ನೂ ಸಹ ಜಾಫರನಿಗೆ ಮದುವೆ ಮಾಡಿಸಿಕೊಟ್ಟ. ಅಬಿಸೀನಿಯಾದ ನೂತನ ವಲಸಿಗನಿಗೆ ಕೊಟ್ಟ ಅತ್ಯುತ್ತಮ ಕೊಡುಗೆಗಳು ಅದಾಗಿದ್ದವು.



ಮೆಕ್ಕಾ ಯಾತ್ರೆಯಿಂದ ಮರಳಿ ಬಂದಾದ ನಂತರ ಮೆಕ್ಕಾದ ಸಾಮಾಜಿಕ ವಲಯದಲ್ಲಿಯೂ ಸಹ ಮಹಮದನ ಪ್ರಭಾವ ಸಹಜವಾಗಿ ಹೆಚ್ಚಾಗಿತ್ತು. ಆಂತರಿಕ ಕಚ್ಚಾಟ, ಒಳಜಗಳ, ಅಶಾಂತಿ ಹಾಗೂ ಹಣಕಾಸಿನ ಕಾರಣಕ್ಕೆ ಹುಟ್ಟಿಕೊಳ್ಳುತ್ತಿದ್ದ ಕ್ಷೋಭೆಗಳಿಂದ ರೋಸಿ ಹೋಗಿದ್ದ ಅಲ್ಲಿನ ಅನೇಕ ಪ್ರತಿಷ್ಠಿತರಿಗೆ ಸಹ ಇಸ್ಲಾಮಿನ ಸೆಳೆತ ಹುಟ್ಟಿಕೊಳ್ಳಲು ಶುರುವಾಯಿತು. ಮಹಮದ್ ಹೇಳುವ ಪ್ರಕಾರ ಅದು ಶಾಂತಿ ಸಾರುವ ಧರ್ಮವೆ ಆಗಿದ್ದರೆ ಅದನ್ನ ಅನುಸರಿಸಿ ಶಾಂತ ಚಿತ್ತ ಸಮಾಜವನ್ನ ರೂಪಿಸಿಕೊಳ್ಳುವುದರಲ್ಲಿ ಏನು ತಪ್ಪು? ಎಂದವರಲ್ಲಿ ಕೆಲವರು ವಿಚಾರ ಮಂಥಿಸ ಹತ್ತಿದರು. ಮಹಮದ್ ಹೇಳುವ ಶಾಂತ ಸಹಬಾಳ್ವೆ, ಸಾರುತ್ತಿದ್ದ ಧಾರ್ಮಿಕ ತತ್ವಗಳು, ಅವನು ಅಲ್ಪ ಕಾಲದಲ್ಲಿ ಹೆಚ್ಚು ಶ್ರಮವಿಲ್ಲದೆ ಗಳಿಸಿದ ಹಣ ಬಲ, ವೃದ್ಧಿಸುತ್ತಿದ್ದ ಅವನ ಇಸ್ಲಾಮಿನ ಸಂಖ್ಯಾ ಬಲ ಹಾಗೂ ಅರೇಬಿಯಾದ ಪ್ರಸ್ಥಭೂಮಿಯಾದ್ಯಂತ ಹರಡುತ್ತಿದ್ದ ಅವನ ಪ್ರತಿಷ್ಠೆ ಇವೆಲ್ಲಾ ಸೇರಿ ಅವರ ಮನಸ್ಸು ಸಹ ಅವನತ್ತ ವಾಲುವಂತಾಗಿದ್ದರಲ್ಲಿ ಅಚ್ಚರಿಯೇನೂ ಇರಲಿಲ್ಲ.


