Friday, April 22, 2011
'ದಿಗ್ವಿಜಯಾಸ್ತ್ರ' ಬಿಡುತ್ತಿರುವ ಕಾಣದ 'ಕೈ'
ಜನಲೋಕಪಾಲಕ್ಕೆ ಲೋಕಾಪವಾದ ತರುವ ಯತ್ನದಲ್ಲಿ ಆಳುವ ಮಂದಿ ನಿರತ,ಒಂದೊಮ್ಮೆ ಶಾಸನ ಜಾರಿಯಾದರೆ ಇವಕ್ಕೆಲ್ಲಿ ಉಳಿಗಾಲ? ಆದರೆ ಅದನ್ನ ಆಗದಂತಾಗಿಸಲು ಬೆನ್ನಿನ ಹಿಂದಿಂದ 'ದಿಗ್ವಿಜಯಾಸ್ತ್ರ' ಬಿಡುತ್ತಿರುವ ಕಾಣದ 'ಕೈ'ಯೊಂದು ಸಮಾನಾಸಕ್ತ ಖದೀಮರ ಜೊತೆ ಸೇರಿ ಕುರಿಮಂದೆಯಂತಹ ಜನತೆಯ ಕಿವಿ ಮೇಲೆ 'ಕಮಲದ' ಹೂ ಮಡಗುವ ಯತ್ನದಲ್ಲಿದೆ...ಹೊಲಸು ರಾಜಕೀಯ.ಹೇಸಿಗೆಯೆಂದರೆ ನಾಯೊಂದು ಬೊಗಳಿದರೂ ಅದನ್ನ ಮಹಾನ್ 'ದಿಗ್ವಿಜಯ'ವಾಣಿಯಂತೆ ಬಿಂಬಿಸುವ,ಕಂಡ ಕಂಡ ಅಂಡೆಪಿರ್ಕಿಗಳ ಹತಾಶೆಯ ಊಳಿಗೆಲ್ಲ ಮೈಕು ಹಿಡಿದು ಸ್ವಯಂ ರೋಮಾಂಚಿತರಾಗುತ್ತಿರುವ ನಮ್ಮ ಮಾಧ್ಯಮಗಳು ಸಂತೆಗೆ ಮುಂಚೆಯೆ ಮೂರು ಕಾಸಿಗೆ ಬಿಕರಿ ಆಗಿರುವುದು...
ರಾಗ ಹಳೆಯದೆ...
ಚಂದ್ರ ಬರದ ಇರುಳಿನಲ್ಲೂ ನನ್ನ ಎದೆಯಂಗಳ ಮಾತ್ರ....
ನಿರಂತರ ಬೆಳಕಲ್ಲಿ ಮಿಂದಿತು ನಿನ್ನ ನಗೆಯ ದೀಪದ ಕೃಪೆಯಿಂದ,
ಇರುಳು ಕದ್ದ ಹಗಲಿನ ನೆಮ್ಮದಿಯೆ...
ನಿದಿರೆಯೆಡೆಯಲ್ಲಿ ಬಂದು ಕಾಡುವ ಕನಸು/
ನಿತ್ಯವೂ ನೀನೆ ಅದರ ಹುಟ್ಟಿಗೆ ಕಾರಣವಾಗಿ...
ಇನ್ನಷ್ಟು ಸಂತಸದ ಮಳೆಯ ನನ್ನೆದೆಯಲ್ಲಿ ಸುರಿಸು,
ಬಾ ಇನ್ನಷ್ಟು ಮನಸ ಆರ್ದ್ರವಾಗಿಸು...
ನೀನಿತ್ತಿದ್ದ ಖುಷಿಯ ಕ್ಷಣಗಳನ್ನ ಮೆಲಕು ಹಾಕುತ್ತಲೆ ಅರಿವಿಗೆ ಬಾರದಂತೆ,
ನನ್ನ ಬಾಳು ಸಂತಸದ ಜಾತ್ರೆಯಲ್ಲಿ ಕಳೆದೆಹೋಗಿದೆ//
ಮೆಲ್ಲ ಮೆಲ್ಲ ನೀನಿಟ್ಟ ಹೆಜ್ಜೆಯ ಗುರುತುಗಳಷ್ಟೆ ಈಗ ಉಳಿದಿರುವ ನನ್ನ ಹೃದಯದಲ್ಲಿ....
ನಿನ್ನ ನೆನಪಿನ ಪರಿಮಳವೂ ಉಳಿದೆ ಹೋಗಿದೆ,
ಹೊಳೆವ ಬಾನಂಚಿನ ಚಂದಿರನನ್ನೂ ಮಂಕಾಗಿಸುವ,
ನಿನ್ನೊಂದು ಮುಗುಳ್ನಗೆಯನ್ನ ಮತ್ತೆ ಕಾಣಲು ಮನಸು ಕಾತರಿಸುತಿದೆ/
ಬಿಡುವಿರದ ಇರುಳ ಕನಸುಗಳ ಜಾತ್ರೆಯಲ್ಲಿ ನಿತ್ಯ ನೀನೆ ಉತ್ಸವ ಮೂರ್ತಿ...
ಸರಿ ಹೊತ್ತಲ್ಲಿ ಒಡೆದ ನಿದ್ದೆಯಲ್ಲಿ ಅಗಲಿಕೆಯ ನೋವಿನ ಕಹಿ ಮಡುಗಟ್ಟಿತ್ತು,
ಕಾಲಾತೀತನಾಗಿ-ದೇಶಾತೀತನೂ ಆಗಿ...
