Friday, July 22, 2011

ಕೃತಜ್ಞತೆ....

ಈ ದೇಶಕ್ಕೆ ರಾಜಕೀಯ ಸ್ವಾತಂತ್ರದ ಸುಳಿಗಾಳಿ ಬೀಸಿದ್ದು ಕೇವಲ ಕೆಲವರಿಂದಷ್ಟೇ ಎಂಬ ಭ್ರಮೆ ಹಲವು ಭ್ರಮಾಧೀನರದ್ದು.ಹೀಗಿರುವಾಗಲೆ ಮೊ ಕ ಗಾಂಧಿ,ಜ ಲಾ ನೆಹರುಗಳನ್ನ ನಿರಂತರ ಜಪಿಸುತ್ತ ಅವರ ಉತ್ಸವಮೂರ್ತಿ ಹೊತ್ತು ಹೊತ್ತಲ್ಲದ ಹೊತ್ತಲ್ಲಿ ಕರಗ ಕುಣಿಯುವ ಜನ ( ಈ ಜಪದ ಹಿಂದೆ ಇಹದ ಸುಖ ಹಾಗು ಅಧಿಕಾರಗಳ ಅಪೇಕ್ಷೆ ಇರುತ್ತದೆ ಅನ್ನೋದು ಬೇರೆ ಮಾತು!) ಬಾಲಗಂಗಾಧರ ತಿಲಕ್(೨೩ ಜುಲೈ ೧೮೫೬-೧ ಆಗೋಸ್ಟ್ ೧೯೨೦),ಚಂದ್ರಶೇಖರ ಆಜಾದ್ ರನ್ನ (೨೩ ಜುಲೈ ೧೯೦೬-೨೭ ಫೆಬ್ರವರಿ ೧೯೩೧) ಜಾಣತನದಿಂದ ಮರೆಯುತ್ತಾರೆ.ಅಷ್ಟಲ್ಲದೇ ಇವರೆಲ್ಲರ ನಿತ್ಯ ಸ್ಮರಣೆಯಿಂದ ಯಾವುದೆ ರಾಜಕೀಯ ಲಾಭವೂ ಇಲ್ಲವಲ್ಲ?!
ಇಂದು ಭಾವಕ್ಯತೆಯ ನಿಜವಾದ ಪಾಠ ಕಳಿಸಿದ ತಿಲಕರ,ಸ್ವಾತಂತ್ರಕ್ಕಾಗಿ ಹಂಬಲಿಸಿ ಪ್ರಾಣ ತೆತ್ತ ಆಜಾದರ ಜನ್ಮದಿನ...ಕನಿಷ್ಠ ಇವತ್ತಾದರೂ ಅವರನ್ನ ತಂಪುಹೊತ್ತಿನಲ್ಲಿ ನೆನೆಯಬೇಕಲ್ಲ? ಅಷ್ಟೂ ಕೃತಜ್ಞತೆ ನಮ್ಮೊಳಗಿರದಿದ್ದರೆ ಹೇಗೆ?

No comments:

Post a Comment