ಮೆಕ್ಕಾ ಯಾತ್ರೆ ಮುಗಿಸಿ ಮದೀನಾಕ್ಕೆ ಮರಳಿದ ಮಹಮದ ಅದೆ ವರ್ಷ ಅಂದರೆ ಕ್ರಿಸ್ತಶಕ ಅರುನೂರಾ ಇಪ್ಪತ್ತೇಳರ ಏಪ್ರಿಲ್ ತಿಂಗಳಿನಲ್ಲಿ ಬೆನ್ ಸುಲೈಮ್ ಬುಡಕಟ್ಟಿನವರ ಮೇಲೆ ದಂಡೆತ್ತಿಕೊಂಡು ಹೋದ. ಆದರೆ ಅದು ಅಷ್ಟೊಂದು ಪರಿಣಾಮಕಾರಿ ಸಾಫಲ್ಯವನ್ನೇನೂ ಗಿಟ್ಟಿಸಲಿಲ್ಲ. ಇದಾದ ಒಂದು ತಿಂಗಳೊಳಗೆ ಬೆನ್ ಲಾತ್ ಹಾಗೂ ಬೆನ್ ಮುರ್ಯಾ ಬುಡಕಟ್ಟಿನವರ ಮೇಲೆಯೂ ಆತನ ದಿಗ್ವಿಜಯ ಯಾತ್ರೆ ಸಾಗಿತು. ಆ ಯುದ್ಧ ಅತ್ಯಂತ ಯಶಸ್ವಿಯಾಗಿ ಅವರ ಅಸ್ತಿಪಾಸ್ತಿ, ಜನ, ಜಾನುವಾರು ಹಾಗೂ ಭೂಮಿ ಹೀಗೆ ಲಾಭದ ಹೊಳೆಯೆ ಕೊಳ್ಳೆಯ ರೂಪದಲ್ಲಿ ಹರಿದು ಬಂತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೭೫೭ರಲ್ಲಿ.


ಮುಂದೆ ಧಾಳಿ ಸಿರಿಯಾದ ಗಡಿ ಪ್ರದೇಶವಾದ ಧಾತ್ ಆಟ್ಲಾಹ್ ಮೇಲೂ ಮುಂದುವರೆಯಿತು. ಆದರೆ ಅಲ್ಲಿ ಮಹಮದನ ನಿರಂತರ ವಿಜಯಿ ಪಡೆ ಮುಖಭಂಗವನ್ನು ಅನುಭವಿಸಬೇಕಾಯಿತು. ಪರಾಭವವನ್ನು ಹೊತ್ತು ಮದೀನಕ್ಕೆ ಹಿಂದಿರುಗುವುದು ಅನಿವಾರ್ಯವಾಯಿತು. ಧಾಳಿ ಇಟ್ಟ ಪಡೆಗೆ ಪಡೆಯೆ ಹತವಾಗಿ ಯೋಧರಲ್ಲಿ ಒಬ್ಬೆ ಒಬ್ಬ ಜೀವ ಉಳಿಸಿಕೊಂಡು ಪಾರಾಗಿ ಓಡಿ ಬಂದ. ಈ ಸೋಲು ವಿಜಯದ ಅಲೆಯಲ್ಲಿ ತೇಲುತ್ತಲಿದ್ದ ಮಹಮದನಿಗೆ ಸಖೇದಾಶ್ಚರ್ಯವನ್ನು ತಂದಿತು. ಇದೆ ಸಂದರ್ಭದಲ್ಲಿ ರೋಮನ್ ಸಾಮ್ರಾಜ್ಯದ ಭಾಗವಾಗಿದ್ದ ಬಸ್ರಾ ರಾಜ್ಯದ ರಾಜಕುಮಾರನಿಗೆ ದೌತ್ಯ ಕಳುಹಿಸಿದ್ದ ರಾಯಭಾರಿಯನ್ನು ಮೂಠಾ ಎಂಬಲ್ಲಿನ ದಾರಿ ಮಧ್ಯದಲ್ಲಿ ಸ್ಥಳಿಯ ಮುಖಂಡ ದೋಚಿ ಹತ್ಯೆ ಮಾಡಿದ ಸುದ್ದಿಯೂ ಬಂದು ಮಹಮದ್ ಕ್ರೋಧಗೊಂಡ. ಈ ಹತ್ಯೆಯ ಸೇಡನ್ನ ತೀರಿಸಿಕೊಳ್ಳಲು ಕ್ಷಿಪ್ರವಾಗಿ ಮೂರು ಸಾವಿರ ಯೋಧರ ಪಡೆಯೊಂದನ್ನ ಆತ ಸಿದ್ಧ ಪಡಿಸಿದ. ಅದಕ್ಕೆ ತನ್ನ ತನ್ನ ಸಾಕು ಮಗ ಝೈದ್'ನನ್ನೆ ಸೇನಾನಿಯಾಗಿ ನೇಮಿಸಿದ.