ಅಲೆಯುತ್ತ ದಿಕ್ಕು ತಪ್ಪಿದ ನನ್ನ ಉಡಾಳ ಬಾಳಿಗೆ ನೀನು ತಡೆಬೇಲಿ ಹಾಕಿದ್ದರೆ ಖುಷಿ ಖಂಡಿತ ಹುಟ್ಟುತ್ತಿತ್ತು//
ಹಗಲಿಗೆ ಬೆಳಕಿನ ಸ್ನಾನ ಮಾಡಿಸುವ ಸೂರ್ಯ....
ಸಂಜೆ ಮರಳಿ ಹೋಗುವ ಮುನ್ನ ಭೂಮಿಯ ತುಟಿ ಚುಂಬಿಸಿ ಅವಳ ಕೆನ್ನೆಯಲ್ಲಿ ಕೆಂಪು ಹೊಮ್ಮಿಸಿದ,
ಕತ್ತಲ ಕಾಡಿಗೆ ಹಚ್ಚಿಕೊಳ್ಳುವ ಅವಳ ಕಂಗಳಲ್ಲಿ ನಾಚಿಕೆ ತುಳುಕಿಸಿದ/
ಮುತ್ತು ಸುರಿವ ಮೋಡಗಳ ಮೋಹಕ ಪ್ರೀತಿಗೆ....
ಧರಿತ್ರಿ ನಾಚಿ ನೀರಾದಳು,
ಬೆಟ್ಟ ಸಾಲುಗಳ ಬೆತ್ತಲಿನ ಉಬ್ಬು ತಗ್ಗುಗಳಲ್ಲಿ ಉಕ್ಕಿದ ಸಂತಸದ ಬುಗ್ಗೆ ....
ಸಂಕೋಚದ ಎಲ್ಲೆ ಮೀರಿ ನೆಲದೆದೆಯಲ್ಲಿ ನದಿಯಾಗಿ ಹರಿದಾಗ ಇಳೆ ಸೋತು ಶರಣಾದಳು//
ನಿರಂತರ ಬೆಳಕಲ್ಲಿ ಮಿಂದಿತು ನಿನ್ನ ನಗೆಯ ದೀಪದ ಕೃಪೆಯಿಂದ,
ಇರುಳು ಕದ್ದ ಹಗಲಿನ ನೆಮ್ಮದಿಯೆ...
ನಿದಿರೆಯೆಡೆಯಲ್ಲಿ ಬಂದು ಕಾಡುವ ಕನಸು/
ನಿತ್ಯವೂ ನೀನೆ ಅದರ ಹುಟ್ಟಿಗೆ ಕಾರಣವಾಗಿ...
ಇನ್ನಷ್ಟು ಸಂತಸದ ಮಳೆಯ ನನ್ನೆದೆಯಲ್ಲಿ ಸುರಿಸು,
ಬಾ ಇನ್ನಷ್ಟು ಮನಸ ಆರ್ದ್ರವಾಗಿಸು...
ನೀನಿತ್ತಿದ್ದ ಖುಷಿಯ ಕ್ಷಣಗಳನ್ನ ಮೆಲಕು ಹಾಕುತ್ತಲೆ ಅರಿವಿಗೆ ಬಾರದಂತೆ,
ನನ್ನ ಬಾಳು ಸಂತಸದ ಜಾತ್ರೆಯಲ್ಲಿ ಕಳೆದೆಹೋಗಿದೆ//
ಮೆಲ್ಲ ಮೆಲ್ಲ ನೀನಿಟ್ಟ ಹೆಜ್ಜೆಯ ಗುರುತುಗಳಷ್ಟೆ ಈಗ ಉಳಿದಿರುವ ನನ್ನ ಹೃದಯದಲ್ಲಿ....
ನಿನ್ನ ನೆನಪಿನ ಪರಿಮಳವೂ ಉಳಿದೆ ಹೋಗಿದೆ,
ಹೊಳೆವ ಬಾನಂಚಿನ ಚಂದಿರನನ್ನೂ ಮಂಕಾಗಿಸುವ,
ನಿನ್ನೊಂದು ಮುಗುಳ್ನಗೆಯನ್ನ ಮತ್ತೆ ಕಾಣಲು ಮನಸು ಕಾತರಿಸುತಿದೆ/
ಬಿಡುವಿರದ ಇರುಳ ಕನಸುಗಳ ಜಾತ್ರೆಯಲ್ಲಿ ನಿತ್ಯ ನೀನೆ ಉತ್ಸವ ಮೂರ್ತಿ...
ಸರಿ ಹೊತ್ತಲ್ಲಿ ಒಡೆದ ನಿದ್ದೆಯಲ್ಲಿ ಅಗಲಿಕೆಯ ನೋವಿನ ಕಹಿ ಮಡುಗಟ್ಟಿತ್ತು,
ಕಾಲಾತೀತನಾಗಿ-ದೇಶಾತೀತನೂ ಆಗಿ...
ಅಲೆಯುತ್ತ ದಿಕ್ಕು ತಪ್ಪಿದ ನನ್ನ ಉಡಾಳ ಬಾಳಿಗೆ ನೀನು ತಡೆಬೇಲಿ ಹಾಕಿದ್ದರೆ ಖುಷಿ ಖಂಡಿತ ಹುಟ್ಟುತ್ತಿತ್ತು//
ಹಗಲಿಗೆ ಬೆಳಕಿನ ಸ್ನಾನ ಮಾಡಿಸುವ ಸೂರ್ಯ....
ಸಂಜೆ ಮರಳಿ ಹೋಗುವ ಮುನ್ನ ಭೂಮಿಯ ತುಟಿ ಚುಂಬಿಸಿ ಅವಳ ಕೆನ್ನೆಯಲ್ಲಿ ಕೆಂಪು ಹೊಮ್ಮಿಸಿದ,
ಕತ್ತಲ ಕಾಡಿಗೆ ಹಚ್ಚಿಕೊಳ್ಳುವ ಅವಳ ಕಂಗಳಲ್ಲಿ ನಾಚಿಕೆ ತುಳುಕಿಸಿದ/
ಮುತ್ತು ಸುರಿವ ಮೋಡಗಳ ಮೋಹಕ ಪ್ರೀತಿಗೆ....
ಧರಿತ್ರಿ ನಾಚಿ ನೀರಾದಳು,
ಬೆಟ್ಟ ಸಾಲುಗಳ ಬೆತ್ತಲಿನ ಉಬ್ಬು ತಗ್ಗುಗಳಲ್ಲಿ ಉಕ್ಕಿದ ಸಂತಸದ ಬುಗ್ಗೆ ....
ಸಂಕೋಚದ ಎಲ್ಲೆ ಮೀರಿ ನೆಲದೆದೆಯಲ್ಲಿ ನದಿಯಾಗಿ ಹರಿದಾಗ ಇಳೆ ಸೋತು ಶರಣಾದಳು//
ಮಳೆ ಹಾಡು...
ಮಳೆಯಿಂದ ಮನವೂ ಪ್ರಫುಲ್ಲ,
ಆದರೆ ಕೊರತೆ ಇಷ್ಟೆ...
ಉಕ್ಕುತ್ತಿರುವ ಈ ಸಂತಸದ ಹೊನಲಲ್ಲಿ ಮೀಯಲು ಜೊತೆಗೆ ನೀನಿಲ್ಲಿಲ್ಲ/
ಖಾಲಿ ಪುಟಗಳ ತುಂಬಾ ನೀನೆರಚಿದ್ದ ಒಲವಿನ ಹಲವು ರಂಗು,
ಮನದ ಪುಸ್ತಕದ ತುಂಬಾ ಚಿತ್ತಾರಗಳ ಮೂಡಿಸಿವೆ...
ಗಾಳಿ ಗೀಚಿದ ಸಾಲಿಗೆ,ಮೋಡ ಹೊಸೆದ ರಾಗಕೆ.....
ಇಳೆಯ ಇನಿದನಿ ಬೆರೆತು ,ಮಳೆಯ ಹಾಡಾಯ್ತು//
ಹನಿಹನಿಯಲ್ಲೂ ಒಲವ ಸಿಂಚನ,ಭೂಮಿ ಮೇಲೆ ಬಾನಿಗೆಷ್ಟು ಪ್ರೀತಿ....
ಎಷ್ಟು ಸೊಗಸಾಗಿರುತ್ತಿತ್ತು ಬಾಳು,
ನಾನೂ ನನ್ನೆದೆಯ ಮೋಹವನ್ನೆಲ್ಲ ನಿನ್ನೆದೆಗೆ ದಾಟಿಸುವಂತಿದ್ದರೆ....
ಅದೇ ರೀತಿ/
ಮೋಡ ಕವಿದ ಆಗಸದ ಆಚೆ ಕಡೆ ಅಡಗಿ ಕಣ್ಣಾಮುಚ್ಚಾಲೆಯಾಡುವ ಚಂದಿರನಿಗೂ,
ಭೂಮಿಯ ಒಲವನ್ನು ಗೆಲ್ಲುವ ಒಳಆಸೆಯಿದೆ...
ಗಾಳಿ ಸೋಕಿದ ಮೋಡಗಳು ಇಳೆಯ ಅಂದದ ಕಥೆ ಕೇಳಿ ರೋಮಾಂಚಿತವಾಗಿ,
ಅವಳೊಡನೆ ಸೇರಲು ಕಾತರದಿಂದ ಧರೆಗಿಳಿದು ಬಂದವು//
ತೆಂಕಣ ಸುಳಿಗಾಳಿಗೆ ಕಡಲು ಬರಸೆಳೆದು ಮುತ್ತನಿತ್ತಾಗ,
ನಮ್ಮೂರಲ್ಲಿ ಬಾನು ಬಿರಿದು ಭುವಿಗೆ ಮಳೆ ಮಲ್ಲಿಗೆ ಸುರಿಯುತ್ತಿತ್ತು....
ನಿಮ್ಮೂರಲ್ಲೂ ಹಾಗೇನ?,
ಮುಗಿಲು ಮುತ್ತಿಟ್ಟ ಭೂಮಿಯೆದೆಯಂಗಳದಿಂದ ಹೊರಹೊಮ್ಮಿದ ಪರಿಮಳ,
ನಿನ್ನ ಮೈಗಂಧದಂತೆ ಹಿತವಾಗಿತ್ತು/
ಮನಸನ್ನರಳಿಸಿದ ಮಳೆ ಹನಿಗಳಲ್ಲಿ ಅಡಗಿದ ತಂಪು,
ನನಗೆ ನಿನ್ನೊಲವನ್ನ ಗಾಢವಾಗಿ ನೆನಪಿಸಿ ರೋಮಾಂಚಿತನನ್ನಾಗಿಸಿತು..
ಮೋಡ ಗೀಚಿದ ಮಳೆ ಹಾಡಿದ ಹನಿಗಳ ಹಾಡಿನಲ್ಲಿ,
ನಿನ್ನ ಗುಂಗಲೆ ಸದಾ ಮಗ್ನ ನನ್ನ ಮನಸಿಗೆ......
ಕೇಳಿ ಬಂದದ್ದು - ನನ್ನವೆರಡು ಕಿವಿ ತುಂಬಿಸಿದ್ದು ಕೇವಲ ನಿನ್ನೆದೆಯ ಸುನಾದ//
ಆದರೆ ಕೊರತೆ ಇಷ್ಟೆ...