ಒಂದೊಮ್ಮೆ ಆತ ಯುದ್ಧಭೂಮಿಯಲ್ಲಿಯೆ ಸತ್ತರೆ ಆತನ ಜಾಗಕ್ಕೆ ಜಾಫರನನ್ನು ನೇಮಿಸಲಾಯಿತು. ಒಂದು ವೇಳೆ ಅವನೂ ಹೋರಾಡುವಾಗಲೆ ಸತ್ತರೆ ಅವನ ಜಾಗಕ್ಕೆ ಅಬ್ದುಲ್ಲಾ ಇಬ್ನ್ ರೆವಾಹನನ್ನು ನೇಮಿಸಲಾಯಿತು. ಹೀಗೆ ನೇಮಕದ ಮೇಲೆ ನೇಮಕಗಳಾದ ಶಸ್ತ್ರಸಜ್ಜಿತ ಮುಸಲ್ಮಾನರ ಅಪಾರ ಸೈನ್ಯ ಸಿರಿಯಾದ ಗಡಿಯತ್ತ ತಿರುಗಿತು. ಯೋಧರ ಆತ್ಮಸ್ತೈರ್ಯವನ್ನು ಹೆಚ್ಚಿಸುವ ಸಲುವಾಗಿ ಆರಂಭದಲ್ಲಿ ಸೈನ್ಯದ ಚುಕ್ಕಾಣಿಯನ್ನ ತಾನೆ ವಹಿಸಿಕೊಂಡ ಮಹಮದ್ ಮದೀನಾದಿಂದ ಕೆಲವು ಮೈಲಿಗಳ ದೂರದವರೆಗೆ ತಾನೆ ಅವರನ್ನೆಲ್ಲಾ ಮುನ್ನಡೆಸಿ ಶುಭ ಹಾರೈಸಿ ದಾರಿ ಮಧ್ಯದಿಂದಲೆ ಮರಳಿ ಸುರಕ್ಷಿತವಾಗಿ ಮನೆ ಸೇರಿಕೊಂಡ!



ಇತ್ತ ಶುರಾಬಿಲ್ ಈ ಪ್ರತಿಕಾರಕ್ಕಾಗಿ ಮುಸಲ್ಮಾನರ ಸೈನ್ಯ ತಮ್ಮತ್ತ ತಿರುಗಿರುವ ಸುದ್ದಿಯನ್ನು ತಿಳಿದು ಧೃತಿಗೆಡಲಿಲ್ಲ. ತಮ್ಮ ಬುಡಕಟ್ಟಿನ ಎಲ್ಲಾ ಯೋಧರೂ ಭೀಕರ ಕಾಳಗಕ್ಕೆ ಅಣಿಯಾಗುವಂತೆ ಸೂಚನೆಯನ್ನಾತ ಕೊಟ್ಟ. ಅವರೂ ಸಹ ಮುಸಲ್ಮಾನ ಸೇನೆಗೆ ಸರಿಸಮವಾಗಿಯೆ ಜಮಾಯಿಸಿ ಬರುವ ಶತ್ರುಗಳಿಗಾಗಿ ಕಾದು ಕೂತರು. ಮುಸಲ್ಮಾನರ ಸೈನ್ಯ ಗಡಿಭಾಗವನ್ನ ಮುಟ್ಟುವ ಹಂತದಲ್ಲಿದ್ದಾಗ ಸೇನಾನಿ ಝೈದ್ ಈ ವಿಷಯವನ್ನ ಅರಿತು ಒಳಗೊಳಗೆ ಅಂಜಿ ಗಾಬರಿಗೊಳಗಾದ. ಗೆಲುವಿನ ಸಾಧ್ಯತೆಯ ಬಗ್ಗೆ ಅವನ ಮನದಲ್ಲಿ ಶಂಕೆ ಮೂಡತೊಡಗಿತು.