ಉಕ್ಕುತ್ತಿರುವ ಈ ಸಂತಸದ ಹೊನಲಲ್ಲಿ ಮೀಯಲು ಜೊತೆಗೆ ನೀನಿಲ್ಲಿಲ್ಲ/
ಖಾಲಿ ಪುಟಗಳ ತುಂಬಾ ನೀನೆರಚಿದ್ದ ಒಲವಿನ ಹಲವು ರಂಗು,
ಮನದ ಪುಸ್ತಕದ ತುಂಬಾ ಚಿತ್ತಾರಗಳ ಮೂಡಿಸಿವೆ...
ಗಾಳಿ ಗೀಚಿದ ಸಾಲಿಗೆ,ಮೋಡ ಹೊಸೆದ ರಾಗಕೆ.....
ಇಳೆಯ ಇನಿದನಿ ಬೆರೆತು ,ಮಳೆಯ ಹಾಡಾಯ್ತು//
ಹನಿಹನಿಯಲ್ಲೂ ಒಲವ ಸಿಂಚನ,ಭೂಮಿ ಮೇಲೆ ಬಾನಿಗೆಷ್ಟು ಪ್ರೀತಿ....
ಎಷ್ಟು ಸೊಗಸಾಗಿರುತ್ತಿತ್ತು ಬಾಳು,
ನಾನೂ ನನ್ನೆದೆಯ ಮೋಹವನ್ನೆಲ್ಲ ನಿನ್ನೆದೆಗೆ ದಾಟಿಸುವಂತಿದ್ದರೆ....
ಅದೇ ರೀತಿ/
ಮೋಡ ಕವಿದ ಆಗಸದ ಆಚೆ ಕಡೆ ಅಡಗಿ ಕಣ್ಣಾಮುಚ್ಚಾಲೆಯಾಡುವ ಚಂದಿರನಿಗೂ,
ಭೂಮಿಯ ಒಲವನ್ನು ಗೆಲ್ಲುವ ಒಳಆಸೆಯಿದೆ...
ಗಾಳಿ ಸೋಕಿದ ಮೋಡಗಳು ಇಳೆಯ ಅಂದದ ಕಥೆ ಕೇಳಿ ರೋಮಾಂಚಿತವಾಗಿ,
ಅವಳೊಡನೆ ಸೇರಲು ಕಾತರದಿಂದ ಧರೆಗಿಳಿದು ಬಂದವು//
ತೆಂಕಣ ಸುಳಿಗಾಳಿಗೆ ಕಡಲು ಬರಸೆಳೆದು ಮುತ್ತನಿತ್ತಾಗ,
ನಮ್ಮೂರಲ್ಲಿ ಬಾನು ಬಿರಿದು ಭುವಿಗೆ ಮಳೆ ಮಲ್ಲಿಗೆ ಸುರಿಯುತ್ತಿತ್ತು....
ನಿಮ್ಮೂರಲ್ಲೂ ಹಾಗೇನ?,
ಮುಗಿಲು ಮುತ್ತಿಟ್ಟ ಭೂಮಿಯೆದೆಯಂಗಳದಿಂದ ಹೊರಹೊಮ್ಮಿದ ಪರಿಮಳ,
ನಿನ್ನ ಮೈಗಂಧದಂತೆ ಹಿತವಾಗಿತ್ತು/
ಮನಸನ್ನರಳಿಸಿದ ಮಳೆ ಹನಿಗಳಲ್ಲಿ ಅಡಗಿದ ತಂಪು,
ನನಗೆ ನಿನ್ನೊಲವನ್ನ ಗಾಢವಾಗಿ ನೆನಪಿಸಿ ರೋಮಾಂಚಿತನನ್ನಾಗಿಸಿತು..
ಮೋಡ ಗೀಚಿದ ಮಳೆ ಹಾಡಿದ ಹನಿಗಳ ಹಾಡಿನಲ್ಲಿ,
ನಿನ್ನ ಗುಂಗಲೆ ಸದಾ ಮಗ್ನ ನನ್ನ ಮನಸಿಗೆ......
ಕೇಳಿ ಬಂದದ್ದು - ನನ್ನವೆರಡು ಕಿವಿ ತುಂಬಿಸಿದ್ದು ಕೇವಲ ನಿನ್ನೆದೆಯ ಸುನಾದ//
Tuesday, March 1, 2011
ಕುಡಿಯದೆಯೂ ನಾನು ಮತ್ತ...ನಿನ್ನ ಒಲವಲ್ಲಿ?!
ಬಾಳಿನ ಸಂತೆಯಲ್ಲಿ ಕಳೆದು ನೀ ಹೋದೆಯಾದರೂ...
ನಿನ್ನವೆಲ್ಲ ನೆನಪುಗಳನ್ನ ಇಲ್ಲಿಯೆ ಬಿಟ್ಟು ಹೋಗಿದ್ದೀಯ,
ಸಾಕಲ್ಲ ನನಗೆ ಬದುಕಿನ ವ್ಯಾಪಾರ ಮುಗಿಸಲು....
ಅಷ್ಟು ಬಂಡವಾಳ?/
ಸಂಭ್ರಮಕ್ಕೆ ಸಾಕ್ಷಿಯಾಗಿದ್ದ ನಿನ್ನೊಂದಿಗೆ ಕಳೆದ ಕ್ಷಣಗಳನ್ನೆಲ್ಲ...
ಬೆಚ್ಚಗೆ ನನ್ನ ಎದೆಪೆಟ್ಟಿಗೆಯೊಳಗೆ ಕೂಡಿಟ್ಟಿದ್ದೇನೆ,
ಒಂಟಿತನ ಮರಗಟ್ಟಿಸುವ ರಾತ್ರಿಗಳಲ್ಲಿ ಚೂರು ನೆನಪುಗಲೆದುರು ಕೂತು ಬೆಚ್ಚಗಾಗಲು...