ಶೂರಾಬಿಲ್'ನ ನೆಲೆ ವಾಸ್ತವದಲ್ಲಿ ರೋಮನ್ ಸಾಮ್ರಾಜ್ಯದ ಒಂದು ಭಾಗವೆ ಆಗಿತ್ತು. ಅವರ ಯುದ್ಧ ಸನ್ನದ ಸ್ಥಿತಿಯನ್ನ ಕಣ್ಣಾರೆ ಕಂಡ ಝೈದ್ ಕೆಂಗೆಟ್ಟ. ಅವರಿಗೇನೋ ಅದು ಮನೆಯ ಅಂಗಳವಾಗಿತ್ತು, ಆದರೆ ಇವರು ಬಹುದೂರ ಮರಳುಗಾಡಿನ ಹಾದಿ ಸವೆಸಿ ಸುಸ್ತಾಗಿ ಹೋಗಿದ್ದರು. ಆತ ತನ್ನ ಆಪ್ತೇಷ್ಟರ ಜೊತೆ ಈ ಬಗ್ಗೆ ಸಮಾಲೋಚನೆ ನಡೆಸಿ, ಮಹಮದನಿಗೆ ಈ ಬಗ್ಗೆ ಹಾಗೂ ಸದ್ಯದ ಪರಿಸ್ಥಿಯ ಬಗ್ಗೆ ಒಂದು ಸಂದೇಶ ಕಳುಹಿಸಿ ಅವನ ಸಲಹೆ ಪಡೆದು ಮುಂದುವರೆದರೆ ಒಳ್ಳೆಯದಲ್ಲವೆ? ಎನ್ನುವ ಪ್ರಸ್ತಾಪವನ್ನ ಆತ ಮುಂದಿಟ್ಟ. ಆತನ ಅಂಜುಬುರುಕತನವನ್ನ ಅಬ್ದುಲ್ಲಾ ಇಬ್ನ್ ರವಾಹ್ ತೀವೃವಾಗಿ ಖಂಡಿಸಿ, ಬಂದಿರುವುದೆ ಅವನ ಆಜ್ಞೆಯ ಮೇಲೆ ಎಂದಾಗಿರುವಾಗ ಈ ಕೊನೆ ಕ್ಷಣದ ಕೊಸರಾಟವಾದರೂ ಏಕೆ? ಹೋರಾಟದ ಕಣಕ್ಕೆ ಧುಮುಕುವುದೆ ಸೂಕ್ತ ಎಂದಾತ ಸಮರೋತ್ಸಾಹವನ್ನ ಪ್ರಕಟಿಸಿದ. ಅದಕ್ಕೆ ಎಲ್ಲರ ಸಹಸಮ್ಮತಿ ದೊರೆತ ಕಾರಣ ಝೈದ್'ಗೆ ಹೋರಾಡದೆ ವಿಧಿಯೆ ಉಳಿಯಲಿಲ್ಲ.



ಮೃತ ಸಮುದ್ರ ಅಥವಾ ಡೆಡ್ ಸೀ ತಟದಲ್ಲಿ ಇಂದಿರುವ ಇಸ್ರೇಲ್ ಹಾಗೂ ಜೋರ್ಡಾನ್ ಗಡಿ ಭಾಗದಲ್ಲಿ ಎರಡೂ ಸೈನ್ಯಗಳು ಮುಖಾಮುಖಿ ಸಂಧಿಸಿದವು. ರೋಮನ್ ಪಡೆಗಳ ಸಹಕಾರದಿಂದ ಶುರಾಬಿಲ ಮುಸಲ್ಮಾನ ಪಡೆಯನ್ನ ಹಿಮ್ಮೆಟ್ಟಿಸುತ್ತ ಬಂದ. ಸೋಲಿನ ರುಚಿ ಕಾಣ ತೊಡಗಿದ ಪಡೆ ಮೂಠಾದ ಬಳಿ ಲಂಗರು ಹಾಕಿತು. ಅಲ್ಲಿಗೂ ಅಟ್ಟಿಸಿಕೊಂಡು ಬಂದು ಕಂಡವರನ್ನ ಶುರಾಬಿಲ್ ಪಡೆ ಕೊಚ್ಚುತ್ತಾ ಬಂತು. ಝೈದ್ ಶುರಾಬಿಲ್ ಕತ್ತಿಗೆ ಸಿಕ್ಕಿ ಹತನಾದ. ಅವನ ಸ್ಥಾನಕ್ಕೆ ಏರಿದ ಜಾಫರ್ ಸಹ ಹೋರಾಟದ ಹಾದಿಯಲ್ಲಿ ಸತ್ತು ಹೋದ. ಅವನ ನಂತರದ ನಾಯಕ ಅಬ್ದುಲ್ಲಾ ಇಬ್ನ್ ರವಾಹ್ ಪಡೆಯ ನೇತೃತ್ವ ವಹಿಸಿಕೊಂಡು ಶತ್ರು ಪಡೆಗಳ ಮೇಲೆ ಮುಗಿ ಬಿದ್ದನಾದರೂ ಅವನ ಆಟವೂ ಹೆಚ್ಚು ಹೊತ್ತು ಸಾಗದೆ ಆತನೂ ಸತ್ತು ನೆಲಕ್ಕೆ ಒರಗಿದ. ಮಹಮದನ ಮುಸಲ್ಮಾನ ಸೈನ್ಯದ ಪಾಳ್ಯವನ್ನು ಶುರಾಬಿಲ್ ಪಡೆ ನುಚ್ಚುನೂರು ಮಾಡಿ ಬಿಸಾಕಿತು. ಈ ಸೋಲಿನ ಸಾಧ್ಯತೆಯನ್ನ ಊಹಿಸಿಯೆ ಮಹಮದ್ ಉಪಾಯವಾಗಿ ಬಲಿ ಪ್ರಾಣಿಗಳನ್ನಾಗಿ ಅವರನ್ನೆಲ್ಲಾ ಹೋರಾಡಲು ಕಳುಹಿಸಿ, ತಾನು ಮಾತ್ರ ಸುರಕ್ಷಿತವಾಗಿ ಮದೀನದಲ್ಲಿಯೆ ಉಳಿದಿದ್ದ ಎನ್ನುತ್ತಾರೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತಮ್ಮ 'ದ ಲೈಫ್ ಆಫ್ ಮಹಮದ್' ಕೃತಿಯ ಪುಟ ಸಂಖ್ಯೆ ಮುನ್ನೂರಾ ತೊಂಬತ್ತಾರರಲ್ಲಿ.


ಅಳಿದುಳಿದ ಬೆರಳೆಣಿಕೆಯಷ್ಟು ಮುಸಲ್ಮಾನ ಯೋಧರೊಂದಿಗೆ ಬದುಕಿ ಉಳಿದಿದ್ದ ಅನಂತರದ ಹಂತದ ನಾಯಕ ಖಲೀದ್ ತಲೆ ತಪ್ಪಿಸಿಕೊಂಡು ಮದೀನಕ್ಕೆ ಓಡಿ ಬಂದು ಮುಟ್ಟಿದ. ಸೋತು ಸುಣ್ನವಾಗಿ ಮರಳಿಬಂದ ತನ್ನ ಸೈನ್ಯವನ್ನು ಮಹಮದ್ ಸಂತೈಕೆಯ ಧ್ವನಿಯಲ್ಲಿ ಉತ್ತೇಜಿಸುತ್ತಲೆ ನಗರಕ್ಕೆ ಬರ ಮಾಡಿಕೊಂಡ. ತನ್ನ ಕುಲ ಬಾಂಧವರಾದ ಜಾಫರ್, ಝೈದ್ ಹಾಗೂ ಅಬ್ದುಲ್ಲಾನ ದಾರುಣ ಸಾವಿನ ಸುದ್ದಿ ಮಾನಸಿಕವಾಗಿ ಆತನನ್ನು ಘಾಸಿಗೊಳಿತು. ತನ್ನ ಗಂಡನಿಗಾಗಿ ಕಾದು ಕುಳಿತಿದ್ದ ಆಸ್ಮಾಳಿಗೆ ಸುದ್ದಿ ತಿಳಿಸಲು ಸ್ವತಃ ತೆರಳಿದ ಮಹಮದ್ ಅಲ್ಲಿ ಗಂಟಲುಬ್ಬಿ ಬಂದು ಮಾತನಾಡಲಾಗದೆ ಅವಳ ಎಳೆ ಮಕ್ಕಳನ್ನ ತಬ್ಬಿಕೊಂಡು ರೋಧಿಸಿದ. ಹೀಗೆ ಸಾವಿನ ಸಂಗತಿ ಅಲ್ಲಿ ಬಿತ್ತರಗೊಂಡಿತು. ಅಲ್ಲಿಂದ ಮಹಮದನ ಸವಾರಿ ಝೈದ್ ಬಿಡಾರದತ್ತ ಹೊರಟಿತು. ಅದಾಗಲೆ ಸುದ್ದಿ ಅರಿತಿದ್ದ ಝೈದ್'ನ ಪುಟ್ತ ಮಗಳು ಮಹಮದನನ್ನು ಕಾಣುತ್ತಲೆ ಆತನ ತೆಕ್ಕೆಗೆ ಬಿದ್ದು ಬಿಕ್ಕಿಬಿಕ್ಕಿ ಅಳ ತೊಡಗಿದಳು. ಅವಳೊಂದಿಗೆ ಸೇರಿ ತಾನೂ ತನ್ನ ಆತ್ಮೀಯ ಮಿತ್ರನ ಸಾವಿನ ಶೋಕದಲ್ಲಿ ಮಹಮದ್ ಕಣ್ಣೀರಿನಲ್ಲಿ ಮಿಂದೆದ್ದ.



ಜಾಫರನ ವಿಧವೆ ಆಸ್ಮಾ ಮಹಮದನ ಮಾವ ಅಬು ಬಕರ್'ನನ್ನು ಮದುವೆಯಾದಳು. ಅವನೂ ಸತ್ತ ನಂತರ ಮಹಮದನ ಅಳಿಯ ಅಲಿಯ ಮನೆಯನ್ನು ಮಡದಿಯಾಗಿ ತುಂಬಿದಳು. ಅವಳಿಗೆ ಅವರಿಬ್ಬರಿಂದಲೂ ಒಟ್ಟು ಐದು ಮಕ್ಕಳಾದವು. ಮೂಠಾ ಯುದ್ಧದ ಘೋರ ಪರಾಭವ ಏರುತ್ತಿದ್ದ ಮಹಮದನ ಪ್ರತಿಷ್ಠೆಗೆ ತೀವೃ ಹಿನ್ನೆಡೆಯನ್ನು ಉಂಟು ಮಾಡಿತ್ತು. ಈ ಪರಿಸ್ಥಿತಿಯ ಲಾಭ ಪಡೆಯಲು ಹಲವರು ಹವಣೆಸಿದರು. ಬೆದಾವಿನರು ಅದರಲ್ಲಿ ಪ್ರಮುಖರಾಗಿದ್ದರು. ಕಬ್ಬಿಣ ಕಾದಾಗಲೆ ಬಡಿಯಬೇಕು ಎನ್ನುವುದನ್ನ ಅರಿತಿದ್ದ ಅವರು ಏಕಾಏಕಿ ಮದೀನಾದ ಮೇಲೆ ಧಾಳಿ ಎಸಗಲು ಸಿದ್ಧರಾಗುತ್ತಿರುವ ಸಂಗತಿ ಗೂಢಚರರ ಮೂಲಕ ಮಹಮದನಿಗೆ ಬಂದು ಮುಟ್ತಿತು. ಇದರಿಂದ ರೊಚ್ಚಿಗೆದ್ದ ಆತ ಅದಕ್ಕೂ ಮೊದಲೆ ಅವರನ್ನ ಹಣೆದು ಬಿಸಾಡಲು ಪಡೆಯೊಂದನ್ನ ಸಿದ್ಧ ಪಡಿಸಿ ಅಮ್ರ್ ಎಂಬಾತನ ನೇತೃತ್ವದಲ್ಲಿ ಅದನ್ನ ಬೆದಾವಿನರ ವಿರುದ್ಧ ಛೂ ಬಿಟ್ಟ. ಆತ ಸಿರಿಯಾದ ಗಡಿಯವರೆಗೆ ಪ್ರಯಾಣಿಸಿದನಾದರೂ ಅದು ತನ್ನ ಕೈಲಿರುವ ಪಡೆಯಿಂದ ಮಾತ್ರ ಸಾಧ್ಯವಾಗುವ ಸಂಗತಿ ಅಲ್ಲ ಅನ್ನುವ ವಿವೇಕ ಅವನಿಗೆ ಶೀಘ್ರದಲ್ಲಿಯೆ ಮೂಡಿತು. ಇನ್ನಷ್ಟು ಯೋಧರನ್ನ ಕಳಿಸಿರೆಂದು ಆತ ಮೊರೆ ಇಟ್ತ. ಮಹಮದ್ ಕೂಡಲೆ ಬಂದ ಸಹಾಯದ ಸಂದೇಶಸ ಬೆನ್ನಿಗೆ ಅಬು ಒಬೈದ್ ನೇತೃತ್ವದಲ್ಲಿ ಒಂದು ಪಡೆಯನ್ನ ರವಾನಿಸಿದ.