ಕಣ್ತುಂಬಿ ಕಂಡಿದ್ದ ಕನಸುಗಳೆಲ್ಲ ಕಣ್ಣೊಳಗೆ ಕಾಡಿಗೆಯಂತಾಗಿ ಕರಗುತಿವೆ,
ಕಣ್ಣೀರ ಜೊತೆ ಸೇರಿ ಹರಿದು ಹೋಗಲು//
ಕನಸಿನ ಸಾವಿಗೂ ಕಣ್ಣೀರಿನ ಸುಂಕ....
ದಾಟಲಾಗದೆ ನೋವಿನ ನದಿಯ ಕಾಲುಸಂಕ,
ನಿಸ್ಸಾರವಾಗಿ ಕೂತರೂ ನಾನು....
ನನ್ನೆದೆಯಲ್ಲಿ ಇನ್ನೂ ನಿನ್ನ ಪ್ರೀತಿಯ ನೆರಳಿದೆ/
ನಾಳೆಯ ಸಾಲು ಸಾಲು ಸಂಕಟಕ್ಕೆ ನೆನ್ನೆಯ ಸಾವಿರ ಸಂಭ್ರಮಗಳು...
ಕಟ್ಟಿಸಿಕೊಳ್ಳುವ ಬಡ್ಡಿ ಇರಬಹುದು ಬಹುಷಃ ಈ ವಿರಹ,
ವೇದನೆಯ ಸಾಲ ಕೊಟ್ಟಿದ್ದೀಯ ವಿರಹದ ಬಡ್ಡಿಯನೂ ಬಿಟ್ಟಿದ್ದೀಯ....
ಶುದ್ಧ ಪ್ರೀತಿಯ ಅಸಲಿಗೆ ಅಸಲು ಇದೆ ಬೆಲೆನ?//
ನಿಟ್ಟುಸಿರನೆಲ್ಲ ನೆಲದಾಳ ಹೂತು ಮಾಡಿದರೂನು ಮಣ್ಣು.....
ಮರೆಮಾಚಲಾಗದಂತೆ ನೋವನ್ನು ಹನಿಗಳಲ್ಲಿ ಜಾಹೀರುಗೊಳಿಸಿಯೇ ಬಿಟ್ಟಿದೆ ನನ್ನವೆರಡು ಕಣ್ಣು,
ಮಾತು ಮೂಡಲಾರದ ಆ ಹೊತ್ತಲ್ಲಿ,ನಿನ್ನ ತೊಳ್ತೆಕ್ಕೆಯ ಮತ್ತಲ್ಲಿ.....
ಎವೆಯಿಕ್ಕದೆ ನನ್ನ ದೃಷ್ಟಿ ದಿಟ್ಟಿಸುತ್ತಿದ್ದ ನಿನ್ನ ನತ್ತಲ್ಲಿ/
ಹುದುಗಿದ್ದುದು ಬರೀ ನಿರ್ಮಲ ಪ್ರೀತಿ....
ಮಗುಚಿದ ನೆನಪಿನ ಪುಟಗಳಲ್ಲೆಲ್ಲ ನಿನ್ನ ಮಾತುಗಳ ಪಸೆಯೆ ಕಂಡು ಮತ್ತೆ ನನ್ನ ಕಣ್ತುಂಬಿ ಬಂತು,
ಮತ್ತೆ ಅಕ್ಷರಗಳೆಲ್ಲ ಕಣ್ಣೀರಿನಿಂದ ಕಲಸಿ ಹೋಯಿತು//
ನಿನ್ನವೆಲ್ಲ ನೆನಪುಗಳನ್ನ ಇಲ್ಲಿಯೆ ಬಿಟ್ಟು ಹೋಗಿದ್ದೀಯ,
ಸಾಕಲ್ಲ ನನಗೆ ಬದುಕಿನ ವ್ಯಾಪಾರ ಮುಗಿಸಲು....
ಅಷ್ಟು ಬಂಡವಾಳ?/
ಸಂಭ್ರಮಕ್ಕೆ ಸಾಕ್ಷಿಯಾಗಿದ್ದ ನಿನ್ನೊಂದಿಗೆ ಕಳೆದ ಕ್ಷಣಗಳನ್ನೆಲ್ಲ...
ಬೆಚ್ಚಗೆ ನನ್ನ ಎದೆಪೆಟ್ಟಿಗೆಯೊಳಗೆ ಕೂಡಿಟ್ಟಿದ್ದೇನೆ,
ಒಂಟಿತನ ಮರಗಟ್ಟಿಸುವ ರಾತ್ರಿಗಳಲ್ಲಿ ಚೂರು ನೆನಪುಗಲೆದುರು ಕೂತು ಬೆಚ್ಚಗಾಗಲು...
ಕಣ್ತುಂಬಿ ಕಂಡಿದ್ದ ಕನಸುಗಳೆಲ್ಲ ಕಣ್ಣೊಳಗೆ ಕಾಡಿಗೆಯಂತಾಗಿ ಕರಗುತಿವೆ,
ಕಣ್ಣೀರ ಜೊತೆ ಸೇರಿ ಹರಿದು ಹೋಗಲು//
ಕನಸಿನ ಸಾವಿಗೂ ಕಣ್ಣೀರಿನ ಸುಂಕ....
ದಾಟಲಾಗದೆ ನೋವಿನ ನದಿಯ ಕಾಲುಸಂಕ,
ನಿಸ್ಸಾರವಾಗಿ ಕೂತರೂ ನಾನು....
ನನ್ನೆದೆಯಲ್ಲಿ ಇನ್ನೂ ನಿನ್ನ ಪ್ರೀತಿಯ ನೆರಳಿದೆ/
ನಾಳೆಯ ಸಾಲು ಸಾಲು ಸಂಕಟಕ್ಕೆ ನೆನ್ನೆಯ ಸಾವಿರ ಸಂಭ್ರಮಗಳು...