ಸಮರಾಂಗಣದಲ್ಲಿ ಯಾರು ಸೇನೆಯನ್ನ ಮುನ್ನಡೆಸಬೇಕು? ಅನ್ನುವ ವಿಷಯದಲ್ಲಿ ಅಮ್ರ್ ಹಾಗೂ ಅಬು ಒಬೈದ್ ನಡುವೆ ತಿಕ್ಕಾಟ ನಡೆಯಿತಾದರೂ,ಕಡೆಗೆ ಒಬೈದ್ ನಾಯಕನಾಗುವಲ್ಲಿ ಸಫಲನಾದ. ಆತನ ಮುಖಂಡತ್ವದಲ್ಲಿ ಬೆದಾವಿನರ ಸೊಕ್ಕನ್ನ ಯಶಸ್ವಿಯಾಗಿ ಅಡಗಿಸಲಾಯಿತು. ಸಿರಿಯಾದ ಈ ಗಡಿಭಾಗ ಈಗ ಅಧಿಕೃತವಾಗಿ ಮಹಮದನ ಅಧಿಪತ್ಯಕ್ಕೆ ಒಳ ಪಟ್ಟಿತು. ಮಹಮದನ ಶ್ರಮ, ಆತನ ಹಿಂಬಾಲಕರ ಬಲಿದಾನ, ಅವರೆಲ್ಲರೂ ಇಸ್ಲಾಮಿನ ಮೇಲಿಟ್ಟಿದ್ದ ನಿಷ್ಠೆ ಹಾಗೂ ಅವರೆಲ್ಲರ ಒಟ್ಟಾರೆ ಸಾಹಸಗಳೆಲ್ಲವೂ ಸೇರಿ ಅರೇಬಿಯಾ ಪ್ರಸ್ಥಭೂಮಿಯ ಉದ್ದಗಲಕ್ಕೂ ಈಗ ಇಸ್ಲಾಮ್ ಸಾಮ್ರಾಜ್ಯ ಹರಡಿತ್ತು. ಸಿರಿಯಾ ಅದರ ಗಡಿ ಭಾಗವಾಗಿ ಮಾನ್ಯವಾಯ್ತು.


ಅಲ್ ಮುಕ್'ದಾದ್ ಬಿನ್ ಅಮ್ರ್.
ಅಬ್ದುಲ್ಲಾ ಬಿನ್ ಮಸೂದ್.
ಹಂಝಾ ಬಿನ್ ಅಬ್ದುಲ್ ಮುಖ್ತಾಲಿಬ್.
ಅಬುದಾರ್ ಅಲ್ ಘಿಫಾರಿ.
ಅಮ್ಮಾರ್ ಬಿನ್ ಯಾಸಿರ್.
ಅಲಿ ಬಿನ್ ಅಬು ತಾಲಿಬ್.
ಹುದೈಫ್ ಬಿನ್ ಅಲ್ ಎಮಾನ್.
ಜಾಫರ್ ಬಿನ್ ಅಬು ತಾಲಿಬ್.
ಬಿಲಾಲ್ ಬಿನ್ ರವಾಹ್ ಹಾಗೂ
ಉಮರ್ ಬಿನ್ ಅಲ್ ಖತ್ತಾಬ್ ಈ ಕೀರ್ತಿ ಪತಾಕೆಯನ್ನ ಅಲ್ಲೆಲ್ಲಾ ಹಬ್ಬಿಸಿದ ಖ್ಯಾತಿಗೆ ಅಸಲು ಹಕ್ಕುದಾದರಾಗಿರುತ್ತಾರೆ ಅನ್ನುತ್ತಾರೆ ಇತಿಹಾಸಕಾರ ಅಬ್ ಶಾನವಲ್ ತಮ್ಮ ಕೃತಿ 'ದ ಮಿನಿಸ್ಟರ್ಸ್ ಅರೌಂಡ್ ದ ಪ್ರಾಪೆಟ್' ಕೃತಿಯ ಪುಟ ಸಂಖ್ಯೆ ಐದರಿಂದ ಏಳರ ನಡುವೆ.


( ಇನ್ನೂ ಇದೆ.)