ಕಟ್ಟಿಸಿಕೊಳ್ಳುವ ಬಡ್ಡಿ ಇರಬಹುದು ಬಹುಷಃ ಈ ವಿರಹ,
ವೇದನೆಯ ಸಾಲ ಕೊಟ್ಟಿದ್ದೀಯ ವಿರಹದ ಬಡ್ಡಿಯನೂ ಬಿಟ್ಟಿದ್ದೀಯ....
ಶುದ್ಧ ಪ್ರೀತಿಯ ಅಸಲಿಗೆ ಅಸಲು ಇದೆ ಬೆಲೆನ?//
ನಿಟ್ಟುಸಿರನೆಲ್ಲ ನೆಲದಾಳ ಹೂತು ಮಾಡಿದರೂನು ಮಣ್ಣು.....
ಮರೆಮಾಚಲಾಗದಂತೆ ನೋವನ್ನು ಹನಿಗಳಲ್ಲಿ ಜಾಹೀರುಗೊಳಿಸಿಯೇ ಬಿಟ್ಟಿದೆ ನನ್ನವೆರಡು ಕಣ್ಣು,
ಮಾತು ಮೂಡಲಾರದ ಆ ಹೊತ್ತಲ್ಲಿ,ನಿನ್ನ ತೊಳ್ತೆಕ್ಕೆಯ ಮತ್ತಲ್ಲಿ.....
ಎವೆಯಿಕ್ಕದೆ ನನ್ನ ದೃಷ್ಟಿ ದಿಟ್ಟಿಸುತ್ತಿದ್ದ ನಿನ್ನ ನತ್ತಲ್ಲಿ/
ಹುದುಗಿದ್ದುದು ಬರೀ ನಿರ್ಮಲ ಪ್ರೀತಿ....
ಮಗುಚಿದ ನೆನಪಿನ ಪುಟಗಳಲ್ಲೆಲ್ಲ ನಿನ್ನ ಮಾತುಗಳ ಪಸೆಯೆ ಕಂಡು ಮತ್ತೆ ನನ್ನ ಕಣ್ತುಂಬಿ ಬಂತು,
ಮತ್ತೆ ಅಕ್ಷರಗಳೆಲ್ಲ ಕಣ್ಣೀರಿನಿಂದ ಕಲಸಿ ಹೋಯಿತು//
ವಿರಹದ ನಾಲ್ಕು ಸಾಲು...
ಆಳದಲ್ಲಿ ಅಡಗಿರುವ ಒಲವ ಭಾವಗಳಿಗೆ ಒಂದು ಸ್ಪಂದನದ ಹನಿ ಸಿಂಚನ ಸಾಕು.....
ಎದೆಯಲ್ಲಿ ಗೆಲುವು ಚಿಗುರೊಡೆಯೋಕೆ,
ಮುತ್ತಾಗುವ ಮಳೆಹನಿಗೇನು ಗೊತ್ತು ನೆಲಕ್ಕಿಳಿದು ತಾನು ಬಚ್ಚಿಟ್ಟು ಕೊಳ್ಳಬೇಕಾದ ಚಿಪ್ಪಿನ ವಿಳಾಸ?
ಬಯಸಿದ ಒಲವು ಕೈಗೂಡೋದು ಕೇವಲ ವಿಧಿಯ ವಿಲಾಸ/
ನಿನಗೆ ಗೊತ್ತಲ್ಲ ನನ್ನ ಮನದ ಎಲ್ಲ ಆಸೆ,
ಇನ್ನು ಬಿಡಿಸಿ ನಾ ಹೇಳೋದಾದರೂ ಏಕೆ?...
ಮೋಡ ಕವಿದ ಮನದಲ್ಲಿ ಬೀಸಿದ ತಂಪು ತಂಗಾಳಿ ನನ್ನ ಪಾಲಿಗೆ ನೀನು,
ನಾದ ಮರೆತು ತಾಳಕೆ ಮನಸೋತ ತಂಬೂರಿಯಂತಾದೆ ನಿನ್ನೆದುರು ನಾನು//
ಮಾತಿನ ಮೋಹ ಮೌನದ ಆಸೆ ಎರಡೂ ನನ್ನಲ್ಲಿ ಗಿರಕಿ ಹೊಡೆಯುತ್ತ....
ಮಾತುಬಂದೂ ನನ್ನ ಮೂಕನನ್ನಾಗಿಸಿದೆ,
ಗಾಳಿ ಬೀಸುವಾಗ ನನ್ನ ಉಸಿರು ಅದರಲ್ಲಿ.....
ನಿನ್ನ ಪರಿಮಳಹುಡುಕುವುದು ಎಲ್ಲರ ಕಣ್ಣಿಗೆ ಮರುಳನಿಸೀತು,
ಆದರೆ ನೀನು ಹಾಗಂದುಕೊಳ್ಳಲಿಕ್ಕಿಲ್ಲಾ,ಅಲ್ಲವ?/
ಸಾವಿರ ಮಾತುಗಳಲ್ಲಿ ಉಸುರಲಾಗದ ಭಾವ....
ಒಂದು ಹಾಡಲ್ಲಿ ಬಟಾಬಯಲಾಗಿದೆ,
ಮನದ ಭಾರ ಇಳಿದು ಈಗ,
ಎದೆಯ ವೇದನೆ ಕೊಂಚ ಹಗುರಾಗಿದೆ//
ಹೆದರದಿರು ನಿನ್ನ ಖುಶಿಗಳನ್ನ ನಾನೆಂದೂ ಕಸಿಯುವುದಿಲ್ಲ...
ನಿನ್ನ ಹೆಸರನ್ನ ಎಲ್ಲೂ ಜಾಹೀರುಗೊಳಿಸೋಲ್ಲ,
ನನ್ನೆಡೆಗೆ ಗೊತ್ತಿರುವ ಗುಟ್ಟನ್ನ ನಾನಿನ್ಯಾರಿಗೂ ಉಸುರೋಲ್ಲ....
ನನ್ನ ಉಸಿರಲ್ಲಷ್ಟೆ ನೀ ಸುಭದ್ರ/
ದ್ವೇಷಿಸಲು ಕಾರಣ ನೂರು ಬೇಕು....
ಪ್ರೀತಿಸಲು ಒಂದೂ ಬೇಕಿಲ್ಲ,ಅಲ್ಲವ?
ಹಾಗೆ ನಿನ್ನ ಪ್ರೀತಿಸೋಕೆ ನನಗೆ ಕಾರಣದ ಹಂಗು ಬೇಕಿಲ್ಲ....
ಅವೆಲ್ಲವೂ ನಿನಗೆ ಇರಲಿ ಬಿಡು ನನ್ನ ಇನ್ನಷ್ಟು ದ್ವೇಷಿಸೋಕಂತ//
ಎದೆಯಲ್ಲಿ ಗೆಲುವು ಚಿಗುರೊಡೆಯೋಕೆ,
ಮುತ್ತಾಗುವ ಮಳೆಹನಿಗೇನು ಗೊತ್ತು ನೆಲಕ್ಕಿಳಿದು ತಾನು ಬಚ್ಚಿಟ್ಟು ಕೊಳ್ಳಬೇಕಾದ ಚಿಪ್ಪಿನ ವಿಳಾಸ?
ಬಯಸಿದ ಒಲವು ಕೈಗೂಡೋದು ಕೇವಲ ವಿಧಿಯ ವಿಲಾಸ/
ನಿನಗೆ ಗೊತ್ತಲ್ಲ ನನ್ನ ಮನದ ಎಲ್ಲ ಆಸೆ,
ಇನ್ನು ಬಿಡಿಸಿ ನಾ ಹೇಳೋದಾದರೂ ಏಕೆ?...
ಮೋಡ ಕವಿದ ಮನದಲ್ಲಿ ಬೀಸಿದ ತಂಪು ತಂಗಾಳಿ ನನ್ನ ಪಾಲಿಗೆ ನೀನು,
ನಾದ ಮರೆತು ತಾಳಕೆ ಮನಸೋತ ತಂಬೂರಿಯಂತಾದೆ ನಿನ್ನೆದುರು ನಾನು//
ಮಾತಿನ ಮೋಹ ಮೌನದ ಆಸೆ ಎರಡೂ ನನ್ನಲ್ಲಿ ಗಿರಕಿ ಹೊಡೆಯುತ್ತ....
ಮಾತುಬಂದೂ ನನ್ನ ಮೂಕನನ್ನಾಗಿಸಿದೆ,
ಗಾಳಿ ಬೀಸುವಾಗ ನನ್ನ ಉಸಿರು ಅದರಲ್ಲಿ.....
ನಿನ್ನ ಪರಿಮಳಹುಡುಕುವುದು ಎಲ್ಲರ ಕಣ್ಣಿಗೆ ಮರುಳನಿಸೀತು,
ಆದರೆ ನೀನು ಹಾಗಂದುಕೊಳ್ಳಲಿಕ್ಕಿಲ್ಲಾ,ಅಲ್ಲವ?/
ಸಾವಿರ ಮಾತುಗಳಲ್ಲಿ ಉಸುರಲಾಗದ ಭಾವ....
ಒಂದು ಹಾಡಲ್ಲಿ ಬಟಾಬಯಲಾಗಿದೆ,
ಮನದ ಭಾರ ಇಳಿದು ಈಗ,
ಎದೆಯ ವೇದನೆ ಕೊಂಚ ಹಗುರಾಗಿದೆ//
ಹೆದರದಿರು ನಿನ್ನ ಖುಶಿಗಳನ್ನ ನಾನೆಂದೂ ಕಸಿಯುವುದಿಲ್ಲ...
ನಿನ್ನ ಹೆಸರನ್ನ ಎಲ್ಲೂ ಜಾಹೀರುಗೊಳಿಸೋಲ್ಲ,
ನನ್ನೆಡೆಗೆ ಗೊತ್ತಿರುವ ಗುಟ್ಟನ್ನ ನಾನಿನ್ಯಾರಿಗೂ ಉಸುರೋಲ್ಲ....
ನನ್ನ ಉಸಿರಲ್ಲಷ್ಟೆ ನೀ ಸುಭದ್ರ/
ದ್ವೇಷಿಸಲು ಕಾರಣ ನೂರು ಬೇಕು....
ಪ್ರೀತಿಸಲು ಒಂದೂ ಬೇಕಿಲ್ಲ,ಅಲ್ಲವ?
ಹಾಗೆ ನಿನ್ನ ಪ್ರೀತಿಸೋಕೆ ನನಗೆ ಕಾರಣದ ಹಂಗು ಬೇಕಿಲ್ಲ....
ಅವೆಲ್ಲವೂ ನಿನಗೆ ಇರಲಿ ಬಿಡು ನನ್ನ ಇನ್ನಷ್ಟು ದ್ವೇಷಿಸೋಕಂತ//
Friday, February 25, 2011
ಅನಂತ ಪೈ ಅನಂತದಲ್ಲಿ ಲೀನ.....
ಭಾರತೀಯ ಸಾಂಸ್ಕೃತಿಕ ಚೌಕಟ್ಟಿನಲ್ಲಿ ಮಕ್ಕಳಿಗಾಗಿ ಚಿತ್ರಕಥೆಗಳನ್ನ ರೂಪಿಸಿದ್ದ ಅಪರೂಪದ ಮೆದುಳು ಅನಂತ ಪೈ ನೆನ್ನೆ ಮುಂಬೈನಲ್ಲಿ ತಮ್ಮ ೮೧ನೆ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.೧೯೬೦ರ ದಶಕದಲ್ಲಿ ಮಕ್ಕಳಿಗಾಗಿನ ಸಚಿತ್ರ ಕಥಾಗುಚ್ಚಗಳೆಂದರೆ ಕೇವಲ ಪಾಶ್ಚಾತ್ಯ ಮೂಲದ ಕಾಮಿಕ್ಸ್ಗಳು ಹಾಗು ಅವುಗಳ ಎರವಲು ಸರಕು ಮಾತ್ರವೆ ಎನ್ನುವಂತಾಗಿದ್ದ ಭೀಕರ ದಿನಗಳಲ್ಲಿ.ಮುಂದಿನ ತಲೆಮಾರುಗಳ ಓದುವ ದಿಕ್ಕನ್ನೆ ನಿರ್ದೇಶಿಸಿ-ಉತ್ತಮ ಓದನ್ನ ರೂಪಿಸಿಕೊಟ್ಟ "ಅಮರ ಚಿತ್ರಕಥೆಗಳು" ಹಾಗು "ಪಂಚತಂತ್ರದ ಕಥೆಗಳು" ಅನಂತ ಪೈಗಳಿಂದ ಭಾರತೀಯ ಚಿಣ್ಣರಿಗೆ ಸಂದಿದ್ದ ಒಂದು ಅದ್ಭುತ ಕೊಡುಗೆ.ಇವರು ಮೂಲತಃ ನಮ್ಮ ಕರಾವಳಿಯ ಕಾರ್ಕಳದವರು ಎನ್ನೋದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ.ಅವರನ್ನ ನೆನೆಯದಿದ್ದರೆ ಮಾತ್ರ ನಾವೆಲ್ಲಾ ನಿಸ್ಸಂಶಯವಾಗಿ ಕೃತಘ್ನರ ಸಾಲಿಗೆ ಸೇರುತ್ತೀವಿ....ಅವರ ಚೇತನಕ್ಕೆ ಸಾವಿರ ಸಲಾಂ...
Monday, February 21, 2011
ಮಳೆ ಹೇಳಿದ್ದೇನು?
ವರ್ಷದ ಮೊದಲ ಮಳೆಯಲಿ ನೆನೆದ ನನಗೆ ಹನಿ ಹನಿಯಲೂ ನಿನ್ನದೇ ನೆನಪು,
ಮುಗಿಲು ನೀರಾಗಿ ಜಾರಿ ಭುವಿಗೆ ಮುತ್ತಿಡುವಾಗ/
ಸುರಿಮಳೆಯಲಿ ಒಂಟಿಯಾಗಿ ಒಬ್ಬನೆ ನೆನೆಯುತ ಸಾಗುವವನ ಜೊತೆ,
ಕೈಕೈ ಹಿಡಿದು ತೋಯಲು ನೀನೂ ಇರಬೇಕಿತ್ತು//
ಮಳೆಹನಿಯ ದನಿ ಮನಸೊಳಗೆ ಮುತ್ತ ಸುರಿದಿದೆ,
ಇರುಳು ಸುರಿದ ಮಳೆ ನೆಲವನ್ನಷ್ಟೇ ಅಲ್ಲ...
ಮನಸನೂ ಆರ್ದ್ರಗೊಳಿಸಿ ಹೋಗಿದೆ/
ಮನದ ಬರಡೂ ಸಹ ಬಾನು ಸುರಿಸಿದ ಕಂಬನಿಯಿಂದ...
ತೇವವಾಗಿ ವಿವರಿಸಲಾಗದ ತಂಪಲ್ಲಿ ತೊಯ್ದಿದೆ,
ಮುಗಿಲ ಹನಿ ಸಿಂಚನ ಮನಸೊಳಗೂ ಪಿಸುಗುಟ್ಟಿದೆ...
ಹೇಳಲಾಗದ ಒಂದು ಗುಟ್ಟು//
ಮುಗಿಲು ನೀರಾಗಿ ಜಾರಿ ಭುವಿಗೆ ಮುತ್ತಿಡುವಾಗ/
ಸುರಿಮಳೆಯಲಿ ಒಂಟಿಯಾಗಿ ಒಬ್ಬನೆ ನೆನೆಯುತ ಸಾಗುವವನ ಜೊತೆ,
ಕೈಕೈ ಹಿಡಿದು ತೋಯಲು ನೀನೂ ಇರಬೇಕಿತ್ತು//
ಮಳೆಹನಿಯ ದನಿ ಮನಸೊಳಗೆ ಮುತ್ತ ಸುರಿದಿದೆ,
ಇರುಳು ಸುರಿದ ಮಳೆ ನೆಲವನ್ನಷ್ಟೇ ಅಲ್ಲ...
ಮನಸನೂ ಆರ್ದ್ರಗೊಳಿಸಿ ಹೋಗಿದೆ/
ಮನದ ಬರಡೂ ಸಹ ಬಾನು ಸುರಿಸಿದ ಕಂಬನಿಯಿಂದ...
ತೇವವಾಗಿ ವಿವರಿಸಲಾಗದ ತಂಪಲ್ಲಿ ತೊಯ್ದಿದೆ,
ಮುಗಿಲ ಹನಿ ಸಿಂಚನ ಮನಸೊಳಗೂ ಪಿಸುಗುಟ್ಟಿದೆ...
ಹೇಳಲಾಗದ ಒಂದು ಗುಟ್ಟು//
Subscribe to:
Posts (Atom)